<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-3841477221276814775</id><updated>2012-01-16T06:24:14.955-08:00</updated><title type='text'>ಮಳೆಹನಿ..</title><subtitle type='html'></subtitle><link rel='http://schemas.google.com/g/2005#feed' type='application/atom+xml' href='http://jomon-malehani.blogspot.com/feeds/posts/default'/><link rel='self' type='application/atom+xml' href='http://www.blogger.com/feeds/3841477221276814775/posts/default?max-results=100'/><link rel='alternate' type='text/html' href='http://jomon-malehani.blogspot.com/'/><link rel='hub' href='http://pubsubhubbub.appspot.com/'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><generator version='7.00' uri='http://www.blogger.com'>Blogger</generator><openSearch:totalResults>39</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-3841477221276814775.post-476879623197010898</id><published>2010-06-20T09:29:00.000-07:00</published><updated>2010-06-20T09:34:25.243-07:00</updated><title type='text'>ಬೆಂಗಳೂರಿನ ಮಳೆ..!</title><content type='html'>&lt;a href="http://4.bp.blogspot.com/_A5Tc7GvymLQ/TB5C5KL_lPI/AAAAAAAAAP8/WWkQAXAPSgk/s1600/rain.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 200px; height: 178px;" src="http://4.bp.blogspot.com/_A5Tc7GvymLQ/TB5C5KL_lPI/AAAAAAAAAP8/WWkQAXAPSgk/s320/rain.jpg" border="0" alt=""id="BLOGGER_PHOTO_ID_5484894945938478322" /&gt;&lt;/a&gt;&lt;br /&gt;ಬೆಂಗಳೂರಿನಲ್ಲೀಗ  ಮಳೆಯ ಸಂಭ್ರಮ. ಹೊತ್ತೇರಿದರೂ ಕವಿದ ಮಬ್ಬುಗತ್ತಲು. ಆಗಸದ ತುಂಬ ಕರಿಮೋಡಗಳು. ಮಳೆ ಸುರಿಯುತ್ತದೆಯೇ ಎನ್ನುವ ಧಾವಂತದ ನಡುವೆ ಅವಸರಿಸಿ ಶಾಲೆಗೆ ಹೊರಟ ಪುಟಾಣಿಗಳು, ಸಿಗ್ನಲ್‌ನಲ್ಲಿ ತಡವರಿಸುವ ಅವರ ಪುಟ್ಟ ಪಾದಗಳು. ಹಳೆಯ ಛತ್ರಿ ಹುಡುಕಿ ಆಫೀಸಿಗೆ ಹೊರಟ ನಿತ್ಯ ಶ್ರಮಿಕರು. ಪಾರ್ಕಿನಲ್ಲಿ, ರಸ್ತೆಯಂಚಿನಲ್ಲಿ ಮರದ ಎಲೆಗಳಿಂದ ತೊಟ್ಟಿಕ್ಕುವ ಮಳೆಹನಿ. ತೊಯ್ದ ಪುಕ್ಕಗಳನ್ನು ಕೊಡವಿ ಸ್ವಚ್ಛಗೊಳಿಸುತ್ತಿರುವ ಹಕ್ಕಿಗಳು.. ಪ್ಲಾಸ್ಟಿಕ್ ಹೊದೆಸಿ ಮಳೆಯನ್ನು ಶಪಿಸುತ್ತಿರುವ ಫುಟ್‌ಪಾತ್ ವ್ಯಾಪಾರಿಗಳು... &lt;br /&gt;&lt;br /&gt;ಈ ಮಳೆಯೆಂದರೆ ಅದೆಷ್ಟು ಸಂಭ್ರಮ. ನೆನಪಿನಾಳದಲ್ಲಿ ಹುದುಗಿರುವ ಕಥೆಗಳು ಮರುಹುಟ್ಟು ಪಡೆಯಲು ಮಳೆಯ ಸಾಥ್ ಬೇಕು. ಬೇರೆ ಊರುಗಳಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವವರ ಪಾಲಿಗೆ ಮಳೆಯೆಂದರೆ ಸುಂದರ ನೆನಪುಗಳ ಕನವರಿಕೆ. ಊರಿಗೆ ಫೋನು ಮಾಡಿದಾಗೊಮ್ಮ ನಾನು ಕೇಳುತ್ತೇನೆ, ‘ಅಮ್ಮಾ ಮಳೆಯಾಗುತ್ತಿದೆಯಾ ಅಲ್ಲಿ? ಮಳೆ ಸುರಿಯುತ್ತಿದ್ದರೆ ಅದರ ಶಬ್ದ ಕೇಳುವ ಬಯಕೆ, ಪ್ಲೀಸ್ ಮಳೆ ಸುರಿಯವ ವಿಡಿಯೋ ತೆಗೆದು ಅದನ್ನು ಮೇಲ್ ಮಾಡ್ಲಿಕ್ಕೆ ಆಗುತ್ತಾ?’ ನಾಲಿಗೆ ತುದಿಗೆ ಬಂದ ಬಯಕೆ ಮನದಲ್ಲೇ ಉಳಿದುಬಿಡುತ್ತದೆ. ಯಾಕೆ ಮಳೆ ನಮ್ಮನ್ನು ಇಷ್ಟೊಂದು ಕಾಡುತ್ತದೆ. ಅಸಲಿಗೆ ಮಳೆಯೆಂಬ ಕಲ್ಪನೆಯೇ ಅದ್ಭುತವಲ್ಲವೆ? ಮಳೆ ಸುರಿಯುವಾಗ ಮುಗಿಲಿಗೆ ಮುಖವೊಡ್ಡಿದರೆ, ಮನಸ್ಸು ಕೂಡ ತೊಯ್ದು ತೊಪ್ಪೆ. ‘ಮಳೆ ಅಂದರೆ ನನಗೆ ತುಂಬಾ ಇಷ್ಟ. ಯಾಕೆಂದರೆ ಮಳೆಯಲ್ಲಿ ಅಳುವುದು, ಕಣ್ಣೀರುಗೆರೆಯುವುದು ಯಾರಿಗೂ ಗೊತ್ತಾಗುವುದಿಲ್ಲ. ತುಂಬಾ ದುಃಖವಾದಾಗ ನಾನು ಮಳೆಯಲ್ಲಿ ಅಳುತ್ತಾ ನಡೆಯುತ್ತೇನೆ’. ಎಂದಿದ್ದರು ಇಡೀ ವಿಶ್ವವನ್ನೇ ನಕ್ಕು ನಗಿಸಿದ ಹಾಸ್ಯ ನಟ ಚಾರ್ಲಿ ಚಾಪ್ಲಿನ್. &lt;br /&gt;&lt;br /&gt;ಆದರೆ ಬೆಂಗಳೂರಿನ ಮಳೆಗೆ ಜೀವಂತಿಕೆಯೇ  ಇಲ್ಲ ಎಂದೆನಿಸುತ್ತದೆ. ಮಗುವಿನ ಅಳುವಿನಂತೆ ಸುರಿಯುವ ಇಲ್ಲಿನ ಮಳೆಯಲ್ಲಿ ಮಣ್ಣಿನ ವಾಸನೆ ಆಘ್ರಾಣಿಸೋಣವೆಂದರೆ  ಇಲ್ಲಿ ಮಣ್ಣು, ಕಲ್ಲು, ಮಾನವೀಯತೆ ಎಲ್ಲವೂ  ಕರಗಿ ಹೋದಂತಿದೆ. ಮಳೆ ಸುರಿದರೆ ತಗ್ಗಿನ ಪ್ರದೇಶಗಳಲ್ಲಾ ನೀರು ತುಂಬಿ, ತಗ್ಗು, ಉಬ್ಬು ಎಲ್ಲಿ ಎಂದು ಗೊತ್ತಾಗದೆ ಸಂಭವಿಸುವ ದುರಂತಗಳು ಕಣ್ಣೆದುರಿಗೆ ನಿಲ್ಲುತ್ತವೆ. ಕಳೆದ ವರ್ಷ ಇಂಥದೇ ಮಳೆಯಲ್ಲಿ ಲಿಂಗರಾಜಪುರದ ಅಭಿಷೇಕ್ ಎನ್ನುವ ಬಾಲಕ ಕೊಚ್ಚಿಕೊಂಡು ಹೋದ ನೆನಪು ಕಣ್ಣಲ್ಲಿ ಮಳೆಹನಿಯಂತೆ ನೀರು ತರಿಸುತ್ತದೆ. ಇನ್ನು ಮಳೆ ನೆನೆಯಬೇಕೆಂದರೆ  ಸ್ಥಳವೆಲ್ಲಿದೆ? &lt;br /&gt;ಸಮಯವೆಲ್ಲಿದೆ? ಟೇರಸ್ ಮೇಲೆ ನಿಂತ ನೀರಿನಲ್ಲಾದರೂ ಕಾಲೂರುವ ಆಸೆಯಾಗುತ್ತಿದೆ. ಮಳೆನೀರಿನಲ್ಲಿ ಕಾಗದದ ದೊಣಿ ಹರಿಬಿಟ್ಟು ಆಟವಾಡುವ ಮಕ್ಕಳು ಎಲ್ಲಿಯಾದರೂ ಕಾಣಸಿಗುತ್ತಾರೆಯೇ ಎಂದು ಕಣ್ಣುಗಳು ಅರಸುತ್ತಿವೆ. &lt;br /&gt;&lt;br /&gt;ಮಲೆನಾಡಿನಂತೆ  ಬೆಂಗಳೂರಿನಲ್ಲಿ ರಾತ್ರಿ ಮಿಣುಕುಹುಳಗಳ ಸೌಂದರ್ಯವಿಲ್ಲದಿದ್ದರೂ, ಮಳೆಗಾಲದ ರಾತ್ರಿಗಳಲ್ಲಿ ಏರ್‌ಪೋರ್ಟ್ ರಸ್ತೆಯಲ್ಲಿ ಹೊರಟರೆ ಇಲ್ಲಿನ ಕೆಂಪು ನಿಯಾನ್ ದೀಪಗಳು ರಾತ್ರಿ ನೆಕ್ಲೆಸ್ ಥರ ಕಾಣಿಸುತ್ತದೆ. ಮಳೆ ಬರುತ್ತಿದ್ದರೆ ಇಲ್ಲಿನ ಎಫ್‌ಎಂ ಸ್ಟೇಷನ್‌ಗಳಿಂದ  ರೊಮ್ಯಾಂಟಿಕ್ ಕಲ್ಪನೆಗಳು ತೇಲಿಬರುತ್ತಿರುತ್ತವೆ. ಭವಿಷ್ಯದಲ್ಲಿ ಸ್ನಾನ ಮಾಡಬೇಕಾದರೆ ಈಗಲೇ  ‘ಬಕೇಟ್ ಹಿಡಿಯಿರಿ’ ಎನ್ನುವಂತ ಜೋಕ್ಸುಗಳು ‘ಮಳೆ ನೀರು ಇಂಗಿಸುವ’ ಸರಳ ಪಾಠವನ್ನು ಹೇಳಿಕೊಡುತ್ತಿವೆ. ಈ ಮಳೆ ಸುರಿಯುವ ಹೊತ್ತಿನಲ್ಲಿ ನಿಮ್ಮ ಪ್ರಿಯತಮೆಯ ಕೈ ಹಿಡಿದು ಬೆಂಗಳೂರಿನ ಯಾವ ರಸ್ತೆಯಲ್ಲಿ ನಡೆಯಲು ನಿಮಗೆ ಇಷ್ಟವಾಗುತ್ತದೆ, ನಮಗೆ ಕರೆ ಮಾಡಿ ಹೇಳಿ’ ಎಂಬ ರೇಡಿಯೋ ಜಾಕಿಯ ಪ್ರಶ್ನೆಗೆ, ’ಬೆಂಗಳೂರಿನ ಮಳೆ ಬೇಡ ಸ್ವಾಮಿ, ಮಳೆ ಸುರಿಯುವ ಹೊತ್ತಿನಲ್ಲಿ ಧಾರವಾಡ ಯೂನಿವರ್ಸಿಟಿ  ಕ್ಯಾಂಪಸ್‌ನಿಂದ ಶ್ರೀನಗರ ಸರ್ಕಲ್ ತನಕ ನನ್ನ ಕನಸಿನ ಹುಡುಗಿಯ ಕೈ ಹಿಡಿದು ನಡೆದುಕೊಂಡು ಹೋಗುವ ಆಸೆಯಾಗುತ್ತಿದೆ’ ಎಂದು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತೇನೆ. .&lt;br /&gt;&lt;br /&gt;ಇತ್ತ ಊರಿನಲ್ಲಿ ಮಳೆಯಾಗುತ್ತಿರುವ ಸುದ್ದಿ ತಿಳಿದು ಏನೋ ಬಹುಮುಖ್ಯವಾದುದನ್ನು ಕಳೆದುಕೊಂಡ ಸಂಕಟದ ಭಾವವೊಂದು ಮತ್ತೆ ಮತ್ತೆ ಕೈ ಹಿಡಿದು ಜಗ್ಗಿದಂತಾಗುತ್ತಿದೆ. ನಮ್ಮೂರಿನ ಪುಟಾಣಿ ಕಂದಮ್ಮಗಳು ಕಂಬಳಿ ಕುಪ್ಪೆಯೋ, ಛತ್ರಿಯೋ ಹಿಡಿದು ಕಾಲು ಸಂಕದ ಮೇಲೆ ಹೆಜ್ಜೆಯಿಡುವ ಚಿತ್ರ ಕಣ್ಮುಂದೆ ಬರುತ್ತಿದೆ.. ಮಳೆಯನ್ನು ಯಾರಾದರೂ ‘ಥೂ ದರಿದ್ರ’ ಎಂದು ಬೈದರೆ ಮನಸ್ಸು ಭಾರವಾಗುತ್ತದೆ. 'ಮಳೆ ನಿಂತ ನಂತರ ಎಲೆಯ ಮೇಲಿದ್ದ ಹನಿಗಳೆಲ್ಲಾ ಅವಳ ಹೆಸರನ್ನು ಹೇಳುತ್ತಾ ಉದುರಿಬಿದ್ದವು' ಎಂದು ಕವಿಯಂತೆ ಹಾಡುತ್ತಾ, ನೆನಪಿನ ಮಳೆಯಲ್ಲಿ ಕೊಚ್ಚಿಕೊಂಡು ಹೋಗುವ ಆಸೆಯಾಗುತ್ತಿದೆ.. &lt;br /&gt;Happy Monsoon...&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-476879623197010898?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/476879623197010898/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=476879623197010898' title='6 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/476879623197010898'/><link rel='self' type='application/atom+xml' href='http://www.blogger.com/feeds/3841477221276814775/posts/default/476879623197010898'/><link rel='alternate' type='text/html' href='http://jomon-malehani.blogspot.com/2010/06/blog-post.html' title='ಬೆಂಗಳೂರಿನ ಮಳೆ..!'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_A5Tc7GvymLQ/TB5C5KL_lPI/AAAAAAAAAP8/WWkQAXAPSgk/s72-c/rain.jpg' height='72' width='72'/><thr:total>6</thr:total></entry><entry><id>tag:blogger.com,1999:blog-3841477221276814775.post-8833216469787808463</id><published>2010-05-31T12:19:00.000-07:00</published><updated>2010-05-31T12:42:43.062-07:00</updated><title type='text'>ಗೆಳೆಯನ ಮದುವೆ</title><content type='html'>&lt;a href="http://2.bp.blogspot.com/_A5Tc7GvymLQ/TAQM9QBOtYI/AAAAAAAAAP0/Q5crzJTiUVM/s1600/channu.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 250px; height: 242px;" src="http://2.bp.blogspot.com/_A5Tc7GvymLQ/TAQM9QBOtYI/AAAAAAAAAP0/Q5crzJTiUVM/s320/channu.jpg" border="0" alt=""id="BLOGGER_PHOTO_ID_5477517293201044866" /&gt;&lt;/a&gt;&lt;br /&gt;ಗೆಳೆಯ,ಚನ್ನು ಮೂಲಿಮನಿ ಕಳೆದವಾರ ಮದುವೆಯಾದ.ತಾನು ಪ್ರೀತಿಸಿದ,ತನ್ನನ್ನು ಪ್ರೀತಿಸುವ ಹುಡುಗಿಯನ್ನೇ ಮದುವೆಯಾದ ಅದೃಷ್ಟವಂತ ಆತ. ನಾವೆಲ್ಲ ರಾತ್ರಿಯೇ ಬೆಂಗಳೂರು ಬಿಟ್ಟು ಬೆಳಿಗ್ಗೆ ಧಾರವಾಡದಲ್ಲಿಳಿದು,ಸಾಧನಕೇರಿಯಲ್ಲಿರುವ ಕಲ್ಯಾಣ ಮಂಟಪಕ್ಕೆ ಹೋಗಿ ವಧು-ವರರನ್ನು ಹರಸಿ ಬಂದೆವು.'ನಿನ್ನ ಬ್ಯಾಚುಲರ್ ಜೀವನ ಮುಗಿಯಿತು,ನೀನಿನ್ನು ಸಂಸಾರಸ್ಥ,ಮೊದಲಿನ ಹಾಗೆ ಸೋಮಾರಿಯಾಗಿ ಕಾಲ ಕಳೆಯಬೇಡ.ನೋಡು,'ಒಲವೇ ಜೀವನ ಸಾಕ್ಷಾತ್ಕಾರ''ನೀವಿಬ್ಬರು ನಿಮಗೊಬ್ಬರು'ಇತ್ಯಾದಿ ಸಂಸಾರ ಸೂತ್ರಗಳನ್ನು ನೆನಪಿಟ್ಟುಕೋ.ಸಿಗರೇಟು ಸೇದುವುದನ್ನು ಕಡಿಮೆ ಮಾಡು, ಚಂದಕೆ  ಬಾಳ್ವೆ ಮಾಡು, ಹೀಗೆ ಇತ್ಯಾದಿ ನಮಗೆ ಗೊತ್ತಿರುವ ಉಪದೇಶಗಳನ್ನು ಹೇಳಿ ಬಂದೆವು. &lt;br /&gt;&lt;br /&gt;ಸ್ವಲ್ಪ ಸೋಮಾರಿತನ ಬಿಟ್ಟರೆ, ಚನ್ನು ತುಂಬಾ ಒಳ್ಳೆಯ ಹುಡುಗ.ಪದವಿಯಿಂದ ನಾವಿಬ್ಬರೂ ಜೊತೆಗೇ ಓದಿದ್ದೇವೆ.ಹಾಗೆ ನೋಡಿದರೆ ನನ್ನ ಸ್ನಾತಕೋತ್ತರ ಕ್ಲಾಸ್ ಮೇಟ್ ಗಳಲ್ಲಿ ಮೂವರು ಮದುವೆಯಾಗಿದ್ದಾರೆ. ಒಬ್ಬನಿಗೆ ಮಗುವೂ ಆಗಿದೆ.ಇನ್ನು ನಾಲ್ಕಾರು ಜನ ನಿಶ್ಚಿತಾರ್ಥ ಮುಗಿದ ಖುಷಿಯಲ್ಲಿದ್ದಾರೆ. ಮದುವೆಯಾಗುವುದು,ಮಕ್ಕಳಾಗುವುದು ಈ ಲೋಕದ ಅದ್ಭುತ ವಿಷಯಗಳೇನೂ ಅಲ್ಲದಿರುವುದರಿಂದ ಆ ಕುರಿತು ಚರ್ಚೆ ಇಲ್ಲಿ ಅಪ್ರಸ್ತುತ. ಆದರೆ ಮದುವೆ ಎನ್ನುವುದು ಜೀವನದ ಪ್ರಮುಖ ಘಟ್ಟಗಳಲ್ಲಿ ಒಂದಾಗಿರುವುದರಿಂದ ಅದರ ಕುರಿತು ನನಗನ್ನಿಸಿದ್ದನ್ನು ಬರೆಯುತ್ತಿದ್ದೇನೆ. &lt;br /&gt;&lt;br /&gt;ಮದುವೆಯಾಗುವವರು ಮೊದಲು ವೈವಾಹಿಕ ಬದುಕಿನ ಎಲ್ಲ ವಾಸ್ತವಗಳಿಗೆ ಸಿದ್ದರಾಗಬೇಕು.ಸಂಪ್ರದಾಯದ ಮದುವೆಯಾಗಲಿ,ಬಂಡಾಯದ ಮದುವೆಯಾಗಲಿ, ಇಲ್ಲಿ ಅಪಾರ ಸಹನೆ,ತಿಳುವಳಿಕೆ ಮತ್ತು ಪ್ರಜ್ಞಾಪೂರ್ವಕವಾಗಿ ಹೊಣೆಯರಿತು ವರ್ತಿಸುವ ಮನಸ್ಸು ಇಲ್ಲದಿದ್ದರೆ ಎಲ್ಲವೂ ಮುರಿದು ಬೀಳುತ್ತದೆ. ಮದುವೆ ಮನಸ್ಸಿನ ಆಳದಲ್ಲಿ ತೀರ್ಮಾನಿಸಬೇಕು. ಯಾರದೋ ಒತ್ತಡಕ್ಕೆ,ಇನ್ಯಾವುದೋ ಕಟ್ಟುಪಾಡಿಗೆ ಮದುವೆಯಾಗಬಾರದು.ಔದಾರ್ಯ ಹಾಗೂ ಕನಿಷ್ಠ ಪ್ರೀತಿ ಇಲ್ಲದಿದ್ದರೆ  ಯಾವುದೇ ಸಂಬಂಧಗಳು ಮುರಿದು ಬೀಳುತ್ತದೆ.‘ಮದುವೆಗಳು ಸ್ವರ್ಗದಲ್ಲಿ ನಿರ್ಧರಿಸಲ್ಪಡುತ್ತವೆ’ಎಂಬ ಮಾತಿದೆ.ಆದರೆ ವಾಸ್ತವ ಹೀಗಿಲ್ಲ. ಮದುವೆ ನಡೆಯುವುದು ಭೂಮಿಯಲ್ಲೇ.ಮದುವೆಗೆ ಮುನ್ನ ಮೊಬೈಲ್‌ಗಳಲ್ಲಿ ಹರಿದಾಡುವ ಪ್ರೀತಿ,ಮದುವೆಯ ನಂತರ ಇರುವುದಿಲ್ಲ.ಇಷ್ಟಪಟ್ಟು ಮದುವೆಯಾದವರೂ ಕಷ್ಟಪಟ್ಟು ಹೊಂದಿಕೊಂಡು ಹೋಗುತ್ತಾರೆ.ದಾಂಪತ್ಯ ಸ್ವರ್ಗ ಎನ್ನುವ ಕಲ್ಪನೆ ಬದಲಾಗಿ ಬದುಕು ಅಸಹನೀಯ ಎನಿಸತೊಡಗುತ್ತದೆ. ಮದುವೆಯಾಗುವವರು ಇದನ್ನೆಲ್ಲ ತಿಳಿದುಕೊಂಡಿರಬೇಕು. &lt;br /&gt;&lt;br /&gt;ಬೈಬಲ್ ನಲ್ಲಿ ಒಂದು ಕಥೆಯಿದೆ.ನಿಮಗೂ ಗೊತ್ತಿರಬಹುದು.ದೇವರು ಮನುಷ್ಯನನ್ನು  ಮಣ್ಣಿನಿಂದ ಸೃಷ್ಟಿಸಿದ ನಂತರ ಅವನಿಗೆ ಸರಿ ಬೀಳುವ ಸಂಗಾತಿ ಕಾಣಲಿಲ್ಲ.ಹೀಗಿರುವಾಗ ದೇವರು ಮನುಷ್ಯನಿಗೆ ಗಾಢ ನಿದ್ರೆಯನ್ನು ಬರಮಾಡಿ ಅವನ ಪಕ್ಕೆಯ ಎಲುಬುಗಳಲ್ಲಿ ಒಂದನ್ನು ತೆಗೆದುಕೊಂಡು ಅದರ ಸ್ಥಳವನ್ನು ಮಾಂಸದಿಂದ ಮುಚ್ಚಿ, ತಾನು ಮನುಷ್ಯನಿಂದ ತೆಗೆದ ಎಲುಬನ್ನು ಸ್ತ್ರೀಯಾಗಿ ಮಾಡಿ, ಆಕೆಯನ್ನು ನೋಡಿ,“ಈಕೆಯು ನಿನ್ನ ಎಲುಬುಗಳಿಂದ ಬಂದ ಎಲುಬೂ,ನಿನ್ನ ಮಾಂಸದಿಂದ ಬಂದ ಮಾಂಸವೂ ಆಗಿದ್ದಾಳೆ.ಈಕೆಯು ನರನಿಂದ ಉತ್ಪತ್ತಿಯಾದ ಕಾರಣ ನಾರಿ ಎನಿಸಿಕೊಳ್ಳುವಳು.ನೀವಿಬ್ಬರು ಪರಸ್ವರ ಹೊಂದಿಕೊಂಡು ಜೀವನ ಮಾಡತಕ್ಕದು'ಎಂದು ಹೇಳುತ್ತಾರೆ.ಹೀಗೆ ಗಂಡು ಹೆಣ್ಣು ಒಂದಾಗಿ ಸಂಸಾರ ನಡೆಸುತ್ತಾರೆ.ಅರ್ಧಾಂಗಿ ಎಂದು ಕರೆಯುವುದರ ಅರ್ಥವೂ ಇದೆ.ದುರಂತವೆಂದರೆ  ಜಾಗತೀಕರಣದ ಬೆನ್ನಿಗಂಟಿಕೊಂಡೇ ಬಂದ ವಾಣಿಜ್ಯೀಕರಣ ಮದುವೆಯನ್ನೂ ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟ ಭೋಗದ ವಸ್ತುವನ್ನಾಗಿ ಮಾಡಿದೆ ಎನ್ನುವುದು.&lt;br /&gt;&lt;br /&gt;ಈಚೆಗೆ  ಒಬ್ಬರು ವಾಚಕರ ವಾಣಿಯಲ್ಲಿ ಆತಂಕ ವ್ಯಕ್ತಪಡಿಸಿದ್ದರು.ಆದೇನೆಂದರೆ,ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ  ಹೆಚ್ಚಿನವರು ಅವರವರ ಜಾತಿ ಸಮಾಜದ ಸಂಘವನ್ನು ಕಟ್ಟಿಕೊಂಡಿದ್ದಾರೆ.ವರ್ಷಕ್ಕೊಮ್ಮೆ ಜಾತಿ ಸಮ್ಮೇಳನಗಳು ನಡೆಯುತ್ತವೆ. ವಿಚಾರಗೋಷ್ಠಿಗಳು,ಉಪನ್ಯಾಸಗಳು,ಸಂಪ್ರದಾಯದ ಊಟ, ಕುಲ ಕಸುಬಿನ ಪ್ರಾತ್ಯಕ್ಷಿಕೆ ಎಲ್ಲವೂ ಭರ್ಜರಿಯಾಗಿಯೇ ಇರುತ್ತವೆ.ಇಷ್ಟಿದ್ದರೂ ಎಲ್ಲ ಜಾತಿಗಳಲ್ಲೂ ಜೀವಂತವಾಗಿರುವ ವರ್ತಮಾನದ ಬಹುಮುಖ್ಯ ವಿಷಯವೊಂದು ಚರ್ಚಿತವಾಗುವುದಿಲ್ಲ.ಅದೇ ವರದಕ್ಷಿಣೆ!.ಹೌದಲ್ಲವೇ? ಅವರು ಎತ್ತಿರುವ ಪ್ರಶ್ನೆ ಎಷ್ಟೊಂದು ಸಕಾಲಿಕ.ಯಾಕೆ ಯಾರೂ ಆ ಕುರಿತು ಯೋಚಿಸುವುದಿಲ್ಲ? &lt;br /&gt;&lt;br /&gt;ಪರಸ್ಪರ ಪ್ರೀತಿ ವಿಶ್ವಾಸದ ಆಧಾರದ ಮೇಲೆ ನಡೆಯುವ ಸರಳ ವಿವಾಹಗಳನ್ನು ನಾವು ಪ್ರೋತ್ಸಾಹಿಸಬೇಕು.ಇಂಥ ಮದುವೆಗಳಿಗೆ ಇಡೀ ಸಮಾಜ ಬೆಂಬಲವಾಗಿ ನಿಲ್ಲಬೇಕು.ಆಗ ಹಣ ಅಂತಸ್ತಿನ ಆಧಾರದ ಮದುವೆಗಳು ತಾನಾಗಿಯೇ ನಿಲ್ಲುತ್ತವೆ.ಈ ಪ್ರಕ್ರಿಯೆ ತಡವಾಗಿ ಆಗಬಹುದಾದರೂ ಈ ನಿಟ್ಟಿನಲ್ಲಿ ವಿದ್ಯಾವಂತರು ಪ್ರಯತ್ನಗಳನ್ನು ಮುಂದುವರೆಸಬೇಕು.ಇತ್ತೀಚೆಗೆ ನಮ್ಮ ಕಚೇರಿಯಲ್ಲಿ ಒಬ್ಬರು ಈ ರೀತಿ ಸರಳವಾಗಿ ಮದುವೆಯಾದರು. 'ಮಾನವ ಮಂಟಪ'ದಲ್ಲಿ ನಡೆದ ಈ ಮದುವೆಯ ಖರ್ಚು ಹೆಚ್ಚೆಂದರೆ ಐದು ಸಾವಿರ ದಾಟಿರಲಿಕ್ಕಿಲ್ಲ.ಒಂದು ಮದುವೆ 5 ಸಾವಿರ ಖರ್ಚಿನಲ್ಲಿ ಮುಗಿಯುತ್ತದೆ ಎಂದರೆ ಈ ಕಾಲದಲ್ಲಿ ಊಹಿಸಲಿಕ್ಕೂ ಸಾಧ್ಯವಿಲ್ಲ.ನಿಜಕ್ಕೂ ಇದು ಮಾದರಿಯಲ್ಲವೇ? &lt;br /&gt;&lt;br /&gt;ಅಂದಹಾಗೆ ಗೆಳೆಯ ಚನ್ನು ತನ್ನ ಮದುವೆಗೆ ಮುನ್ನ ಆಹ್ವಾನ ಪತ್ರಿಕೆಗೆ ಎರಡು ಸಾಲು ಬರೆದುಕೊಡು ಎಂದು ಕೇಳಿದ್ದ. ಏನು ಬರೆದುಕೊಡಬೇಕೆಂದು ಯೋಚಿಸಿದಾಗ ನೆನಪಿಗೆ ಬಂದಿದ್ದು, ಕೆ.ಎಸ್ ನಿಸಾರ್ ಅಹಮ್ಮದ್ ಅವರ 'ಗೆಳೆಯನ ಮದುವೆ' ಪದ್ಯದ ಸಾಲುಗಳು...&lt;br /&gt;&lt;br /&gt;ನಾಳೆ ನಮ್ಮಿಬ್ಬರ ಮದುವೆ &lt;br /&gt;ಹೊಸ ನೀರಿಗಿಳಿಯುವುದು ನಮ್ಮಿಬ್ಬರ ನಾವೆ &lt;br /&gt;&lt;br /&gt;ಉತ್ತರೀಯಕೆ ಅಂದು ಸೀರೆ ನಿರಿಗೆಯ ಗಂಟು,&lt;br /&gt;ಹಗುರಾಗಿ ಹಬ್ಬುವುದು ಹೊಸತೊಂದು ನಂಟು;&lt;br /&gt;ಊಟೋಪಚಾರಗಳು ನಲಿವುಗಳೂ ಉಂಟು;&lt;br /&gt;ಹಸೆಗೇರಿದಿಬ್ಬರಿಗೆ ಒಲವು ಗಂಟು&lt;br /&gt;&lt;br /&gt;ಕಾದು ನೋಡುವೆವು ನಿಮ್ಮೆಲ್ಲರದ್ದೇ ಬರುವಿಕೆ&lt;br /&gt;ಕೋರುವುದಿಷ್ಟೇ ಇರಲಿ ನಿಮ್ಮ ಹಾರೈಕೆ. &lt;br /&gt;&lt;br /&gt;ಸಾಲುಗಳೆಷ್ಟು ಅರ್ಥಗರ್ಭಿತ. ಗೆಳೆಯ ಚನ್ನು ಮತ್ತು ಅಶ್ವಿನಿ ದಾಂಪತ್ಯದಲ್ಲಿ ಪ್ರೀತಿಯ ಒರತೆ ಬತ್ತದಿರಲಿ. ಅವರಿಬ್ಬರಿಗೂ ಒಳ್ಳೆಯದಾಗಲಿ.&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-8833216469787808463?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/8833216469787808463/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=8833216469787808463' title='5 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/8833216469787808463'/><link rel='self' type='application/atom+xml' href='http://www.blogger.com/feeds/3841477221276814775/posts/default/8833216469787808463'/><link rel='alternate' type='text/html' href='http://jomon-malehani.blogspot.com/2010/05/blog-post.html' title='ಗೆಳೆಯನ ಮದುವೆ'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_A5Tc7GvymLQ/TAQM9QBOtYI/AAAAAAAAAP0/Q5crzJTiUVM/s72-c/channu.jpg' height='72' width='72'/><thr:total>5</thr:total></entry><entry><id>tag:blogger.com,1999:blog-3841477221276814775.post-7930866249755045</id><published>2010-02-14T07:21:00.000-08:00</published><updated>2010-02-14T07:29:59.357-08:00</updated><title type='text'>ಮೂರುಸಾವಿರ ಮಠ ನೋಡಿಯೇನ?</title><content type='html'>&lt;a href="http://4.bp.blogspot.com/_A5Tc7GvymLQ/S3gW26GGvyI/AAAAAAAAAPo/qMou_EjDVeY/s1600-h/kublog.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 300px; height: 199px;" src="http://4.bp.blogspot.com/_A5Tc7GvymLQ/S3gW26GGvyI/AAAAAAAAAPo/qMou_EjDVeY/s320/kublog.jpg" border="0" alt=""id="BLOGGER_PHOTO_ID_5438121682613485346" /&gt;&lt;/a&gt;&lt;br /&gt;ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಅಜ್ಮೀರ ಎಕ್ಸ್ ಪ್ರಸ್ ನಿಂದ ಕೆಳಗಿಳಿದಾಗ ಬೆಳಗ್ಗೆ 7 ಗಂಟೆ. ಹೊರಗೆ ಇಡಿ ನಗರವೇ ಚಳಿಯಲ್ಲಿ ಉಸಿರಾಡುತ್ತಿರುವಂತೆ ಕಾಣುತ್ತಿತ್ತು. ನಿಧಾನ ಬಂದು ಧಾರವಾಡ ಬಸ್ಸು ಹತ್ತಿದರೆ,ಅದರೊಳಗೆ ಕುಳಿತ ಹೆಂಗಸರಿಬ್ಬರು ಸಂಭ್ರಮದಿಂದ ಮಾತನಾಡುತ್ತಿದ್ದರು. &lt;br /&gt;ಮೂರುಸಾವಿರ ಮಠ ನೋಡಿಯೇನ? &lt;br /&gt;ಇಲ್ಲ, ನಾ, ಸಣ್ಣಾಕಿ ಇದ್ದಾಗ ನೋಡಿದ್ದೆ, ಆಮೇಲೆ ಹೋಗಿಲ್ಲ.. &lt;br /&gt;ನಮ್ಮ ಮುತ್ಯಾನೂ ಅಲ್ಲೇ ಇದ್ದ. ಒಮ್ಮೆ ತೇರಿಗೆ ಹೋಗಿದ್ವಿ ನೋಡವ್ವ..&lt;br /&gt;ನಡಿ, ಈಗ ಹೋಗಿ ಬರೋಣ, ಇಂವ ಬೇಕಾದ್ರೆ ಬಸ್ ಸ್ಟಾಂಡಾಗೆ ಕೂಡಲಿ.. &lt;br /&gt;ಜೊತೆಗಿದ್ದ ಗಂಡಸಿಗೆ ಸಿಟ್ಟು ಬಂತು. &lt;br /&gt;ಹೇ..ನಿಮ್ಮss  ಈಗೆಲ್ಲಿ ಹೋಗ್ತೀರ, ಸಂಜೀಕೆ ಹೋಗೋಣಂತೆ.. ಮೊದಲು ಮನಿಗೆ ಹೋಗೋಣ ನಡೀರಿ.. ಎಂದು ಜೋರು ಮಾಡಿದ.. &lt;br /&gt;ನೀ ಬೇಕಾದರೆ, ಬಸ್ ಸ್ಟಾಂಡಾಗ ಕುಂದ್ರು.. ನಾವು ನಡಕೊಂಡು ಹೋಗಿ ಬರ್ತೀವಿ..(ಹೆಂಗಸರಿಬ್ಬರು ಗಟ್ಟಿ ನಿರ್ಧಾರದಲ್ಲಿ ನಿಂತರು.)  &lt;br /&gt;ಮತ್ತೆ ಗಂಡಸು ಮಾತನಾಡಲಿಲ್ಲ. &lt;br /&gt; &lt;br /&gt;ನಾನು ಬಸ್ಸಿನ ಹಿಂದಿನ ಸೀಟಿನಲ್ಲಿ ಕುಳಿತು ಇವರಿಬ್ಬರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದೆ. ತುಂಬಾ ದಿನಗಳ ನಂತರ ನಾವು ನಮ್ಮ ಊರುಗಳಿಗೇ ಹೋದಾಗ ಅಲ್ಲಿರುವ ಎಲ್ಲ ವಸ್ತುಗಳು ನಮಗೆ ಅಪ್ಯಾಯಮಾನವಾಗಿ ಕಾಣುತ್ತದೆ. ನನಗೆ  'ನಡೀರಿ ಅವ್ವಾರೆ, ನಾನೂ ಬರ್ತೀನಿ, ಹೋಗಿ ನೋಡ್ಕೊಂಡು ಬರೋಣ' ಅಂತ ಹೇಳುವ ಆಸೆಯಾಯಿತು. ಆದರೆ ನನ್ನ ಕರ್ತವ್ಯ ಪ್ರಜ್ಞೆ ಧಿಡೀರನೆ ನೆನಪಾಗಿ ಮೂರುಸಾವಿರ ಮಠ ನೋಡಲು ಹೋದರೆ, ಈವತ್ತು ಕರ್ನಾಟಕ ವಿಶ್ವವಿದ್ಯಾಲಯ ತಲುಪುವುದಿಲ್ಲ ಅಂದುಕೊಂಡೆ. ನೋಡುತ್ತಿದ್ದಂತೆ ಆ ಹೆಂಗಸರಿಬ್ಬರೂ ಹುಬ್ಬಳ್ಳಿ ಹಳೆ ಬಸ್ ನಿಲ್ದಾಣದಲ್ಲಿ ಇಳಿದು ಹೋದರು. ನಾನು ಈ ಹಿಂದೆ ಚಪ್ಪಲಿ ಸವೆಯುವಂತೆ ಅಡ್ಡಾಡಿದ ಸಿಬಿಟಿ, ಕಾರ್ಪೋರೇಶನ್, ಚೆನ್ನಮ್ಮ ವೃತ್ತ, ವಿದ್ಯಾನಗರಗಳೆಲ್ಲಾ ಎಷ್ಟೊಂದು ಬದಲಾಗಿ ಹೋಗಿದೆಯಲ್ಲಾ ಎಂದು ಆಶ್ಚರ್ಯದಿಂದ ನೋಡುತ್ತಾ ಕುಳಿತುಕೊಂಡೆ.&lt;br /&gt;&lt;br /&gt;ಧಾರವಾಡ ಬಸ್, ವಿದ್ಯಾನಗರ ದಾಟಿ, ಉಣಕಲ್ ಕರೆ ಬಳಸಿಕೊಂಡು ಬೈರಿದೇವರಕೊಪ್ಪದ ಸಮೀಪಕ್ಕೆ ಬಂತು. ರಸ್ತೆ ಪಕ್ಕದಲ್ಲೊಂದು ಬೋರ್ಡ್ "ಶ್ರೀ ಶಕ್ತಿ ಮೋಟಾರಸ ಕಾರ ಮೇಳ" ಮೊದಲು ನನಗೆ ಇದೇನೆಂದು ಅರ್ಥ ಆಗಲಿಲ್ಲ. ಇಲ್ಲಿ ಯಾರು ಖಾರ ಅರೆಯುತ್ತಿದ್ದಾರೆ ಎಂದು ಯೋಚಿಸಿದೆ. ಆಮೇಲೆ ಗೊತ್ತಾಯ್ತು ಅದು ಕಾರ್ ಮೇಳ ಎನ್ನುವುದು. ವ್ಯಂಜನ ಬಳಸದ ಕನ್ನಡ. ನವನಗರ ದಾಟಿ ಮುಂದೆ ಬರುತ್ತಿದ್ದಂತೆ ಅಶ್ವಮೇಧ ನಗರ ಎಂಬ ಬೋರ್ಡು ಕಾಣಿಸಿತು. ಎಲ್ಲಿಯಾದರೂ ಅಶ್ವಗಳಿವೆಯಾ ಎಂದು ಇಣುಕಿ ನೋಡಿದರೆ ಮೂರು ನಾಲ್ಕು ಕತ್ತೆಗಳು ಎಳೆಬಿಸಿಲಿನಲ್ಲಿ ಮೈ ಕಾಯಿಸಿಕೊಳ್ಳುತ್ತಿದ್ದವು. ಮುಂದೆ ಸಾಗಿದಾಗ ಓಝೋನ್ ಎಂಬ ಹೊಟೇಲ್ ಬಂತು. ನೋಡಿದರೆ ಅದರ ಎದುರಿಗಿನ ಮಾವಿನ ತೋಪಿನಲ್ಲಿ ಒಂದಿಷ್ಟು ಬೆಳ್ಳಕ್ಕಿಗಳು ಚಳಿಯಲ್ಲಿ ಧ್ಯಾನಕ್ಕೆ ಕುಳಿತಂತೆ ನಿಂತಿದ್ದವು. ಮುಂದೆ ಸಾಗಿದಾಗ ಡೆಂಟಲ್ ಬಂತು (ಎಸ್ ಡಿಎಂ ಮೆಡಿಕಲ್ ಕಾಲೇಜ್). ಹಿಂದೆ ಧಾರವಾಡ ಎಲ್ಲಿದೆ ಎಂದು ಯಾರಾದರೂ ಕೇಳಿದರೆ ಡೆಂಟಲ್ ಮತ್ತು ಮೆಂಟಲ್ ಮಧ್ಯೆ ಇದೆ ಎಂದು ಹೇಳುತ್ತಿದ್ದವು. (ಯಾಕೆಂದರೆ ಈ ಡೆಂಟಲ್ ಕಾಲೇಜ್ ಮತ್ತು  ಮಾನಸಿಕ ಆಸ್ಪತ್ರೆಯ ಮಧ್ಯವೇ ಧಾರವಾಡ ಶಹರ ಬರುವುದು). ಮುಂದೆ ನವಿಲೂರು ಬಂತು. ನವಿಲು ಕಾಣಿಸಲಿಲ್ಲ. ಇನ್ನೇನು ಧಾರವಾಡ ಬಂದೇ ಬಿಡ್ತು ಎನ್ನುವಷ್ಟರಲ್ಲಿ  'ನಾಕೌಟ್ ಥರ ಮೀಟರ್ ಇದ್ರೆ, 2 ಲಕ್ಷ ಗೆದ್ದು ತೋರಿಸು' ಎಂಬ ದರ್ಶನ್ ಜಾಹಿರಾತು ಕಾಣಿಸಿತು. ಯಾಕೆ ಒಮ್ಮೆ ಪ್ರಯತ್ನಿಸಬಾರದು ಎಂಬ ಯೋಚನೆ ಸುಮ್ಮನೆ ಸುಳಿದು ಹೋಯಿತು-:. ಮುಂದೆ ಮುಂದೆ ಸಾಗಿದಂತೆ ಶಿಲ್ಪಾ ರೆಸ್ಟೋರಂಟ, ಮಹಾಲಕ್ಷ್ಮಿ ಮೆಡಿಕಲ, ಕಾಮತ ಲಾಡಜ, ಪ್ರೇತಿಸ ಬೇಕ್ರಿ ಇತ್ಯಾದಿ ಬೋರ್ಡುಗಳು ವ್ಯಂಜನಗಳಿಲ್ಲದೆ ಖುಷಿ ಕೊಟ್ಟವು. &lt;br /&gt;&lt;br /&gt;ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಹೋದರೆ ಅಲ್ಲಿನ ಪತ್ರಿಕೋದ್ಯಮ ವಿಭಾಗದ ಕಿರಿಯ ವಿದ್ಯಾರ್ಥಿಗಳೆಲ್ಲಾ ಮೀಡಿಯಾ ಫೆಸ್ಟ್ ನ ಬ್ಯುಸಿಯಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದರು. ತಮಗಿಂತ ದೊಡ್ಡ ಜವಾಬ್ದಾರಿಗಳನ್ನು ತಮ್ಮ ತಲೆಯ ಮೇಲೆ ಹೊತ್ತುಕೊಂಡು ಓಡುತ್ತಿರುವ ಈ ವಿದ್ಯಾರ್ಥಿಗಳನ್ನು ಅವರ ಪಾಡಿಗೆ ಓಡಲು ಬಿಟ್ಟು, ನಾನು ಹುಬ್ಬಳ್ಳಿ ಧಾರವಾಡ ಸುತ್ತುವುದೇ ಒಳ್ಳೆಯದು ಎನಿಸತೊಡಗಿತು. &lt;br /&gt;&lt;br /&gt;ಮತ್ತೆ ಹುಬ್ಬಳ್ಳಿಗೆ ಬಂದೆ. 3 ಈಡಿಯಟ್ಸ್ ಚಿತ್ರ ನೋಡಿ, ವಾಪಾಸ್ಸು  ಬಸ್ ಹತ್ತಿದರೆ ಮತ್ತೊಂದಿಷ್ಟು ತಮಾಷೆಗಳು ಕಾಣಿಸತೊಡಗಿದವು. &lt;br /&gt;'ಪ್ರಯಾಣಿಕರ ಗಮನಕ್ಕೆ ದರ, ಚಾರ್ಜಿ 13 ರೂಪಾಯಿ'&lt;br /&gt;'ಪೊಲೀಸರಿಗೆ ವಾರಂಟ ಇಲ್ಲದೆ ಪ್ರಯಾಣಿಸಲು ಅನುಮತಿ ಇರುವುದಿಲ್ಲ.'&lt;br /&gt;'ವಿದ್ಯಾರ್ಥಿಗಳು ಮಾರ್ಗ ಬಿಟ್ಟು  ಬಸ್ ಪಾಸ್ ಬಳಸಬಾರದು' &lt;br /&gt;&lt;br /&gt;ಈ ಸೂಚನೆಗಳನ್ನು ಬಸ್ಸಿನಲ್ಲಿ ಓದಿ ಮತ್ತೆ ಖುಷಿಪಟ್ಟುಕೊಂಡೆ. ಮರಳಿ ಬೆಂಗಳೂರಿಗೆ ಬಂದರೂ,ಇವು ಆಗಾಗ್ಗ ನೆನಪಾಗಿ ಕಚಗುಳಿ ಇಡುತ್ತಿವೆ.&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-7930866249755045?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/7930866249755045/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=7930866249755045' title='9 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/7930866249755045'/><link rel='self' type='application/atom+xml' href='http://www.blogger.com/feeds/3841477221276814775/posts/default/7930866249755045'/><link rel='alternate' type='text/html' href='http://jomon-malehani.blogspot.com/2010/02/blog-post.html' title='ಮೂರುಸಾವಿರ ಮಠ ನೋಡಿಯೇನ?'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_A5Tc7GvymLQ/S3gW26GGvyI/AAAAAAAAAPo/qMou_EjDVeY/s72-c/kublog.jpg' height='72' width='72'/><thr:total>9</thr:total></entry><entry><id>tag:blogger.com,1999:blog-3841477221276814775.post-6584904424848759638</id><published>2009-12-14T06:32:00.000-08:00</published><updated>2009-12-15T22:25:49.876-08:00</updated><title type='text'>ತಲಕಾಡಿಗೆ ಹೋಗಿ ಬಂದ ನಂತರ....</title><content type='html'>&lt;a href="http://1.bp.blogspot.com/_A5Tc7GvymLQ/SyZMzx2hhCI/AAAAAAAAAO0/j8uYXpRMV8A/s1600-h/blog.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 200px; height: 290px;" src="http://1.bp.blogspot.com/_A5Tc7GvymLQ/SyZMzx2hhCI/AAAAAAAAAO0/j8uYXpRMV8A/s320/blog.jpg" border="0" alt=""id="BLOGGER_PHOTO_ID_5415100054398665762" /&gt;&lt;/a&gt;&lt;br /&gt;ತಲಕಾಡಿಗೆ ಹೋಗಿ ಬಂದ ಖುಷಿಯಲ್ಲಿ ಏನು ಬರೆಯಬೇಕೆಂದು ಯೋಚಿಸುತ್ತಾ, ಎರಡು ದಿನ ಸುಮ್ಮನೆ ಕಳೆದೆ. ನಂತರ ಎದ್ದು ಯೋಚಿಸತೊಡಗಿದರೆ ಕಣ್ಣ ಮುಂದೆ ಬರಿ ತಲಕಾಡಿನ ಮರಳೇ ತುಂಬಿಹೋಗಿ, ಬೇರೆನೂ ಕಾಣಿಸದೆ ಚಿಂತಿಸುತ್ತಾ ಕುಳಿತುಕೊಳ್ಳುವಂತಾಯಿತು. 'ತಲಕಾಡು ಮರಳಾಗಿ, ಮಾಲಂಗಿ ಮಡುವಾಗಿ, ಮೈಸೂರು ದೊರೆಗಳಿಗೆ ಮಕ್ಕಳಾಗದೇ ಹೋಗಲಿ' ಎಂದು ಎಲ್ಲರಿಗೂ ಗೊತ್ತಿರುವ ಹಳೆಯ ಶಾಪದ ಕಥೆಯನ್ನು ಇಲ್ಲಿಯೂ ಬರೆದರೆ ತುಂಬಾ ಬೋರಾಗುತ್ತದೆ ಎಂದು ಅನಿಸಿ, ಆ ಯೋಜನೆಯನ್ನು ಅಲ್ಲಿಗೇ ಕೈಬಿಟ್ಟೆ. 'ತಲೆ' ಮತ್ತು 'ಕಾಡ' ಎನ್ನುವುದು ಇಬ್ಬರು ಬೇಡರ ಹೆಸರೆಂದೂ, ಆ ಹೆಸರಿನ ಹಿಂದೆ, 'ಸೋಮದತ್ತ' ಎಂಬ ಆನೆಯ ಜನ್ಮ ಪಡೆದಿದ್ದ ಮುನಿಯ ಕಥೆಯೂ ಇದೆಯೆಂದು ನಾನು ತಲಕಾಡಿಗೆ ಹೋಗಿ ಬಂದ ನಂತರ ಅಲ್ಲಿ ಕೊಂಡ ಪುಸ್ತಕದಲ್ಲಿ ಓದಿ ತಿಳಿದ ವಿಷಯಗಳು. &lt;br /&gt;&lt;br /&gt;ನಾವು ತಲಕಾಡಿಗೆ ಹೋಗಿದ್ದು ಎರಡು ವಾರಗಳ ಹಿಂದೆ. ನಾನು, ಸ್ನೇಹಿತ ವಜ್ರಾಂಗಿ ಸೂರ್ಯ ಮತ್ತು ಪ್ರಕಾಶ್. ಆವತ್ತು ತಲಕಾಡು ತಲುಪಿದಾಗ ಮಧ್ಯಾಹ್ನ ಹನ್ನೆರಡು ಗಂಟೆಯಾಗಿತ್ತು. ಬೆಳಿಗ್ಗೆ ಐದಕ್ಕೆಲ್ಲಾ ಎದ್ದು, ಮೆಜೆಸ್ಟಿಕ್ ನಿಂದ (ಒಂದು ಗಂಟೆ ತಡವಾಗಿ ಬಂದ) ಟ್ಯುಟಿಕೊರಿನ್  ರೈಲು ಹತ್ತಿ ಮದ್ದೂರಿನಲ್ಲಿಳಿದು, ತಟ್ಟೆ ಇಡ್ಲಿ ತಿಂದು ರೆಡಿಯಾಗುವ ಹೊತ್ತಿಗೆ 9:30 ಆಗಿತ್ತು. ಅಲ್ಲಿಂದ ಮಳವಳ್ಳಿ. ನಂತರ ತಲಕಾಡು. ಸರ್ಕಾರಿ ಸಾರಿಗೆ. ಹಿಂದಿನ ದಿನ, ರಾತ್ರಿ (ನೈಟ್ ಶಿಪ್ಟ್) ಪಾಳಿಯಲ್ಲಿ ಕೆಲಸ ಮಾಡಿದ್ದರಿಂದ  ಮೂವರೂ ಬಸ್ಸಿನಲ್ಲಿ ಕುಳಿತು ನಾಚಿಕೆಯಿಲ್ಲದೆ ತೂಕಡಿಸುತ್ತಿದ್ದೆವು. &lt;br /&gt;&lt;br /&gt;ನಡುವೆ ನಾನು ಕಷ್ಟಪಟ್ಟು ಕಣ್ಣು ತೆರೆದು ಕಿಟಕಿಯ ಹೊರಗೆ ತೂರಿಬಿಟ್ಟೆ. ಹಸಿರು!. ಕಣ್ಣು ಹಾಯಿಸಿದೆಡೆಯಲ್ಲೆಲ್ಲಾ ಹಸಿರು. ಮಳವಳ್ಳಿ ದಾಟುತ್ತಿದ್ದಂತೆ ಈ ಊರು ಥೇಟ್ ಮಲೆನಾಡಿನ ಸ್ವರೂಪ ಪಡೆದುಕೊಳ್ಳುತ್ತದೆ. ನಳನಳಿಸುತ್ತಿರುವ ಬತ್ತದ ಗದ್ದೆಗಳು, ಬಲಿತು ನಿಂತ ಕಬ್ಬನ ತೋಟಗಳು, ಟಮೋಟೋ, ದೊಣ್ಣೆಮೆಣಸಿನಕಾಯಿ, ಸೊಪ್ಪು ಬೆಳೆಯುವ ಫಲವತ್ತಾದ ಭೂಮಿ. ಮುಂದೆ ನಿದ್ರೆ ಬರಲಿಲ್ಲ. 40 ಕಿಮೀನ ಈ ದಾರಿಯಲ್ಲಿ ಮೂರು ಕೆರೆಗಳನ್ನು ನೋಡಿದೆ. ಮೂರೂ ದೊಡ್ಡ ದೊಡ್ಡ ಕೆರೆಗಳು. ಈ ಕೆರೆಯ ನೀರನ್ನೇ ಸಾವಿರಾರು ರೈತರು ಕಾಲುವೆಯ ಮೂಲಕ ಬಳಸಿಕೊಂಡು ಕೃಷಿ ಮಾಡುತ್ತಿದ್ದಾರೆ. ಬೆವರು ಹರಿಸಿ ಹುಲುಸಾದ ಬೆಳೆ ತೆಗೆಯುತ್ತಾರೆ. &lt;br /&gt;&lt;br /&gt;ಪೂವಳ್ಳಿಯ ಸಮೀಪ ಬಸ್ಸು ನಿಂತಾಗ ಮತ್ತೊಂದು ಕೆರೆ ನೋಡಿದೆ. ಸ್ಟಟಿಕದಷ್ಟೇ ಶುಭ್ರವಾದ ನೀರು. ಬೇಕಾದರೆ ಈ ಕೆರೆಯ ದಡದಲ್ಲಿ ನಿಂತು ನೀರಿನಲ್ಲಿ ಮುಖ ನೋಡುತ್ತಾ ತಲೆ ಬಾಚಿಕೊಳ್ಳಬಹುದಾದಷ್ಟು ಸ್ವಚ್ಛ ನೀರು. ದಾರಿಯುದ್ದಕ್ಕೂ ಎಲ್ಲಿಯೂ ಬಡತನ ಕಾಣಲಿಲ್ಲ. ಯಾರ ಭೂಮಿಯ ಫಸಲೂ ಒಣಗಿರುವುದು ಕಂಡಿಲ್ಲ. ಹಸಿರು ತುಂಬಿದ, ಭೂಮಿಯ ಬಗ್ಗೆ ಪ್ರೀತಿ ಮೂಡಿಸುವ ಈ ಊರು ಇಷ್ಟವಾಗತೊಡಗಿತು. ರೈತರು ತಮ್ಮ ಕೃಷಿಯ ಬಗ್ಗೆ ನಂಬಿಕೆ ಮತ್ತು ಆಸಕ್ತಿ ಕಳೆದುಕೊಂಡು, ನಮ್ಮ ಹಳ್ಳಿಗಳು ತಮ್ಮ ನೆಮ್ಮದಿ ಕಳೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ ನನಗೆ ಈ ಊರಿನ ಬಗ್ಗೆ ಸಹಜವಾಗಿಯೇ ಹೆಮ್ಮೆ ಎನಿಸತೊಡಗಿತು. &lt;br /&gt;&lt;br /&gt;ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಸಂಚರಿಸುವಾಗ ಗಮನಿಸಿದ  ಮುಖ್ಯ ವಿಷಯವೆಂದರೆ ಈ ಜಿಲ್ಲೆಗಳಲ್ಲಿನ ನೀರಾವರಿ ವ್ಯವಸ್ಥೆ. ದಶಕಗಳ ಹಿಂದೆ ರಚನೆಗೊಂಡಿರುವ ನಾಲೆ ವ್ಯವಸ್ಥೆ ಇಲ್ಲಿನ ವ್ಯವಸಾಯವನ್ನು ಎಷ್ಟೊಂದು ಸಮೃದ್ಧವಾಗಿಸಿದೆ ಎಂದರೆ ನೀವೊಮ್ಮೆ ಈ ಪ್ರದೇಶಗಳಲ್ಲಿ ಅಡ್ಡಾಡಿ ನೋಡಬೇಕು. ಬಹುಶ್ಯ: ಇಂದು ನಮ್ಮ ಸರ್ಕಾರದ ಕೈಯಿಂದಲೂ ಇಷ್ಟು ಯೋಜಿತವಾದ ನೀರಾವರಿ ವ್ಯವಸ್ಥೆಯನ್ನು ರೂಪಿಸಲು ಸಾಧ್ಯವಿಲ್ಲ. ಚಿಕ್ಕದೇವರಾಯ ನಾಲೆ, ದೊಡ್ಡ ದೇವರಾಯ ನಾಲೆ, ವಿರಿಜಾ ನಾಲೆ, ಬಂಗಾರದೊಡ್ಡಿ ನಾಲೆ, ರಾಮಸ್ವಾಮಿ ನಾಲೆ, ರಾಜ ಪರಮೇಶ್ವರಿ ನಾಲೆ, ಮಾಧವ ಮಂತ್ರಿ ನಾಲೆ ಎಷ್ಟೊಂದು ನಾಲೆಗಳು. ಈ ನಾಲೆಗಳಿಗೆ ಕಟ್ಟು ನೀರಿನ ಪದ್ಧತಿಯನ್ನು ಅಳವಡಿಸಿ ಇಲ್ಲಿನ ಕೃಷಿಕರು ವ್ಯವಸಾಯ ಮಾಡುತ್ತಾರೆ. &lt;br /&gt;&lt;br /&gt;14ನೆಯ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಸ್ಥಳೀಯ ಮಂತ್ರಿಯಾಗಿದ್ದ ಮಾಧವ ಎಂಬುವರು ತಲಕಾಡು ಪಟ್ಟಣಕ್ಕೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಒದಗಿಸಲು ಕಾಲುವೆ ನಿರ್ಮಿಸಿದ್ದರು ಎಂಬ ಪ್ರತೀತಿ ಇದೆ. ಇನ್ನೊಂದೆಡ ಇದೇ ಮಂತ್ರಿ ೧೩೪೨ರಲ್ಲಿ, ಊರಿನಂಚಿನಲ್ಲಿ ಪ್ರಶಾಂತವಾಗಿ ಹರಿಯುತ್ತಿದ್ದ ಕಾವೇರಿಗೆ ಅಡ್ಡಲಾಗಿ ಅಣೆಕಟ್ಟೆ ಕಟ್ಟಿಸಿದ. ಪರಿಣಾಮವಾಗಿ ತಲಕಾಡು ಪಟ್ಟಣ ಮರಳ ಗುಡ್ಡವಾಗಿ ಮಾರ್ಪಾಡಾಯಿತು ಎನ್ನುತ್ತಾರೆ ಕೆಲವರು. ತಲಕಾಡಿನ ಬಗ್ಗೆ ಇರುವ ಈ ಎರಡು ಕಥೆಗಳಲ್ಲಿ ಯಾವುದನ್ನು ಒಪ್ಪಿಕೊಳ್ಳಬೇಕು ಎನ್ನುವುದು ನಿಮಗೆ ಬಿಟ್ಟಿದ್ದು. &lt;br /&gt;&lt;br /&gt;ಆದರೆ ತಲಕಾಡಿನ ಮರಳಿನಡಿಯಲ್ಲಿ ನೀರಾವರಿ ಕಾಲುವೆಗಳು ಇದ್ದವು ಎನ್ನುವುದಕ್ಕೆ ಈಗ ವೈಜ್ಞಾನಿಕ ಆಧಾರಗಳಿವೆ. ಬೆಂಗಳೂರಿನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ ಮತ್ತು ಪುರಾತತ್ವ ಇಲಾಖೆಯ ಸಂಶೋಧಕರು ನಡೆಸಿದ ಸಂಶೋಧನೆಯಲ್ಲಿ ಇದು ಧೃಡಪಟ್ಟಿದೆ. ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಜಿಪಿಎಸ್ ) ಅಡಿ ಉಪಗ್ರಹ ಮತ್ತು ರಾಡಾರ್ ತಂತ್ರಜ್ಞಾನದಿಂದ ಕಾವೇರಿ ನದಿ ತಟದಲ್ಲಿರುವ ತಲಕಾಡಿನ ಮರಳು ಗುಡ್ಡದ ಕೆಳಗಿರುವ ಸುಮಾರು ನಾಲ್ಕು ಶತಮಾನಗಳ ಹಿಂದಿನ ಕಾಲುವೆಗಳನ್ನು ಇವರು ಪತ್ತೆ ಹಚ್ಚಿದ್ದಾರೆ. &lt;br /&gt;&lt;br /&gt;ತಿರುಮಲ ರಾಜನ ಪತ್ನಿ ಆಲಮೇಲಮ್ಮ ಹಾಕಿದ್ದ ಶಾಪದಿಂದ ತಲಕಾಡು ಮರಳಾಯಿತು ಎಂದು ಇಂದಿಗೂ ನಂಬಿಕೊಂಡಿರುವವರು ಈ ವೈಜ್ಞಾನಿಕ ಸತ್ಯವನ್ನು ಒಪ್ಪದಿರಬಹುದು. ಇರಲಿ. ಇಲ್ಲಿ ನಾನು ತಲಕಾಡಿನ ಬಗ್ಗೆ ಬರೆಯಲು ಹೊರಟು ನಾಲೆ ನೀರಾವರಿ ವ್ಯವಸ್ಥೆಯ ಬಗ್ಗೆ ಬರೆದಿದ್ದೇನೆ. ಆದರೂ ಮುಖ್ಯವಾಗಿ ಹೇಳಬೇಕಾದದ್ದು ಬೇರೆಯದೇ ಇದೆ. &lt;br /&gt;&lt;br /&gt;ನಾವು ಉಣ್ಣುವ ಅನ್ನ, ಜೀವ ಕೊಡುವ ಉಸಿರು, ನೀರು, ನೆರಳು, ವಸತಿ, ಉಡುಪು ಎಲ್ಲದಕ್ಕೂ ಕಾರಣವಾದ ಪ್ರಕೃತಿಯಲ್ಲಿ ಏನೆಲ್ಲಾ ವಿಸ್ಮಯಗಳಿವೆಯಲ್ಲಾ? ನಮಗೆಲ್ಲಾ ಗೊತ್ತಿದೆ, ಮಾಯವಾದ ಕಾಡು, ಕೃಷಿಯಲ್ಲಿ ನಂಬಿಕೆಯನ್ನೇ ಕಳೆದುಕೊಳ್ಳುತ್ತಿರುವ ರೈತ, ಹಳ್ಳಿಗಳನ್ನು ಬಿಟ್ಟು ನಗರ ಸೇರುತ್ತಿರುವ ಯುವ ಜನತೆ. ಈ ಹೊತ್ತಿನಲ್ಲಿ, ನನಗೆ ಅನ್ನಿಸಿದ್ದು. ಪ್ರಕೃತಿಯ ಬಗ್ಗೆ ನಮಗೆಲ್ಲಾ ಹೆಮ್ಮೆ ಮೂಡಿ, ನಮ್ಮ ರೈತರಿಗೂ ಭೂಮಿಯ ಬಗ್ಗೆ ಹುರುಪು ಮೂಡಿ, ಅವರು ಕೃಷಿಯಲ್ಲಿ ಕಳೆದುಕೊಂಡಿರುವ ಆಸಕ್ತಿ, ನಂಬಿಕೆ ಮತ್ತೆ ಬಂದರೆ, ನಮ್ಮ ಹಳ್ಳಿಗಳು ಎಷ್ಟೊಂದು ಸಂಭ್ರಮ ಮತ್ತು ಸಮೃದ್ಧಿಯಲ್ಲಿರಲು ಸಾಧ್ಯ. ತಲಕಾಡಿಗೆ ಹೋಗಿ ಬಂದ ನಂತರ ಇದು ಮೊದಲ ಹಂತದ ಚಿಂತನೆ.&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-6584904424848759638?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/6584904424848759638/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=6584904424848759638' title='6 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/6584904424848759638'/><link rel='self' type='application/atom+xml' href='http://www.blogger.com/feeds/3841477221276814775/posts/default/6584904424848759638'/><link rel='alternate' type='text/html' href='http://jomon-malehani.blogspot.com/2009/12/blog-post.html' title='ತಲಕಾಡಿಗೆ ಹೋಗಿ ಬಂದ ನಂತರ....'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_A5Tc7GvymLQ/SyZMzx2hhCI/AAAAAAAAAO0/j8uYXpRMV8A/s72-c/blog.jpg' height='72' width='72'/><thr:total>6</thr:total></entry><entry><id>tag:blogger.com,1999:blog-3841477221276814775.post-8374375776320349013</id><published>2009-11-21T06:10:00.000-08:00</published><updated>2009-11-21T06:19:29.455-08:00</updated><title type='text'>ಒಂದು ಖುಷಿಯ ಸಂಜೆ</title><content type='html'>&lt;a href="http://3.bp.blogspot.com/_A5Tc7GvymLQ/Swf155nqqSI/AAAAAAAAAOs/6xISwNO7N6I/s1600/child.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 192px; height: 164px;" src="http://3.bp.blogspot.com/_A5Tc7GvymLQ/Swf155nqqSI/AAAAAAAAAOs/6xISwNO7N6I/s320/child.jpg" border="0" alt=""id="BLOGGER_PHOTO_ID_5406560252750113058" /&gt;&lt;/a&gt;&lt;br /&gt;&lt;br /&gt;ಒಂದಿಡಿ ದಿನವನ್ನು ಆಲಸಿಯಾಗಿ ಕಳೆದ ಬೇಸರದಲ್ಲಿ ಎದ್ದರೆ ಅದಾಗಲೇ ಸಂಜೆಯಾಗಿತ್ತು. ಹೊರಗೆ ಮಳೆ ಸುರಿದು ರಸ್ತೆಗಳನ್ನು ತೊಳೆದಿಟ್ಟ ಹಾಗಿತ್ತು. ಮಧ್ಯಾಹ್ನದಿಂದಲೇ ಸುರಿಯತೊಡಗಿದ ಮಳೆ ಹೊರಗೆ ಅಡಿ ಇಡದಂತೆ ಕೋಣೆಯೊಳಗೇ ನನ್ನನ್ನು ಬಂಧಿಸಿಟ್ಟಿತ್ತು. ಹೊರಗೆ ಒಣಗಲು ಹಾಕಿದ್ದ ಬಟ್ಟೆಗಳು ತೊಯ್ದು ತೊಪ್ಪೆಯಾಗಿದ್ದವು.ಟಿ ಕುಡಿದು ಬರೋಣವೆಂದು ಹೊರಟೆ.ಆಗಲೇ ಗೊತ್ತಾಗಿದ್ದು ಪರ್ಸಿನಲ್ಲಿ ಹಣವಿಲ್ಲ ಎನ್ನುವುದು. ATM ಕಡೆ ಹೆಜ್ಜೆ ಹಾಕಿದೆ. ಮಾರು ದೂರ. ಜಿಬುರು ಮಳೆ ಬೇರೆ. ಮಿರ್ಚಿ ಬಜಿ ಕರಿದ ವಾಸನೆ,ಗೋಬಿ ಮಂಚೂರಿ, ಪ್ರೈಡ್ ರೈಸ್, ಪಾನಿಪೂರಿ ವಾಸನೆಗಳೆಲ್ಲಾ ಆ  ಸಂಜೆಯೊಳಗೆ ಹದವಾಗಿ ಬೆರೆತು ಇಡಿ ವಾತಾವರಣ ಒಂದು ರೀತಿ ಉಲ್ಲಸಿತವಾಗಿತ್ತು. ಗದ್ದಲ ನಡೆದಿತ್ತು.&lt;br /&gt;&lt;br /&gt;ATM ಮುಂದೆ ಜನ Q ನಿಂತಿದ್ದರು.ನಾನೂ ಆ ಸಾಲಿನಲ್ಲಿ ಸೇರಿಕೊಂಡೆ.ಅಷ್ಟರಲ್ಲಾಗಲೇ ಪುಟಾಣಿ ಹುಡುಗಿಯೊಬ್ಬಳು ನನ್ನ ಗಮನ ಸೆಳೆದಳು. 5-6 ವರ್ಷದ ಹುಡುಗಿ. ನಮ್ಮ ಪಕ್ಕದ ಮನೆಯಲ್ಲಿ ಕಾಣಬಹುದಾದ ಹೊಳೆಯುವ ಕಣ್ಣುಗಳ ಮುದ್ದಾದ ಹುಡುಗಿ.ಆಕೆಯ ಕೈಯಲ್ಲೊಂದು ಬಣ್ಣದ ಛತ್ರಿ. ಅವರಮ್ಮ ATM ಕೌಂಟರ್ ಹೊರಗೆ ಕೊಡೆ  ಇಟ್ಟು ಒಳಗೆ ದುಡ್ಡು ತೆಗೆಯಲು ಹೋಗಿದ್ದರು. ಈಕೆ ತನ್ನ ಕೊಡೆ ತಿರುಗಿಸುತ್ತಾ ಇನ್ನೊಂದು ಛತ್ರಿ ಗಾಳಿಯಲ್ಲಿ ಹಾರಿ ಹೋಗದಂತೆ ಕಾವಲು ನಿಂತಿದ್ದಳು.&lt;br /&gt;&lt;br /&gt;ನನಗೆ ಯಾಕೋ ಈ ಮಗುವನ್ನು ಮಾತನಾಡಿಸಬೇಕು ಅಂತ ಅನಿಸತೊಡಗಿತು. &lt;br /&gt;ಪುಟ್ಟೀ ನಿನ್ನ ಛತ್ರಿ ನನಗೆ ಕೊಡ್ತೀಯಾ? ಸುಮ್ಮನೆ  ಕೇಳಿದೆ. &lt;br /&gt;ಹಮ್.. ಇಲ್ಲ. ಕೊಡಲ್ಲ. ಇದು ನನ್ ಛತ್ರಿ.&lt;br /&gt;ಹೋಗ್ಲಿ ನಿನ್ನ ಹೆಸರೇನು?&lt;br /&gt;ನೀಹಾರಿಕಾ! ಥಟ್ಟನೆ ಹೇಳಿದಳು.&lt;br /&gt;ನೀಹಾರಿಕಾ,ಹಾಗೆಂದರೆ ಏನು? ಗೊತ್ತಿದೆಯಾ?&lt;br /&gt;ಹಮ್.. ಇಲ್ಲ.&lt;br /&gt;ನಿನ್ನ ಹೆಸರಿನ ಅರ್ಥ ನಿನಗೆ ಗೊತ್ತಿಲ್ಲವಾ? ಹೋಗಲಿ,&lt;br /&gt;ನೀನು ಎಷ್ಟನೇ ಕ್ಲಾಸಿನಲ್ಲಿ ಓದ್ತಿದಿಯಾ?&lt;br /&gt;ಫಸ್ಟ್ ಸ್ಟಾಂಡರ್ಡ್.&lt;br /&gt;ನೀಹಾರಿಕಾ ಎನ್ನುವ ಹೆಸರಿನ ಅರ್ಥ ಯಾರೂ ನಿನಗೆ ಹೇಳಿಕೊಟ್ಟಿಲ್ಲವಾ?&lt;br /&gt;ಇಲ್ಲ..&lt;br /&gt;ನೋಡು  ಮರಿ, ನೀಹಾರಿಕಾ ಅಂದರೆ ನಕ್ಷತ್ರ ಪುಂಜ ಅಂತ ಅರ್ಥ. STAR...&lt;br /&gt;ಹೌದಾ..!?&lt;br /&gt;ಬ್ಯೂಟಿಫುಲ್ ... ನೈಟ್ ಕಾಣುವ ಸ್ಟಾರ್ ಅಲ್ವಾ ಅಂಕಲ್?&lt;br /&gt;ಹೌದು. ನೋಡು ನಿನ್ನ ಹೆಸರು ಎಷ್ಟು ಮುದ್ದಾಗಿದೆಯಲ್ವಾ?&lt;br /&gt;ನೀಹಾರಿಕಾಳ ಮುಖದಲ್ಲಿ ಸಾವಿರ ಮಲ್ಲಿಗೆ ಅರಳಿದ ಸಂಭ್ರಮ....&lt;br /&gt;&lt;br /&gt;ನಾನು ಮುಂದೆ ಸಾಗಲಾರದೆ ನೋಡುತ್ತಾ ನಿಂತೆ. ನೀಹಾರಿಕಾ ಎರಡು ಸುತ್ತು ನನ್ನತ್ತ ತಿರುಗಿ ಕೈಬೀಸಿ ಹೊರಟು ಹೋದಳು. ನನ್ನಲ್ಲಿ ಹೊಸ ಖುಷಿ ಅರಳತೊಡಗಿತು.ನಾನು ಚಿಕ್ಕವನಿದ್ದಾಗ,ಈ ಹುಡುಗಿಯಷ್ಟೇ ವಯಸ್ಸಿನ ಮಗುವಾಗಿದ್ದಾಗ, ಕಿರಿಯ ಪ್ರಾಥಮಿಕ ಶಾಲೆಗೆ ನಾಲ್ಕು ಮೈಲಿ ದೂರ ಕಾಡಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ.ಅವರಿವರ ಛತ್ರಿಯ ಕೆಳಗೆ ನಿಂತು, ದೇಹವೆಲ್ಲಾ ತೊಯ್ದು ತೊಪ್ಪೆಯಾಗಿ ಶಾಲೆ ತಲುಪುತ್ತಿದ್ದೆ. ಚಪ್ಪಲಿಯೇ ಇಲ್ಲದೆ ಬರಿಗಾಲಿನಲ್ಲಿ ನಡೆದು ಹೋದರೂ, ಆ ಮಳೆಯ ದಾರಿಯಲ್ಲಿ ಏನೋ ಒಂದು ಖುಷಿ ಇರುತ್ತಿತ್ತು.&lt;br /&gt;&lt;br /&gt;ನೆನಪು ಹಾಗೂ ಸುತ್ತಣ ದೃಶ್ಯಗಳ ಸಮ್ಮಿಶ್ರಣ ಹೊತ್ತ ಈ ಸಂಜೆ ಯಾಕೋ ವಿಶೇಷ ಸಂಜೆ ಎನಿಸತೊಡಗಿತು.ನೀಹಾರಿಕಾಳಂತ ಪುಟಾಣಿ ಹುಡುಗಿಗೆ ನಮ್ಮ ಮನಸ್ಸನ್ನು ಅರಳಿಸುವ,ಕುಪ್ಪಳಿಸುವಂತೆ ಮಾಡುವ, ಜ್ಞಾಪಿಸಿಕೊಳ್ಳುವಂತೆ ಮಾಡುವ ಶಕ್ತಿ ಇದೆಯಲ್ಲಾ ಎಂದು ಅಚ್ಚರಿ ಎನಿಸತೊಡಗಿತು. ಆಲಸಿತನ ನಿಧಾನವಾಗಿ ಕರಗತೊಡಗಿತು.&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-8374375776320349013?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/8374375776320349013/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=8374375776320349013' title='7 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/8374375776320349013'/><link rel='self' type='application/atom+xml' href='http://www.blogger.com/feeds/3841477221276814775/posts/default/8374375776320349013'/><link rel='alternate' type='text/html' href='http://jomon-malehani.blogspot.com/2009/11/blog-post.html' title='ಒಂದು ಖುಷಿಯ ಸಂಜೆ'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_A5Tc7GvymLQ/Swf155nqqSI/AAAAAAAAAOs/6xISwNO7N6I/s72-c/child.jpg' height='72' width='72'/><thr:total>7</thr:total></entry><entry><id>tag:blogger.com,1999:blog-3841477221276814775.post-2858726826487364599</id><published>2009-11-01T04:53:00.000-08:00</published><updated>2009-11-12T08:10:32.039-08:00</updated><title type='text'>ಪ್ರವಾಹವೂ ಲೈವ್‌‌, ಪರಿಹಾರವೂ LIVE‌!</title><content type='html'>ಮೂರು ಜನ ನಿರೂಪಕರು ಏಕಕಾಲಕ್ಕೆ ಒಂದು ಕಾರ್ಯಕ್ರಮವನ್ನು ನಡೆಸಿಕೊಡುವುದನ್ನು ನೋಡಿದ್ದೀರಾ? ನೋಡದಿದ್ದರೆ ತಕ್ಷಣವೇ ನೋಡಿ ಸುವರ್ಣ ನ್ಯೂಸ್‌!. ನೇರ, ದಿಟ್ಟ, ನಿರಂತರ ಚಾನೆಲ್‌ಗೆ ಹೊಸಬರ ಆಗಮನದಿಂದ ಒಂದಿಷ್ಟು ಹೊಸ ನೀರು ಹರಿದು ಬರಬಹುದು ಎಂಬ ಭ್ರಮೆ ಇಟ್ಟುಕೊಂಡವರಲ್ಲಿ ನಾನೂ ಒಬ್ಬ. ಆದರೆ ಈ ಭ್ರಮೆ ಏನಾಗುತ್ತದೆ ಎನ್ನುವುದನ್ನು ಇನ್ನೂ ಕಾದು ನೋಡಬೇಕಿದೆ. &lt;br /&gt;&lt;br /&gt;&lt;br /&gt;ಈಗ, ಒಂದೆಡೆ ತಾವೇ ಪ್ರಶ್ನೆ ಕೇಳಿ ತಾವೇ ಉತ್ತರ ಹೇಳಿ, ತಾವೇ ತೀರ್ಪು ಕೊಡುವ ನಿರೂಪಕರೊಬ್ಬರು. ಇನ್ನೊಂದೆಡೆದೆ ಚಕ್ರವ್ಯೂಹ ಖ್ಯಾತಿಯ ಹಮೀದ್‌. ಮತ್ತೊಂದೆಡೆ ಸುವರ್ಣ ಚಾನೆಲ್‌ನ ಹೊಸ ಸಿಇಒ‌. ಇವರು ಮೂವರು ಸೇರಿ ಸುವರ್ಣದಲ್ಲಿ ವಿಶೇಷ ಕಾರ್ಯಕ್ರಮ ನಡೆಸಿಕೊಡುತ್ತಿದ್ದರೆ, ಆ ಕಾರ್ಯಕ್ರಮಕ್ಕೆ ಮಾತನಾಡಲೆಂದು ಬಂದ ಅತಿಥಿಗಳಿಗೆ ಮಾತನಾಡಲು ಅವಕಾಶವೇ ಇಲ್ಲ ಎನ್ನುತ್ತಿದ್ದಾರೆ, ಹೊಸದಾಗಿ ಸುವರ್ಣ ನೋಡಲು ಪ್ರಾರಂಭಿಸಿರುವ ವೀಕ್ಷಕರು.  &lt;br /&gt;&lt;br /&gt;‘ಜಾಣನಲ್ಲದವನ ಮಾತು ಯಾರಿಗೂ ರುಚಿಸುವುದಿಲ್ಲ. ಹೇಳುವುದಕ್ಕೆ ತಕ್ಕುದಲ್ಲದ ಅನುಭವ ಕೇಳುವನ ಆಸಕ್ತಿ ಕೆರಳಿಸುವುದಿಲ್ಲ’ ಎನ್ನುವುದನ್ನು ಕೆಲವು ಟಿವಿ ನಿರೂಪಕರು ಇನ್ನಷ್ಟು ಜಾಣತನದಿಂದ ಅರ್ಥ ಮಾಡಿಕೊಳ್ಳಬೇಕು. ಕೆಲವೊಮ್ಮೆ ಜಾಣ ಎಂದುಕೊಂಡು ಇಡಿ ಟಿವಿ ಪರದೆಯನ್ನು ತಾವೇ ಆಕ್ರಮಿಸಿಕೊಂಡು ಕುಳಿತರೆ ಅದೇ ಆ ಚಾನೆಲ್‌ಗೆ ಮುಳುವಾಗುತ್ತದೆ. ವೀಕ್ಷಕ ಎಷ್ಟು ದಿನ ನಿರೂಪಕನನ್ನು ಸಹಿಸಿಕೊಂಡಾನು? &lt;br /&gt;&lt;br /&gt;ಇಲ್ಲಿ ಇದು ಮುಖ್ಯ ವಿಷಯವಲ್ಲ. ಇತ್ತೀಚೆಗೆ ಟಿವಿಯಲ್ಲಿ ಬರುವಂತಹ ಎಷ್ಟೋ ವಿಶೇಷ ಕಾರ್ಯಕ್ರಮಗಳಲ್ಲಿ ಹೆಚ್ಚಿನವು ಭಾಗವಹಿಸುವವರ ನಿಲುವುಗಳನ್ನು ಹೇಳಿಕೊಳ್ಳುವ ತಾಣಗಳಾಗುತ್ತದೆಯೇ ಹೊರತು, ಪರಸ್ಪರ ಚರ್ಚೆಯ ಮೂಲಕ ಸಾರ್ವತ್ರಿಕ ನಿಲುವುಗಳನ್ನು ರೂಪಿಸುವ ವೇದಿಕೆಯಾಗುವುದಿಲ್ಲ. ನಮ್ಮ ಕನ್ನಡ ಚಾನೆಲ್‌ಗಳಲ್ಲಂತೂ ಇತ್ತೀಚೆಗೆ ಇಂತಹ ಬರಿ ಮಾತಿನ ಮನೋರಂಜನೆ, ‘ವಿಶೇಷ ಕಾರ್ಯಕ್ರಮ’ ಎನ್ನುವ ಹೆಸರಿನಲ್ಲಿ ಸಾಕಷ್ಟು ಬರುತ್ತಿದೆ. ಒಮ್ಮೊಮ್ಮೆ ಈ ಮಾತು ಎಷ್ಟು ಕಳಪೆ ಮಟ್ಟಕ್ಕೆ ಹೋಗುತ್ತದೆಯೆಂದರೆ, ‘ನಿಮ್ಮ ಆಂತರಿಕ ಕಚ್ಚಾಟಗಳು ಈಗ ನಿಮಗೇ ಉಲ್ಟಾ ಹೊಡೆದಿದೆಯಾ? ಎಂದು ನಿರೂಪಕರೊಬ್ಬರು ಯಾವ ಮುಜುಗರವೂ ಇಲ್ಲದೇ ನೇರವಾಗಿ ರಾಜಕೀಯ ಮುಖಂಡರೊಬ್ಬರಿಗೆ ಕೇಳುತ್ತಾರೆ. ನಂತರ ಅವರು ಉತ್ತರಿಸುವ ಮುನ್ನವೇ ತಾವೇ ಉತ್ತರವನ್ನೂ, ಅಂತಿಮ ತೀರ್ಪನ್ನೂ ಕೊಡುತ್ತಾರೆ. ’ಅಂತಿಮ ತೀರ್ಪು’ ಅಂತ ಒಂದು ಹೊಸ ಕಾರ್ಯಕ್ರಮ ಪ್ರಾರಂಭಿಸಿದರೆ ಅದಕ್ಕೆ ಈ ನಿರೂಪಕನನ್ನು ಕಣ್ಣು ಮುಚ್ಚಿ ಜಡ್ಜ್‌ ಆಗಿ ಮಾಡಬಹುದು ಅಂತ ಅನಿಸುತ್ತಿದೆ. &lt;br /&gt;&lt;br /&gt;ಟಿವಿ ಎನ್ನುವುದು ಒಂದು ಮಾಧ್ಯಮವೇ? ಇಲ್ಲ ಉದ್ಯಮವೇ? ಅಥವಾ ವ್ಯಾಪಾರವೇ? ಬಂಡವಾಳಶಾಹಿ ವ್ಯವಸ್ಥೆಯೇ? ಇತ್ಯಾದಿಗಳೆಲ್ಲ ಒಬ್ಬ ಸಾಮಾನ್ಯ ಮಧ್ಯಮ ವರ್ಗದ ವೀಕ್ಷಕನ ಅರಿವಿಗೆ ನಿಲುಕುವುದಿಲ್ಲ. ಆತ ಅದರ ಬಗ್ಗೆ ಎಲ್ಲ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಕೆಲವು ಚಾನೆಲ್‌ಗಳಿಗೆ ಇದೇ ಬಂಡವಾಳ. ಮಧ್ಯಮ ವರ್ಗದ ವೀಕ್ಷನಿಗೆ ಏನು ಬೇಕು ಎನ್ನುವುದನ್ನು ಈ ಚಾನೆಲ್‌ಗಳು ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಒಂದು ಚಾನೆಲಿನ ಕಟ್ಟಡದ ಮೇಲೆ ಒಂದು ಕಾಗೆ ಹಾರಿದರೂ ಅದಕ್ಕೆ ಅದು ಲೈವ್‌ ಸುದ್ದಿಯಾಗುತ್ತದೆ. ಇಬ್ಬರು ಕಾಗೆ ತಜ್ಞರನ್ನು ಸ್ಟುಡಿಯೋಗೆ ಕರೆಯಿಸಿ ಚರ್ಚೆ ನಡೆಸುವಷ್ಟರ ಮಟ್ಟಿಗೆ ಆ ಚಾನೆಲ್‌ ವೃತ್ತಿಪರತೆ ಹೊಂದಿದೆ. ಮೊನ್ನೆ ಒಂದು ಚಾನೆಲ್‌ ಪ್ರವಾಹ ಪೀಡಿತ ಪ್ರದೇಶದ ಐದು ಗ್ರಾಮಗಳನ್ನು ದತ್ತು ತೆಗೆದುಕೊಂಡಿತು. ಐದು ಗ್ರಾಮಗಳನ್ನು ಹೊಸದಾಗಿ ನಿರ್ಮಿಸುವುದೆಂದರೆ ಸುಲಭದ ಕೆಲಸವೇ? ಸಂಗ್ರಹವಾದ ಹಣ ಇದಕ್ಕೆ ಸಾಕಾಗುವುದಿಲ್ಲ ಎಂದು ತಿಳಿದದ್ದೇ ತಡ, ಹೊಸದೊಂದು ಐಡಿಯಾ ಪ್ರಯೋಗಿಸಿತು. ಐವತ್ತು ಸಾವಿರದ ಮೇಲೆ ದಾನ ಮಾಡುವರು ನೇರವಾಗಿ ಸ್ಟುಡಿಯೋಗೆ ಬಂದು ಮಾತನಾಡಬಹುದು ಎಂದರು. ಕಾರ್ಯಕ್ರಮ ಲೈವ್‌ ಬೇರೆ. ದುಡ್ಡು ಬರದೇ ಇರುತ್ತದೆಯೇ? ಪ್ರವಾಹವೂ ಲೈವ್‌, ಪರಿಹಾರವೂ ಲೈವ್‌. ಹೇಗಿದೆ? &lt;br /&gt;&lt;br /&gt;ವಿದ್ಯುನ್ಮಾನ ಮಾತ್ರವಲ್ಲ ಮುದ್ರಣವೂ ಸೇರಿದಂತೆ ಇಂದು ಮಾಧ್ಯಮಗಳು ನಾಚಿಕೆಯಿಲ್ಲದಷ್ಟು ವಾಣಿಜ್ಯೀಕರಣಗೊಂಡಿದೆ. ಸಂಪಾದಕೀಯದ ಸ್ಥಳಗಳನ್ನೇ ಮಾರಲಾಗುವ ಇಂದಿನ ಕಾಲದಲ್ಲಿ ಪ್ರಿಂಟ್‌ ಪತ್ರಿಕೋದ್ಯಮವಂತೂ ಸಾರ್ವಜನಿಕ ಸಂಪರ್ಕ ವ್ಯವಸ್ಥೆಯ (ಪಿ.ಆರ‍್) ಕೈಗೊಂಬೆಯಾಗಿದೆ. ಅದಕ್ಕೇ ಖ್ಯಾತ ಚಿಂತಕ ನೋಮ್‌ ಛಾಮ್‌ಸ್ಕೀ ಹೇಳಿದ್ದು, ‘ಮಾಧ್ಯಮ ಎನ್ನುವುದು ಈಗ ಒಂದು ಕಲಾಪ್ರಕಾರವೂ ಅಲ್ಲ, ಸಂವಹನ ಮಾಧ್ಯಮವೂ ಅಲ್ಲ. ಅದು ಬಳಕೆ ಸಾಮಗ್ರಿಗಳ ಉತ್ಪಾದಕರಿಗೆ ಗ್ರಾಹಕರನ್ನು ತಲುಪಲಿಕ್ಕೆ ಅನುಕೂಲ ಮಾಡಿಕೊಡುವ ಒಂದು ತಂತ್ರಜ್ಞಾನ ಮಾತ್ರ’.&lt;br /&gt;&lt;br /&gt;ಈ ವರ್ಷದ ಅತ್ಯತ್ತಮ ಟಿವಿ ಪ್ರಶ್ನೆ ಎನ್ನುವುದಕ್ಕೆ ಯಾರೋ ಉದಾಹರಣೆ ಕೊಟ್ಟರು. ವಿಷಯ:- ಕರುಣಾಕರ ರೆಡ್ಡಿ ನಿವಾಸದಲ್ಲಿ ಹಾವು. &lt;br /&gt;&lt;br /&gt;ವರದಿಗಾರನ ಪ್ರಶ್ನೆ- ದೊಡ್ಡ ಹಾವು ಕಂಡರೆ ಏನು ಮಾಡಬೇಕು? ಚಿಕ್ಕ ಹಾವು ಕಂಡರೆ ಏನು ಮಾಡಬೇಕು?&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-2858726826487364599?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/2858726826487364599/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=2858726826487364599' title='7 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/2858726826487364599'/><link rel='self' type='application/atom+xml' href='http://www.blogger.com/feeds/3841477221276814775/posts/default/2858726826487364599'/><link rel='alternate' type='text/html' href='http://jomon-malehani.blogspot.com/2009/11/live.html' title='ಪ್ರವಾಹವೂ ಲೈವ್‌‌, ಪರಿಹಾರವೂ LIVE‌!'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><thr:total>7</thr:total></entry><entry><id>tag:blogger.com,1999:blog-3841477221276814775.post-7407495472209454446</id><published>2009-10-20T09:10:00.000-07:00</published><updated>2009-10-20T11:26:00.939-07:00</updated><title type='text'>ಎಲ್ಲೋ ಮಳೆಯಾಗಿದೆಯೆಂದು...</title><content type='html'>&lt;a href="http://3.bp.blogspot.com/_A5Tc7GvymLQ/St3iy7mgyQI/AAAAAAAAAOk/iSkQ7lKPAyU/s1600-h/blog.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 250px; height: 213px;" src="http://3.bp.blogspot.com/_A5Tc7GvymLQ/St3iy7mgyQI/AAAAAAAAAOk/iSkQ7lKPAyU/s320/blog.jpg" border="0" alt=""id="BLOGGER_PHOTO_ID_5394717293280282882" /&gt;&lt;/a&gt;&lt;br /&gt;&lt;br /&gt;ಮೊನ್ನೆ U2 ನೋಡುತ್ತಿದ್ದೆ. ಮನಸಾರೆ ಚಿತ್ರದ "ಎಲ್ಲೋ ಮಳೆಯಾಗಿದೆಯೆಂದು...." ಹಾಡು ಬರುತ್ತಿತ್ತು. ಹೌದು. ಹಾಡು ಕೇಳುತ್ತಿದ್ದಂತೆ ಇದರಲ್ಲಿ ಏನೋ ವಿಶೇಷವಿದೆ ಅನಿಸತೊಡಗಿತು. ವಿಮರ್ಶೆ ಓದಿ ಚಿತ್ರ ನೋಡುವರ ಸಾಲಿಗೆ ಸೇರಿದವನು ನಾನು. ಕೆಲವೊಮ್ಮೆ ಈ ವಿಮರ್ಶೆಗಳೇ ಚಿತ್ರಕ್ಕಿಂತ ಹೆಚ್ಚಿನ ಮನೋರಂಜನೆ ಒದಗಿಸುತ್ತದೆ. ಮನಸಾರೆ 'ಮೆಂಟಲ್‌ಗಳ' ಚಿತ್ರ ಎಂದು ಚಿತ್ರ ನೋಡಿ ಬಂದ ಕೆಲವು ಗೆಳೆಯರು ಹೇಳಿದ್ದರಿಂದ ಅದರ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳದೆ ಸುಮ್ಮನಾಗಿದ್ದೆ. ಆದರೆ ಈ ಹಾಡು ಮಾತ್ರ ತೀವ್ರವಾಗಿ ಕಾಡತೊಡಗಿತು. ಆಫೀಸಿಗೆ ಹೋದವನೇ ಯೂಟ್ಯೂಬ್‌ನಲ್ಲಿ ಹಾಡನ್ನು ಹುಡುಕಿ ಮತ್ತೆ ಕೇಳಿಸಿಕೊಂಡೆ. ಕಾಯ್ಕಿಣಿ ಕವಿತೆ ನಿಧಾನವಾಗಿ ಮನಸ್ಸನ್ನು ಆವರಿಸಿಕೊಳ್ಳತೊಡಗಿತು. &lt;br /&gt;&lt;br /&gt;ಹೌದು. ಕಳೆದ ಒಂದು ವಾರದಿಂದ, ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತ್ತಿದೆ, ಇಲ್ಲೇ ಒಲವಾಗಿದೆಯೆಂದು ಕನಸೊಂದು ಬೀಳುತ್ತಿದೆ... ಎಂದು ಗುನುಗುನಿಸಿಕೊಂಡು ಓಡಾಡುತ್ತಿದ್ದೇನೆ. ನಮ್ಮ ಕಾಯ್ಕಿಣಿ ಎಂತಹ ಅದ್ಭುತ ಕಲೆಗಾರ. ಅವರ ಕಾವ್ಯ ಕುಸುರಿಗೆ ಮಾರು ಹೋಗದವರಿಲ್ಲ. "ಕಾಯ್ಕಿಣಿ ಎಂತಹ ಕಲೆಗಾರನೆಂದರೆ, ಅವರ ಕಿವಿಯ ಹತ್ತಿರ ಶಂಖ ಹುಳುವೊಂದನ್ನು ಹಿಡಿದರೆ, ಆ ಪುಟಾಣಿ ಹುಳುವಿನ ಹೃದಯಕ್ಕೆ ಎಷ್ಟು ಕವಾಟುಗಳಿವೆ ಎನ್ನುವುದನ್ನು ಹೇಳಬಲ್ಲಷ್ಟು ಸೂಕ್ಷ್ಮ ಕಲೆಗಾರ" ಎಂದು ಬೊಗಸೆಯಲ್ಲಿ ಮಳೆಗೆ ಬೆಳಗೆರೆ ಬೆನ್ನುಡಿ ಬರೆದಿರುವುದರಲ್ಲಿ ಏನೂ ಆಶ್ಚರ್ಯವಿಲ್ಲ.&lt;br /&gt;&lt;br /&gt;ನಿಜವಾಗಿಯೂ ತಲೆಸುತ್ತುವ ಗೀತೆಗಳಿಂದ ಬೇಸೆತ್ತು ಹೋಗಿದ್ದ ಕನ್ನಡ ಚಿತ್ರರಂಗಕ್ಕೆ ಸುಂದರ ಮಳೆಗೀತೆಗಳನ್ನೂ, ಕನ್ನಡ ಭಾಷೆಯ ಮಾಧುರ್ಯವನ್ನೂ ಪರಿಚಯಿಸಿದವರು ಕಾಯ್ಕಿಣಿ. ಅಷ್ಟರ ಮಟ್ಟಿಗೆ ನಮ್ಮ ಕಿ(ಕ)ವಿಗಳು ಕಾಯ್ಕಿಣಿಗೆ ಖುಣಿಯಾಗಿರಬೇಕು. ಯಾಕೋ ಮನಸ್ಸು, ತುಂಬಾ  ವರ್ಷಗಳ ಹಿಂದಕ್ಕೆ ಓಡುತ್ತಿದೆ. ಅಂಗನವಾಡಿಯಲ್ಲೋ, ಒಂದನೆಯ ತರಗತಿಯಲ್ಲೋ ಇರಬೇಕು. "ಪುಣ್ಯಕೋಟಿ ಗೋವಿನ ಹಾಡು". ಬಹುಶಃ ಯಾವುದೇ ವ್ಯಕ್ತಿ ತನ್ನ ಜೀವಮಾನದುದ್ದಕ್ಕೂ ಮರೆಯಲಾಗದ ಪದ್ಯ ಇದು. ಈ ಪದ್ಯ ಎಷ್ಟು ಅರ್ಥಪೂರ್ಣವಾಗಿದೆಯೆಂದರೆ ಇದು ಮಕ್ಕಳು ಓದಬೇಕಾದ, ಹಿರಿಯರು ಧ್ಯಾನಿಸಬೇಕಾದ ಪದ್ಯ. ಸರಳ, ಸುಂದರ ವಾಕ್ಯರಚನೆಗಳಿಂದ ಸುಲಭವಾಗಿ ಅರ್ಥವಾಗುವ ಅಚ್ಚಗನ್ನಡದ ಈ ಪದ್ಯವನ್ನು ಕಾವೇರಿ ಟೀಚರ್ ಸುಶ್ರಾವ್ಯವಾಗಿ ಹಾಡುತ್ತಾ ಪಾಠ ಮಾಡುತ್ತಿದ್ದರೆ, ನಮ್ಮ ಕಣ್ಣುಗಳಿಂದ ನಮಗೆ ಗೊತ್ತಿಲ್ಲದಂತೆಯೇ ಕಣ್ಣೀರು ತೊಟ್ಟಿಕ್ಕುತ್ತಿತ್ತು. ಅಷ್ಟೊಂದು ಮಹೋನ್ನತ ಮೌಲ್ಯಗಳಿಂದ ಕೂಡಿದ ಪದ್ಯ ಅದು.&lt;br /&gt;&lt;br /&gt;ಇಂದಿಗೂ ಪುಣ್ಯಕೋಟಿ ಗೋವಿನ ಹಾಡು ಕಿವಿಯಲ್ಲಿ ಇಂಗದ ಅನುರಣನ. ಮತ್ತೆ ಮತ್ತೆ ನೆನಪಾಗಿ, ಬಾಲ್ಯವನ್ನು ನೆನಪಿಸಿ, ಕಣ್ಣೀರು ತರಿಸುವ ಈ ಪದ್ಯದ ಪ್ಯಾರಾವೊಂದು ಇಲ್ಲಿದೆ. "ಕೊಟ್ಟ ಮಾತಿಗೆ ತಪ್ಪಲಾರೆನು, ಕೆಟ್ಟ ಯೋಚನೆ ಮಾಡಲಾರೆನು" ಎಂದು ಹೇಳಿದ ಪುಣ್ಯಕೋಟಿ ಹುಲಿಯ ಗವಿಯ ಬಾಗಿಲು ಹೊಕ್ಕು.. &lt;br /&gt;'ಖಂಡವಿದಕೋ, ಮಾಂಸವಿದಕೋ,&lt;br /&gt;ಗುಂಡಿಗೆಯ ಬಿಸಿರಕ್ತವಿದಕೋ,&lt;br /&gt;ಉಂಡು ಸಂತಸಗೊಂಡು ನೀ &lt;br /&gt;ಭೂಮಂಡಲದೊಳು ಬಾಳಯ್ಯನೆ' ಎಂದು ಹೇಳುತ್ತದೆ. ಮುಂದೆ ನಾವು ಮಾತಾಡುತ್ತಿರಲಿಲ್ಲ. ಕೆನ್ನೆಯ ಮೇಲೆ ಕಣ್ಣೀರು ಹರಿಯಲು ಪ್ರಾರಂಭವಾಗುತ್ತಿತ್ತು.  ಅನಾಮಿಕ ಕವಿಯೊಬ್ಬ ಬರೆದ ಈ ಕವಿತೆಯಲ್ಲಿ ಎಷ್ಟೊಂದು ಮೌಲ್ಯವಿದೆ. &lt;br /&gt;&lt;br /&gt;ಇದನ್ನೆಲ್ಲಾ ಯಾಕೆ ಹೇಳುತ್ತಿದ್ದೇನೆಂದರೆ, ನಮ್ಮ ಬದುಕಿನ ಪುಟ್ಟ ಪುಟ್ಟ ಸಂತೋಷ ಹಾಗೂ ವಿಸ್ಮಯಗಳಿಗೆ ನಾವು ಸ್ಪಂದಿಸದೇ ಹೋದರೆ ಈ ಬದುಕಿನ ಎಷ್ಟೊಂದು ಖುಷಿಗಳನ್ನು ನಾವು ಕಳೆದುಕೊಳ್ಳುತ್ತೇವೆ ಎನ್ನುವುದು. ಕವನ ರಚನೆ ಅಥವಾ ಬರೆಹ ಕೂಡ ಹೀಗೆ. ಬರೆಹ ಅಥವಾ ಕವಿತೆಯಲ್ಲಿ ಹೃದಯದ ಸ್ಪಂದನವನ್ನು ಗುರುತಿಸದೇ ಹೋದರೆ, ಅದು ಯಾರ ಮನಸ್ಸಿನಲ್ಲಿಯೂ ಧೀರ್ಘಕಾಲ ನೆಲೆನಿಲ್ಲುವುದಿಲ್ಲ. ಯಾರ ಮನಸ್ಸನ್ನೂ ತಟ್ಟಿ ಬೆರಗುಗೊಳಿಸುವುದಿಲ್ಲ. &lt;br /&gt;&lt;br /&gt;ಇಂತಹ ಸ್ಪಂದನ ಇಲ್ಲದೇ ಹೋಗಿರುವುದರಿಂದಲೇ ನಮ್ಮ ಬದುಕು ಇಂದು ಹೀಗಾಗಿದೆ.  ಮುಗ್ಧತೆ ಕಳೆದುಹೋದ ಮನುಷ್ಯನ ಮನಸ್ಸಿನಲ್ಲಿ ಅಂಧಕಾರ ಬಿಟ್ಟು ಇನ್ನೇನು ಉಳಿಯುತ್ತದೆ? ಯಾಕೋ ಇದು ಸ್ಪಲ್ಪ ಗಂಭೀರವಾಗುತ್ತಿದೆ ಅನಿಸುತ್ತಿದೆ. ನಿಲ್ಲಿಸುತ್ತೇನೆ. ಪ್ರಾಸವೇ ಪದ್ಯವೆಂದು ತಿಳಿದು ಕವಿತೆ ರಚಿಸುವ ಈಗಿನ ಕಾಲದಲ್ಲಿ ಕಾಯ್ಕಿಣಿ ಕವಿತೆಗಳನ್ನು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ಮನಸ್ಸಿಗೆ ಹಿತವೆನಿಸುತ್ತದೆ. ಮತ್ತೆ ಹಾಡಿಕೊಳ್ಳುತ್ತಿದ್ದೇನೆ.. &lt;br /&gt;&lt;br /&gt;ಎಲ್ಲೋ ಮಳೆಯಾಗಿದೆಯೆಂದು....&lt;br /&gt;&lt;br /&gt;ಚಿತ್ರ ಕೃಪೆ - http://my.opera.com&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-7407495472209454446?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/7407495472209454446/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=7407495472209454446' title='19 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/7407495472209454446'/><link rel='self' type='application/atom+xml' href='http://www.blogger.com/feeds/3841477221276814775/posts/default/7407495472209454446'/><link rel='alternate' type='text/html' href='http://jomon-malehani.blogspot.com/2009/10/blog-post_20.html' title='ಎಲ್ಲೋ ಮಳೆಯಾಗಿದೆಯೆಂದು...'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_A5Tc7GvymLQ/St3iy7mgyQI/AAAAAAAAAOk/iSkQ7lKPAyU/s72-c/blog.jpg' height='72' width='72'/><thr:total>19</thr:total></entry><entry><id>tag:blogger.com,1999:blog-3841477221276814775.post-4930981981514674208</id><published>2009-10-11T07:02:00.000-07:00</published><updated>2009-10-11T07:04:42.468-07:00</updated><title type='text'>ಹೊಸ ತಲೆಮಾರಿನ ತಲ್ಲಣ</title><content type='html'>ಒಮ್ಮೆ  ಚಿಲಿ ದೇಶದ ಕವಿ ನೆರೂಡನಿಗೆ ಸಂದರ್ಶಕಿಯೊಬ್ಬಳು ಒಂದು ಗಂಭೀರ  ಪ್ರಶ್ನೆ ಕೇಳಿದಳು. ನೀವು ನಿಮ್ಮ ಪುಸ್ತಕಗಳಲ್ಲಿ ಒಂದನ್ನು ಬೆಂಕಿಯಿಂದ  ರಕ್ಷಿಸಿಕೊಳ್ಳಬೇಕಾಗಿ ಬಂದರೆ ಯಾವ ಪುಸ್ತಕ ರಕ್ಷಿಸಿಕೊಳ್ಳುತ್ತೀರಿ? &lt;br /&gt;&lt;br /&gt; ನೆರೂಡ  ಅಷ್ಟೇ ಸರಳವಾಗಿ ಹೇಳಿದ. ‘ಯಾವುದನ್ನೂ ರಕ್ಷಿಸಲಿಕ್ಕಿಲ್ಲ. ನನ್ನ ಪುಸ್ತಕಗಳಿಂದ ನನಗೇನು ಉಪಯೋಗ? ಅದಕ್ಕೆ ಬದಲು ಒಬ್ಬಳು ಹುಡುಗಿಯನ್ನು ರಕ್ಷಿಸಬಯಸುವೆ.. ನನ್ನ ಯಾವುದೇ ಪುಸ್ತಕಕ್ಕಿಂತ ಹೆಚ್ಚು ಸಂತೋಷ ಆಕೆಯಿಂದ ದೊರೆಯಬಲ್ಲದು.  &lt;br /&gt;&lt;br /&gt;ನೆರೂಡನ ಜಾಣತನ ನಮ್ಮ ಇಂದಿನ ಕವಿಗಳಿಗೆ ಇಲ್ಲವಲ್ಲ ಎಂದೆನಿಸುತ್ತದೆ. ನಮ್ಮ ಕೆಲವು ಬರಹಗಾರರು ತಮ್ಮ ಬರಹದಿಂದ ಜಗತ್ತೇ ಬದಲಾಗಬಹುದು ಎಂಬ ಭ್ರಮೆ ಉಳ್ಳವರು. ಅಥವಾ ಆ ಭ್ರಮೆ ಇಟ್ಟುಕೊಂಡೇ ಬರೆಯುವವರು. ನನ್ನ ಬರಹದಿಂದ ಸಮಾಜಕ್ಕೆ ಏನೂ ಒಳಿತಾಗದಿದ್ದರೆ ನಾನು ಬರೆಯುವುದರಿಂದ ಏನು ಸಾರ್ಥಕ ಎಂಬ ಪೊಳ್ಳು ಭರವಸೆಗಳನ್ನೂ, ಆಶಯಗಳನ್ನೂ, ತಾವೇ ನಂಬಿದ ಸತ್ಯಗಳನ್ನೂ ಇಟ್ಟುಕೊಂಡವರು. ನನ್ನ ಊರು, ಹಿತ್ತಲ ಹೂಬಳ್ಳಿ, ಪಕ್ಷಿಗಳು ಬಡತನ, ಅವ್ವನ ಲಾಲಿ ಹಾಡು, ಅಜ್ಜಿಯ ಜೋಗುಳ ಇವೆಲ್ಲಾ ನನ್ನ ಬರಹವನ್ನು ರೂಪಿಸಿದೆ ಎಂದು ಪದೇ ಪದೇ ಬರದುಕೊಂಡು ತಮ್ಮ  ಊರಿಗೂ, ಹಿತ್ತಲಿಗೂ ಮುಜುಗರ ಹುಟ್ಟಿಸುವವರು.  ‘ನೀವು ಬರೆಯದೇ ಇದ್ದರೆ ಇಲ್ಲಿ ಬೆಳಕು ಹರಿಯುವುದಿಲ್ಲ ಎಂದು ನಿಮಗೆ ನಂಬಿಸಿದವರು ಯಾರು? ಎಂದು ಇವರನ್ನು ಕೇಳಬೇಕು ಅನಿಸುತ್ತದೆ. &lt;br /&gt;&lt;br /&gt;ನನ್ನ ಖುಷಿಗಾಗಿ ಬರೆಯುವವನು ನಾನು. ನನ್ನ ಬರವಣಿಗೆಯಿಂದ ಕನ್ನಡ ಸಾಹಿತ್ಯಕ್ಕಾಗಲಿ, ಈ ಸಮಾಜಕ್ಕಾಗಲಿ ಕಿಂಚಿತ್ ಉಪಯೋಗವಾಗುತ್ತಿದೆ ಎಂಬ ಚಿಲ್ಲರೆ ಭ್ರಮೆಯನ್ನು ತಲೆಯಲ್ಲಿ ತುಂಬಿಕೊಂಡು ನಾನು ಓಡಾಡುತ್ತಿಲ್ಲವಾದ್ದರಿಂದ ನನಗೆ ನನ್ನ ಬರವಣಿಗೆಯ ಬಗ್ಗೆ ಯಾವುದೇ ಗೊಂದಲವಿಲ್ಲ. ಆದರೆ ಅದರ ಮುಂದಣ ಸಾಧ್ಯತೆಯ ಬಗ್ಗೆ ಮಾತ್ರ ಗೊಂದಲವಿದೆ. ಯಾಕೆಂದರೆ ಕವಿಯಂತೆ ನಾನು ಭವಿಷ್ಯದ ಜನಾಂಗಕ್ಕಾಗಿ ಬರೆಯುತ್ತಿಲ್ಲ. ಇಂದಿನ ಅಗತ್ಯಕ್ಕೆ ತಕ್ಕಂತೆ ಬರೆದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇನೆ. ಬರವಣಿಗೆ ನನ್ನೊಳಗನ್ನು ದಿನದಿಂದ ದಿನಕ್ಕೆ ಶುದ್ಧೀಕರಿಸುತ್ತಾ ಹೊರಟಿದೆ ಎಂದು ನಾನು ನಂಬಿದ್ದೇನೆ.&lt;br /&gt;&lt;br /&gt;ಅನೇಕ ಉತ್ತಮ ಬರಹಗಳು ವಿನಯ ಮತ್ತು ಮೌನದಲ್ಲಿ ಹುಟ್ಟುತ್ತವೆ. (ಇಲ್ಲಿಯವರೆಗೆ ಪ್ರೀತಿ ಮಾತ್ರ ಹುಟ್ಟುತ್ತದೆ ಎಂದು ತಿಳಿದಿದ್ದೆ) ಲೇಖಕ ಸರಳ, ನೇರ, ಪ್ರಾಮಾಣಿಕ ಹಾಗೂ ಸಂಕೋಚದ ಸ್ವಭಾವದವನಾಗಿದ್ದರೆ ಉತ್ತಮ ಬರಹ ಖಂಡಿತ ಹುಟ್ಟುತ್ತದೆ.&lt;br /&gt; &lt;br /&gt;ರಹಮತ್ ತರೀಕೆರೆ ಸಂಪಾದಿಸಿರುವ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಪ್ರಕಟಿಸಿರುವ ಒಂದು ಉತ್ತಮ ಪುಸ್ತಕ “ಹೊಸ ತಲೆಮಾರಿನ ತಲ್ಲಣ” ಕನ್ನಡದ 38 ಯುವ ಬರಹಗಾರರು ತಾವು ಏಕೆ ಮತ್ತು ಹೇಗೆ ಬರಹಗಾರರಾಗಿದ್ದು ಎಂದು ಬರೆದಿದ್ದಾರೆ. ನೀವೇಕೆ ಬರಹಗಾರರಾಗಬೇಕು ಎಂದು ನಿಮಗನಿಸುತ್ತಿದ್ದರೆ ಈ ಪುಸ್ತಕ ಓದಿ. 80 ರೂಪಾಯಿ ಜೇಬಿಗೆ ಹೊರೆಯೆನಿಸದು.&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-4930981981514674208?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/4930981981514674208/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=4930981981514674208' title='4 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/4930981981514674208'/><link rel='self' type='application/atom+xml' href='http://www.blogger.com/feeds/3841477221276814775/posts/default/4930981981514674208'/><link rel='alternate' type='text/html' href='http://jomon-malehani.blogspot.com/2009/10/blog-post.html' title='ಹೊಸ ತಲೆಮಾರಿನ ತಲ್ಲಣ'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><thr:total>4</thr:total></entry><entry><id>tag:blogger.com,1999:blog-3841477221276814775.post-4425528297333711378</id><published>2009-07-16T12:06:00.000-07:00</published><updated>2009-07-16T13:03:54.278-07:00</updated><title type='text'>ಅಬೋಲಿನ್ ಕುದುರೆಯೂ ಕಿಂಗ್‌ಫಿಷರ್ ಡರ್ಬಿಯೂ</title><content type='html'>&lt;span class=""&gt;&lt;br /&gt;ಕಳೆದ&lt;/span&gt; ಭಾನುವಾರ ಬೆಂಗಳೂರಿನಲ್ಲಿ ನಡೆದ ಕಿಂಗ್‌ಫಿಷರ್ ಡರ್ಬಿಯಲ್ಲಿ ಬುಕ್ಕಿಗಳ ಸರ್ವ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿ ಅಬೋಲಿನ್ ಎಂಬ ಕುದುರೆ ೭೯.೨೦ ಲಕ್ಷ ಮೊತ್ತದ ಬಹುಮಾನವನ್ನು ಗೆದ್ದುಕೊಂಡಿತು. ಗೆಲ್ಲುವುದಕ್ಕೂ ಸ್ವಲ್ಪ ಮುಂಚೆ ಈ ಕುದುರೆ ನಮ್ಮಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದನ್ನು ಯಾವ ಪರಮಾತ್ಮನಿಂದಲೂ ಊಹಿಸಲಿಕ್ಕಾಗದು ಎನ್ನುವ ಭಾವದಲ್ಲಿ ಅಶ್ವಶಾಲೆಯಲ್ಲಿ ತನ್ನ ಸಹೋದ್ಯೋಗಿಗಳೊಂದಿಗೆ ಹುರುಳಿ ತಿನ್ನುತ್ತಿತ್ತು. ಅದನ್ನು ಓಡಿಸಿದ ಜಾಕಿ ಅಲ್ಫೋರ್ಡ್‌ಗೆ ಅಬೋಲಿನ್ ಗೆಲ್ಲುತ್ತದೆ ಎನ್ನುವ ಸಣ್ಣ ವಿಶ್ವಾಸ ಕೂಡಾ ಹಿಂದಿನ ದಿನ ರಾತ್ರಿ ವಿಸ್ಕಿ ಕುಡಿಯುವಾಗಲೂ ಇರಲಿಲ್ಲ.&lt;br /&gt;&lt;br /&gt;ಕುದುರೆ ಜೂಜಿನ ಮಾಯಾಲೋಕವೇ ಅಂಥದ್ದು. ಹಚ್ಚ ಹಸಿರಿನ ಎರಡು ಕಿ.ಮೀ ಸುತ್ತಳತೆಯ ಅಂಗಳದಲ್ಲಿ ನಡೆಯುವ ರೇಸಿನಲ್ಲಿ ಯಾವ ಕುದುರೆ ಯಾರ ಭವಿಷ್ಯವನ್ನು ಬರೆಯಲಿದೆ, ಇನ್ಯಾರ ಮನೆಯ ದೀಪವನ್ನು ನಂದಿಸಲಿದೆ ಎನ್ನುವುದು ನಿಜಕ್ಕೂ ಆ ದೇವರಿಂದಲೂ ಊಹಿಸಲು ಸಾಧ್ಯವಾಗದ ಕೆಲಸ. ಯಾವ ಭವಿಷ್ಯಕಾರನೂ, ಎಂಥ ವಿಜ್ಞಾನಿಯೂ, ಯಾವ ಗಿಣಿಶಾಸ್ತ್ರಜ್ಞನೂ ಗೆಲ್ಲುವ ಕುದುರೆಯನ್ನು ಊಹಿಸಿ ಹೇಳಲಾರ. ಓಡಲಿರುವ ಕುದುರೆಯ ವಂಶವನ್ನೇ ಪತ್ತೆಹಚ್ಚಿ ಅದರ ವಂಶವಾಹಿಯನ್ನೇ ಹುಡುಕಿ ತಂದರೂ, ಇದೇ ಕುದುರೆ ಗೆಲ್ಲುತ್ತದೆ ಎನ್ನುವುದನ್ನು ಕರಾರುವಕ್ಕಾಗಿ ಹೇಳಲಾಗುವುದಿಲ್ಲ. ಹೆಣ್ಣಾದರೆ ಅದಕ್ಕೆ ಮುಟ್ಟೂ, ಗಂಡಾದರೆ ಬೆದೆಯೂ ಕಾಡಬಹುದು ಎಂದು ಲಂಕೇಶ್ ಒಮ್ಮೆ ಬರೆದಿದ್ದರು.&lt;br /&gt;&lt;br /&gt;ಕುದುರೆ ಜೂಜಿನ ಬಗ್ಗೆ ಏನೇನೂ ಗೊತ್ತಿಲ್ಲದ ನಾನು ಕಳೆದ ಭಾನುವಾರ ಬೆಳಿಗ್ಗೆ ಬೇಗನೇ ಎದ್ದ ತಪ್ಪಿಗೆ ರೇಸ್‌ಕೋರ್ಸ್ ರಸ್ತೆಯ ಮುಂದೆ ಬಂದು ನಿಂತಿದ್ದೆ. ರಸ್ತೆಯಂಚಿನಲ್ಲಿ ನಿಂತಿದ್ದ ಕಿಂಗ್‌ಫಿಷರ್ ಹೋರ್ಡಿಂಗ್ಸ್‌ಗಳೆಲ್ಲಾ ಬೆಳ್ಳಂ ಬೆಳಿಗ್ಗೆಯೇ ನಶೆ ಏರಿಸಿಕೊಂಡವರಂತೆ ನಿಂತಿದ್ದವು. ಟರ್ಫ್ ಕ್ಲಬ್ ಮುಂದಿನ ಅಂಗಳದಲ್ಲಿ ಒಂದಿಷ್ಟು ಪಂಟರು ಅಂಡು ಸುಟ್ಟ ಬೆಕ್ಕಿನಂತೆ ಓಡಾಡುತ್ತಿದ್ದರು. ಹಿಂದೆಲ್ಲಾ ಬೆಂಗಳೂರಿನಲ್ಲಿ ಅಣ್ಣಾವ್ರ ಚಿತ್ರ ಬಿಡುಗಡೆಯಾದಾಗ ಗರುವಾರ ರಾತ್ರಿಯೇ ಅಭಿಮಾನಿಗಳು ಹಾಸಿಗೆಯೊಂದಿಗೆ ಬಂದು ಥಿಯೇಟರ್ ಎದುರು ಮಲಗಿ, ಬೆಳಿಗ್ಗೆ ಎದ್ದು ಸರತಿ ಸಾಲಿನಲ್ಲಿ ನಿಂತು, ನುಗ್ಗಾಟ ನಡೆಸಿ, ಚಿತ್ರ ನೋಡಿ ಹೋಗುತ್ತಿದ್ದರಂತೆ. ಕಿಂಗ್ ಫಿಷರ್ ಡರ್ಬಿಯಲ್ಲಿ ಪಾಲ್ಗೊಳ್ಳಲು ಜೂಜು ಪ್ರೇಮಿಗಳು ಇಂಥದೇ ಕಸರತ್ತು ನಡೆಸಿದ ಹಾಗಿತ್ತು. ಬೆಳಿಗ್ಗೆ ಏಳಕ್ಕೆಲ್ಲಾ ಟರ್ಫ್ ಕ್ಲಬ್ ಮುಂದೆ ಜನ ಜಮಾಯಿಸಿದ್ದರು. ರೇಸಿನಲ್ಲಿ ಓಡಲಿರುವ ಕುದುರೆಗಳ ಹೆಸರನ್ನು ಹೊತ್ತ ಒರಿಜಿನಲ್ ವಿಲ್ ಇತ್ಯಾದಿ ರೇಸ್ ಪುಸ್ತಕದ ಹರಿದ ಹಾಳೆಗಳು ಅಲ್ಲೊಂದು ಇಲ್ಲೊಂದು ಬಿದ್ದಿದ್ದವು.&lt;br /&gt;&lt;br /&gt;ನನಗೆ ಕುತೂಹಲ ಕೆರಳಿಸಿದ್ದು ಕುದುರೆ ಜೂಜಲ್ಲ. ರೇಸು ಕುದುರಗಳ ಹೆಸರುಗಳು. ಬಕ್‌ಪಾಸರ್, ಗೆಲಿಲಿ, ರೆಡ್ ರೋಮಿಯೋ, ಜಿಪ್ಸಿ ಮ್ಯಾಜಿಕ್, ಜಾಕ್ವೆಲಿನ್, ಅಸ್ಟ್ರಾಲ್ ಫ್ಲಾಷ್, ರಿಯಲ್ ಡ್ರೀಮ್, ಲಾಸ್ಟ್ ನೈಟ್, ಸೊನ್ನೆಟ್, ಬೇಕಾನ್ ಲೈಟ್, ಫ್ರೀ ಸ್ಪಿರಿಟ್, ಬಕ್ ಮೇಕರ್, ಕಿಚನ್ ಕ್ಯಾಬಿನೆಟ್, ರೆಡ್ ಟೆರರ್, ಫೈರ್ ಕ್ರಸ್ಟ್, ಕೋಮಾಂಛೆ, ಪ್ಲಾಟಿನಂ ಗರ್ಲ್, ಸೀಕ್ರೇಟ್ ಹಾರ್ಟ್, ಬ್ಲಾಕ್ ಪರ್ಲ್ ವ್ಹಾ... ಎಷ್ಟೊಂದು ರೊಮ್ಯಾಂಟಿಕ್ ಹೆಸರುಗಳು. ನಮ್ಮೂರಿನ ಕೆಲವು ಕಿಲಾಡಿಗಳು ತಮ್ಮ ಸಾಕುನಾಯಿಗಳಿಗೆ ಇಂತಹ ತೂಕದ ಹೆಸರನ್ನು ಇಡುವುದಿದೆ. ನಮ್ಮ ಪಕ್ಕದ ಮನೆಯ ನಾಯಿಯ ಹೆಸರು ಲಾಡೆನ್. ಬುಷ್ ಮತ್ತು ಮುಷರಫ್ ಅದರ ಹಿಂಬಾಲಕರು. ಬರಿ ಅನ್ನವನ್ನೇ ತಿನ್ನುತ್ತಿದ್ದ ನಾಯಿಯೊಂದರ ಹೆಸರು ರೈಸ್ (ಕೊಂಡೊಲಿಜಾ ರೈಸ್). ವಿಚಿತ್ರವಾಗಿ ಕೂಗುತ್ತಿದ್ದ ನಾಯಿಯ ಹೆಸರು ಜಾಕ್ಸನ್. ಸ್ವಲ್ಪ ವೈಯಾರದಿಂದಿದ್ದ ಹೆಣ್ಣು ನಾಯಿಯೊಂದಕ್ಕೆ ಇಟ್ಟ ಹೆಸರು ಸಿಲ್ಕ್. ನಮ್ಮ ಮನೆಯಲ್ಲಿ ಕಡುಕಪ್ಪು ಬಣ್ಣದ ನಾಯಿಯೊಂದಿತ್ತು ಅದಕ್ಕೆ ನಾವಿಟ್ಟ ಹೆಸರು ಶಾಡೋ.&lt;br /&gt;&lt;br /&gt;ಟರ್ಫ್ ಕ್ಲಬ್ ಆವರಣದಲ್ಲಿ ಕುದುರೆಯ ಖುರಪುಟದ ಸದ್ದುಗಳು ಕೇಳಿಬರುವ ಹೊತ್ತಿನಲ್ಲಿ ನಾನು ಈ ಕುದುರೆಯ ಹೆಸರಿಗೂ ನಮ್ಮೂರ ಶ್ವಾನದಳದ ಹೆಸರಿಗೂ ಇರುವ ಸಂಬಂಧವನ್ನು ತಾಳೆ ಹಾಕುತ್ತಿದ್ದೆ. ಯಾಕೆ ಒಂದು ನೂರು ರೂಪಾಯಿ ಆಡಿ ಅದೃಷ್ಟ ಪರೀಕ್ಷಿಸಬಾರದು ಅಂತ ಅನಿಸಿದರೂ, ಮನುಷ್ಯನ ವಿನಾಶಕ್ಕೆ ಅತ್ಯಂತ ಹತ್ತಿರದ ದಾರಿ ಕುದುರೆ ಜೂಜು ಎನ್ನುವ ವಿವೇಕ ಎಚ್ಚರಿಸಿತು. ಕೂಲಿಕಾರರು, ಜವಾನರು, ರಿಕ್ಷಾಡ್ರೈವರ್‌ಗಳು, ಸರ್ಕಾರಿ ನೌಕರಸ್ತರು ಹೀಗೆ ರೇಸಿನ ದಾಸ್ಯಕ್ಕೆ ಸಿಕ್ಕವರು ಎಷ್ಟೊಂದು ಜನ ಎನಿಸಿತು. ಒಂದಿಷ್ಟು ಸುತ್ತಾಡಿ ಅಲ್ಲಿಂದ ಮರಳಿದೆ.&lt;br /&gt;&lt;br /&gt;ಅಬೋಲಿನ್ ಎಪ್ಪತ್ತೊಂಭತ್ತು ಲಕ್ಷ ಗೆದ್ದಿರಬಹುದು. ಸುಮಾರು ೯ ಕೋಟಿಗೂ ಹೆಚ್ಚಿನ ಬೆಟ್ಟಿಂಗ್ ನಡೆದಿದೆ ಎನ್ನುತ್ತಾರೆ. ಆದರೆ ಅದು ಗೆದ್ದ ದಿನ ನೂರಾರು ಬಡ ಜೂಜುಗಾರರ ಮನೆಯ ದೀಪಗಳೂ ನಂದಿವೆ....!&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-4425528297333711378?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/4425528297333711378/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=4425528297333711378' title='8 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/4425528297333711378'/><link rel='self' type='application/atom+xml' href='http://www.blogger.com/feeds/3841477221276814775/posts/default/4425528297333711378'/><link rel='alternate' type='text/html' href='http://jomon-malehani.blogspot.com/2009/07/blog-post.html' title='ಅಬೋಲಿನ್ ಕುದುರೆಯೂ ಕಿಂಗ್‌ಫಿಷರ್ ಡರ್ಬಿಯೂ'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><thr:total>8</thr:total></entry><entry><id>tag:blogger.com,1999:blog-3841477221276814775.post-5592388203763959342</id><published>2009-06-15T11:26:00.000-07:00</published><updated>2009-06-15T13:24:39.077-07:00</updated><title type='text'>ಮಂದಣ್ಣ, ಬೋದಿಲೇರ್ ಮತ್ತು ಮಾಧವಿಕುಟ್ಟಿ</title><content type='html'>ಮನುಷ್ಯ ಸದಾ ಕುಡಿದ ಸ್ಥಿತಿಯಲ್ಲಿರಬೇಕು ಎನ್ನುತ್ತಾನೆ ಪ್ರೆಂಚ್ ಕವಿ ಬೋದಿಲೇರ್. ಬೋದಿಲೇರ್‌ನ ಮಾತು ನಿಜವಾಗುತ್ತಿದ್ದರೆ ಈ ಲೋಕವೆಲ್ಲಾ ಸದಾ ಎಷ್ಟೊಂದು ಅಮಲಿನಲ್ಲಿ ತೇಲುತ್ತಿರುತ್ತಿತ್ತು ಎಂದು ನಾನು ಯೋಚಿಸುತ್ತಿರುತ್ತೇನೆ. ನಮ್ಮಲ್ಲಿ ಕೆಲವೇ ಕೆಲವು ಜನರು ಮಾತ್ರ ಸಂಜೆಯ ಹೊತ್ತಿಗೆ ಬೋದಿಲೇರ್‌ನನ್ನು ನೆನಪಿಸಿಕೊಳ್ಳುತ್ತಾರಲ್ಲಾ ಎಂದು ಬೇಜಾರಾಗುತ್ತದೆ. ಒಮ್ಮೆ ತೇಜಸ್ವಿಯ ’ಕರ್ವಾಲೋ’ ಓದಿ ಲಂಕೇಶ್ "ನಾನೂ ಕೂಡ ಕೆಲವೊಮ್ಮೆ ಈ ಮಂದಣ್ಣನಂತಿದ್ದರೆ ಎಷ್ಟು ಚನ್ನಾಗಿರುತ್ತಿತ್ತು" ಎಂದು ಬರೆದಿದ್ದರು. ನನಗೂ ಕೂಡ ಇತ್ತೀಚೆಗೆ ಯಾಕೋ ಬೋದಿಲೇರ್‌ನಂತೆ ಕುಡಿದ ಸ್ಥಿತಿಯಲ್ಲಿ ಮಂದಣ್ಣನಂತೆ ಆರಾಮವಾಗಿ ತಿರುಗಾಡಿಕೊಂಡು ಇರಬೇಕು ಅನಿಸುತ್ತಿದೆ.&lt;br /&gt;&lt;br /&gt;ಹೈದ್ರಾಬಾದ್‌ನಲ್ಲಿ ಲಂಕೇಶರ ಟೀಕೆ- ಟಿಪ್ಪಣಿ ಕುರಿತು ಪಿಎಚ್‌ಡಿ ಮಾಡುತ್ತಿರುವ ನನ್ನ ಸೀನಿಯರ್ ಒಬ್ಬರಿಗೆ ಮೊನ್ನೆ ಹೇಗಿದ್ದೀರಾ? ಎಂದು ಸ್ಕ್ರಾಪ್ ಮಾಡಿದರೆ, ಅವರು ’ಏನೂಂತ ಹೇಳಲಿ ಜೋಮನ್ ಹೊರಗಡೆ ಮಳೆ ಉಯಿತಿದೆ ಒಳಗಡೆ ಝಳ ಆಗ್ತಿದೆ; ನಟ್ಟ ನಡು ಲೈಫಲ್ಲಿ ಬಿಟ್ಟು ಹೋದವಳ ನೆನಪು, ದಟ್ಟ ಕಾಡಲ್ಲಿ ಅಮಾಯಕ ಮೊಲದ ಸ್ಥಿತಿ! ಇನ್ನು ನೀನೆ ಉಹಿಸಿಕೋ! ಎಂದು ತೀವ್ರ ವಿಷಾದಲ್ಲಿ ಪ್ರತಿಕ್ರಿಯಿಸಿದ್ದಾರೆ. ನಾನೂ ಕೂಡ ಅವರಿಗೆ ತೇಜಸ್ವಿ ಶೈಲಿಯಲ್ಲಿ ’ನಿಮ್ಮ ಎದೆಯೊಳಗಿನ ಅದಮ್ಯ ಪ್ರೇಮ ಶರಧಿಯನ್ನೂ, ತ್ಯಾಗಮಯತೆಯನ್ನೂ, ಸಾಹಸ ಪ್ರೀಯತೆಯನ್ನೂ ಅರಿಯುವ ಯೋಗ್ಯತೆ ಅಲ್ಲಿನ (ಹೈದ್ರಾಬಾದಿನ) ಹುಡುಗಿಯರಿಗೆ ಇಲ್ಲ ಎನ್ನುವ ತೀವ್ರ ವಿಷಾದ ನಿಮ್ಮಂತೆ ನನ್ನ ಹೃದಯವನ್ನೂ ಕಾಡುತ್ತಿದೆ ಎಂದು ಬರೆದು ಸಮಾಧಾನ ಮಾಡಿದ್ದೇನೆ.&lt;br /&gt;&lt;br /&gt;"ನಾನು ಶ್ರಿಕೃಷ್ಣನನ್ನು ಅಲ್ಲಾಹುವಾಗಿ ಪರಿವರ್ತಿಸಿ ಅವನನ್ನು ಪ್ರವಾದಿಯನ್ನಾಗಿ ಮಾಡಿ, ಮೊಹಮದ್ ಎಂದು ಕರೆಯುತ್ತೇನೆ. ಗುರುವಾಯೂರಿಗೆ  ಹೋದರೆ ಅಲ್ಲಿ ಕೃಷ್ಣ ಇರುವುದಿಲ್ಲ" ಎಂದು ನಿರ್ಭಯವಾಗಿ ಹೇಳಿಕೆ ನೀಡಿ, ಹಿಂದುತ್ವವಾದಿಗಳ ಕೆಂಗಣ್ಣಿಗೆ ಗುರಿಯಾದ ಮಾಧವಿಕುಟ್ಟಿ ಎಂಬ ಕಮಲಾ ಸುರಯ್ಯ ತೀರಿಹೋಗಿ ಈವತ್ತಿಗೆ ಹದಿನೇಳು ದಿನಗಳಾದವು. ನಾನು ಇಲ್ಲಿನ ಎಂಜಿ ರಸ್ತೆಯಲ್ಲಿರುವ ಹಲವು ಪುಸ್ತಕದ ಅಂಗಡಿಗೆ ನುಗ್ಗಿ ಅವರ ’ನಷ್ಟಪಟ್ಟ ನೀಲಾಂಬರಿಯೋ, ನೆಯ್ ಪಾಯಸ’ಮೋ ಸಿಗುತ್ತೆದೆಯೇ ಎಂದು ಆಸೆಯಿಂದ ಹುಡುಕಿ ಬಂದೆ. ಎಲ್ಲೂ ಸಿಗಲಿಲ್ಲ. ಸಿಕ್ಕಿದ್ದರೆ ಗೊತ್ತಿರುವ ಅಲ್ಪಸ್ವಲ್ಪ ಮಲಯಾಳದಲ್ಲಿ ಅದನ್ನು ಓದಬಹುದಿತ್ತು ಎಂಬ ಆಸೆ ಹಾಗೆಯೇ ಉಳಿಯಿತು. ಹಾಗೆ ರೂಮಿಗೆ ಬಂದು ಕೈಗೆ ಸಿಕ್ಕಿದ ’ಕರ್ವಾಲೋ’ ಮತ್ತೊಮ್ಮೆ ಓದಿದಾಗ ಈ ಮೇಲಿನ ತಮಾಷೆಗಳೆಲ್ಲಾ ನೆನಪಾದವು.&lt;br /&gt;&lt;br /&gt;ಈಗೀಗ ಬ್ಲಾಗಿಗೆ ಬರೆಯಲು ತುಂಬಾ ಹೆದರಿಕೆ ಆಗುತ್ತಿದೆ. ಏಕೆಂದರೆ ನನ್ನ ಬ್ಲಾಗ್ ಆಫ್‌ಡೇಟ್ ಆಗಿ ನಾಲ್ಕು ತಿಂಗಳಾಯಿತು. ಸನ್ಮಾನ್ಯ ಬ್ಲಾಗಿಗರೇ ನಾನು ಮಳೆಹನಿಯ ಜೋಮನ್ ವರ್ಗೀಸ್ ಎಂದು ನನ್ನನ್ನು ನಾನೇ ಪರಿಚಯಿಸಿಕೊಳ್ಳುತ್ತಾ ಮತ್ತೊಮ್ಮೆ ಪ್ರಾರಂಭಿಸಬೇಕಿದೆ. ಮಳೆ ನಿಂತರೂ ಮಳೆಹನಿ ನಿಂತಿಲ್ಲ ಎನ್ನುವಂತೆ ನನ್ನ ಬ್ಲಾಗ್ ಈಗ ಆಪ್‌ಡೇಟ್ ಆಗಿದೆ. ಈ ಮಳೆ ಸುರಿಯುವ ಹೊತ್ತಿನಲ್ಲಾದರೂ ಕನ್ನಡದ ಸಹೃದಯ ಬ್ಲಾಗಿಗರು ಮಳೆಹನಿಯನ್ನು ನೆನಪಿಸಿಕೊಳ್ಳಲಿ ಎನ್ನುವ ಆಸೆಯಾಗುತ್ತಿದೆ.&lt;br /&gt;&lt;br /&gt;ಕನ್ನಡದಲ್ಲಿ ಪ್ರತಿದಿನವೂ ಆಪ್‌ಡೇಟ್ ಆಗುವ ಬ್ಲಾಗ್ ಎಂದು ಯಾರಾದರೂ ಪ್ರಶಸ್ತಿ ಕೊಟ್ಟರೆ ಅದು &lt;a href="http://paryaya.blogspot.com/"&gt;ಪರ್ಯಾಯದ&lt;/a&gt; ಉದಯಶಂಕರ ಭಟ್ಟರಿಗೂ, ಅತ್ಯಂತ ನಿಧಾನವಾಗಿ ಅಫ್‌ಡೇಟ್ ಆಗುವ ಬ್ಲಾಗ್ ಎನ್ನುವ ಪ್ರಶಸ್ತಿ ಮಳೆಹನಿಗೂ ಖಂಡಿತ ಬರುತ್ತದೆಯೆಂದು ನಾನೂ ತುಂಬಾ ವಿಶ್ವಾಸ ಇಟ್ಟುಕೊಂಡಿದ್ದೇನೆ. ನನಗೆ ಸಿಗುವ ಈ ಪ್ರಾಮಾಣಿಕ ಪ್ರಶಸ್ತಿಗೆ ಯಾರಾದರೂ ಪ್ರತಿಸ್ಪರ್ಧಿಗಳಿದ್ದರೆ ಮೊದಲೇ ನನಗೆ ತಿಳಿಸತಕ್ಕದ್ದು. ವೀಕ್ ಆಫ್ ಇರುವ ದಿನ ಪ್ರೆಸ್‌ಕ್ಲಬ್‌ನಲ್ಲಿ ರಾಜಿ ಸಂಧಾನಕ್ಕೆ ಅವಕಾಶವಿರುತ್ತದೆ.&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-5592388203763959342?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/5592388203763959342/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=5592388203763959342' title='19 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/5592388203763959342'/><link rel='self' type='application/atom+xml' href='http://www.blogger.com/feeds/3841477221276814775/posts/default/5592388203763959342'/><link rel='alternate' type='text/html' href='http://jomon-malehani.blogspot.com/2009/06/blog-post.html' title='ಮಂದಣ್ಣ, ಬೋದಿಲೇರ್ ಮತ್ತು ಮಾಧವಿಕುಟ್ಟಿ'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><thr:total>19</thr:total></entry><entry><id>tag:blogger.com,1999:blog-3841477221276814775.post-4782891942408390282</id><published>2009-02-03T05:03:00.000-08:00</published><updated>2009-02-03T05:16:51.700-08:00</updated><title type='text'>ಏಟ್ಸ್, ಎಂಜಿ ರಸ್ತೆ ಮತ್ತು ತರಲೆ ಹುಂಜ</title><content type='html'>ಬಿಸಿಲು ಚಿನ್ನದ ಬಣ್ಣಕ್ಕೆ ತಿರುಗುವ ಹೊತ್ತಿಗೆ ನಾನು ಇಲ್ಲಿನ ಎಂಜಿ ರಸ್ತೆಯಲ್ಲಿರುವ ಇಂಡಿಯನ್ ಕಾಫಿಹೌಸ್‌ನಲ್ಲಿ ಕುಳಿತು ಬೆಂಗಳೂರನ್ನು ಅಪಾರ ಮೋಹದಿಂದ ನೋಡುತ್ತಿದ್ದೆ. ಮೈಮೇಲೆ ಎಚ್ಚರವಿಲ್ಲದೆ ಧಾವಿಸುವ ಹರೆಯದ ಹುಡುಗ ಹುಡುಗಿಯರು, ಪರಸ್ಪರ ಸೊಂಟ ಬಳಸಿ ನಡೆಯುವ ಪ್ರೇಮಿಗಳು, ಬ್ರಿಗೇಡ್ ರಸ್ತೆಯ ಕೆಂಪು, ಹಸಿರು ನಿಯಾನ್ ದೀಪಗಳಲ್ಲಿ ಯೌವನ ಉಕ್ಕಿಸುವ ತರುಣಿಯರು, ಸಂಜೆಗತ್ತಲಿಗೆ ಅಮಲು ತರಿಸುವಂತೆ ಹಾರುವ ಮುಂಗುರುಳುಗಳು ಎಲ್ಲವನ್ನೂ ತಣ್ಣನೆಯ ಅಸೂಯೆಯಿಂದ ನೋಡುತ್ತಿದ್ದೆ.&lt;br /&gt;&lt;br /&gt;‘ಮೂಡಣದಂತೆ ಬೆಚ್ಚಗೆ, ಆದರೆ ಗ್ರೀಷ್ಮದಂತೆ ತಣ್ಣಗಿರಬೇಕು ನನ್ನ ಕಾವ್ಯ’ ಎಂದು ಹೇಳಿದ ಏಟ್ಸ್ ಕವಿ ಈ ಸಂಜೆಯ ಹೊತ್ತಿಗೆ ನೆನಪಾಗುತ್ತಾನೆ. ಏಟ್ಸ್‌ನನ್ನು ನಾನು ಹೆಚ್ಚು ಓದಿಕೊಂಡಿಲ್ಲ. ಆದರೆ ಅವನನ್ನು ಇಷ್ಟಪಡುವವರು ಆತನ ಕುರಿತು ಬರೆದಿದ್ದನ್ನು ಓದಿದ್ದೇನೆ. ‘ಮನುಷ್ಯನ ಮನಸ್ಸು ಯಾವ ಹೆಣ್ಣನ್ನು ಕುರಿತು ಹೆಚ್ಚು ಧ್ಯಾನಿಸುತ್ತದೆ, ಆತನಿಗೆ ಒಲಿದ ಹೆಣ್ಣನ್ನೋ, ಆತನಿಗೆ ಒಲಿಯದೇ ಹೋದ ಹೆಣ್ಣನ್ನೋ?’ ಎಂದು ಕೇಳುತ್ತಾನೆ ಏಟ್ಸ್? ನನಗೆ ನಗು ಬರುತ್ತದೆ. ಏಟ್ಸ್ ಸತ್ತು ಹೋಗಿದ್ದು ಡಿಸೆಂಬರ್‌ನ ಚಳಿಗಾಲದಲ್ಲಂತೆ. ‘ಎಲ್ಲಾ ಹಿಮಚ್ಛಾದಿತ ಗಿರಿಬನಗಳೂ, ಮಂಜು ಕವಿದ ವಿಮಾನ ನಿಲ್ದಾಣಗಳೂ ತಿಳಿಯಲಿ ನನ್ನ ಪ್ರೀತಿಯ ಕವಿ ಈ ಚಳಿಯಲ್ಲಿ ನಿಶ್ಯಬ್ಧನಾಗಿದ್ದಾನೆ ಎಂದು’ ಎಂದು ಏಟ್ಸ್ ತೀರಿಕೊಂಡಾಗ ಆಡೆನ್ ಬರೆದಿದ್ದರು. ಹೀಗೆ ಎನೇನೋ ಯೋಚನೆ ಮಾಡಿಕೊಂಡು ಬಿಎಮ್‌ಟಿಸಿ ಬಸ್ಸು ಹತ್ತಿದ್ದೆ.&lt;br /&gt;&lt;br /&gt;ಥಟ್ಟನೆ ಆದಾಗಲೇ ನಾನು ಬೆಂಗಳೂರಿಗೆ ಬಂದು ಒಂದು ತಿಂಗಳು ಕಳೆಯಿತಲ್ಲ ಎನ್ನುವ ಜ್ಞಾನೋದಯವಾಯಿತು. ಮೊನ್ನೆ ಬ್ಲಾಗಿನಲ್ಲಿ ತುಂಬಾ ದಿನಗಳಿಂದ ಏನೂ ಬರೆಯದಿದ್ದಿದಕ್ಕೆ &lt;a href="http://chitrahegde.blogspot.com/"&gt;&lt;span style="color:#ff0000;"&gt;ಚಿತ್ರಾ &lt;/span&gt;&lt;/a&gt;ಅವರು ಮತ್ತೆಲ್ಲಿ ಕೆಲಸಕ್ಕೆ ರಾಜಿನಾಮೆಕೊಟ್ಟು ಊರಿಗೆ ಹೋಗಿದ್ದೀರಾ ಎಂದು ಕೇಳಿದ್ದರು. ಬ್ಲಾಗ್ ಬರೆಯುವುದು ಹೋಗಲಿ ಮೇಡಂ, ಬೆಂಗಳೂರಿನಲ್ಲಿ ಕೆಲಸ ಮಾಡುವರ ಅರ್ಧ ಆಯಸ್ಸು ಬಿಎಂಟಿಸಿ ಬಸ್ಸುಗಳಲ್ಲೇ ಕಳೆದುಹೋಗುತ್ತಿದೆ ಅಂತ ಅನಿಸುವಾಗ ವಾಪಾಸ್ಸು ಊರಿಗೇ ಹೋಗಿಬಿಡುವ ಅನಿಸುತ್ತದೆ. ಟ್ರಾಫಿಕ್ ಸಿಗ್ನಲ್ ಬಿದ್ದಾಗ ಕಾಲಿನಲ್ಲಿ ತೆವಳುತ್ತಾ ಕೈ ಚಾಚುವ ಮಹಿಳೆಯನ್ನು ನೋಡುತ್ತಾ ನಿಲ್ಲುತ್ತೇನೆ. ‘ಎಲ್ಲಿ ನೋವಿದೆಯೋ ಅಲ್ಲಿ ಸಾಂತ್ವನವನ್ನೂ, ಎಲ್ಲಿ ದು:ಖವಿದೆಯೋ ಅಲ್ಲಿ ಸುಖವನ್ನೂ ಹಂಚೋಣ ’ ಎಂದು ಹೇಳಿದ ಮದರ್ ತೆರೇಸಾ ನೆನಪಾಗುತ್ತಾರೆ. ‘ನೀವು ಒಳ್ಳೆಯವರಾದ್ರೆ ನಿಮ್ಮನ್ನು ಎಲ್ಲರೂ ಪ್ರೀತಿಸುತ್ತಾರೆ’ ಎಂದು ನನ್ನ ಪಿಯುಸಿ ಆಟೋಗ್ರಾಫ್‌ನಲ್ಲಿ ಬರೆದು, ನಾನು ಸುಮ್ಮನೆ ಎನೋನೋ ಕನಸು ಕಾಣುವಂತೆ ಮಾಡಿದ ಹುಡುಗಿಯೂ ಯಾಕೋ ಸುಮ್ಮನೆ ಈಗ ನೆನಪಾಗುತ್ತಿದ್ದಾಳೆ.&lt;br /&gt;&lt;br /&gt;ಚೆನೈನ ಕೋಡಂಬಕ್ಕಂನ ವಿಸ್ತರಣೆಯಂತಿರುವ ಬೆಂಗಳೂರಿನ ಈ ಮರಿಯಪ್ಪನಪಾಳ್ಯದಲ್ಲಿ ನಾವು ರೂಮು ಮಾಡಿಕೊಂಡಿದ್ದೇವೆ. ನೈಟ್‌ಶಿಪ್ಟ್ ಮುಗಿಸಿ ಬೆಳಿಗ್ಗೆ ಹನ್ನೊಂದು ಗಂಟೆಗೆ ಎಳುವ ಹವ್ಯಾಸವಿರುವ ನನಗೆ ಬಂದ ದಿನದಿಂದ ಇಲ್ಲಿನ ಹುಂಜವೊಂದು ಕಾಟ ಕೊಡುತ್ತಿದೆ. ಸಾಮಾನ್ಯ ಎಲ್ಲ ಕೋಳಿಗಳು ಬೆಳಗಿನ ಜಾವ ಐದಕ್ಕೆಲ್ಲಾ ಕೂಗಿದರೆ ಈ ಹುಂಜ ರಾತ್ರಿ ಎರಡು ಗಂಟೆಯಿಂದಲೇ ತನ್ನ ಅಲಾರಾಂ ಮೊಳಗಿಸಲು ಪ್ರಾರಂಭಿಸುತ್ತದೆ. ಇನ್ನೇನು ಮಲಗಬೇಕು ಎನ್ನುವಷ್ಟರಲ್ಲಿ ಪಕ್ಕದ ಮೆಜೆಸ್ಟಿಕ್‌ವರೆಗೂ ಕೇಳಿಸುವಂತೆ ಕೋಳಿ ಕೂಗುತ್ತದೆ. ಒಮ್ಮೆ &lt;span class=""&gt;ಕೂಗಿ ನಿಲ್ಲಿಸುವುದಿಲ್ಲ.&lt;/span&gt; ಕೋಳಿಯ ನಿಲಯದ ಪ್ರಸಾರ ಬೆಳಗಿನ ಜಾವ ಐದುಗಂಟೆಯವರೆಗೆ ಮುಂದುವರೆಯುತ್ತದೆ. ಈ ಓಣಿಯಿಂದಲೂ ಸುಖವಿಲ್ಲ, ಕೋಳಿಯಿಂದಲೂ ಸಮಾಧಾನವಿಲ್ಲ ಎನ್ನುವಂತಾಗಿದೆ ನಮ್ಮ ಸ್ಥಿತಿ.&lt;br /&gt;&lt;br /&gt;‘ಎಲಾ ಮರಿಯಪ್ಪನಪಾಳ್ಯದ ಹುಂಜವೇ, ನೀನು ಮಧ್ಯರಾತ್ರಿ ಕೂಗುವುದು ನಿಲ್ಲಿಸದಿದ್ದರೆ, ನಿನ್ನ ಬಗ್ಗೆ ಬ್ಲಾಗಿನಲ್ಲಿ ಬರೆದು ನಿನ್ನ ಮಾನ ಹರಾಜು ಹಾಕುತ್ತೇನೆ ಎಂದು ಅದಕ್ಕೆ ಹೇಳಿ ಬಂದಿದ್ದೇನೆ. ಅಷ್ಟಕ್ಕೂ ಕೂಗುವುದು ನಿಲ್ಲಿಸದಿದ್ದರೆ ಇಲ್ಲೇ ಪಕ್ಕದ ಓಣಿಯಲ್ಲಿರುವ ಛಾಯಾಕನ್ನಡಿಯ &lt;a href="http://chaayakannadi.blogspot.com/"&gt;&lt;span style="color:#ff0000;"&gt;ಶಿವು &lt;/span&gt;&lt;/a&gt;ಅವರನ್ನು ಕರೆತಂದು ನಿನ್ನ ಚಿತ್ರ ತೆಗೆದು ಪತ್ರಿಕೆಯಲ್ಲಿ ಹಾಕುತ್ತೇನೆ ಎಂದು ಹೆದರಿಸಿದ್ದೇನೆ. ಆದರೂ ಅದು ಕೂಗುವುದನ್ನು ನಿಲ್ಲಿಸುವಂತೆ ಕಾಣಿಸುತ್ತಿಲ್ಲ. ನಿಮಗೆ ಯಾರಿಗಾದರೂ ಈ ಕೋಳಿಯ ಕೂಗನ್ನು ನಿಲ್ಲಿಸುವ ಐಡಿಯಾ ಗೊತ್ತಿದ್ದರೆ ತಿಳಿಸಿ.&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-4782891942408390282?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/4782891942408390282/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=4782891942408390282' title='23 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/4782891942408390282'/><link rel='self' type='application/atom+xml' href='http://www.blogger.com/feeds/3841477221276814775/posts/default/4782891942408390282'/><link rel='alternate' type='text/html' href='http://jomon-malehani.blogspot.com/2009/02/blog-post.html' title='ಏಟ್ಸ್, ಎಂಜಿ ರಸ್ತೆ ಮತ್ತು ತರಲೆ ಹುಂಜ'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><thr:total>23</thr:total></entry><entry><id>tag:blogger.com,1999:blog-3841477221276814775.post-8511260248782235657</id><published>2008-12-29T01:28:00.000-08:00</published><updated>2008-12-29T01:30:38.273-08:00</updated><title type='text'>ಕೆಲಸವಿಲ್ಲದೇ ಕಳೆದ ಒಂದು ತಿಂಗಳು</title><content type='html'>ಆರ್ಥಿಕ ಮುಗ್ಗಟ್ಟಿನಿಂದ ಜಗತ್ತಿನ ದೊಡ್ಡ ದೊಡ್ಡ ಕಂಪನಿಗಳೇ ತಮ್ಮ ಉದ್ಯೋಗಿಗಳನ್ನು ನೋಟೀಸು ಕೂಡ ಕೊಡದೆ ತೆಗೆದುಹಾಕುತ್ತಿರುವಾಗ, ಕೆಲಸದಲ್ಲಿರುವವರು ತಮ್ಮ ಕೆಲಸ ಯಾವಾಗ ಹೋಗುತ್ತದೆಯೋ ಎನ್ನುವ ಸ್ಥಿತಿಯಲ್ಲಿರುವಾಗ, ಈಗ ಹಗಲು ದೀಪ ಹಚ್ಚಿ ಹುಡುಕಿದರೂ ಒಂದೇ ಒಂದು ಕೆಲಸ ಖಾಲಿ ಇಲ್ಲದಿರುವಾಗ, ನಾನೇನು ಮಾಡಿದೆ ಗೊತ್ತೇ? ನನ್ನ ಇದ್ದ ಕೆಲಸಕ್ಕೆ ರಾಜೀನಾಮೆ ಕೊಟ್ಟು ಊರಿಗೆ ಹೋಗಿದ್ದೆ. ನಿನಗೇನು ಹುಚ್ಚು ಹಿಡಿದಿದೆಯಾ? ಅಂತ ನೀವು ಬೈಯಬೇಡಿ. ಈಗಾಗಲೇ ಸಾಕಷ್ಟು ಜನ ಇದಕ್ಕಿಂತಲೂ ಚೆನ್ನಾಗಿಯೇ ನನ್ನನ್ನು ಬೈದಿದ್ದಾರೆ. `ಈಗ ನನಗೆ ಕೆಲಸ ಇಲ್ಲ ಕಣೋ/ಕಣೇ`ಎಂದು ಹೇಳಿ ಎಲ್ಲರಿಂದಲೂ ಒಂದಿಷ್ಟು ಪ್ರೀತಿ, ಅನುಕಂಪ ಪಡೆಯಬಹುದು ಎಂದು ನಿರೀಕ್ಷಿಸಿದ್ದ ನನಗೆ ಎಲ್ಲರಿಂದಲೂ ಸರಿಯಾಗಿ ಬೈಗುಳ ಸಿಕ್ಕಿತ್ತು. ಜೊತೆಗೆ ಹೊಟ್ಟೆ ತುಂಬುವಷ್ಟು ಮಂಗಳಾರತಿ. ನಿನಗೆ ಇನ್ನೊಂದೆರಡು ವರ್ಷ ಕೆಲಸವೇ ಸಿಗುವುದಿಲ್ಲ ಎಂದು ಹೆದರಿಸಿದವರೂ ಇದ್ದಾರೆ.&lt;br /&gt;&lt;span class=""&gt;&lt;/span&gt;&lt;br /&gt;ನಾನು ಮಾತ್ರ `ದಂಡಿಗೆ ಹೆದರಿಲ್ಲ, ದಾಳಿಗೆ ಹೆದರಿಲ್ಲ, ಇದ್ಯಾವ ಮಹಾ ಕೆಲಸ` ಎನ್ನುವ ರೀತಿಯಲ್ಲಿ ಊರಿನ ದಾರಿ ಹಿಡಿದಿದ್ದೆ. ಒಂದು ತಿಂಗಳು ಯಾರಿಗೂ ಹೇಳದೇ ಕೇಳದೆ ಎಲ್ಲಾದರೂ ಸುತ್ತಲು ಹೋಗಬೇಕೆಂದುಕೊಂಡಿದ್ದೆ. ಒಮ್ಮೆ ಹಿಮಾಲಯಕ್ಕೆ, ಟಿಬೆಟ್ಟಿಗೆ ಹೋಗಿ ಬರಬೇಕು ಎಂದು ಸಹೋದ್ಯೋಗಿ ಜಿತೇಂದ್ರನಿಗೂ ಹೇಳಿದ್ದೆ. ಮನೆಯಲ್ಲಿ ಯಾರಿಗೂ ನಾನು ಕೆಲಸಕ್ಕೆ ರಾಜೀನಾಮೆ ಸಲ್ಲಿಸಿರುವ ವಿಷಯ ಹೇಳಲಿಲ್ಲ. ಒಂದು ತಿಂಗಳು ರಜೆ ಹಾಕಿದ್ದೇನೆ ಎಂದಿದ್ದೆ. ಆದರೂ  ತಿಂಗಳು ಮುಗಿಯುವುದರೊಳಗೆ ಹೊಸ ಕೆಲಸ ಹುಡುಕಿಕೊಳ್ಳಬೇಕಲ್ಲಪ್ಪಾ ಎನ್ನುವ ಭೀತಿ ಒಳಗೊಳಗೇ ಇಣುಕುತಿತ್ತು. ನಮ್ಮಪ್ಪನಿಗೆ ಮಾತ್ರ ಇವ ಇಷ್ಟು ದಿವಸ ಯಾವತ್ತೂ ರಜೆ ಹಾಕಿ ಊರಿಗೆ ಬಂದವನಲ್ಲ, ಏನಾದರೂ ಆಗಿರಬೇಕು ಎನ್ನುವ ಸಂಶಯ ಮೊದಲ ದಿನವೇ ಹಟ್ಟಿತ್ತು. ಕೇಳಿದಾಗೊಮ್ಮೆ ನಾನು ವಿಷಯ ಮರೆಸುತ್ತಿದ್ದೆ. ಆದರೆ ದೇಶ ಸುತ್ತಲು ಹೋಗುವ ನನ್ನ ಆಸೆ ಕೈಕೊಟ್ಟಿತ್ತು. ಮನೆಯಲ್ಲಿ ಒಂದಿಷ್ಟು ಕೆಲಸ ಇತ್ತು.&lt;br /&gt;&lt;span class=""&gt;&lt;/span&gt;&lt;br /&gt;ಒಂದು ತಿಂಗಳು ನಾನು ಹುಟ್ಟಿ ಬೆಳೆದ ನಮ್ಮೂರನ್ನು ಹತ್ತಿರದಿಂದ ನೋಡಿದೆ.  ನಮ್ಮೂರ ಅಡಿಕೆ ತೋಟದಲ್ಲಿ, ಹಸಿರು ತುಂಬಿದ ಗದ್ದೆಗಳಲ್ಲಿ, ಬೈಗಿನ ಬೆಳಗಿನಲ್ಲಿ, ಮುತ್ತುಗ ಅರಳಿದ ಕಾಡಿನ ದಾರಿಯಲ್ಲಿ ಕಳೆದುಹೋದ ಯಾವುದೋ ವಸ್ತುವನ್ನು ಹುಡುಕುವಂತೆ ನಾನು ಖುಷಿ ಖುಷಿಯಿಂದ ದಿನಗಳು ಕಳೆದೆ. ಒಂದು ತಿಂಗಳು ನನಗೆ ಅಪ್ಯಾಯಮಾನವಾಗಿತ್ತು. ನನ್ನ ಮನಸ್ಸಿನ ಹುಲ್ಲುಗಾವಲಿನಲ್ಲಿ ಬೆಳಕಿನ ಬೀಜಗಳು ಅರಳಿದ್ದವು. ಕಳೆದ ಏಳೆಂಟು ವರ್ಷದಿಂದ ನಾನು ಊರಲ್ಲಿರುವುದು ವರ್ಷದಲ್ಲಿ ಹದಿನೈದೋ, ಇಪ್ಪತ್ತೋ ದಿನ. ನಮ್ಮನೆಯ ಹಿತ್ತಲಿನ ಮಾವಿನ ಗಿಡದಲ್ಲಿ ಕಾಯಿ ಬಿಟ್ಟಿದೆಯಾ ಎನ್ನುವ ವಿಷಯವೇ ನನಗೆ ತಿಳಿಯುವುದಿಲ್ಲ, ಹೀಗಿರುವಲ್ಲಿ ಊರಿನ ಸಮಾಚಾರ ಹೇಗೆ ತಿಳಿಯಬೇಕು? ಆದರೆ ಈ ಒಂದು ತಿಂಗಳು, ನನಗೆ ಅಪರಿಚಿತ ಎನಿಸತೊಡಗಿದ್ದ ನನ್ನೂರು ನನಗೆ ಇನ್ನಷ್ಟು ಹತ್ತಿರವಾಯಿತು. ಜಗತ್ತಿನ ಯಾವುದೇ ಕೆಲಸ ಕೊಡುವ ತೃಪ್ತಿಗಿಂತ ಹೆಚ್ಚಿನ ಖುಷಿಯನ್ನೂ, ಸಂತೃಪ್ತಿಯನ್ನೂ ಅದು ನನಗೆ ನೀಡಿತ್ತು. ಅಸಲಿಗೆ ನಾನು ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಊರಿಗೆ ಬಂದಿದ್ದೇನೆ ಎನ್ನುವುದು ನನಗೆ ಮರತೇ ಹೋದಂತಿತ್ತು.&lt;br /&gt;&lt;span class=""&gt;&lt;/span&gt;&lt;br /&gt;ಕೆಲಸದ ವಿಷಯಕ್ಕೆ ಬರೋಣ. ಕಳೆದ ಒಂದು ವರ್ಷ ನಾನು ನೀವೆಲ್ಲರೂ ಓದಿರಬಹುದಾದ ಕೆಂಡಸಂಪಿಗೆಯಲ್ಲಿ ಉಪಸಂಪಾದಕನಾಗಿದ್ದೆ. ಕಳೆದ ವರ್ಷ ಹೀಗೆಯೇ ಚಳಿಯಿದ್ದ ಡಿಸೆಂಬರಿನ ಒಂದು ದಿನ ನಾನು ಮೈಸೂರಿಗೆ ಬಂದು ಈ ಕೆಲಸಕ್ಕೆ ಸೇರಿಕೊಂಡಿದ್ದೆ. ಮೈಸೂರಿನ ರಸ್ತೆಗಳನ್ನು ಸುತ್ತುತ್ತಾ ಹಾಯಾಗಿದ್ದೆ. ಇದ್ದಕ್ಕಿದಂತೆ ಒಂದು ದಿನ ನನಗೆ ಈ ಕೆಲಸ ಇನ್ನು ಸಾಕು ಅಂತ ಅನಿಸತೊಡಗಿತು. ಕಾರಣವೇನೂ ಇಲ್ಲ, ಹಾಗೆ ಸುಮ್ಮನೆ. ಇನ್ನು ಸಾಕು ಎಂಬ ಅನಿಸಿಕೆ ಗಟ್ಟಿಯಾಗತೊಡಗಿದಾಗ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಹೊರಟು ಹೋಗಿದ್ದೆ.&lt;br /&gt;&lt;span class=""&gt;&lt;/span&gt;&lt;br /&gt;ಒಂದು ತಿಂಗಳು ಊರಿನಲ್ಲಿ ಕಳೆದು ಬಂದಿದ್ದೇನೆ. ಬ್ಲಾಗ್ ಕೂಡ ಅಪ್ ಡೇಟ್ ಮಾಡಲಾಗಲಿಲ್ಲ. ಮೇಲ್ ಗಳ ರಾಶಿಯೇ ತುಂಬಿದೆ. ಅಂದಹಾಗೆ ಒಂದು ಖುಷಿಯ ವಿಷಯವಿದೆ. ನಾನೀಗ ನಿರುದ್ಯೋಗಿಯಲ್ಲ, ಒಂದು ಹೊಸ ಕೆಲಸ ಸಿಕ್ಕಿದೆ. ಬೆಂಗಳೂರಿನಲ್ಲಿ. ಉಪಸಂಪಾದಕ. ಹೊಸ ವರ್ಷದ ಮೊದಲ ದಿನ ಹೊಸ ಕೆಲಸಕ್ಕೆ ಸೇರಿಕೊಳ್ಳಲಿದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸ, ಜೊತೆಗೊಂದಿಷ್ಟು ಅನುಕಂಪವೂ ಇರಲಿ ಎನ್ನುವ ಆಸೆ.&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-8511260248782235657?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/8511260248782235657/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=8511260248782235657' title='18 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/8511260248782235657'/><link rel='self' type='application/atom+xml' href='http://www.blogger.com/feeds/3841477221276814775/posts/default/8511260248782235657'/><link rel='alternate' type='text/html' href='http://jomon-malehani.blogspot.com/2008/12/blog-post.html' title='ಕೆಲಸವಿಲ್ಲದೇ ಕಳೆದ ಒಂದು ತಿಂಗಳು'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><thr:total>18</thr:total></entry><entry><id>tag:blogger.com,1999:blog-3841477221276814775.post-5489513671715714618</id><published>2008-11-28T00:18:00.000-08:00</published><updated>2008-11-28T06:15:25.779-08:00</updated><title type='text'>ಮಂಜು ಸುರಿಯುವ ಈ ಮುಂಜಾವಿನಲ್ಲಿ...</title><content type='html'>ಈವತ್ತು ಬೆಳಿಗ್ಗೆ ಮೈಸೂರಿನಲ್ಲಿ ಸೋನೆಮಳೆಯಂತೆ ಮಂಜು ಸುರಿಯುತ್ತಿತ್ತು. ಸಹಿಸಲಸಾಧ್ಯ ಚಳಿ ಬೇರೆ. ಈಗಿನ್ನೂ ಏಳು ಗಂಟೆಯಾಗಿರಬಹುದು ಎಂದು ಎದ್ದು ನೋಡಿದರೆ ಹನ್ನೊಂದಾಗಿತ್ತು. ನಾನು ಎಲ್ಲಿದ್ದೇನೆ ಎಂದು ನನಗೇ ಗುರುತು ಸಿಗದ ಹಾಗೆ ಮಂಜು ಆವರಿಸಿಕೊಂಡಿತ್ತು. ನನ್ನ ರೂಮಿನ ಹಿಂದಿನ ಎಲೆಕ್ಟ್ರಿಕ್ ತಂತಿಯ ಮೇಲೆ ಕುಳಿತು ದಿನಾಲೂ ರೊಮಾನ್ಸ್ ಮಾಡುತ್ತಿದ್ದ ಗುಬ್ಬಚ್ಚಿಗಳು ಈವತ್ತು ಯಾಕೋ ಮಂಜಿನಲ್ಲಿ ತೊಯ್ದು ಹೋಗಿ ಈ ಚಳಿಯಲ್ಲಿ ನಡುಗುತ್ತಾ ಒಂದಕ್ಕೊಂದು ಅಂಟಿಕೊಂಡು ಕುಳಿತಿದ್ದವು. ನನಗೆ ಏಕೋ ಪಾಪ ಅನಿಸತೊಡಿಗಿತು. ನಾವು ಚಿಕ್ಕವರಿದ್ದಾಗ ಮಳೆಗಾಲದಲ್ಲಿ ಈ ರೀತಿ ತೋಯಿಸಿಕೊಂಡು ಹಾರಲಾಗದೆ ಶಾಲೆಯ ಹಂಚಿನ ಮಾಡಿನ ಕೆಳಗೆ ಕೂರುತ್ತಿದ್ದ ಗುಬ್ಬಚ್ಚಿಗಳನ್ನು ಹಿಡಿದು, ಅದನ್ನು ರಟ್ಟಿನ ಬಾಕ್ಸ್‌ನಲ್ಲಿ ಬಂಧಿಸಿಡುತ್ತಿದ್ದೆವು. ನಂತರ ಅದರ ಕಾಲಿಗೊಂದು ದಾರ ಕಟ್ಟಿ, ಆ ದಾರದ ತುದಿಯಲ್ಲಿ ಪೇಪರ್‌ ಒಂದನ್ನು ಕಟ್ಟಿ, ಅದರಲ್ಲಿ ನಮ್ಮ ನಮ್ಮ ತರಗತಿಯ ವಿದ್ಯಾರ್ಥಿಗಳೆಲ್ಲರ ಹೆಸರು ಬರೆದು ಹಾರಿ ಬಿಡುತ್ತಿದ್ದೆವು. ಆ ಗುಬ್ಬಚ್ಚಿ ಹಾರಿ ಅಮೆರಿಕಕ್ಕೆ ಹೋಗುತ್ತದೆಂದೂ, ಅಲ್ಲಿ ನಮ್ಮೆಲ್ಲರ ಹೆಸರನ್ನು ನೋಡಿ, ಇದು ಭಾರತದಿಂದ ಹಾರಿ ಬಂದ ಗುಬ್ಬಚ್ಚಿಯೆಂದೂ ಪತ್ತೆ ಹಚ್ಚುತ್ತಾರೆಂದೂ ಮಾತನಾಡಿಕೊಂಡು ಸಂಭ್ರಮಿಸುತ್ತಿದ್ದೆವು.&lt;br /&gt;&lt;br /&gt;ಈವತ್ತು ನೋಡಿದರೆ ಮಳೆಯಲ್ಲಿ ತೋಯಿಸಿಕೊಂಡು ಹಾರಲಾಗದೆ ಕುಳಿತ ಗುಬ್ಬಚ್ಚಿಗಳ ಮೇಲೆ ಯಾವನೋ ಕಿಲಾಡಿ ಹುಡುಗನೊಬ್ಬ ಕ್ಯಾಟರ್‌ ಬಿಲ್ಲಿನಿಂದ ಕಲ್ಲು ಬೀಸುತ್ತಿದ್ದ. ನನಗೆ ರೋಸಿ ಹೋಗಿ ಆತನನ್ನು ಕರೆದು ಸರಿಯಾಗಿ ಬೈದು ಕಳುಹಿಸಿದೆ. ಯಾಕೋ ಮನಸ್ಸೆಲ್ಲಾ ಮುದುಡಿ ಹೋದಂತೆನಿಸಿ ಏನು ಮಾಡಲಾಗದೆ ಕೈ ಕೈ ತಿಕ್ಕಿಕೊಳ್ಳುತ್ತಾ ಅದರ ಬಿಸುಪಿನಲ್ಲಿ ಬೆಚ್ಚಗಾಗಲು ಯತ್ನಿಸುತ್ತಿದ್ದೆ. ನಮ್ಮ ಪಕ್ಕದ ಮನೆಯ ಆಂಟಿ - ಅಂಕಲ್ ಇಂತಹ ಚಳಿಯಲ್ಲಿಯೂ ಮನಗೇ ಬೆಂಕಿ ಬಿದ್ದವರಂತೆ ಭಯಂಕರವಾಗಿ ಜಗಳವಾಡುತ್ತಿದ್ದರು. ಮಾಜಿ ಪ್ರಧಾನಿ ವಿ.ಪಿ ಸಿಂಗ್ ತೀರಿಹೋಗಿದ್ದರಿಂದ, ಅವರ ಮಕ್ಕಳೂ ಕೂಡ ರಜೆಯಿಂದ ಮನೆಯಲ್ಲೇ ಇದ್ದು ಅಪ್ಪ ಅಮ್ಮನ ಜಗಳವನ್ನು ನೋಡುತ್ತಿದ್ದರು. ಮಕ್ಕಳ ಮುಂದೆ ಜಗಳವಾಡಬಾರದು ಎಂದು ಈ ತಂದೆತಾಯಿಗಳಿಗೆ ಹೇಳಿಕೊಡುವರು ಯಾರು ಎನ್ನುತ್ತಾ ಪೇಪರ್ ಓದೋಣವೆಂದರೆ ಅದು ಮಂಜಿನಲ್ಲಿ ಬಿದ್ದು ಕರಗಿ ಹೋಗಿತ್ತು. `ವೀರಮರಣ ಹೊಂದಿದ ಅಧಿಕಾರಿಗಳಿಗೆ ನಮ್ಮ ನಮನ`, `ಮಾಲೇಂಗಾವ್ ಸ್ಫೋಟದ ದೇಶಭಕ್ತರನ್ನು ರಕ್ಷಿಸಿ`, `ಶಿವರಾಜ್ ಪಾಟೀಲರನ್ನು ದೇಶದಿಂದ ಹೊರಹಾಕಿ` ಇಂತಹ ತರಹೇವಾರಿ ಮಸೇಜುಗಳಿಂದ ನನ್ನ ಇನ್‌ಬಾಕ್ಸ್ ತುಂಬಿ ಹೋಗಿ ಎಲ್ಲವನ್ನೂ ಒಂದೆಡೆಯಿಂದ ಡಿಲೀಟ್ ಮಾಡುತ್ತಾ ಕುಳಿತುಕೊಂಡೆ. ಇದ್ಯಾಕೋ ರೇಜಿಗೆ ಹುಟ್ಟಿಸಿದಂತೆನಿಸಿ ಸುಮ್ಮನೆ ಹೊರಬಂದು ತಿರುಗಾಡೋಣವೆಂದು ಹೊರಟೆ.&lt;br /&gt;&lt;br /&gt;ನಾನಿರುವ ಹಿನ್‌ಕಲ್ ತುಂಬಾ ವಿಶೇಷತೆಗಳಿಂದ ಕೂಡಿದ ಊರು. ಇಲ್ಲೊಬ್ಬ ದಿನಾಲೂ ಪಲ್ಸರ್ ಗಾಡಿಯಲ್ಲಿ ಕುಳಿತು ಎಮ್ಮೆ ಮೇಯಿಸಿಕೊಂಡು ಬರುತ್ತಾನೆ. ಈವತ್ತು ಯಾಕೋ  ಅವನು ಕಾಣಿಸದೆ ಹೋಗಿ, ಅವನ ಎಮ್ಮೆಗಳೆಲ್ಲಾ ಎಲ್ಲಿ ಮೇಯಲು ಹೋಗಿರಬೇಕೆಂದು ಪೆದ್ದು ಪೆದ್ದಾಗಿ ಯೋಚಿಸತೊಡಗಿದೆ. ದೂರದಲ್ಲಿ ನೋಡಿದರೆ ಕಟ್ಟಾ ಸುಬ್ರಮಣ್ಯ ನಾಯ್ಡುವಿನಂತೆ ಟೋಪಿ ಹಾಕಿಕೊಂಡು ಒಬ್ಬರು ನಡೆದುಕೊಂಡು ಹೋಗುತ್ತಿದ್ದರು. ಹತ್ತಿರ ಹೋಗಿ ನಮಸ್ಕಾರ ತಾತಾ ಎಲ್ಲಿಗೆ ಹೊರಟಿದ್ದೀರಾ ಎಂದರೆ ಅವರು ಏನೂ ಕೇಳಿಸಿಕೊಳ್ಳದಂತೆ ನಡೆಯುತ್ತಿದ್ದರು. ನೋಡಿದರೆ ಅವರು ಕಿವಿಗೆ ಶ್ರವಣ ಸಾಧನ ಹಾಕಿಕೊಂಡಿದ್ದರು:) ಇಲ್ಲಿರುವ ಒಂದು ಹೊಟೇಲ್‌ನಲ್ಲಿ ಎಕಾಮಿಕ್ಸ್ ಟೈಮ್ಸ್ ಪೇಪರನ್ನು ತರಿಸುತ್ತಾರೆ. ಸಾಮಾನ್ಯವಾಗಿ ಇಂತಹ ಹೊಟೇಲ್‌ಗಳಲ್ಲಿ ಸ್ಥಳೀಯ ನ್ಯೂಸ್ ಪೇಪರ್‌ಗಳನ್ನು ತರಿಸುವುದೂ, ಅದು ಒಂಭತ್ತು ಗಂಟೆಯಾಗುತ್ತಿದ್ದಂತೆ ಹರಿದು ಹಂಚಿ ಹೋಗುವುದೂ ಸಾಮಾನ್ಯ. ನೋಡಿದರೆ ಈ ಹೊಟೇಲ್ ಮಾಲಿಕ ಎಕನಾಮಿಕ್ಸ್ ಟೈಮ್ಸ್ ಪೇಪರನ್ನು ಜತನದಿಂದ ಎತ್ತಿಟ್ಟಿದ್ದ. ಕುತೂಹಲಕ್ಕೆ ವಿಚಾರಿಸಿದರೆ ಆತನದೂ ಒಂದು ಷೇರಿದ್ದು, ಮಂಗಳೂರಿನಲ್ಲಿ ಎಂಬಿಎ ಓದುತ್ತಿರುವ ಮಗನ ಆಸೆಯಂತೆ ಷೇರು ಪೇಟೆಯ ತಲ್ಲಣಗಳನ್ನು ತಿಳಿಯಲು ಆತ ಎಕನಾಮಿಕ್ಸ್ ಟೈಮ್ಸ್ ತರಿಸುತ್ತಿದ್ದಾನೆಂದೂ ತಿಳಿಯಿತು. ಸದ್ಯ ಆತನ ಷೇರುಗಳೆಲ್ಲಾ ಮುಳುಗಿ ಹೋಗಿರುವುದರಿಂದ ಆತನ ಹೊಟೇಲಿನ ತಿಂಡಿಯ ವಿಷಯದಲ್ಲೂ ಅದರ ಮುಗ್ಗಟ್ಟು ಕಾಣಿಸಿಕೊಂಡಿದೆ. ರೈಸ್‌ಬಾತ್‌‌ನಲ್ಲಿ ಟಮೋಟೊ, ಬೀನ್ಸ್, ಬಟಾಣಿ ಕಾಳುಗಳು ಮರೆಯಾಗಿರುವುದರ ಹಿಂದೆ ಈ ಆರ್ಥಿಕ ಮುಗ್ಗಟ್ಟು ಮತ್ತು ಏಕನಾಮಿಕ್ಸ್ ಟೈಮ್ಸ್‌ನ ಪ್ರಭಾವ ಇರುವುದನ್ನು ನಾನು ಪತ್ತೆಹಚ್ಚಿದೆ.&lt;br /&gt;&lt;br /&gt;ಹನ್ನೆರಡು ಗಂಟೆಯಾದರೂ ಬಿಸಿಲು ಮೂಡದಿದ್ದರಿಂದ ಸುರಿಯುತ್ತಿರುವ ಮಂಜನ್ನು ಶಫಿಸುತ್ತಾ ನಾಯಿಗಳೆರಡು ನನ್ನ ಮನೆಯ ಮುಂದಿನ ಅಂಗಳದಲ್ಲಿದ್ದ ಮರಳಿನಲ್ಲಿ ಗುಂಡಿ ತೋಡಿ ಮಲಗಿಕೊಂಡು ಸೂರ್ಯನ ಆಗಮನಕ್ಕಾಗಿ ಕಾಯುತ್ತಿದ್ದವು. ಹಳ್ಳಿಯಿಂದ ಬಂದ ಅಜ್ಜನನೊಬ್ಬ ತಲೆಯ ಮೇಲೆ ಕೊತ್ತಂಬರಿ, ಬಸಳೆ, ಪಾಲಕ್, ಸಬ್ಬಸಿಗೆ, ಮೆಂತ್ಯ, ಕಿಲ್‌ಕಿರೆ ಸೊಪ್ಪನ್ನು ಹೊತ್ತುಕೊಂಡು ಇಲ್ಲಿನ ಅಪಾರ್ಟ್‌ಮೆಂಟ್‌ಗಳ ಮುಂದೆ ಮಾರುತ್ತಿದ್ದ. ಆತ ಕಾಲಿಗೆ ಚಪ್ಪಲಿಯನ್ನೂ ಹಾಕಿರಲಿಲ್ಲ. ದುಡಿಯುವವರಿಗೆ ಮಳೆಯಾದರೆನು, ಚಳಿಯಾದರೇನು ಎಂದುಕೊಂಡೆ. ಈ ಅಜ್ಜನಿಂದ ಸ್ಫೂರ್ತಿ ಪಡೆದವನಂತೆ ಹುರುಪಿನಿಂದ ಎದ್ದು ರೆಡಿಯಾಗಿ ಆಫೀಸಿಗೆ ಬಂದರೆ, ಟಿವಿ ಒಂಭತ್ತರಲ್ಲಿ ಮುಂಬಯಿ ಭಯೋತ್ಪಾದನೆ ಕಾರ್ಯಾಚರಣೆ ಬರುತ್ತಿತ್ತು. ರಾಧಿಕಾ ರಾಣಿಯರು ಫುಲ್ ಖುಷಿಯೊಳಗೆ ವಾರ್ತೆ ಓದುತ್ತಿದ್ದರು. ` ಎಕೆ 47 ನಿಂದ ಹಾರಿದ ಗುಂಡುಗಳು ಎಷ್ಟು ವೇಗವಾಗಿತ್ತೆಂದರೆ ಅದು ನಮ್ಮ ದೆಹಲಿ ಪ್ರತಿನಿಧಿಯ ಕಣ್ಣಿಗೂ ಬೀಳಲಿಲ್ಲ` ಎನ್ನುವ ಅರ್ಥ ಬರುವಂತೆ ಏನೋನೋ ಮನೋರಂಜನೆ ನೀಡುತ್ತಿದ್ದರು. ಈ ಲೈವ್ ನ್ಯೂಸ್ ಕೇಳಿ ಕೇಳಿ ನನ್ನ ಕಿವಿಗಳು ಪಾವನವಾಗುವ ಅಪಾಯ ಇದ್ದಿದ್ದರಿಂದ, ಟಿವಿ ಮ್ಯೂಟ್ ಮಾಡಿ ಚಿತ್ರ ನೋಡುತ್ತಾ ಕುಳಿತುಕೊಂಡೆ. ನಿನ್ನೆ ಇದೇ ಟಿವಿಯ ವರದಿಗಾರರೊಬ್ಬರು ಬೆಂಗಳೂರಿನಲ್ಲಿ ನಿಂತುಕೊಂಡು ದೆಹಲಿಯ ತಾಜ್ ಹೊಟೇಲಿನೊಳಗೆ ಏನಾಗುತ್ತಿದೆ ಎನ್ನುವುದನ್ನು ಲೈವ್ ಕೊಡುತ್ತಿದ್ದರು. ಅಬ್ಬಾ! ಹೀಗೆಲ್ಲಾ ಲೈವ್ ಕೊಡಲು ಈ ಉತ್ತಮ ಸಮಾಜದವರಿಂದ ಮಾತ್ರ ಸಾಧ್ಯ ಎಂದುಕೊಂಡು ಟಿವಿ ಆಫ್‌ ಮಾಡಿ, ನನ್ನ ಕೆಲಸಕ್ಕೆ ಲಾಗಿನ್ ಆದೆ.&lt;br /&gt;&lt;br /&gt;ಹೊರಗೆ ಮಂಜು ಸುರಿಯುತ್ತಲೇ ಇದೆ.&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-5489513671715714618?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/5489513671715714618/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=5489513671715714618' title='21 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/5489513671715714618'/><link rel='self' type='application/atom+xml' href='http://www.blogger.com/feeds/3841477221276814775/posts/default/5489513671715714618'/><link rel='alternate' type='text/html' href='http://jomon-malehani.blogspot.com/2008/11/blog-post_28.html' title='ಮಂಜು ಸುರಿಯುವ ಈ ಮುಂಜಾವಿನಲ್ಲಿ...'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><thr:total>21</thr:total></entry><entry><id>tag:blogger.com,1999:blog-3841477221276814775.post-5281685655034900995</id><published>2008-11-16T02:19:00.000-08:00</published><updated>2008-11-17T07:33:07.840-08:00</updated><title type='text'>ಅನಾಮಿಕ ಹುಡುಗಿಯೊಬ್ಬಳಿಗೆ...</title><content type='html'>`ನನಗೆ ತುಂಬಾ ಬೇಜಾರಾಗಿದೆ, ಸಮಾಧಾನ ಮಾಡಿ ಪ್ಲೀಸ್`&lt;br /&gt;ಆ ಕಡೆಯಿಂದ ಪೋನಿನಲ್ಲಿ ಬರುತ್ತಿತ್ತು ಹೆಣ್ಣು ಧ್ವನಿ`&lt;br /&gt;&lt;span class=""&gt;&lt;/span&gt;&lt;br /&gt;ನಾನು ಆಗ ತಾನೇ ಆಫೀಸು ಕೆಲಸ ಮುಗಿಸಿಕೊಂಡು, ದಾರಿಯಲ್ಲಿ ಯಾವುದೋ ಹೊಟೇಲಿಗೆ ನುಗ್ಗಿ ಊಟ ಮಾಡಿ, ಉಸ್ಸಪ್ಪಾ ಅಂತ ನನ್ನ ರೂಮಿನತ್ತ ಹೆಜ್ಜೆ ಹಾಕುತ್ತಿದ್ದೆ. ರಾತ್ರಿ ಹತ್ತು ಗಂಟೆ ಆಗಿತ್ತು. ಆವತ್ತು  ನನಗೂ ಯಾಕೋ ತುಂಬಾ ಬೇಜಾರಾಗಿತ್ತು. ಇಲ್ಲಿ ನನ್ನ ಬಳಿಯೂ ಯಾರಾದರೂ ಇದ್ದಿದ್ದರೆ ನನ್ನ ದುಃಖವನ್ನೆಲ್ಲಾ ಅವರ ಬಳಿ ಹೇಳಿಕೊಂಡು ಒಂದಿಷ್ಟು ಅನುಕಂಪವನ್ನೂ, ಪ್ರೀತಿಯನ್ನೂ ಪಡೆದುಕೊಳ್ಳಬಹುದಿತ್ತಲ್ಲಾ ಅನಿಸಿ, ಸುಮ್ಮನೆ ಮೊಬೈಲು ಒತ್ತುತ್ತಾ ನಡೆಯುತ್ತಿದ್ದೆ. ರೂಮು ತಲುಪಿದರೂ ರೂಮಿನೊಳಕ್ಕೆ ಹೋಗಲು ಇಷ್ಟವಾಗದೆ ಟೇರಸ್ ಮೇಲೆ ಆಕಾಶ ನೋಡುತ್ತಾ ಕುಳಿತು ಬಿಟ್ಟಿದ್ದೆ. ಹೀಗೆ ಬೇಜಾರಾದಾಗ ಯಾರಾದರೂ ಫೋನ್ ಮಾಡಿದರೆ, ನಾನೀಗ ಭಾವಸಮಾಧಿ ಸ್ಥಿತಿಯಲ್ಲಿದ್ದೇನೆ, ಸ್ವಲ್ಪ ಹೊತ್ತು ಬಿಟ್ಟು ಫೋನ್ ಮಾಡಿ ಎಂದು ತಮಾಷೆ ಮಾಡುತ್ತಿರುತ್ತೇನೆ.&lt;br /&gt;&lt;span class=""&gt;&lt;/span&gt;&lt;br /&gt;ಹೀಗೆ ಕೂತಿರುವಾಗ ಬಂದಿತ್ತು ಈ ಫೋನ್.&lt;br /&gt;&lt;br /&gt;`ನಾನು ತುಂಬಾ ಕೆಟ್ಟವಳು, ನನಗೆ ಯಾರೂ ಫ್ರೆಂಡ್ಸ್ ಇಲ್ಲ.&lt;br /&gt;`ದೇವರಿಗೆ ಕೂಡ ನನ್ನನ್ನು ಕಂಡರೆ ಇಷ್ಟ ಇಲ್ಲ&lt;br /&gt;`ನನ್ನ ಹಣೆಬರವೇ ಸರಿ ಇಲ್ಲ, ನಾನೂ ಸರಿ ಇಲ್ಲ`&lt;br /&gt;ಫೋನ್ ಮಾಡಿದ ಹುಡುಗಿ ಇನ್ನೇನು ಅತ್ತೇ ಬಿಡುವಳು ಎನ್ನುವ ಹಾಗಿತ್ತು ಧ್ವನಿ. ನನಗೇಕೋ ಇದು ದಾರಿ ತಪ್ಪಿ ಬಂದ ಕೇಸ್ ಅಂತ ಅನಿಸತೊಡಗಿತು. ನೋಡಮ್ಮ, ನಾನು ಜೋಮನ್, ನೀವು ಯಾರಂತ ಗೊತ್ತಾಗಲಿಲ್ಲ, ಬೇರೆ ಯಾರಿಗೋ ಫೋನ್ ಮಾಡಲು ಹೋಗಿ ನನಗೆ ಮಾಡಿರುವ ಹಾಗಿದೆ, ದಯವಿಟ್ಟು ನಂಬರು ಪರೀಕ್ಷಿಸಿಕೊಳ್ಳಿ ಅಂದೆ.&lt;br /&gt;&lt;br /&gt;`ಇಲ್ಲ, ನಾನು ನಿಮಗೇ ಫೋನ್ ಮಾಡಿದ್ದು, ನೀವು ನನ್ನ ಜೊತೆ ಮಾತನಾಡಬೇಕು, ನನಗೆ ತುಂಬಾ ಬೇಜಾರಾಗಿದೆ` ಎಂದಳು. `ಅಯ್ಯೋ, ಇದೊಳ್ಳೆ ಕಥೆ ಆಯಿತಲ್ಲಾ, ನಾನು ಬೇಜಾರನ್ನು ತೆಗೆದುಕೊಂಡು ಖುಷಿ ಕೊಡುವ ಯಾವುದೇ ಕನ್ಸಲ್ಟೆನ್ಸಿ ಕಂಪನಿ ನಡೆಸುತ್ತಿಲ್ಲ, ಸುಮ್ಮನೆ ಹೋಗಿ ಮಾರಾಯ್ರೆ, ಇಲ್ಲಿ ನನ್ನ ದುಃಖವನ್ನು ಯಾರ ಬಳಿ ಹೇಳಲಿ ಅಂತ ನಾನು ಕೂತಿದ್ದೇನೆ` ಎಂದೆ. ನನ್ನ ಸ್ವಭಾವವೇ ಹೀಗೆ.&lt;br /&gt;&lt;br /&gt;ಹುಡುಗಿ ಅಳಲು ಶುರು ಮಾಡಿದಳು. `ನಾನು ನಿಮ್ಮನ್ನೇ ನಂಬಿಕೊಂಡು ಫೋನ್ ಮಾಡಿದ್ದೇನೆ, ನೀವು ಈ ಥರ ಎಲ್ಲ ಮಾತನಾಡಿ ನನ್ನನ್ನು ಇನ್ನಷ್ಟು ಬೇಜಾರು ಮಾಡಬೇಡಿ, ನನಗೆ ಸಮಾಧಾನ ಮಾಡಿ, ಬದುಕುವ ಆಸೆ ತೋರಿಸಿ, ಇಲ್ಲದಿದ್ದರೆ ನಾನು ಏನು ಮಾಡಿಕೊಳ್ಳುತ್ತೇನೋ ನನಗೇ ಗೊತ್ತಿಲ್ಲ`.&lt;br /&gt;&lt;br /&gt;ಈ ಸಲ ನಾನು ಏನಾದರೂ ಮಾಡಬೇಕಿತ್ತು. ನಿಜವಾಗಿಯೂ ಆ ಹುಡುಗಿ ತುಂಬಾ ಬೇಜಾರಿನಲ್ಲಿದ್ದಳು. ನನಗೆ ತಣ್ಣಗೆ ಹೆದರಿಕೆ ಪ್ರಾರಂಭವಾಯಿತು. ಏನು ಮಾಡುವುದು? `ಸರಿ, ನಿಮ್ಮ ಹೆಸರು ಹೇಳದಿದ್ದರೂ ಪರವಾಗಿಲ್ಲ. ಈಗ ನೋಡಿ, ನಿಮ್ಮಂತೆ, ನನಗೂ ತುಂಬಾ ಬೇಜಾರಾಗಿದೆ, ಒಂದರ್ಥದಲ್ಲಿ ನಾವಿಬ್ಬರೂ ಸಮಾನ ದುಃಖಿಗಳು, ನಾನು ನನ್ನ ದುಃಖವನ್ನು ನಿಮಗೆ ಕೊಡುತ್ತೇನೆ, ನೀವು ನಿಮ್ಮ ದುಃಖವನ್ನು ನನಗೆ ಕೊಡಿ, ಇಬ್ಬರೂ ಷೇರ್ ಮಾಡಿಕೊಳ್ಳೋಣ. ಮುಂದೆ ನಿಮಗೆ ತುಂಬಾ ಖುಷಿ ಸಿಕ್ಕಿದಾಗ ಅದರಲ್ಲಿ ಸ್ವಲ್ಪ ನನಗೆ ಕೊಟ್ಟು, ನಿಮ್ಮ ದುಃಖವನ್ನು ಇಲ್ಲಿಂದ ಬಿಡಿಸಿಕೊಂಡು ಹೋಗಬಹುದು` ಎಂದೆ.&lt;br /&gt;&lt;br /&gt;`ಜೋಮನ್ ಪ್ಲೀಸ್, ನನ್ನನ್ನು ಅರ್ಥ ಮಾಡಿಕೊಳ್ಳಿ, ನಾನು ಒಬ್ಬೊಂಟಿ ಎನಿಸಿಬಿಟ್ಟಿದೆ, ನನಗೆ ಯಾರೂ ಫ್ರೆಂಡ್ಸ್ ಇಲ್ಲ, ಇರುವವರೆಲ್ಲಾ ನನ್ನನ್ನು ತುಂಬಾ ಭಾವುಕಳು ಅಂತ ದೂರ ಮಾಡಿದ್ದಾರೆ. ನಾನು ಬದುಕಿ ಏನೂ ಪ್ರಯೋಜನವಿಲ್ಲ ಅಂತ ಅನಿಸಿಬಿಟ್ಟಿದೆ, ನನಗೆ ಮಾತ್ರ ಯಾಕೆ ಇಷ್ಟೊಂದು ಬೇಜಾರಾಗುತ್ತದೆ, ತುಂಬಾ ಬೇಜಾರಾದಾಗ ಏನು ಮಾಡಬೇಕು? ಎಂದು ಮುದ್ದಾಗಿ ಕೇಳಿದಳು. `ನೀವು ಯಾರನ್ನೂ ಪ್ರೀತಿಸಿಲ್ಲವಾ? ನಿಮ್ಮ ಎದುರು ನಿಂತು, ಹುಡುಗಿ ನಿನ್ನ ದುಃಖವನ್ನೆಲ್ಲಾ ನನಗೆ ಕೊಟ್ಟು ಬಿಡು, ನಾನು ನಿನ್ನ ಹೃದಯವನ್ನು ಖುಷಿಯಿಂದ ತುಂಬುತ್ತೇನೆ` ಎನ್ನುವ ಗೆಳೆಯ ಯಾರೂ ಇಲ್ಲವಾ? ಅಂತ ಬಾಯಿಗೆ ಬಂದಿದನ್ನು ನೇರವಾಗಿ ಕೇಳಿಯೇ ಬಿಟ್ಟೆ.&lt;br /&gt;&lt;br /&gt;`ನನಗೆ ಅಂತಹ ಯಾರೂ ಒಳ್ಳೆ ಫ್ರೆಂಡ್ಸ್ ಇಲ್ಲ, ಹುಡುಗರೆಲ್ಲಾ ತುಂಬಾ ಕೆಟ್ಟವರು,` ಎಂದಳು. `ಹುಡುಗರ ಬಗ್ಗೆ ಎಲ್ಲಾ ಈ ರೀತಿ ಪೂರ್ವಗ್ರಹ ಪೀಡಿತರಾಗಿ ಮಾತನಾಡಬಾರದು, ನಿಮ್ಮ ನಂಬಿಕೆಯನ್ನು ಬದಲಿಸಿಕೊಳ್ಳಬೇಕು ಎಂದೆ`` ಛೇ.. ಹಾಗಲ್ಲ, ನೀವು ಒಳ್ಳೆಯವರ ಥರ ಕಾಣುತ್ತೀರಿ, ತಪ್ಪು ತಿಳಿಯದಿದ್ದರೆ ನೀವೇಕೆ ನನ್ನ ಫ್ರೆಂಡ್ ಆಗಬಾರದು? ಎಂದಳು.&lt;br /&gt;&lt;br /&gt;`ಅಯ್ಯೋ! ಹುಚ್ಚು ಹುಡುಗಿ, ನನ್ನ ಕಥೆ ನಿಮಗಿನ್ನೂ ಗೊತ್ತಿಲ್ಲ, ನನ್ನನ್ನೇ ನನಗೆ ಅರ್ಥ ಮಾಡಿಕೊಳ್ಳಲು ಇದುವರೆಗೆ ಸಾಧ್ಯವಾಗಿಲ್ಲ, ಒಮ್ಮೆ ಕಾಶಿಗೋ, ಹಿಮಾಲಯಕ್ಕೂ, ಜೆರುಸಲೇಂಗೋ, ಮೆಕ್ಕಾಗೋ ಕೊನೆಗೆ ಇಲ್ಲೇ ಹತ್ತಿರವಿರುವ ಯಲ್ಲಮ್ಮನ ಗುಡ್ಡಕ್ಕಾದರೂ ಹೋಗಿ ಬರಬೇಕೆಂದಿದ್ದೇನೆ, ಜೊತೆಗೆ ಇತ್ತೀಚೆಗೆ ನಾನು ಏಳುವ ಮತ್ತು ಮಲಗುವ ಗಳಿಗೆ ಕೂಡ ಸರಿ ಇಲ್ಲ. ಇಂತಹ ನಾನು ನಿನ್ನ ಗೆಳೆಯನಾದರೆ ಅಷ್ಟೇ, ಸುಮ್ಮನೆ ಏನೇನೋ ಹುಚ್ಚರ ಥರ ವಿಚಾರ ಮಾಡಬೇಡ`, ಅಂತ ಹೇಳಿ ಫೋನ್ ಕಟ್ ಮಾಡಲು ಹೋದವನು, ಯಾಕೋ ತಡೆದು ಹೇಳಿದೆ...&lt;br /&gt;&lt;br /&gt;`ನೋಡು, ಮನುಷ್ಯ ಮೂಲಭೂತವಾಗಿ ತುಂಬಾ ಸ್ವಾರ್ಥಿ, ಪ್ರತಿಯೊಬ್ಬರೂ ಇನ್ನೊಬ್ಬರ ಮಾತು, ಸ್ವರ್ಶ, ಮತ್ತು ಕಾಳಜಿಗಾಗಿ ಹಂಬಲಿಸುತ್ತಲೇ ಇರುತ್ತಾರೆ. ಆದರೆ ನಮ್ಮ ಖಾಸಗಿ ಖುಷಿಯನ್ನೂ, ಪ್ರೀತಿ ವಿಶ್ವಾಸದ ಗೂಡುಗಳನ್ನೂ ನಾವೇ ಜತನದಿಂದ ಕಟ್ಟಿಕೊಳ್ಳಬೇಕು, ನಮ್ಮ ಸುಖವನ್ನು ನಮ್ಮ ಅಂತರಾಳದಲ್ಲಿ ಕಾಣುವ ಕಲೆಯನ್ನು ಬೆಳೆಸಿಕೊಳ್ಳಬೇಕು, ಎಷ್ಟೇ ಬೇಜಾರಿದ್ದರೂ, ಒಂಟಿತನವಿದ್ದರೂ ಈ ಲೋಕದಲ್ಲಿ ಖುಷಿ ಪಡಲು ಸಾಕಷ್ಟು ವಿಷಯಗಳಿವೆ. ಅದನ್ನು ನಾವು ಹುಡುಕಿಕೊಳ್ಳಬೇಕು`&lt;br /&gt;ಹುಡುಗಿ ಕೇಳಿಸಿಕೊಳ್ಳುತ್ತಿದ್ದಳು. `ನೀವು ತುಂಬಾ ಒಳ್ಳೆಯವರ ಥರ ಕಾಣುತ್ತೀರಿ, ನನಗೆ ಬೇಜಾರು ಕಡಿಮೆಯಾಗುತ್ತಿದೆ, ನನ್ನೊಂದಿಗೆ ಇನ್ನಷ್ಟು ಮಾತನಾಡಿ` ಎಂದಳು. `ನೀವು ರೂಮಿನಲ್ಲಿದ್ದರೆ ಹೊರಗೆ ಬನ್ನಿ, ಈ ಆಕಾಶವನ್ನೊಮ್ಮೆ ನೋಡಿ, ಎಷ್ಟೊಂದು ನಕ್ಷತ್ರಗಳಿವೆ, ದೂರದಲ್ಲಿ ಮಿಂಚು ಹುಳುಗಳಂತೆ ಚಿಮ್ಮುತ್ತಾ ಹೋಗುವ ಜೆಟ್ ವಿಮಾನವಿದೆ, ಬೀಸುವ ತಂಗಾಳಿಯಿದೆ, ಈ ಖುಷಿಯನ್ನೆಲ್ಲಾ ನೀವು ಒಂದು ನಯಾಪೈಸೆ ಕೂಡ ಖರ್ಚು ಮಾಡದೆ ಪಡೆಯಬಹುದು ಎಂದೆ.&lt;br /&gt;&lt;br /&gt;ಹುಡುಗಿ ಖುಷಿಯಿಂದ ನಕ್ಕಳು. ಲಂಕೇಶರು ಟೀಕೆ ಟಿಪ್ಪಣಿಯಲ್ಲಿ ಬರೆದ, ನಾನು ಓದಿ ಎಂದೋ ಮರೆತಿದ್ದ ಸಾಲೊಂದು ನೆನಪಾಯಿತು.&lt;br /&gt;&lt;br /&gt;`ಈ ಬದುಕಿನಲ್ಲಿ ನೀವು ತುಂಬಾ ಪುಣ್ಯವಂತೆಯಾಗಿದ್ದರೆ ನಿಮಗೊಂದು ಅಪರೂದ ವಸ್ತು ಸಿಗುತ್ತದೆ. ಅದು ನಿಮ್ಮ ಇಡೀ ವ್ಯಕ್ತಿತ್ವವನ್ನು ತೊಡಗಿಸಿಕೊಂಡು ಮಾಡಬಹುದಾದ ಒಂದು ಸುಂದರ ಕೆಲಸ. ಆ ಕೆಲಸ ನಿಮಗೆ ಕೊಡುವ ಖುಷಿಯ ಮುಂದೆ ಇನ್ಯಾವುದೂ ಇಲ್ಲ. ಆ ಖುಷಿಗೆ ಪ್ರತಿಯಾಗಿ ನಿಮ್ಮೊಳಗೆ ಇಡಿ ಬದುಕಿನ ಬಗ್ಗೆ ಕೃತಜ್ಞತೆ ಮೂಡುತ್ತದೆ. ಅದು ಈ ಬದುಕಿನ ಪುಟ್ಟ ಪುಟ್ಟ ಸಂತೋಷಗಳನ್ನೂ ನಿಮಗೆ ಅನುಭವಿಸಲು ಸಾಧ್ಯವಾಗುವಂತೆ ಮಾಡುತ್ತದೆ. ಬದುಕಿನ ಬಗ್ಗೆ ಹೆಮ್ಮೆ, ಪ್ರೀತಿ ಮೂಡುತ್ತದೆ. ಬೇಜಾರಾಗುವ ಪ್ರಶ್ನೆಯೇ ಇಲ್ಲ` ಹೌದಲ್ಲವೇ ಎಂದೆ.&lt;br /&gt;&lt;br /&gt;ಹೌದೆಂದು ತಲೆಯಾಡಿಸಿದ ಹಾಗಾಯಿತು.&lt;br /&gt;&lt;br /&gt;ಹೀಗೆ ಆರು ತಿಂಗಳ ಹಿಂದೆ ಪರಿಚಯವಾದ ಈ ಅನಾಮಿಕ ಹುಡುಗಿ, ತನ್ನ ನಿಷ್ಕಲ್ಮಶ ಪ್ರೀತಿಯಿಂದ ನನ್ನ ಮನಸ್ಸಿನ ಒಳಗೊಳಗೇ ಸೇರಿಕೊಂಡು ಬಿಟ್ಟಿದ್ದಾಳೆ. `ನಿನ್ನ ಪ್ರೀತಿಗೆ ಯೋಗ್ಯವಾದವರು, ನಿನ್ನ ಥರಾನೇ ಯಾವಾಗಲೂ ಬೇಜಾರು ಮಾಡಿಕೊಂಡು ಇದನ್ನೆಲ್ಲಾ ಯಾರ ಬಳಿ ಹೇಳಲಿ ಎಂದು ತಲೆಕೆಡಿಸಿಕೊಂಡಿರುವ ಸಾಕಷ್ಟು ಹುಡುಗರೂ ಈ ರಾಜ್ಯದಲ್ಲಿದ್ದಾರೆ.` ಅವರನ್ನೆಲ್ಲಾ ಜಾಸ್ತಿ ದಿನ ಕಾಯಿಸಬಾರದು. ಯಾರನ್ನಾದರೂ ಹುಡುಕಿಕೊಂಡು ಮದುವೆಯಾಗಿ, ನನ್ನ ಬಳಿ ಅಡ ಇಟ್ಟಿರುವ ನಿನ್ನ ದುಃಖಗಳನ್ನು ಬಿಡಿಸಿಕೊಂಡು ಹೋಗು ಎಂದು ತಮಾಷೆ ಮಾಡುತ್ತಿರುತ್ತೇನೆ.&lt;br /&gt;&lt;br /&gt;ಇಂದಿಗೂ ತನ್ನ ನಿಜ ಹೆಸರು ಹೇಳದೆ ನನ್ನ ತಲೆ ತಿನ್ನುತ್ತಿರುವ ಆ ಅನಾಮಿಕ ಹುಡುಗಿಯ ಪ್ರೀತಿಗೆ ಈ ಲೇಖನ.&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-5281685655034900995?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/5281685655034900995/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=5281685655034900995' title='20 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/5281685655034900995'/><link rel='self' type='application/atom+xml' href='http://www.blogger.com/feeds/3841477221276814775/posts/default/5281685655034900995'/><link rel='alternate' type='text/html' href='http://jomon-malehani.blogspot.com/2008/11/blog-post_16.html' title='ಅನಾಮಿಕ ಹುಡುಗಿಯೊಬ್ಬಳಿಗೆ...'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><thr:total>20</thr:total></entry><entry><id>tag:blogger.com,1999:blog-3841477221276814775.post-8149167008025949897</id><published>2008-11-01T05:45:00.000-07:00</published><updated>2008-11-06T23:45:48.427-08:00</updated><title type='text'>ಎಲ್ಲರೂ ಮಲಗಿರಲು ಇವನೊಬ್ಬನೆದ್ದ...!</title><content type='html'>&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_A5Tc7GvymLQ/SQxP5jWjH2I/AAAAAAAAAKc/yGSn03aiD7Q/s1600-h/flower.jpg"&gt;&lt;img style="margin: 0px auto 10px; display: block; text-align: center; cursor: pointer; width: 320px; height: 204px;" src="http://4.bp.blogspot.com/_A5Tc7GvymLQ/SQxP5jWjH2I/AAAAAAAAAKc/yGSn03aiD7Q/s320/flower.jpg" alt="" id="BLOGGER_PHOTO_ID_5263669914650222434" border="0" /&gt;&lt;/a&gt;&lt;br /&gt;ಕುಟ್ಟಿ ಕುಂದಾಪುರಕ್ಕೆ ಹೋದ ಕಥೆ ನಿಮಗೆ ಗೊತ್ತಿರಬೇಕಲ್ಲಾ? ಹೀಗೆ ಮೊನ್ನೆ ನಾನೂ ಕೂಡ ದಾವಣಗರೆಗೆ ಹೋಗಿದ್ದೆ. ಕಾರಣಗಳೇನೂ ಇರಲಿಲ್ಲ. ಸುಮ್ಮನೆ ಕುಳಿತಿರುವಾಗ ನನಗೆ ಇಂತಹ ಅತೀಂದ್ರಿಯ ಪ್ರೇರೇಪಣೆಗಳಾಗುವುದಿದೆ. ಮೈಸೂರಿನಿಂದ ಅರಸೀಕರೆಗೆ ಹೋಗಿ, ಅಲ್ಲಿಂದ ಶಿವಮೊಗ್ಗಕ್ಕೆ ಬಂದು, ಶಿವಮೊಗ್ಗದಿಂದ ಹರಿಹರಕ್ಕೆ ಬಂದಿಳಿದು, ದಾವಣಗರೆ ತಲುಪುವುದರೊಳಗೆ ಮಧ್ಯರಾತ್ರಿ ಒಂದಾಗಿತ್ತು. ಹತ್ತಿರ ಹತ್ತಿರ ಹತ್ತು ತಾಸು ಹಿಡಿದಿತ್ತು. ಮುಂದೆ ನನಗೆ ಇಂತಹ ಪ್ರೇರೇಪಣೆಗಳಾಗದಿರಲಿ ದೇವರೆ ಎಂದು ಮಲಗಿದ್ದ ಗೆಳೆಯನನ್ನು ಎಬ್ಬಿಸಿ, ಆ ಹೊತ್ತಿನಲ್ಲಿ ಅವನ ರೂಮು ಹುಡುಕಿ, ಕಷ್ಟ ಸುಖ ಮಾತಾಡುತ್ತಾ ಕುಳಿತೆವು. ಹೊರಗೆ ದೀಪಾವಳಿಯ ಪಟಾಕಿಯ ಹೂಬಾಣಗಳು ಆಗಸಕ್ಕೆ ಚಿಮ್ಮಿ ಚಿತ್ತಾರ ಬಿಡಿಸುತ್ತಿದ್ದವು.&lt;br /&gt;&lt;br /&gt;ದಾವಣಗರೆಯ ರಾತ್ರಿಗೆ ಒಂದು ವಿಶೇಷತೆಯಿದೆ. ನಿಮ್ಮ ಗಮನಕ್ಕೂ ಬಂದಿರಬಹುದು. ಅಲ್ಲಿ ಹಾವೇರಿ, ಚಿತ್ರದುರ್ಗ, ಹರಪನಹಳ್ಳಿ, ಜಗಳೂರು, ಬಳ್ಳಾರಿ ಸೇರಿದಂತೆ ಸುತ್ತಲಿನ ಹಳ್ಳಿಗಳಿಂದ ಬರುವ ಸಹಸ್ರಾರು ಹೂವುಗಳು, ಮಾಲೆಗಳಾಗಿ, ಗುಚ್ಚಗಳಾಗಿ, ಮೊಗ್ಗರಳಿ ಹೂವಾಗಿ ಬೆಳಗಾಗುವ ಹೊತ್ತಿಗೆ ಆಂಧ್ರ, ಮಹಾರಾಷ್ಟ್ರ, ಗೋವಾ ಅಂತೆಲ್ಲಾ ಹೋಗಿಬಿಡುತ್ತದೆ. ರಾತ್ರಿಯಿಡಿ ದಾವಣಗೆರೆಯ ಕತ್ತಲಿನಲ್ಲಿ ಈ ಹೂವಿನ ಘಮಲು ತೇಲುತ್ತಿರುತ್ತದೆ. ಮರ್ಕುರಿ ದೀಪದ ಕೆಳಗೆ ಕುಳಿತು ನೂರಾರು ಜನರು ಈ ಹೂವಿನ ದೊಡ್ಡ ಪೆಂಡಿಗಳನ್ನು ಕಟ್ಟುವುದರಲ್ಲಿ, ಎತ್ತಿಡುವುದರಲ್ಲಿ ನಿರತರಾಗಿರುತ್ತಾರೆ. ಮಲ್ಲಿಗೆ, ಕಾಕಡ, ಸೂಜಿ, ಸೇವಂತಿಗೆ, ಗುಲಾಬಿ, ಚೆಂಡು ಹೀಗೆ ಹೂವೆಲ್ಲಾ ಈ ಚೆಲುವೆಲ್ಲಾ ತಮ್ಮದೆನ್ನುತ್ತಾ, ಬುಟ್ಟಿಯಿಂದ ಇಣುಕಿ ನೋಡುತ್ತಾ, ಕುಲುಕುಲು ನಗುತ್ತಿರುತ್ತವೆ. ಎಲಾ! ರಾತ್ರಿರಾಣಿಯರೇ ಎಂದು ನಾನೂ ಕೂಡ ಇದನ್ನು ನೋಡುತ್ತಾ ನಿಂತಿದ್ದೆ. ಕೈಯಲ್ಲಿ ಕ್ಯಾಮರಾ ಇರಲಿಲ್ಲ. ಕೈ ಕೈ ಹಿಸುಕಿಕೊಂಡೆ. ಕ್ಯಾಮರಾ ಇಲ್ಲದೆ ಸಂಚರಿಸುವ ನೀನಾವ ಸೀಮೆಯ ಪತ್ರಕರ್ತ ಕಣಯ್ಯಾ ಎಂದು ನನ್ನನ್ನು ನಾನೇ ಬೈದುಕೊಂಡೆ. ಉದುರಿಬಿದ್ದ ಹೂವಿನ ಪಕಳೆಗಳನ್ನು ಎತ್ತಿ, ಮೈದಡುವುತ್ತಾ, ನೀನು ಹೂವಿನಡಗಲಿಯ ಮಲ್ಲಿಗೆಯಾ? ದುರ್ಗದ ಸೂಜಿಯಾ? ದಾವಣಗೆರೆಯ ಗುಲಾಬಿಯಾ? ಅಂತೆಲ್ಲಾ ಕೇಳುವ ಆಸೆಯಾಯಿತು.&lt;br /&gt;&lt;br /&gt;ಬೆಳಿಗ್ಗೆ ಎದ್ದು ನೋಡಿದರೆ ದಾವಣಗೆರೆಯ ಜನ ಗೋಪೂಜೆ ಮಾಡುತ್ತಿದ್ದರು. ಸಿಡಿದ ಪಟಾಕಿಗಳ ಶೇಷ ಭಾಗಗಳು ನಮ್ಮತ್ತ ನೋಡಿ, `ಲೇ ಪತ್ರಕರ್ತರೇ ನಿಮಗೆ ಯಾವುದೇ ಹಬ್ಬವಿಲ್ಲವೇ, ಹೋಗಿ ನಿಮ್ಮ ಹೆಂಡತಿ ಮಕ್ಕಳೊಂದಿಗೆ ಹಬ್ಬ ಆಚರಿಸಿ ಎನ್ನುವಂತಿತ್ತು. `feeling less paper tigers` ಅನ್ನುವ ವಿಶೇಷಣ ಹೊತ್ತಿರುವ ನಾವು ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳದವರಂತೆ ನಿರ್ಭಾವುಕರಾಗಿ ರಸ್ತೆ ಸುತ್ತುತ್ತಿದ್ದೆವು. ಒಳ್ಳೆಯ ಬಿರಿಯಾಣಿ ಕೊಡಿಸುತ್ತೇನೆ ಬಾ ಎಂದು ನನ್ನ ಗೆಳೆಯ ಸುವರ್ಣದ ವರದಿಗಾರ ಧನಲಿಂಗೇಶ, ನನ್ನನ್ನೂ ಹಾಗೂ ಕಸ್ತೂರಿಯ ವರದಿಗಾರ ಕೆರಿಬಸಪ್ಪನವರನ್ನೂ ಕರೆದುಕೊಂಡು ವೀರಶೈವ ಖಾನಾವಳಿ ಹೊಕ್ಕು ಹೂಳಿಗೆ ಊಟ ಮಾಡಿಸಿದ್ದ. ನಂತರ ಟಿವಿ 9 ಆಫೀಸಿಗೆ ಹೋಗಿ ನಮ್ಮ ಹಿರಿಯರಾದ ಬಸವರಾಜ ದೊಡ್ಡಮನಿ ಅವರಿಗೆ ನಮಸ್ಕಾರ ಮಾಡಿದೆವು. ಅವರು ಚಿತ್ರದುರ್ಗದಿಂದ ಪ್ರಾರಂಭವಾಗುವ ರಾಷ್ಟ್ರೀಯ ಹೆದ್ದಾರಿ (3) ದಾವಣಗರೆಯ ಮೂಲಕ ಹಾದು ಎಲ್ಲಿಯವರೆಗೆ ಹೋಗುತ್ತದೆ ಎಂದು ತಲೆಕೆಡಿಸಿಕೊಂಡಿದ್ದರು. ಅದರ ಉಗಮ ಚಿತ್ರದುರ್ಗವೆಂದೂ, ಸೊಲ್ಲಾಪುರದಲ್ಲಿ ಕೊನೆಗಳೊಳ್ಳಲಿದೆಯೆಂದೂ ತಿಳಿದ ನಂತರ ನಿರಮ್ಮಳರಾಗಿ ನನ್ನತ್ತ ನೋಡಿ, ಪ್ರೀತಿಯಿಂದ ಯೋಗಕ್ಷೇಮ ವಿಚಾರಿಸಿಕೊಂಡರು.  ನಾನು ಮೈಸೂರಿನಿಂದ ಬಂದಿದ್ದ ದಣಿವನ್ನೆಲ್ಲಾ ಮುಖದಲ್ಲಿ ಪ್ರದರ್ಶಿಸಿ ಅವರಿಂದ ಒಂದಿಷ್ಟು ಪ್ರೀತಿಯನ್ನೂ, ಅನುಕಂಪವನ್ನೂ ಹೆಚ್ಚು ಪಡೆದುಕೊಳ್ಳಲು ಶ್ರಮಿಸುತ್ತಿದ್ದೆ.&lt;br /&gt;&lt;br /&gt;ವಾಪಾಸ್ಸು ದಾವಣಗೆರೆ ಬಿಡುವಾಗ ರಾತ್ರಿ ಹತ್ತಾಗಿತ್ತು. ಹರಿಹರದಿಂದ ಅರಸೀಕೆರೆಗೆ ಹತ್ತಿದ ಬಸ್ ಕಡೂರಿನ ಬಳಿ ಪಂಕ್ಚರ್ ಆಯಿತು. ಬಸ್ಸು ಬಳ್ಳಾರಿ ಡಿಪೋಗೆ ಸೇರಿದ್ದರಿಂದ ಕಡೂರು ಡಿಪೋದವರು ಈ ರಾತ್ರಿ ನಿದ್ರೆಯಿಂದ ಎಚ್ಚೆತ್ತು ಟಯರ್ ಚೇಂಜ್ ಮಾಡಲು ನಮ್ಮಿಂದ ಆಗುವುದಿಲ್ಲ ಎಂದರು. ಸರಿ, ಡ್ರೈವರ್ ಕಂಡೆಕ್ಟರ್ ಬಸ್ಸಿನ ಕೆಳಗೆ ನುಸುಳಿ ಟಯರು ಬದಲಿಸಲು ಪ್ರಾರಂಭಿಸಿದರು. ಮೈಕೊರೆಯುವ ಚಳಿ ಬೇರೆ. ನಾನು ಇಳಿದು, ಅವರ ಪಕ್ಕವೇ ನಿಂತು, ಈ ರೀತಿ ಕೆಲಸ ಮಾಡುವುದಕ್ಕೆ ನಿಮಗೆ ಎಕ್ಟ್ರಾ ದುಡ್ಡು ಕೊಡುತ್ತಾರೆ ಅಂತೆಲ್ಲಾ ಪೆದ್ದು ಪೆದ್ದಾಗಿ ಪ್ರಶ್ನೆ ಕೇಳುತ್ತಿದ್ದೆ. ಕತ್ತಲೆಯಲ್ಲಿ ಅವರು ಕಷ್ಟಪಟ್ಟು ಪೆನ್ ಟಾರ್ಚ್ ಬೆಳಕಿನಲ್ಲಿ ಬೋಲ್ಟ್ ಬಿಚ್ಚುತ್ತಿದ್ದರು. `ನಿಮಗೆ MRF ಟಯರ್ ಕಂಪನಿ ಗೊತ್ತಾ, ಅದರ ಲೋಗೋ ಇದೆಯಲ್ಲಾ, ಒಬ್ಬ ಪೈಲ್ವಾನ ತನ್ನ ಎರಡೂ ಕೈಗಳಲ್ಲಿ ಟಯರನ್ನು ಎತ್ತಿ ಹಿಡಿದು ನಿಂತ ಚಿತ್ರ, ಆ ಲೋಗೋಗೆ  ಐಡಿಯಾ ಕೊಟ್ಟವನು ದಾರಿಯಲ್ಲಿ ಪಂಕ್ಚರ್ ಅಂಗಡಿ ಇಟ್ಟುಕೊಂಡ ಒಬ್ಬ ಸಾಮಾನ್ಯ ವ್ಯಕ್ತಿ` ಈಗ ಅವರಿಗೆ ಆ ಲೋಗೋದಿಂದ ಕೋಟ್ಯಾಂತರ ರೂಪಾಯಿ ಬರುತ್ತಿದೆ, ಈ ಕಥೆ ನಿಮಗೆ ಗೊತ್ತಿದೆಯಾ ಅಂತ ಡ್ರೈವರನ್ನು ಕೇಳುವ ಆಸೆಯಾದರೂ, ಆತ `ಮಧ್ಯರಾತ್ರಿ ಈ ಟಯರು ಬಿಚ್ಚುವ ಕೆಲಸ ಈಗ ನಾನು ನಿನಗೆ ಕಲಿಸಿಕೊಡುತ್ತೇನೆ ಬಾ` ಅಂತ ಹೇಳುವ ಸಾಧ್ಯತೆ ಇದ್ದಿದ್ದರಿಂದ ನಾನು ಅದನ್ನು ನುಂಗಿಕೊಂಡು ನಿಂತಿದ್ದೆ.&lt;br /&gt;&lt;br /&gt;ಕಡೂರಿನ ಆ ಮೈಕೊರೆಯುವ ಚಳಿಯಲ್ಲಿ ಒಂದು ಹುಲ್ಲು ಕಡ್ಡಿ ಕೂಡ ಅಲುಗಾಡದಂತೆ ನಿಂತಿದ್ದರೆ ಒಬ್ಬನು ಮಾತ್ರ ಸ್ಟೌವ್ ಉರಿಸಿ ಚಹಾ, ಕಾಫಿ ಮಾರುತ್ತಿದ್ದ. ಎಲ್ಲರೂ ಮಲಗಿರಲು ಇವನೊಬ್ಬನೆದ್ದ ಎಂದು ಹತ್ತಿರ ಹೋದರೆ ಅವನು ಚಾಯೆ.. ಕಾಫೀ.. ಅಂತ ಜೋರು ವ್ಯಾಪಾರ ಮಾಡುತ್ತಿದ್ದ. ಚಳಿಯಿಂದ ನಡುಗಿದವರೆಲ್ಲಾ ಬಾಯಲ್ಲಿ ಹೊಗೆ ಬಿಡುತ್ತಾ, ಚಹಾ, ಕಾಫಿಯನ್ನು ಊದಿ ಊದಿ ಕುಡಿದು ನಾಲಿಗೆ ಸುಟ್ಟುಕೊಳ್ಳುತ್ತಿದ್ದರು. ಈ ರೀತಿ ವ್ಯಾಪಾರ ಮಾಡುವ ನೀನೊಬ್ಬ ಮಲೆಯಾಳಿಯೇ ಇರಬೇಕು ಎಂದು ಅವನನ್ನು ಕೇಳಿದರೆ ಅವನು ಮಲೆಯಾಳಿಯೇ ಆಗಿದ್ದ. ಮಲ್ಲುಬಾಯ್ ನಿಮ್ಮ ಬಳಿ ಕಟ್ಟಂಚಾಯ, ಕಪ್ಪ (ಮರಗೆಣಸು) ಸಿಗುತ್ತದೆಯಾ ಅಂತ ಕೇಳಿದರೆ, ಕೂತುಕೊಳ್ಳಿ ಸಾರ್, ಇನ್ನೇನು ಬೆಳಗಾಗುತ್ತದೆ, ತರಿಸಿಕೊಡುತ್ತೇನೆ ಎನ್ನಬೇಕೇ. `ಈ ಬಾರಿಯ ಚಂದ್ರಯಾನ ಉಪಗ್ರಹದಲ್ಲಿ ಇಬ್ಬರು ಮಲಯಾಳಿಗಳೂ ಹೋಗಿದ್ದಾರೆ, ನಿನ್ನ ಟೆಂಟನ್ನು ಅವರ ಹತ್ತಿರ ಕೊಟ್ಟು ಕಳುಹಿಸಿದ್ದರೆ, ನೀನೂ ಕೂಡ ಬೇಗ ಅಲ್ಲಿಗೇ ಶಿಪ್ಟ್ ಆಗಬಹುದಿತ್ತು` ಎಂದಿದ್ದಕ್ಕೆ ಆತ ನಕ್ಕ. ಚಹಾ ಅಂಗಡಿ ನಡೆಸಿಯೇ ನಾನು ಇಡಿ ಬ್ರಹ್ಮಾಂಡವನ್ನೇ ಸುತ್ತಬಲ್ಲೆ ಎನ್ನುವಂತಿತ್ತು ಅವನ ಮಾತಿನ ಧಾಟಿ.&lt;br /&gt;&lt;br /&gt;ಅರಸಿಕೆರೆಯಲ್ಲಿ ಇಳಿದಾಗ ಬೆಳಗಿನ ಜಾವ ಐದಾಗಿತ್ತು. `ಬಡವರ ಬಂಧು ರೈಲಿದೆ ಸಾರ್, ಇಪ್ಪತ್ತೈದು ರೂಪಾಯಲ್ಲಿ ಮೈಸೂರಿಗೆ ಕರ್‌ಕೊಂಡು ಹೋಗ್ತಾನೆ, ಯಾಕೆ ನೂರೈವತ್ತು ರೂಪಾಯಿ ಕೊಟ್ಟು ಬಸ್ಸಿಗೆ ಹೋಗ್ತೀರಾ?` ಎಂದು ಸಹ ಪ್ರಯಾಣಿಕರೊಬ್ಬರು ಮದುವೆಯಾಗದ ನನಗೆ ದುಡ್ಡು ಉಳಿಸುವ ಅಗತ್ಯವನ್ನೂ, ಐಡಿಯಾವನ್ನೂ ಹೇಳಿ ಒತ್ತಾಯಪೂರ್ವಕ ಎನ್ನುವಂತೆ ರೈಲು ಹತ್ತಿಸಿದರು. ಅಯ್ಯೋ! ಲಾಲುವೇ ಎಂದು ನಾನು ರೈಲು ಹತ್ತಿದರೆ ಅದು ಹೊರಡಬೇಕೋ ಬೇಡವೂ, ಮೈಸೂರು ತಲುಪಬೇಕೋ ಬೇಡವೋ ಎನ್ನುವ ಸ್ಥಿತಿಯಲ್ಲಿತ್ತು. ಬರ್ತ್ ಮೇಲೆ ಬ್ಯಾಗಿಟ್ಟು ತಲೆಯಾನಿಸಿದರೆ ಮೈಸೂರು ಹತ್ತಿರ ಡೋರನಹಳ್ಳಿ ಬಂದಾಗ ಎಚ್ಚರವಾಯಿತು. `ಎಲ್ಲರೂ ಎದ್ದಿರಲು ಇವನೊಬ್ಬ ಮಲಗಿದ` ಎಂದು ಕೆಳಗೆ ಸೀಟಿನಲ್ಲಿ ಕುಳಿತ ಪ್ರಯಾಣಿಕರು ನನ್ನನ್ನೇ ಕೆಕ್ಕರಿಸಿಕೊಂಡು ನೋಡುವ ಹಾಗಿತ್ತು. ಹೇಮಾವತಿ ನದಿಯನ್ನು ನೋಡಬೇಕು, ಅಲ್ಲಿ ತೇಜಸ್ವಿ ಮೀನು ಹಿಡಿದ ಸ್ಥಳವನ್ನು ನೋಡಬೇಕು ಎಂದೆಲ್ಲಾ ಮಲಗಿದ್ದ ನಾನು ಹನ್ನೊಂದು ಗಂಟೆಗೆ ಎಚ್ಚರಗೊಂಡಿದ್ದೆ. ಮೈಸೂರಿನಲ್ಲಿ ರೈಲಿಳಿದಾಗ ಸುಡುಸುಡು ಬಿಸಿಲು.&lt;br /&gt;&lt;br /&gt;ಈ ಸಲದ ದೀಪಾವಳಿಗೆ ಪಟಾಕಿ ಸುಡಲಿಲ್ಲ, ಎಣ್ಣೆ ಸ್ನಾನ ಮಾಡಲಿಲ್ಲ. ಬದಲಿಗೆ ಗಳೆಯ ಧನುವಿನ ಪ್ರೀತಿ, ಕರಿಬಸಪ್ಪನವರ ಆತ್ಮೀಯತೆಯನ್ನು ಮನಸ್ಸಿನಲ್ಲಿ ತುಂಬಿಕೊಂಡು ದಾವಣಗರೆಯಿಂದ ಮೈಸೂರಿಗೆ ಮರಳಿ ಬಂದಿದ್ದೆ. ಮುಂದಿನ ದೀಪಾವಳಿಗೂ ನನಗೆ ದಾವಣಗೆರೆಗೆ ಹೋಗುವ ಪ್ರೇರಣೆಯಾಗಲಿ ಎಂದು ಈಗ ಪ್ರಾರ್ಥಿಸುತ್ತಿರುವೆ.&lt;br /&gt;&lt;br /&gt;[ಚಿತ್ರ - ಅಂತರ್ಜಾಲದಿಂದ ಕದ್ದಿದ್ದು]&lt;br /&gt;&lt;br /&gt;&lt;br /&gt;&lt;span style="color: rgb(255, 0, 0);"&gt;ಕದ್ದ ತಪ್ಪಿಗೆ...&lt;/span&gt;&lt;br /&gt;&lt;br /&gt;ಜಗತ್ತಿನ ಕೋಟ್ಯಾನುಕೋಟಿ ವೆಬ್‌ಸೈಟ್‌ಗಳಿಂದ ಜನರು ಎನೆಲ್ಲಾ ಕದಿಯುತ್ತಿರುವಾಗ, ಒಬ್ಬ ಬಡ ಪತ್ರಕರ್ತನಾದ ನಾನು ಯಾವುದೋ ಒಂದು ತಾಣದಿಂದ ಒಂದು ಫೋಟೋವನ್ನು ಕದ್ದು ಹಾಕಿದರೆ ಅದು ದೊಡ್ಡ ತಪ್ಪೇನಲ್ಲ ಅಂತ ಭಾವಿಸಿ, ಸುಮ್ಮನಾದರೆ ನಮ್ಮ &lt;a style="color: rgb(255, 0, 0);" href="http://kaalaharana.blogspot.com/"&gt;ಭಾಗವತರು &lt;/a&gt;`ಸ್ವಾಮಿ ನಿಮ್ಮ ಪಾಪ ಪರಿಹಾರಕ್ಕೆ ಅದರ ಲಿಂಕ್ ಕೊಡಿ` ಎನ್ನಬೇಕೆ. ಕದ್ದ ತಪ್ಪಿಗೆ ಈ ಚಿತ್ರವನ್ನು ಅಂತರ್ಜಾಲದಿಂದ ಕದ್ದಿದ್ದು ಎಂದು ಕ್ರೆಡಿಟ್ ಕೊಟ್ಟು ನಾನೊಬ್ಬ ಪ್ರಾಮಾಣಿಕ ಕಳ್ಳ ಎಂದು ನಿವೇದಿಸಿಕೊಂಡರೂ ಭಾಗವತರು ನನ್ನ ಬೆನ್ನು ಬಿಡಲಿಲ್ಲ. ಅವರೊಂದಿಗೆ ಈಗ ನಮ್ಮ &lt;a style="color: rgb(255, 0, 0);" href="http://tinazone.wordpress.com/"&gt;ಟೀನಾ ಮೇಡಂಮ್ಮೂ&lt;/a&gt; ಸೇರಿಕೊಂಡು, ಸೋರ್ಸ್ ಲಿಂಕನ್ನು ವೆಬ್ ಪತ್ರಕರ್ತರಾದ ನೀವು ಜವಾಬ್ದಾರಿಯಿಂದ ಕೊಡಬೇಕು. ಎಂದೆಲ್ಲಾ ಕ್ಲಾಸ್ ತೆಗೆದುಕೊಂಡ ಮೇಲೆ, ಎಲ್ಲಿಂದ ಕದ್ದಿದ್ದು ಎಂದು ನನಗೇ ಮರೆತುಹೋಗಿದ್ದ ಈ ಚಿತ್ರದ ಮೂಲವನ್ನು ಹುಡುಕಿಕೊಂಡು ಅಂತರ್ಜಾಲವೆಲ್ಲಾ ಅಡ್ಡಾಗಿ ಸುಸ್ತಾಗಿ ಹೋಗಿದ್ದೇನೆ. ಆದರೂ ಚಿತ್ರದ ಪಕ್ಕಾ ಮೂಲ ಸಿಕ್ಕಿಲ್ಲ. ಇದನ್ನು ಫ್ಲಿಕ್ಕರ್ ತಾಣದಿಂದ ಎಗರಿಸಿದ್ದು. ಈ ಚಿತ್ರ ಇನ್ನೇನು ಕೈಗೆ ಸಿಗಬಹುದು ಎನ್ನುವಷ್ಟು ಹತ್ತಿರದ ಕೊಂಡಿ ಕೊಟ್ಟಿದ್ದೇನೆ. ಟೀನಾ ಮತ್ತು ಭಾಗವತರು &lt;a style="color: rgb(255, 0, 0);" href="http://www.flickr.com/search/?q=karnataka+flower+market&amp;amp;page=3"&gt;ಇಲ್ಲಿ ಕ್ಲಿಕ್ಕಿಸಿ&lt;/a&gt; ಇದರ ಅಕ್ಕ ಪಕ್ಕ ಹುಡುಕಿ ನನಗೂ ತಿಳಿಸಬೇಕೆಂದು ಕೋರಿಕೆ. ನನಗಂತೂ ಸಾಕಾಗಿದೆ. ನೀವು ಬೇಕಾದರೆ ನನ್ನ ಮೇಲೆ ಕಾಪಿರೈಟ್ ಉಲ್ಲಂಘನೆಯಡಿ ಕೇಸು ಹಾಕಿ, ಬ್ಲಾಗ್ ಲೋಕದಿಂದ ಒದ್ದು ಓಡಿಸಬಹುದು.&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-8149167008025949897?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/8149167008025949897/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=8149167008025949897' title='20 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/8149167008025949897'/><link rel='self' type='application/atom+xml' href='http://www.blogger.com/feeds/3841477221276814775/posts/default/8149167008025949897'/><link rel='alternate' type='text/html' href='http://jomon-malehani.blogspot.com/2008/11/blog-post.html' title='ಎಲ್ಲರೂ ಮಲಗಿರಲು ಇವನೊಬ್ಬನೆದ್ದ...!'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_A5Tc7GvymLQ/SQxP5jWjH2I/AAAAAAAAAKc/yGSn03aiD7Q/s72-c/flower.jpg' height='72' width='72'/><thr:total>20</thr:total></entry><entry><id>tag:blogger.com,1999:blog-3841477221276814775.post-583368401905834254</id><published>2008-10-15T03:35:00.000-07:00</published><updated>2008-10-15T03:41:07.763-07:00</updated><title type='text'>ಮುಗಿದು ಹೋದ ಮೈಸೂರು ದಸರಾ</title><content type='html'>&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_A5Tc7GvymLQ/SPXIsqBrpCI/AAAAAAAAAKU/wA9Z4SP-V0s/s1600-h/DSC02715.JPG"&gt;&lt;img style="margin: 0px auto 10px; display: block; text-align: center; cursor: pointer;" src="http://1.bp.blogspot.com/_A5Tc7GvymLQ/SPXIsqBrpCI/AAAAAAAAAKU/wA9Z4SP-V0s/s320/DSC02715.JPG" alt="" id="BLOGGER_PHOTO_ID_5257328809546064930" border="0" /&gt;&lt;/a&gt;&lt;br /&gt;ಈ ಬಾರಿಯ ಮೈಸೂರು ದಸರಾ ಭರ್ಜರಿಯಾಗಿಯೇ ಮುಗಿಯಿತು. ದಸರಾ ದಿನಗಳಲ್ಲಿ ನಾನು ಸುಮ್ಮನೆ ಮೈಸೂರಿನ ರಸ್ತೆಗಳನ್ನು ಸುತ್ತುತ್ತಿದ್ದೆ. ಎಲ್ಲೆಡೆ ಶೋಭಾ ಕರಂದ್ಲಾಜೆ ಮತ್ತು ಯಡಿಯೂರಪ್ಪನವರ ಕಟೌಟ್‌ಗಳೇ ಕಾಣಿಸಿ ನಾಡ ಹಬ್ಬ ಯಾಕೋ ಇವರಿಬ್ಬರದೇ ಹಬ್ಬವಾಗಿದೆ ಎಂದು ಅನಿಸಿ ದಿವ್ಯ ವಿಷಾದದಲ್ಲಿ ನಿಂತಿದ್ದೆ. ಮೈಸೂರಿನ ಬಸ್‌ಸ್ಟಾಂಡಿನಲ್ಲಿ ಹಳ್ಳಿಗಳಿಂದ ಬಂದ ಜನ ಎಳೆ ಸೌತೆಕಾಯಿ ತಿನ್ನುತ್ತಾ ದೇವನೂರು ಮಹಾದೇವರ ಶೈಲಿಯಲ್ಲಿ, ಹಳೆ ಮೈಸೂರಿನ ಸುಂದರ ಬೈಗುಳಗಳನ್ನು ತೇಲಿಬಿಡುತ್ತಿದ್ದರು. ದಸರಾ ವಿಶೇಷವಾಗಿ ವೋಲ್ವೋ ಬಸ್ಸುಗಳಿಗೆ ಒಂದು ರೂಪಾಯಿ ದರ ಇದ್ದಿದ್ದರಿಂದ ಮಳೆ ಸುರಿಯುತ್ತಿದ್ದರೂ, ಚಳಿ ಇದ್ದರೂ ಸಮಾನ್ಯ ಜನರು ಎಸಿ ಬಸ್ಸಿನಲ್ಲಿಯೇ ನಿಂತುಕೊಂಡು ಪ್ರಯಾಣಿಸುತ್ತಿದ್ದರು. ವರ್ಷಕ್ಕೊಮ್ಮೆ ಸಿಗುವ ಇಂತಹ ಪುಕ್ಕಟೆ ಖುಷಿಗಳನ್ನು ಜನರು ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳಬಾರದು ಎನ್ನುತ್ತಾ ನಾನೂ ಅವರ ಮಾತುಗಳನ್ನು ಕೇಳಿಸಿಕೊಳ್ಳಲು ಅವರ ನಡುವೆ ನುಸುಳಿಕೊಂಡು ನಿಂತಿದ್ದೆ.&lt;br /&gt;&lt;br /&gt;ನೀವು ಮೈಸೂರು ಅರಮನೆಯನ್ನು ನೋಡಿರಬಹುದು. ಈ ಅರಮನೆಯ ಅಂಗಳದಲ್ಲಿ ಇಪ್ಪತ್ತು ವರ್ಷಗಳಿಂದ ಕಸ ಗುಡಿಸುವ ತಾಯಿಯೊಬ್ಬರಿದ್ದಾರೆ. ಒಂಟಿಕೊಪ್ಪಲಿನ ರಾಜಮ್ಮ ಎನ್ನುವುದು ಅವರ ಹೆಸರು. ನಾನು ಅರಮನೆ ಅಂಗಳದಲ್ಲಿ ಎಲ್ಲಿಗೆ ಹೋಗುವುದು ಎಂದು ಗೊತ್ತಾಗದೆ ನಿಂತಿದ್ದಾಗ ಇವರು ಸಿಕ್ಕಿದರು. ಸುಮ್ಮನೆ ಮುಗಳ್ನಕ್ಕಿದ್ದಕ್ಕೆ ಒಂದು ಗಂಟೆ ಪ್ರೀತಿಯಿಂದ ಮಾತನಾಡಿದರು. ತನ್ನಪ್ಪ ತಾನು ಚಿಕ್ಕವಳಿದ್ದಾಗ ಹೆಗಲು ಮೇಲೆ ಕೂರಿಸಿಕೊಂಡು ಜಂಬೂ ಸವಾರಿ ತೋರಿಸುತ್ತಿದ್ದನೆಂದೂ, ಈಗ ಅಪ್ಪ ತೀರಿ ಹೋಗಿ ನಾಲ್ಕು ವರ್ಷವಾಗಿದೆಯೆಂದೂ, ನಾನಿಲ್ಲಿ ದಿನಕ್ಕೆ ಎಪ್ಪತ್ತು ರೂಪಾಯಿಗಳಿಗೆ ದಿನಗೂಲಿ ಮಾಡುತ್ತಿರುವುದಾಗಿ ಹೇಳಿದಳು. ನಾಲ್ವಡಿ ಕೃಷ್ಣರಾಜರು ಒಡೆಯರು ಮೈಸೂರಿನ ರಾಜರಾಗಿದ್ದಾಗ ನನ್ನ ಚಿಕ್ಕಪ್ಪನೊಬ್ಬರು ಸೈನ್ಯದಲ್ಲಿದ್ದರೆಂದೂ ಆಗ ಅವರ ಬಳಿ ಇದ್ದ ಖಡ್ಗವೊಂದು ಈಗಲೂ ಮನೆಯಲ್ಲಿ ಇದೆಯೆಂದು ಹೇಳಿದಳು. ನಂತರ ನೀವು ಇಷ್ಟು ಚೆನ್ನಾಗಿ ಕನ್ನಡ ಮಾತಾಡುತ್ತೀರಲ್ಲಾ ನನಗೆ ತುಂಬಾ ಖುಷಿಯಾಯಿತು ಎಂದು ಹೇಳಿ ತನಗೆ ತರಿಸಿದ್ದ ಚಹಾದಲ್ಲಿ ಅರ್ಧ ಲೋಟ ನನಗೆ ಕೊಟ್ಟಳು. ಆವತ್ತು ನನಗೆ ಎಷ್ಟು ಖುಷಿಯಾಗಿತ್ತು ಎಂದರೆ  ಶ್ರೀಕಂಠ ದತ್ತ ಒಡೆಯರೇ ಚಹಾಕ್ಕೆ ಕರೆದಿದ್ದರೂ ಇಷ್ಟು ಸಂತೋಷ ಪಡುತ್ತಿರಲಿಲ್ಲ.&lt;br /&gt;&lt;br /&gt;ರಾಜಮ್ಮನ ಕಥೆಯನ್ನು ಕೇಳಿಸಿಕೊಂಡು ಅರಮನೆಯ ಮುಂಬಾಗಕ್ಕೆ ಬಂದರೆ ನಾಲ್ವರು &lt;a style="color: rgb(255, 0, 0);" href="http://www.kendasampige.com/article.php?id=1474"&gt;ಬೌದ್ಧ ಬಿಕ್ಷುಗಳು&lt;/a&gt;&lt;span style="color: rgb(255, 0, 0);"&gt; &lt;/span&gt;ಬಿಸಿಲು ಕಾಯಿಸಿಕೊಳ್ಳುತ್ತಾ, ಪಪ್ಪಾಯಿ ಹಣ್ಣು ತಿನ್ನುತ್ತಿದ್ದರು. ಬೈಲುಕುಪ್ಪೆಯ ಟಿಬೆಟಿಯನ್ ಕ್ಯಾಂಪಿನಿಂದ ದಸರಾ ನೋಡಲು ಮೈಸೂರಿಗೆ ಬಂದಿದ್ದ ಅವರ ಸುತ್ತ ಒಂದಿಷ್ಟು ಜನ ಸೇರಿ ಪೊಟೋ ತೆಗೆಸಿಕೊಳ್ಳಲು ಪೀಡಿಸುತ್ತಿದ್ದರು. ಬುದ್ದನ ಶಾಂತಿಯನ್ನೂ, ಪ್ರೀತಿಯನ್ನೂ ಮನಸ್ಸಿನಲ್ಲಿ ತುಂಬಿಕೊಂಡಿದ್ದ ಅವರು ಸ್ವಲ್ಪವೂ ಬೇಸರಿಸಿಕೊಳ್ಳದೆ ಎಲ್ಲರೊಂದಿಗೆ ಫೊಟೋ ಹೊಡಿಸಿಕೊಳ್ಳುತ್ತಿದ್ದರು. ಅವರೆಲ್ಲರೂ ಹೊರಟು ಹೋದ ನಂತರ, ಕಲಸಾಂಗ್, ಕುಂಡಮ್, ನವಾಂಗ್, ಗೊಬಾ ಎನ್ನುವುದು ತಮ್ಮ ಹೆಸರೆಂದೂ ಆ ಹೆಸರಿನ ಅರ್ಥ ಏಕಾಗ್ರತೆ, ಐಶ್ವರ್ಯ, ಪ್ರೀತಿ ಮತ್ತು ಧನಾತ್ಮಕತೆ ಎಂದೂ ಹೇಳಿದರು. ನೋಡಲೂ ಹಾಗೆಯೇ ಇದ್ದರು. ಈ ಮೈಸೂರನ್ನು ಆಳಿದ ಒಡೆಯರು ಯಾರೆಂದು ನಿಮಗೆ ಗೊತ್ತಾ ಎಂದು ಕೇಳಿದರೆ ಅವರು ನಕ್ಕು, ಅದೆಲ್ಲಾ ತಮಗೇನೂ ಗೊತ್ತಿಲ್ಲವೆಂದೂ, ದಲಾಯಿಲಾಮ ನಮ್ಮ ಗುರುವೆಂದೂ ಹೇಳಿದರು. ಟಿಬೆಟನ್ನರ ಮೇಲೆ ಚೀನಾ ನಡೆಸುತ್ತಿರುವ ಆಕ್ರಮಣದ ಕುರಿತು ಕೇಳೋಣವೆಂದರೆ, ಅವರು ಅದನ್ನೆಲ್ಲಾ ಆಗಲೇ ಮರೆತವರಂತೆ ಪಪ್ಪಾಯಿ ಹಣ್ಣು ತಿನ್ನುತ್ತಿದ್ದರು.&lt;br /&gt;&lt;br /&gt;ಸರಿ, ಚಾಮುಂಡಿ ಬೆಟ್ಟವನ್ನೂ ಹತ್ತಿ ಬಿಡೋಣವೆಂದು ಅಲ್ಲಿಗೆ ಹೊರಟರೆ, ಚಾಮುಂಡಿದೇವಿಯ ಸನ್ನಿಧಾನದಲ್ಲಿ ಚೀನಾದ &lt;a style="color: rgb(255, 0, 0);" href="http://www.kendasampige.com/article.php?id=1484"&gt;ಫಾಲೂನ್ ದಾಫಾ &lt;/a&gt;ಕಾರ್ಯಕರ್ತರು ಶಾಂತವಾಗಿ ಹಾಡುತ್ತಿದ್ದರು. ಆ ಹಾಡು ಅಲೆ ಅಲೆಯಾಗಿ ತೇಲಿ ಬಂದು ಬೆಟ್ಟದ ತಪ್ಪಲಿನವರೆಗೂ ಹೋಗಿ ಲೀನವಾಗುವಂತಿತ್ತು. ಒಂದು ಕಾಲದಲ್ಲಿ ಚೀನಾ ಸರಕಾರವನ್ನೇ ಉರುಳಿಸುವಂತೆ ಮಾಡಿದ್ದ ಈ ಕಾರ್ಯಕರ್ತರಿಗೆ ಇಲ್ಲೇನು ಕೆಲಸ ಎಂದು ಗುಂಪಿನೊಳಗೆ ನುಸುಳಿಕೊಂಡು ನೋಡಿದರೆ, ತೈವಾನ್, ಹಾಂಗ್‌ಕಾಂಗ್, ಚೀನಾದ ಇನ್ನಿತರ ಭಾಗಗಳಿಂದ ಆಗಮಿಸಿದ್ದ ಅವರು ಸತ್ಯ, ಕರುಣೆ, ಸಹನೆಯ ಬಗ್ಗೆ ಹೇಳುತ್ತಿದ್ದರು. ಅಲ್ಲದೆ ಮೈಸೂರಿನ ದೊಡ್ಡಕೆರೆ ಮೈದಾನದಲ್ಲಿ ದಸರಾ ಪ್ರದರ್ಶನ ನಡೆಯುವಲ್ಲಿ ತಮ್ಮ ಸಭೆ ನಡೆಯುತ್ತಿದೆಯೆಂದೂ ಅಲ್ಲಿಗೆ ಬಂದರೆ, ದೇಹ ಮತ್ತು ಮನಸ್ಸನ್ನು ದಂಡಿಸಲು ಐದು ವ್ಯಾಯಾಮಗಳನ್ನು ಕಲಿಸುವುದಾಗಿ ಹೇಳುತ್ತಿದ್ದರು. ಸುನೈನಾ ಎನ್ನುವ ಬೆಂಗಳೂರಿನ ಪಿಯುಸಿ ವಿದ್ಯಾರ್ಥಿನಿ ಈ ತಂಡದ ಮುಂಭಾಗದಲ್ಲಿ ನಿಂತು ಬ್ಯಾಂಡ್ ನುಡಿಸುವವರಿಗೆ ಸನ್ನೆಗಳನ್ನು ನೀಡುತ್ತಿದ್ದಳು. ಜೊತೆಗೆ ಫಾಲೂನ್ ದಾಫಾದ ಕಾರ್ಯಕ್ರಮಗಳ ಬಗ್ಗೆ ಕನ್ನಡದಲ್ಲಿ ವಿವರಿಸುತ್ತಿದ್ದಳು.&lt;br /&gt;&lt;br /&gt;`ಇಷ್ಟು ಚಿಕ್ಕ ವಯಸ್ಸಿನಲ್ಲಿ ನಿಮಗೇಕೆ ಈ ಆಧ್ಯಾತ್ಮದ ಗೊಡವೆ` ಎಂದು ಸುನೈನಾಳನ್ನು ಕೇಳಿದರೆ, ಆಕೆ , ದೇಹ, ಮನಸ್ಸು ಆತ್ಮದ ಕುರಿತು ಪುಟ್ಟದೊಂದು ಪ್ರವಚನ ಕೊಟ್ಟು ನಿಮ್ಮಂತ ಯುವಕರು ದೇಹವನ್ನೂ, ಮನಸ್ಸನ್ನೂ ಶುದ್ಧೀಕರಿಸಲು ದೊಡ್ಡಕೆರೆ ಮೈದಾನಕ್ಕೆ ಬರಬೇಕೆಂದಳು. ಜೊತೆಗೆ ಫಾಲೂನ್ ದಾಫಾದ ಕುರಿತು ಒಂದಿಷ್ಟು ಪಾಂಪ್ಲೆಟ್ ಕೊಟ್ಟು ಓದಿಕೊಳ್ಳುವಂತೆ ಹೇಳಿದಳು. ನಾನು ಅಲ್ಲೇ ಪಕ್ಕದಲ್ಲೇ ನಿಂತಿದ್ದ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಒಬ್ಬರಿಗೆ ಇವೆರಲ್ಲಾ ಯಾರು ಎಂದು ಏನೂ ಗೊತ್ತಾಗವನಂತೆ ಕೇಳಿದರೆ, ಅವರು `ನೋಡು ಮಗು, ಇವರು ಟಿಬೆಟನ್ನರು, ಚೀನಾದವರು, ಧ್ಯಾನ ಕಲಿಸಲು ಮೈಸೂರಿಗೆ ಬಂದಿದ್ದಾರೆ, ಪಾಂಪ್ಲೆಟ್ ಕೊಟ್ಟಿದ್ದಾರಲ್ಲಾ ಓದಿಕೋ` ಎಂದು ನನ್ನನ್ನು ಓಡಿಸಿದರು.&lt;br /&gt;&lt;br /&gt;ನನಗೆ ಎಲ್ಲಿ ಹೋದರು ಇಂತಹ ಒಳ್ಳೆಯ ಜನರೇ ಸಿಗುತ್ತಾರಲ್ಲಾ ಎಂದುಕೊಳ್ಳುತ್ತಾ, ಮೈಸೂರಿನ ರಸ್ತೆಗಳನ್ನು ಅಡ್ಡಾದಿಡ್ಡಿ ಸುತ್ತಿ ಆಫೀಸಿಗೆ ತಡವಾಗಿ ಬಂದು ಸಂಪಾದಕರಿಂದ ಸಣ್ಣಗೆ ಬೈಯಿಸಿಕೊಂಡು ಎರಡು ದಸರಾ ವಿಶೇಷ ಸುದ್ದಿಗಳನ್ನು ಟೈಪಿಸಿ &lt;a style="color: rgb(255, 0, 0);" href="http://www.kendasampige.com/"&gt;ಕೆಂಡಸಂಪಿಗೆ&lt;/a&gt;ಯಲ್ಲಿ ಹಾಕಿದ್ದೆ.&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-583368401905834254?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/583368401905834254/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=583368401905834254' title='12 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/583368401905834254'/><link rel='self' type='application/atom+xml' href='http://www.blogger.com/feeds/3841477221276814775/posts/default/583368401905834254'/><link rel='alternate' type='text/html' href='http://jomon-malehani.blogspot.com/2008/10/blog-post_15.html' title='ಮುಗಿದು ಹೋದ ಮೈಸೂರು ದಸರಾ'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_A5Tc7GvymLQ/SPXIsqBrpCI/AAAAAAAAAKU/wA9Z4SP-V0s/s72-c/DSC02715.JPG' height='72' width='72'/><thr:total>12</thr:total></entry><entry><id>tag:blogger.com,1999:blog-3841477221276814775.post-5046667229858694007</id><published>2008-09-22T06:57:00.000-07:00</published><updated>2008-09-24T00:57:47.719-07:00</updated><title type='text'>ಸ್ವರ್ಗಕ್ಕೆ ದಾರಿ ಯಾವುದಯ್ಯಾ?</title><content type='html'>&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_A5Tc7GvymLQ/SNekm8PH7EI/AAAAAAAAAKE/tVku3ZasN38/s1600-h/29201139_7c21c49f20.jpg"&gt;&lt;img style="margin: 0px auto 10px; display: block; text-align: center; cursor: pointer;" src="http://4.bp.blogspot.com/_A5Tc7GvymLQ/SNekm8PH7EI/AAAAAAAAAKE/tVku3ZasN38/s320/29201139_7c21c49f20.jpg" alt="" id="BLOGGER_PHOTO_ID_5248844879635147842" border="0" /&gt;&lt;/a&gt;&lt;br /&gt;ಪ್ರತಿ ಭಾನುವಾರ ಊರಿನಿಂದ ಅಮ್ಮ ಫೋನ್ ಮಾಡಿ, ಈವತ್ತು ನೀನು ಚರ್ಚಿಗೆ ಹೋಗಿದ್ದೀಯಾ ಎಂದು ಕೇಳುತ್ತಾಳೆ. ಅಮ್ಮ ಫೋನ್ ಮಾಡಿದ್ದು ಬೆಳಿಗ್ಗೆ ಆದರೆ ನಾನು ಸಂಜೆಯ ಪೂಜೆಗೆ ಹೋಗುತ್ತೇನೆಂದೂ, ಸಂಜೆ ಆದರೆ ಬೆಳಗ್ಗಿನ ಪೂಜೆಗೆ ಹೋಗಿ ಬಂದಿರುವೆನೆಂದೂ ಸುಳ್ಳು ಹೇಳುತ್ತೇನೆ. ಭಾನುವಾರ ಕೂಡ ಚರ್ಚಿಗೆ ಹೋಗದವನು ನಿಜವಾದ ಕಥೋಲಿಕ್ ಕ್ರಿಶ್ಚಿಯನ್ನನೇ ಅಲ್ಲ ಎನ್ನುವುದು ಅಮ್ಮನ ನಂಬಿಕೆ. ಅಸಲಿಗೆ ನಾನು ಚರ್ಚಿಗೆ ಹೋಗಿ ಒಂದು ವರ್ಷವಾಯಿತು. ಆದರೆ ಅಮ್ಮನನ್ನು ಖುಷಿ ಪಡಿಸಲು ಇಂತಹ ಚಿಕ್ಕ ಚಿಕ್ಕ ಸುಳ್ಳುಗಳನ್ನು ಹೇಳುತ್ತಿರುತ್ತೇನೆ. "ಅಮ್ಮ ಭಾನುವಾರ ಚರ್ಚಿಗೆ ಸಿಕ್ಕಾಪಟ್ಟೆ ಜನ ಬಂದಿರುತ್ತಾರೆ, ಆವತ್ತು ದೇವರು ಕೂಡ ಫುಲ್ ಬ್ಯುಸಿ ಇರ್ತಾನೆ, ಬಂದಿರುವ ಅರ್ಜಿಗಳನ್ನೆಲ್ಲಾ ಸ್ಥಳದಲ್ಲೇ ಪರಿಶೀಲಿಸಿ ಪರಿಹಾರ ಸೂಚಿಸಲು ಅವರೇನು ಮುಖ್ಯಮಂತ್ರಿ ಯಡಿಯೂರಪ್ಪನವರಾ?" ಅಂತೆಲ್ಲಾ ತಮಾಷೆ ಮಾಡುತ್ತಿರುತ್ತೇನೆ. ಆದರೆ ಅಮ್ಮ ಮಾತ್ರ ಗಂಭೀರವಾಗಿಯೇ, " ದೇವರ ಹತ್ತಿರ ನಿನ್ನ ಆಟ ಬೇಡ, ಈಗ ನೀನು ಏನಾಗಿದ್ದಿಯೋ ಅದೆಲ್ಲಾ ಆತನಿಂದಲೇ ಆಗಿರುವುದು, ಎಂದೆಲ್ಲಾ ಹೇಳಿ ನನ್ನನ್ನು ಅಧೈರ್ಯಗೊಳಿಸಿ, ದೇವರಿಗೆ ವಿಧೇಯನಾಗಿರುವಂತೆ ಹೇಳುತ್ತಾಳೆ. ನನಗೆ ನಗು ಬರುತ್ತದೆ.&lt;br /&gt;&lt;br /&gt;ಪ್ರತಿ ಭಾನುವಾರ ಅಮ್ಮ ಫೋನು ಮಾಡುವುದು, ನಾನು ಚರ್ಚಿಗೆ ಹೋಗದೇ ಇರುವುದು, ಸುಳ್ಳು ಹೇಳುವುದು ನಡದೇ ಇದೆ. (ಮುಂದೆಯೂ ಕೂಡ ನಡೆಯಲಿದೆ) ಹೀಗಿರುವಾಗಲೇ ಮೊನ್ನೆ ರಾಜ್ಯಾದ್ಯಂತ ಮತಾಂತರ ಪ್ರಕರಣ ನಡೆಯಿತಲ್ಲ. ನನ್ನ ಪ್ರಾಣ ಸ್ನೇಹಿತರೆಲ್ಲಾ ಫೋನು ಮಾಡಿ " ಲೆ, ಚರ್ಚಿಗೆ ಹೋಗಬೇಡ, ಹೋದರೆ, ನಿನ್ನನ್ನೂ ಹಿಡಿದು ಬಡಿದು ಕಳುಹಿಸುತ್ತಾರೆ ಅಂದಿದ್ದರು. ನಂತರ ಅವರೇ ನೆನಪು ಮಾಡಿಕೊಂಡು, ನೀನು ಚರ್ಚಿಗೆ ಹೋದರೆ ಚರ್ಚಿನವರೇ ನಿನ್ನನ್ನು ಒಳಗೆ ಕರೆದುಕೊಳ್ಳುವುದಿಲ್ಲ, ಆದ್ದರಿಂದ ನಿನಗೇನೂ ಆಗುವುದಿಲ್ಲ ಎಂದು ಸಮಾಧಾನ ಕೂಡ ಮಾಡಿದ್ದರು. ಮತಾಂತರ ಪ್ರಕರಣಗಳು ನಡೆದಾಗ ನನಗೂ ತುಂಬಾ ಬೇಜಾರಾಗುತ್ತದೆ. ಪರಿಚಯದವರೆಲ್ಲಾ ಏನಪ್ಪಾ ನಿಮ್ಮ ಮಂದಿ ಎಲ್ಲಾ ಕನ್ವರ್ಟ್ ಮಾಡ್ತಾರಂತಲ್ಲ ಅಂತ ಮುಖಕ್ಕೆ ಹೊಡೆದಂತೆ ಕೇಳುತ್ತಾರೆ. ಅವರಿಗೆ ಸತ್ಯಾಸತ್ಯತೆಯನ್ನು ವಿವರಿಸುವ ಹೊತ್ತಿಗೆ ಸಾಕು ಬೇಕಾಗುತ್ತದೆ. ಯಾರೋ ಮಾಡುವ ಕೆಲಸದಿಂದಾಗಿ ನಾನೂ ತಲೆ ತಗ್ಗಿಸುತ್ತೇನೆ. ಈ ಮತ, ಧರ್ಮಗಳನ್ನೆಲ್ಲಾ ತಗೆದುಕೊಂಡು ಹೋಗಿ ಸುಟ್ಟು ಬಿಡಬೇಕೆನ್ನಿಸುತ್ತದೆ.  ನಾವೊಂದಿಷ್ಟು ಜನ ಸ್ನೇಹಿತರು ನಮ್ಮ ಜಾತಿ, ಮತ, ಧರ್ಮ ಎಲ್ಲವನ್ನೂ ಬಿಟ್ಟು ನಮ್ಮ ನಮ್ಮ ಧರ್ಮಗಳಿಗೆ ಭಾರವಾಗಿ ಬದುಕುತ್ತಿದ್ದೇವೆ. ನಮ್ಮ ಕಣ್ಣಿಗೆ ಅಲ್ಲಾನೂ, ಈಶ್ವರನೂ. ಯೇಸುವೂ ಎಲ್ಲರೂ ಒಂದೇ ಥರ ಕಾಣುತ್ತಾರೆ. ಚಿಕ್ಕವನಿದ್ದಾಗ ನಾನೂ ಕೂಡ ಈ ದೇವರಿಗೆ ದೊಡ್ಡ ಶಕ್ತಿ ಇರುತ್ತದೆ ಎಂದುಕೊಂಡಿದ್ದೆ. ಆದರೆ ಈಗ ಮನುಷ್ಯರ ಅಜ್ಞಾನವನ್ನೂ, ಮತಾಂಧತೆಯನ್ನೂ ಸಹಿಸಿಕೊಂಡಿರುವ ದೇವರುಗಳಿಗೇ ಇಲ್ಲ ಎನಿಸುತ್ತದೆ.&lt;br /&gt;&lt;br /&gt;ವಿಷಯ ಅದಲ್ಲ. ನಮ್ಮ ಕಥೋಲಿಕ್ ಕ್ರಿಶ್ಚಿಯನ್ನರಲ್ಲಿ ಮದುವೆ ಆಗಬೇಕಾದರೆ ನಾವಿರುವ ಊರಿನ ಚರ್ಚಿನ ಪಾದ್ರಿ, ಈತ ಪ್ರತಿ ಭಾನುವಾರ ಚರ್ಚಿಗೆ ಬಂದಿದ್ದಾನೆ ಎನ್ನುವ ಧೃಢೀಕರಣ ಪತ್ರವೊಂದನ್ನು ನೀಡಬೇಕು. ಇಲ್ಲದಿದ್ದರೆ ಮದುವೆ ಇಲ್ಲ. ನಾನು ಈಗ ಮೈಸೂರಿನಲ್ಲಿ ಚರ್ಚಿಗೆ ಹೋಗದೆ ಆರಾಮಾಗಿ ತಿರುಗಾಡಿಕೊಂಡಿದ್ದೇನೆ. ಆದರೆ ಮುಂದೊಂದು ದಿನ ನಾನು ಮದುವೆಯಾಗುವಾಗ ಇಲ್ಲಿನ ಚರ್ಚಿನ ಪಾದ್ರಿಯ ಪತ್ರವನ್ನು ನಾನೂ ನಮ್ಮೂರ ಪಾದ್ರಿಗೆ ಕೊಡಬೇಕು. ಒಂದು ದಿನವೂ ಚರ್ಚಿಗೆ ಹೋಗದಿರುವ ನನಗೆ ಪತ್ರವಂತೂ ಕೊಡುವುದಿಲ್ಲ. ಅಜನ್ಮ ಬ್ರಹ್ಮಚಾರಿಯಾಗಿ ಕಾಲ ಕಳೆಯುವುದು ಸ್ವಲ್ಪ ಕಷ್ಟದ ಕೆಲಸವಾದ್ದರಿಂದ ಈ ಪತ್ರವನ್ನು ಗಿಟ್ಟಿಸಲು ಯಾವುದಾದರೂ ಕುಟಿಲ ಮಾರ್ಗಗಳಿವೆಯಾ ಅಂತ ನಾನು ನನ್ನ ಪತ್ರಕರ್ತ ಬುದ್ದಿ ಉಪಯೋಗಿಸಿ ಚಿಂತಿಸುತ್ತಿರುತ್ತೇನೆ.&lt;br /&gt;&lt;br /&gt;ಮೊನ್ನೆ ಊರಿಗೆ ಹೋದಾಗ ಟ್ರಾಫಿಕ್ ಪೊಲೀಸ್ ಕೈಗೆ ಸಿಕ್ಕಿ ಬಿದ್ದ ಲೈಸೆನ್ಸ್ ಇಲ್ಲದ ಬೈಕ್ ಸವಾರನಂತೆ ನಾನೂ ನಮ್ಮೂರ ಪಾದ್ರಿಯ ಕೈಗೆ ಸಿಕ್ಕಿಹಾಕಿಕೊಂಡೆ. ಮೈಸೂರಿನಲ್ಲಿ ಯಾವ ಚರ್ಚಿಗೆ ಹೋಗುತ್ತೀಯಾ ಎಂದರು. ನಾನು ಸಂತ ಫಿಲೋಮಿನಾ ಚರ್ಚಿಗೆ ಅಂದೆ! ಅಲ್ಲಿನ ಫಾದರನ್ನು ಪರಿಚಯ ಮಾಡಿಕೊಂಡೆಯಾ ಅಂದರು. ಇಲ್ಲ ಎಂದೆ. ಹಾಗೆಲ್ಲಾ ಆಗುವುದಿಲ್ಲ, ಅವರೇ ನಿನಗೆ ಮುಂದೆ ಪತ್ರ ಕೊಡಬೇಕಾದವರು, ಇಲ್ಲದಿದ್ದರೆ ನಾನು ನಿನ್ನ ಮದುವೆ ಮಾಡಿಸುವುದಿಲ್ಲ ಎಂದರು. ಒಳ್ಳೆಯದೇ ಆಯಿತು ಬಿಡಿ, ನಾನು ರಿಜಿಸ್ಟೆಡ್ ಮದುವೆ ಆಗುತ್ತೇನೆ ಎಂದು ಮನಸ್ಸಿನಲ್ಲಿಯೇ ಅಂದುಕೊಂಡೆ. ಬಹಳ ವರ್ಷಗಳ ಹಿಂದೆ, ನನ್ನ ನಾಮಕರಣ ಶಾಸ್ತ್ರ ಮಾಡಲು ನಮ್ಮಪ್ಪ ನನ್ನನ್ನು ಚರ್ಚಿಗೆ ಕರೆದುಕೊಂಡು ಹೋದಾಗ, ಇದೇ ಫಾದರ್ ಚರ್ಚಿಗೆ ತೆರಿಗೆ ಕಟ್ಟುವುದು ಬಾಕಿ ಉಳಿಸಿದ್ದಕ್ಕೆ ನಿನ್ನ ಮಗನ ನಾಮಕರಣ ಮಾಡಲು ಆಗುವುದಿಲ್ಲ ಅಂದಿದ್ದರಂತೆ. ನಮ್ಮಪ್ಪನಿಗೆ ತಲೆಕೆಟ್ಟು ಹೋಗಿ, " ಹೋಗ್ರೀ ಫಾದರ್ ನೀವು ಮಾಡದೇ ಇದ್ದರೆ ಅಷ್ಟೇ ಹೋಯಿತು, ಇವನನ್ನು ಮಸೀದಿಗೆ ಕರೆದುಕೊಂಡು ಹೋಗಿ ಮುಂಜಿ ಮಾಡಿಸಿ ಸುಲೈಮಾನ್ ಎಂದು ಹೆಸರಿಡುತ್ತೇನೆ" ಎಂದಿದ್ದರು. ಆದರೆ ಅಮ್ಮನ ಮಧ್ಯ ಪ್ರವೇಶದಿಂದ ನಾನು ಸುಲೈಮಾನ್ ಆಗುವುದು ತಪ್ಪಿ ಜೋಮನ್ ವರ್ಗೀಸ್ ಆಗಿಯೇ ಉಳಿದುಕೊಂಡೆ&lt;br /&gt;&lt;br /&gt;ಇದನ್ನೆಲ್ಲಾ ನೆನಪಿಸಿಕೊಂಡಾಗ ಈಗ ನನಗೆ ನಗು ಬರುತ್ತಿದೆ. ಒಬ್ಬ ಕಥೋಲಿಕ್ ಕ್ರಿಶ್ಚಿಯನ್ನನಾದ ನಾನು, ನರಕಕ್ಕೆ ಹೋಗುವ ಯಾವುದೇ ಭಯವಿಲ್ಲದೆ ಈ ರೀತಿ ದೇವರಿಗೆ ಅವಿಧೇಯನಾಗಿ ನಡೆಯುತ್ತಿದ್ದೇನಲ್ಲಾ  ಎಂದೆನಿಸುತ್ತದೆ. ಒಮ್ಮೊಮ್ಮೆ ದೇವರು ನನ್ನ ಸುಳ್ಳನ್ನೆಲ್ಲಾ ಮನ್ನಿಸಿ ಸ್ವರ್ಗಕ್ಕೆ ಕರೆದುಕೊಂಡರೂ ಕರೆದುಕೊಳ್ಳಬಹುದು ಎನ್ನುವ ಆಸೆ ಮೂಡುತ್ತದೆ. ಹೀಗೆ ಇದನ್ನು ಬರೆಯುವಾಗಲೇ ಬೈಬಲ್ಲಿನ ಹಳೆಯ ಒಡಂಬಡಿಕೆಯಲ್ಲಿರುವ ಜ್ಞಾನೋಕ್ತಿಯೊಂದು ನೆನಪಾಯಿತು.&lt;br /&gt;&lt;br /&gt;ಕಂದಾ ನನ್ನ ಮಾತುಗಳನ್ನು ಕೇಳು,&lt;br /&gt;ನಿನ್ನ ಕಿವಿಯನ್ನು ಜ್ಞಾನದ ಕಡೆಗೂ,&lt;br /&gt;ಹೃದಯವನ್ನು ವಿವೇಕದ ಕಡೆಗೂ ತಿರುಗಿಸು&lt;br /&gt;ಬುದ್ದಿಗಾಗಿ ಮೊರೆಯಿಡು,&lt;br /&gt;ವಿವೇಕಕ್ಕಾಗಿ ಕೂಗಿಕೊಂಡು&lt;br /&gt;ಅದನ್ನು ಬೆಳ್ಳಿಯಂತೆಯೂ, ನಿಕ್ಷೇಪದಂತೆಯೂ ಹುಡುಕು.&lt;br /&gt;&lt;br /&gt;ಇದನ್ನು ಓದಿಕೊಂಡ ನಂತರ, ಸಂಪೂರ್ಣ ಗೊಂದಲಕ್ಕೆ ಸಿಲುಕಿ, ಸ್ವರ್ಗಕ್ಕೆ ದಾರಿ ಯಾವುದು ಎಂದು ಗೊತ್ತಾಗದೇ ಕುಳಿತಿದ್ದೇನೆ.&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-5046667229858694007?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/5046667229858694007/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=5046667229858694007' title='35 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/5046667229858694007'/><link rel='self' type='application/atom+xml' href='http://www.blogger.com/feeds/3841477221276814775/posts/default/5046667229858694007'/><link rel='alternate' type='text/html' href='http://jomon-malehani.blogspot.com/2008/09/blog-post_22.html' title='ಸ್ವರ್ಗಕ್ಕೆ ದಾರಿ ಯಾವುದಯ್ಯಾ?'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_A5Tc7GvymLQ/SNekm8PH7EI/AAAAAAAAAKE/tVku3ZasN38/s72-c/29201139_7c21c49f20.jpg' height='72' width='72'/><thr:total>35</thr:total></entry><entry><id>tag:blogger.com,1999:blog-3841477221276814775.post-5684678719847333379</id><published>2008-09-19T01:49:00.000-07:00</published><updated>2008-09-19T01:51:18.742-07:00</updated><title type='text'>ನಿನ್ನ ಪೂಜೆಗೆ ಬಂದೆ ಮಾದೇಶ್ವರ...</title><content type='html'>&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_A5Tc7GvymLQ/SNNn68V6FlI/AAAAAAAAAJ8/Pg525rInhTc/s1600-h/1443012375_e81bcf825c.jpg"&gt;&lt;img style="margin: 0px auto 10px; display: block; text-align: center; cursor: pointer;" src="http://3.bp.blogspot.com/_A5Tc7GvymLQ/SNNn68V6FlI/AAAAAAAAAJ8/Pg525rInhTc/s320/1443012375_e81bcf825c.jpg" alt="" id="BLOGGER_PHOTO_ID_5247652253144847954" border="0" /&gt;&lt;/a&gt;&lt;br /&gt;`ಶೌಚಾಲಯ ಕಟ್ಟಿಸಿ ಆರೋಗ್ಯ ವೃದ್ಧಿಸಿ` ಎನ್ನುವ ಗೋಡೆ ಬರಹಗಳೇ ಇರುವ ಈ ಊರಿನಲ್ಲಿ ನಾನು ವಾಸವಿರಲು ತೊಡಗಿ ಎಂಟು ತಿಂಗಳಾಯಿತು. `ಮಹಿಳೆಯರ ರಕ್ತಹೀನತೆ ತಡೆಯಲು ಬಳಸಿ ಶೌಚಾಲಯ` ಇತ್ಯಾದಿ ತರಹೇವಾರಿ ಬರಹಗಳಿರುವ ಓಣಿಯನ್ನು ದಾಟಿದರೆ ಅನತಿ ದೂರದಲ್ಲಿ ನನ್ನ ಬಾಡಿಗೆ ಮನೆಯಿದೆ. ಆ ಮನೆಯ ಟೇರಸ್ ಮೇಲೆ ನಿಂತು ಈ ಓಣಿಯನ್ನು ನೋಡುವಾಗ ತಮಾಷೆ ಎನಿಸುತ್ತದೆ. `ಊಟ ತಿಂಡಿಗೆ ಬೇಕು ಅಡುಗೆ ಮನೆ, ಮಲ ಮೂರ್ತ ವಿಸರ್ಜನೆಗೆ ಬೇಕು ಕಕ್ಕಸು ಮನೆ` ಇಂತಹ ಬರಹಗಳನ್ನು  ಓದಿಕೊಂಡು, ಅದನ್ನು ಬರೆದವನ ಸೃಜನಶೀಲತೆಯನ್ನು ನೆನೆದು ನಾನು ನಗುತ್ತಿರುತ್ತೇನೆ.&lt;br /&gt;&lt;br /&gt;ಮೈಸೂರಿನಿಂದ ಹುಣಸೂರು ರಸ್ತೆಯಲ್ಲಿ ಬಂದರೆ ಹಿನಕಲ್ ಎನ್ನುವ ಈ ಸೆಮಿ ಅರ್ಬನ್ ಊರು ಸಿಗುತ್ತದೆ. ಏನಿಲ್ಲವೆಂದರೂ ಈ ಊರಿನಲ್ಲಿ ಸಾಲಿಡಿದು ಹತ್ತರಿಂದ - ಹದಿನೈದು ಭೀರೇಶ್ವರ ಮಟನ್ -ಚಿಕನ್ ಸ್ಟಾಲ್‌ಗಳಿವೆ. ಬಟ್ಟೆ ಅಂಗಡಿಯ ಮುಂದೆ ಪ್ರದರ್ಶನಕ್ಕೆ ಹಾಕಿರುವ ರೆಡಿಮೇಡ್ ಉಡುಪುಗಳಂತೆ ಒಂದೊಂದು ಅಂಗಡಿಯ ಮುಂದೆಯೂ ಏಳೆಂಟು ಕುರಿಗಳನ್ನೂ, ಹತ್ತಿಪ್ಪತ್ತು ಕೋಳಿಗಳನ್ನೂ ಸದಾ ಸಮಯ ಸುಲಿದು ನೇತು ಹಾಕಿರುತ್ತಾರೆ. ಅವು ಪ್ರತಿ ಹದಿನೈದು ನಿಮಿಷಕ್ಕೆ ಬಿಕರಿಯಾಗುತ್ತಿರುತ್ತವೆ. ಒಂದೊಂದು ಅಂಗಡಿಯಲ್ಲೂ ದಿನಕ್ಕೆ ಇಪ್ಪತ್ತು ಕುರಿಗಳಂತೆ ಮಾರಾಟವಾದರೂ ಹದಿನೈದು ಅಂಗಡಿಯಿಂದ ಮುನ್ನೂರು ಕುರಿಗಳು ಒಂದು ದಿನ ಮಾಂಸವಾಗಿ ಮಾರಾಟವಾಗುತ್ತದೆ. ಅಬ್ಬಾ! ಹಿನಕಲ್ ಎನ್ನುವ ಈ ಅಂಗೈಯಗದ ಊರಿನಲ್ಲಿ ಇಷ್ಟೊಂದು ಮಾಂಸ ಹೇಗೆ ಖರ್ಚಾಗುತ್ತದೆ, ಎಂದರೆ ಇಲ್ಲಿರುವ ಮಟನ್ ಅಂಗಡಿಗಳ ಲೆಕ್ಕದಷ್ಟೇ ಕೇರಳಾಪುರದ ಮಿಲಿಟರಿ ಹೊಟೇಲ್‌ಗಳಿವೆ.&lt;br /&gt;&lt;br /&gt;ಕೇರಳಾಪುರದ ಹೊಟೇಲ್‌ಗಳು, ಮಟನ್ ಅಂಗಡಿಗಳು, ಅಷ್ಟೇ ಸಂಖ್ಯೆಯಲ್ಲಿರುವ ಬಾರ್‌ಗಳು, ಎರಡು ಮೂರು ಕ್ಲಿನಿಕ್‌ಗಳು, ನಾಲ್ಕೈದು ಮೆಡಿಕಲ್ ಸ್ಟೋರ್‌ಗಳು ಎಲ್ಲಾ ಸೇರಿಕೊಂಡು ಹಿನಕಲ್‌ಗೆ ಒಂದು ಆಕರ್ಷಕ ಮೆರಗು ಕಲ್ಪಿಸಿದೆ. ಸಂಜೆಯ ವೇಳೆಗೆ ಇಲ್ಲಿನ ಟೆಂಟಿನಲ್ಲಿ ತಮಿಳು ಸಿನೆಮಾ ನೋಡಿ ತೀರ್ಥಂಕರರು ಕನ್ನಡದಲ್ಲಿ ಬೈಯುತ್ತಿರುತ್ತಾರೆ. ಕೇರಳಾಪುರದ ಹೊಟೇಲ್‌ನಲ್ಲಿ ತಲೆಮಾಂಸ, ಬೋಟಿ, ಪರೋಟ ಎಂದೆಲ್ಲಾ ತೊದಲುತ್ತಾ ಅಲ್ಲಿನ ಸಪ್ಲೆಯರ್ ಹುಡುಗರನ್ನು ಮದ್ಯ ತರಲು ಬಾರ್‌ಗಳಿಗೆ ಅಟ್ಟುತ್ತಿರುತ್ತಾರೆ. ಮಧ್ಯೆ ಮಧ್ಯೆ ಕುತ್ತೆ ಕನ್ವರ್‌ಲಾಲ್ ಎನ್ನುವ ಬೈಗುಳ. ಇದೇನಿದು ಕುತ್ತೆ ಕನ್ವರ್ ಲಾಲ್ ಎಂದರೆ, ಇದು ಮೈಸೂರಿನ ಎಸ್‌ಎಫ್‌ಎಮ್ ಬಿತ್ತರಿಸುವ ಒಂದು ನಿಮಿಷದ ತಮಾಷೆ ಕಾರ್ಯಕ್ರಮ. ಕಾಂಡೊಂ ಕಾಮಾಕ್ಷಿಯಂತೆ ಇದೂ ನಗೆ ಉಕ್ಕಿಸುವ ಕಾರ್ಯಕ್ರಮ ಎಂದು ಎಸ್‌ಎಫ್‌ಎಂನವರು ಹೇಳುತ್ತಾರೆ. ಆದರೆ ಇದನ್ನು ಹೇಳಿದವರೇ ನಗಬೇಕೇ ಹೊರತು ಕೇಳಿದವರು ನಗುವುದಿಲ್ಲ. ಆದರೆ ಕುಡುಕರ ಬಾಯಲ್ಲಿ ಇದನ್ನು ಕೇಳುವಾಗ ನಗು ಬರುತ್ತದೆ. ಎಸ್‌ಎಫ್‌ಎಂನ ರೇಡಿಯೋ ಜಾಕಿಣಿಗಳ ಹೆಸರಿಡಿದು ಇವರು ಓ ಮೈ ಡಾರ್ಲಿಂಗ್ ಎನ್ನುತ್ತಿರುತ್ತಾರೆ.&lt;br /&gt;&lt;br /&gt;ಅರಕಲಗೂಡು ತಾಲೂಕಿನ ಕೇರಳಾಪುರ ಗ್ರಾಮದ ಬಹುತೇಕರು ಮೈಸೂರಿಗೆ ಬಂದು ಕೇರಳಾಪುರದ ಹಿಂದೂ ಮಿಲಿಟರಿ ಹೊಟೇಲ್‌ಗಳನ್ನು ನಡೆಸುತ್ತಿದ್ದಾರೆ. ಆ ಊರಿನವರು ಈ ರೀತಿ ನಗರಗಳಲ್ಲಿ ಹೊಟೇಲ್‌ಗಳನ್ನು ನಡೆಸುತ್ತಿರುವುದರಿಂದ ಆ ಹಳ್ಳಿಯ ಬಹುತೇಕ ಹುಡುಗರು ಶಾಲೆ ಬಿಟ್ಟಿದ್ದಾರೆ. ಹತ್ತಿರ ಹತ್ತಿರ ನೂರಿನ್ನೂರು ಹುಡುಗರು ಮೈಸೂರಿನ ಇಂತಹ ಹೊಟೇಲ್‌ಗಳಲ್ಲಿ ಕೆಲಸಕ್ಕಿದ್ದಾರೆ. ತಿಂಗಳಿಗೆ ಮೂರು ಸಾವಿರ ರೂಪಾಯಿ ಕೊಡ್ತಾರೆ ಸಾರ್, ದಿನಾಲೂ ಮಟನ್ ಊಟ, ಒಂದು ವರ್ಷದ ಕಾಸು ಮೊದಲೇ ಕೊಡುತ್ತಾರೆ, ಆರು ತಿಂಗಳಿಗೊಮ್ಮೆ ಊರಿಗೆ ಹೋಗೋದು ಎಂದು ಹಿನಕಲ್‌ನಲ್ಲಿ ಇಂತದೇ ಹೊಟೇಲ್ ಒಂದರಲ್ಲಿ ಎಂಟು ವರ್ಷದಿಂದ ಕೆಲಸಕ್ಕಿರುವ ಇಪ್ಪತ್ತು ವರ್ಷದ ಮಹಾದೇವ  ಹೇಳಿದ್ದ.&lt;br /&gt;&lt;br /&gt;ಮೂರನೆಯ ತರಗತಿಯ ವರೆಗೆ ಓದಿರುವ ಮಹಾದೇವ ಈಗ ನನ್ನ ಗೆಳೆಯನಾಗಿದ್ದಾನೆ. ಅವನ ದಿನಚರಿ ಕೇಳುವಾಗ ಬೇಜಾರಾಗುತ್ತದೆ. ರಾತ್ರಿ ಹನ್ನೆರಡಕ್ಕೆ ಮಲಗುವ ಈ ಹುಡುಗ ಮೂರು ಗಂಟೆಗೆ ಎದ್ದು ಕಲಸ ಪ್ರಾರಂಭಿಸುತ್ತಾನೆ. ಮೂರು ತಾಸು ಗುಬ್ಬಿ ನಿದ್ರೆ. ಈ ಕೆಲಸ ನಿನಗೆ ಬೇಜಾರಾಗಲ್ವಾ ಎಂದರೆ, ಯಾಕೆ ಬೇಜಾರಾಗಬೇಕು ಸಾರ್, ನಮ್ಮೂರಿನಲ್ಲಿ ಹುಡುಗರು ಯಾರೂ ಇಲ್ಲ, ಎಲ್ಲರೂ ಕೇರಳಾಪುರದ ಹೊಟೇಲ್‌ಗಳಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ ಎನ್ನುತ್ತಾನೆ. ಮಹಾದೇವನ ಬದುಕು, ಆತನ ಕನಸು ಎಲ್ಲವನ್ನೂ ಕೇಳುವಾಗ ಈ ಕೇರಳಾಪುರಕ್ಕೊಮ್ಮೆ ಹೋಗಿ ಬರಬೇಕು ಎನಿಸುತ್ತದೆ. ಊರಿಗೆ ಹೋಗಲು ಒಮ್ಮೆ ಆತ ಸಾಲವಾಗಿ ಪಡೆದಿದ್ದ ಐವತ್ತು ರೂಗಳಿಗೆ ಪ್ರತಿಯಾಗಿ ನನ್ನನ್ನು ಎಲ್ಲಿ ನೋಡಿದರೂ ನಮಸ್ಕಾರ ಎನ್ನುತ್ತಿರುತ್ತಾನೆ.&lt;br /&gt;&lt;br /&gt;ಈ ಹೊಟೇಲ್‌ನಿಂದ ಸ್ಪೀಕರ್ ಹರಿದು ಹೋಗುವಂತೆ ಅರಚಿಕೊಂಡು ಬರುವ ನಿನ್ನ ಪೂಜೆಗೆ ಬಂದೆ ಮಾದೇಶ್ವರ... ಎನ್ನುವ ಜಾನಪದವೂ ಅಲ್ಲ, ಕ್ಲಾಸಿಕ್ಕೂ ಅಲ್ಲದ ರಘು ದೀಕ್ಷಿತ್ ಹಾಡನ್ನು ಕೇಳಿಸಿಕೊಳ್ಳುತ್ತಾ, ನಾನು ಸುಮ್ಮನೆ ನಡೆದು ಹೋಗುತ್ತೇನೆ. ಮಹಾದೇವ ಒಳಗಿದ್ದರೆ ಕೈ ಬೀಸುತ್ತಾನೆ.&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-5684678719847333379?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/5684678719847333379/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=5684678719847333379' title='12 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/5684678719847333379'/><link rel='self' type='application/atom+xml' href='http://www.blogger.com/feeds/3841477221276814775/posts/default/5684678719847333379'/><link rel='alternate' type='text/html' href='http://jomon-malehani.blogspot.com/2008/09/blog-post.html' title='ನಿನ್ನ ಪೂಜೆಗೆ ಬಂದೆ ಮಾದೇಶ್ವರ...'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_A5Tc7GvymLQ/SNNn68V6FlI/AAAAAAAAAJ8/Pg525rInhTc/s72-c/1443012375_e81bcf825c.jpg' height='72' width='72'/><thr:total>12</thr:total></entry><entry><id>tag:blogger.com,1999:blog-3841477221276814775.post-276363020927720918</id><published>2008-07-29T01:56:00.000-07:00</published><updated>2008-07-29T02:21:13.675-07:00</updated><title type='text'>ಗೋಪಾಲಸ್ವಾಮಿ ಬೆಟ್ಟದಲ್ಲಿ ಒಂದು ಮಂಜು ಕವಿದ ಮಧ್ಯಾಹ್ನ</title><content type='html'>&lt;a onblur="try {parent.deselectBloggerImageGracefully();} catch(e) {}" href="http://bp1.blogger.com/_A5Tc7GvymLQ/SI7dg1a-D2I/AAAAAAAAAJc/XLQ9r9DQT9g/s1600-h/DSC02152.JPG"&gt;&lt;img style="margin: 0px auto 10px; display: block; text-align: center; cursor: pointer;" src="http://bp1.blogger.com/_A5Tc7GvymLQ/SI7dg1a-D2I/AAAAAAAAAJc/XLQ9r9DQT9g/s320/DSC02152.JPG" alt="" id="BLOGGER_PHOTO_ID_5228359773589475170" border="0" /&gt;&lt;/a&gt;&lt;br /&gt;&lt;div style="text-align: left;"&gt;ಈ ಜಗತ್ತಿನಲ್ಲಿ ಸ್ವರ್ಗವೇನಾದರೂ ಇದ್ದರೆ ಅದು ಇಲ್ಲಿಗೇ ಇಳಿದು ಬಂದಿದೆ ಎಂದು ನಾನು ಸುರಿಯುವ ಮಂಜಿಗೆ ಮುಖವೊಡ್ಡಿ ಸುಖಿಸುತ್ತಿದ್ದೆ. ಅರಳೆಯಂತೆ ತೇಲಿ ಬರುವ ಮೋಡಗಳು ಜೊತೆಗೆ ನಮ್ಮನ್ನೂ ಹೊತ್ತು ಸಾಗುತ್ತಿದ್ದವು. ಅಕ್ಕ ಪಕ್ಕ ಒಬ್ಬರ ಕೈಯನ್ನಿಡಿದು ಒಬ್ಬರು ನಿಂತಿದ್ದರೂ ಪರಸ್ಪರ ಮುಖ ಕಾಣದಷ್ಟು ದಟ್ಟ ಮಂಜು. ಬೀಸಿ ಬರುವ ಗಾಳಿಗೆ ಮಂಜು ಹನಿ ಹನಿಯಾಗಿ ಮುಖದ ಮೇಲೆಲ್ಲಾ ಸುರಿದು ಅಪೂರ್ವ ಅನುಭವ ನೀಡುತ್ತಿದ್ದವು. ಹಿಂದೆಲ್ಲೋ ಚಂದಮಾಮ ಕಥೆಯಲ್ಲಿ ಓದಿದ ಮೋಡದ ಕಥೆಗಳು, ಅದರ ನಡುವಿನಿಂದ ಇಳಿದು ಬರುವ ದೇವದೂತರು, ಯಾವುದೋ ಹೊಟೇಲಿನ ಗೋಡೆಯ ಮೇಲೆ ಕಂಡು, ಮನಸ್ಸಿನಲ್ಲಿ ಇಳಿದು ಹೋಗಿರುವ ಮಂಜಿನ ವಾಲ್‌ಪೋಸ್ಟರ್‌ ಇದೆಲ್ಲವನ್ನೂ ಪ್ರತ್ಯಕ್ಷ ಕಂಡಂತೆ, ಕಂಡೂ ನಂಬಲಾಗದವನಂತೆ ನಾನು ಮರಗಟ್ಟಿದ ಕೈಯನ್ನು ಮತ್ತೊಂದು ಕೈಯಿಂದ ತಿಕ್ಕಿ ತಿಕ್ಕಿ ಬಿಸಿ ಮಾಡಿಕೊಳ್ಳುತ್ತಾ ಫೋಟೋ ತೆಗೆಯುತ್ತಿದ್ದೆ.&lt;br /&gt;&lt;/div&gt;&lt;div style="text-align: left;"&gt;&lt;br /&gt;ಮೊನ್ನೆ ರಾತ್ರಿ ಹನ್ನೆರಡರ ಸುಮಾರಿಗೆ ಬೆಂಗಳೂರಿನಿಂದ ಬಂದ ತಂಡವೊಂದು, ಯಾವ ಸೂಚನೆಯೂ ಕೊಡದೆ ಮೈಸೂರಿನಲ್ಲಿ ನನ್ನನ್ನು ಗಾಡಿಯಲ್ಲಿ ಎತ್ತಿ ಹಾಕಿ ಗುಂಡ್ಲುಪೇಟೆಯಲ್ಲಿ ಇಳಿಸಿದಾಗಲೇ ನನಗೆ ನಾವು ಹೋಗುತ್ತಿರುವುದು ಗೋಪಾಲಸ್ವಾಮಿ ಬೆಟ್ಟಕ್ಕೆ ಎನ್ನುವುದು ಗೊತ್ತಾಗಿದ್ದು. ಕಸ್ತೂರಿ ಚಾನೆಲ್‌ನ ಏಳು ಜನ ಸ್ನೇಹಿತರು ಸ್ಟಿಂಜ್ ಆಪರೇಷನ್‌ಗೆ ಹೊರಟವರಂತೆ ಪಿಕ್‌ನಿಕ್‌ಗೆ ಬಂದಿದ್ದರು. ಏನ್ ಮಗ ಎಲ್ಲಿಗೆ? ಎಂದು ನಾನು ಕೇಳುವ ಮೊದಲೇ ಗಾಡಿಯಲ್ಲಿ ಹತ್ತಿಸಿಕೊಂಡು ನಂಜನಗೂಡಿನ ಬಳಿ ಇಳಿಸಿ, ಮಳೆಯಲ್ಲಿಯೇ ಹ್ಯಾಪಿ ಬರ್ತ್‌ ಡೆ ಹಾಡಿ ಗೆಳೆಯ ಪ್ರತೀಕ್‌ನ ಹುಟ್ಟು ಹಬ್ಬ ಆಚರಿಸಿದ್ದರು. ಓಹೋ ಹೀಗಾ ಸಮಾಚಾರ ಎಂದು ನಾನು ಎಲ್ಲವನ್ನೂ ಅರ್ಥಮಾಡಿಕೊಳ್ಳುವ ಹೊತ್ತಿಗೆ, `ಟೆನ್ಷನ್ ತಕೋಬೇಡಿ, ನಾಳೆ ರಾತ್ರಿ ಇದೇ ಹೊತ್ತಿಗೆ ನಿಮ್ಮನ್ನು ತಂದು ಮೈಸೂರಿನಲ್ಲಿ ಓಗೀತೀವಿ ಅಲ್ಲಿಯವರೆಗೆ ಎಂಜಾಯ್‌` ಎಂದು ಕಸ್ತೂರಿಯ BP ಗಣೇಶ್ ವಾರ್ತೆಗೆ ಚಾಲನೆ ನೀಡಿದ್ದರು.&lt;br /&gt;&lt;br /&gt;ಗುಂಡ್ಲುಪೇಟೆಯ ಫಠಾನ್ ಲಾಡ್ಜ್‌ನಲ್ಲಿ ಮಲಗಿ ಬೆಳಿಗ್ಗೆ ಆರು ಗಂಟೆಗೇ ಗೋಪಾಲ ಸ್ವಾಮಿ ಬೆಟ್ಟಕ್ಕೆ ಹೋಗುವುದೆಂದು ನಿರ್ಧರಿಸಲಾಗಿತ್ತು. ಹಾಗೇನಾದರೂ ನಾವು ಬೆಳಿಗ್ಗೆಯೇ ಹೋಗಿದ್ದರೆ ಆ ಚಳಿಯಲ್ಲಿ ಸತ್ತು ಹೋಗುತ್ತಿದ್ದೆವೋ ಏನೋ? ಆದರೆ ತಿಂಗಳ ಕೊನೆಯಲ್ಲಿ ಸರಿಯಾಗಿ ವೇತನ ಹೊರಡಿಸುವ ಕಸ್ತೂರಿ ಎಚ್‌ಆರ್ ಯೋಗಾನಂದ್ ಅವರು ತಮ್ಮ ಅತ್ತೆ ಮನೆಗೆ ಹೋಗಿದ್ದರಿಂದ ಬರುವುದು ಲೇಟಾಯಿತು, ಹಾಗಾಗಿ ನಾವು ಬೆಟ್ಟದ ತುದಿ ತಲುಪಿದಾಗ ಮಧ್ಯಾಹ್ನ ಒಂದೂವರೆಯಾಗಿತ್ತು. ಎದುರಿಗೆ ಬರುತ್ತಿದ್ದ ವಾಹನಗಳು ಲೈಟ್ ಹಾಕಿಕೊಂಡು ಇಳಿಯುತ್ತಿದ್ದವು. ಕೆಳಗೆ ಆಳ ಪ್ರತಾಪ. ಮೋಡಗಳು ಕೈಗೆಟುಕುವಂತೆ ಕಿಟಕಿಯ ಪಕ್ಕದಿಂದ ಹಾರಿ ಹೋಗುತ್ತಿದ್ದವು. ಬೆಟ್ಟದಲ್ಲಿ ಅದ್ಭುತವೆನ್ನುವ ವಾತಾವರಣ ಇತ್ತು. ಮಂಜು ಸುರಿಯುತ್ತಿತ್ತು.&lt;br /&gt;&lt;br /&gt;&lt;br /&gt;ಬೆಟ್ಟದ ತುದಿಯಿಂದ ಹಾಗೆಯೇ ಇಳಿದುಕೊಂಡು ಹೋಗಿ ಬಂಡೆಯೇರಿ ಕುಳಿತೆವು. ಮಾತಿಲ್ಲ, ಕಥೆಯಿಲ್ಲ. ಮಾತನಾಡುವುದಾದರೂ ಏನನ್ನು, ಪಕೃತಿಯ ಸೌಂದರ್ಯವನ್ನೂ, ಸಂತಸವನ್ನೂ ಹನಿ ಹನಿಯಾಗಿ ಬೊಗಸೆಯಲ್ಲಿ ತುಂಬಿಕೊಂಡಂತೆ, ಪ್ರತಿಯೊಬ್ಬರೂ ಖುಷಿಯಲ್ಲಿ ತೇಲಿಹೋಗಿದ್ದರು. ಯಾರಾದರೂ ಭಾವುಕ ಮನಸ್ಸಿನವರು ಇದ್ದರೆ ಅಲ್ಲೇ ಕುಳಿತು ಕವಿತೆಯನ್ನೋ, ಕಥೆಯನ್ನೋ ಬರೆಯುತ್ತಿದ್ದರು. ಯಾರೂ ಎದ್ದು ಬರಲು ತಯಾರಿಲ್ಲ. ಮಂಜುನಾಥ್ ಜೂಟಿ ಎಲ್ಲರ ಒತ್ತಡಕ್ಕೆ ಮಣಿದು ತಂದಿದ್ದ ಬಾಳೆ ಹಣ್ಣು ಆಗಲೇ ಮುಗಿದಿತ್ತು. ಶರತ್ ಗುಂಡ್ಲುಪೇಟೆಯ ಹತ್ತಿರದಲ್ಲೇ ಇರುವ ತನ್ನ ಮನಗೆ ಹೋಗಿ ಬರುವುದಾಗಿ ಹೇಳಿದ. ರಫೀಕ್‌ಗೆ ಆದಷ್ಟು ಬೇಗ ಮದುವೆಯಾಗಿ, ಹನಿಮೂನ್‌ಗೆ ಇಲ್ಲಿಗೆ ಬಾ ಎಂದು ಹೇಳಿದೆವು. ಗಣೇಶ್, ಪ್ರತೀಕ್, ಮಸೂದ್ ಮರವೊಂದನ್ನು ಹತ್ತಿ ಇಲ್ಲೇ ಪ್ಲಾಟ್ ಕೊಂಡರೆ ಹೇಗೆ ಅಂತೆಲ್ಲಾ ಲೆಕ್ಕಾಚಾರ ನಡೆಸುತ್ತಿದ್ದರು.&lt;br /&gt;&lt;br /&gt;ನಾನು ಇಷ್ಟೆಲ್ಲಾ ಖುಷಿಯನ್ನು ಒಟ್ಟಿಗೆ ಅನುಭವಿಸುವುದು ಹೇಗೆ ದೇವರೆ ಎಂದುಕೊಳ್ಳುತ್ತಾ, ಫೋಟೋ ತೆಗೆದಷ್ಟೂ ಸಾಕಾಗದವನಂತೆ ಸುಮ್ಮನೆ ಕ್ಲಿಕ್ಕಿಸುತ್ತಲೇ ಇದ್ದೆ. ಬೆಟ್ಟದ ತುದಿಯಲ್ಲಿದ್ದ ಗೋಪಾಲಸ್ವಾಮಿ ಚಳಿಯಲ್ಲಿ ನಡುತ್ತಿದ್ದನೋ ಏನೋ? ದೇವಸ್ಥಾನದ ಹಿಂದೆ ತೇಲಿ ಬರುವ ಬಿಳಿಯ ಮೋಡಗಳನ್ನು ನೋಡಿ, ಖುಷಿ ತಡೆಯಲಾಗದೇ ಹುಡುಗಿಯೊಬ್ಬಳು ಮನಸಾರೆ ನರ್ತಿಸುತ್ತಿದ್ದಳು. ಬೆಟ್ಟ ಇಳಿಯಲು ನನಗಂತೂ ಮನಸ್ಸು ಇರಲಿಲ್ಲ. ನಂತರ ಬಂಡೀಪುರಕ್ಕೆ ಬಂದು ಗಾಡಿಯಲ್ಲಿಯೇ ಕುಳಿತು ಸಫಾರಿ ಅನುಭವಿಸಿದರೂ ಯಾಕೋ ಗೋಪಾಲಸ್ವಾಮಿ ಬೆಟ್ಟ ಮನಸ್ಸಿನಿಂದ ಮರೆಯಾಗುತ್ತಿಲ್ಲ. ನನಗೆ ಆನೆ ನೋಡಬೇಕು ಎಂದೆಲ್ಲಾ ಹಠ ಹಿಡಿದಿದ್ದ ಕಸ್ತೂರಿ ಬಿಪಿ ಗಣೇಶ್ ಅವರಿಗೆ ಕೊನೆಗೂ ಬಂಡೀಪುರ ರಸ್ತೆಯಲ್ಲಿ ಆನೆಯ ಲದ್ದಿ ತೋರಿಸಿ ಸಮಾಧಾನ ಮಾಡಿ ಕರೆತಂದೆವು.&lt;br /&gt;&lt;br /&gt;ಹಾಗೆ ಸುಮ್ಮನೆ ನಿಮ್ಮ ಮನಸ್ಸಿಗೆ ತುಂಬಾ ಬೇಸರ ಆಗಿದೆ ಅಂತ ಅನಿಸಿದರೆ ಯಾರಿಗೂ ಹೇಳದೇ ಕೇಳದೇ ಒಮ್ಮೆ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗಿಬನ್ನಿ. ವಾಪಾಸ್ಸು ಬರುವಾಗ ನಿಮ್ಮ ಮನಸ್ಸು ಮಗುವಿನಂತಾಗಿರದಿದ್ದರೆ ನನ್ನ ಕೇಳಿ.&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;/div&gt;&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-276363020927720918?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/276363020927720918/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=276363020927720918' title='19 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/276363020927720918'/><link rel='self' type='application/atom+xml' href='http://www.blogger.com/feeds/3841477221276814775/posts/default/276363020927720918'/><link rel='alternate' type='text/html' href='http://jomon-malehani.blogspot.com/2008/07/blog-post_29.html' title='ಗೋಪಾಲಸ್ವಾಮಿ ಬೆಟ್ಟದಲ್ಲಿ ಒಂದು ಮಂಜು ಕವಿದ ಮಧ್ಯಾಹ್ನ'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><media:thumbnail xmlns:media='http://search.yahoo.com/mrss/' url='http://bp1.blogger.com/_A5Tc7GvymLQ/SI7dg1a-D2I/AAAAAAAAAJc/XLQ9r9DQT9g/s72-c/DSC02152.JPG' height='72' width='72'/><thr:total>19</thr:total></entry><entry><id>tag:blogger.com,1999:blog-3841477221276814775.post-5122857213212435151</id><published>2008-07-07T05:39:00.000-07:00</published><updated>2008-07-07T05:46:18.107-07:00</updated><title type='text'>ಮಳೆ ನಿಂತು ಹೋದ ಮೇಲೆ ಒಂದು ಸೀರಿಯಸ್ ಬರಹ</title><content type='html'>ಮೊನ್ನೆ ಭೇಟಿಯಾದ ಸ್ನೇಹಿತರೊಬ್ಬರು ನೀನು ಬ್ಲಾಗಿನಲ್ಲಿ ಇನ್ನು ಮಳೆ, ಭಾವುಕತೆ ಅಂತೆಲ್ಲಾ ಬಿಟ್ಟು ಸ್ವಲ್ಪ ಸೀರಿಯಸ್ ಆಗಿ ಬೇರೆ ಏನಾದರೂ ಬರಿ ಅಂತ ಹೇಳಿದ್ದರು. ಜೊತೆಗೆ `ಮಳೆ ನಿಂತು ಹೋದ ಮೇಲೆ` ಅಂತಿರುವ ನಿನ್ನ ಕಾಲರ್ ಟೂನ್ ಕೂಡ ಚೇಂಜ್ ಮಾಡಿಸು ಎಂದು ಉಪದೇಶ ನೀಡಿದ್ದರು. ಬ್ಲಾಗು - ಮಳೆ - ಕಾಲರ್ ಟೂನ್ ಇದು ಮೂರಕ್ಕೂ ಇರುವ ಸಂಬಂಧವನ್ನು ಹುಡುಕುತ್ತಾ ನಾನು ಹೊಸದಾಗಿ ಏನು ಬರೆಯಲಿ ಎಂದು ಸ್ವಲ್ಪ ಸೀರಿಯಸ್ ಆಗಿಯೇ ವಿಚಾರ ಮಾಡಿದ್ದೆ. ಹಾಗಿರುವಾಗಲೇ ಮತ್ತೊಬ್ಬ ಬ್ಲಾಗಿಗರು ತುಂಬಾ ಖುಷಿಯಿಂದ ಧಾರವಾಡದಿಂದ ಒಂದು ಹುಡುಗಿ ಬ್ಲಾಗಿನಲ್ಲಿ ಬರೆಯುತ್ತಾಳೆ, ನೀನು ನೋಡಬೇಕು ಜೋಮನ್, ಅವಳು ಬೆಳ್ಳಂಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಲೇಖನ ಬರೆಯುತ್ತಾಳೆ ಎಂದಿದ್ದರು.&lt;br /&gt;&lt;br /&gt;ಹೌದಾ? ಹಾಗಾದರೆ ನಿಜವಾಗಿಯೂ ಆಕೆಗೇನಾದರೂ ತೊಂದರೆ ಇರಬೇಕು ಎಂದು ತಮಾಷೆ ಮಾಡಿದ್ದೆ. ನಾಲ್ಕು ಗಂಟೆಗೆ ಎದ್ದು ಬಿಸಿ ನೀರಿನಲ್ಲಿ ಸ್ನಾನ ಮಾಡಿ, ದೇವರನ್ನು  ಮನಸ್ಸಿನಲ್ಲಿ ಧ್ಯಾನಿಸಿ,  ಲ್ಯಾಪ್ ಟಾಪ್ ತೆಗೆದು, ಅದರಲ್ಲಿರುವ ಗಣಪತಿಯ ಫೋಟೋಗೆ ನಮಿಸಿ, ಕಿಟಕಿಯ ಪಕ್ಕದಲ್ಲಿ ಕುಳಿತು, ಬೀಸಿ ಬರುವ ತಂಗಾಳಿಗೆ ಮುಂಗುರುಳು ಸರಿಸುತ್ತಾ, ಮೃದು ಬೆರಳುಗಳ ತುದಿಯಿಂದ ಆಕೆ ಕಿ ಬೋರ್ಡ್ ಶಬ್ದ ಕೂಡ ಮಾಡದೆ ಒಂದೊಂದೇ ಅಕ್ಷರ ಬರೆಯುತ್ತಿದ್ದರೆ.. ನಾನಿಲ್ಲಿ ಮೈಮೇಲೆ ಆನೆ ಹತ್ತಿ ಇಳಿದರೂ ಎಚ್ಚರವಾಗದಷ್ಟು ಸುಖವಾಗಿ ಮಲಗಿ ನಿದ್ರಿಸುತ್ತಿದ್ದೇನಲ್ಲಾ ಅಂತ ನಗು ಬಂದಿತ್ತು. ನಿದ್ರೆಯನ್ನು ಬಲಿಗೊಟ್ಟು ಮಾಡುವ ಯಾವುದೇ ಕೆಲಸಗಳು ಒಳ್ಳೆಯದಲ್ಲ ಹುಡುಗಿ ಎಂದು ಆಕೆಗೆ ಹೇಳಬೇಕೆನಿಸಿತು.&lt;br /&gt;&lt;br /&gt;ಸ್ನೇಹಿತರ ಒತ್ತಾಯವೂ ಅಥವಾ ಹಾಗೆ ಸುಮ್ಮನೆಯೋ ಅಂತೂ ಇಂತೂ ಈ ಬಾರಿ ಸ್ವಲ್ಪ ಸೀರಿಯಸ್ ಆದ ವಿಷಯವೊಂದನ್ನು ಬರೆಯುತ್ತಿದ್ದೇನೆ. ಏನೇ ಬರೆದರೂ ಓದುಗರು ಅಷ್ಟೊಂದು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ ಎಂಬ ಭರವಸೆ ಇದೆ.&lt;br /&gt;&lt;br /&gt;ನಿಮಗೆ ಅಪ್ಘಾನಿಸ್ತಾನ ಗೊತ್ತಲ್ಲ. ಅಲ್ಲಿನ ಒಬ್ಬ ಬ್ಲಾಗರ್ ಕುರಿತು ಈ ಕಥೆ. ಈ ಬ್ಲಾಗರ್ ಹೆಸರು ನಸೀಮ್ ಫೆಕ್ರತ್. ಪೆಕ್ರತ್‌ಗೆ ಈಗ ಇಪ್ಪತ್ತೈದು ವರ್ಷ. ಸ್ವಯಂ ತರಬೇತಿ ಪಡೆದ ಪತ್ರಕರ್ತ. ಅಪ್ಘನ್ ಮಾಧ್ಯಮಗಳು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿರುವಾಗ ಆತ ತನ್ನ ದೇಶದ ನಿಜವಾದ ಅವಸ್ಥೆಯನ್ನು ಬ್ಲಾಗಿನ ಮೂಲಕ ಜಗತ್ತಿಗೆ ತೆರೆದಿಡುತ್ತಿದ್ದಾನೆ. ನಮ್ಮ ನಿಮ್ಮ ಹಾಗೆ ಆತನದು ಸಾಮಾನ್ಯ ಬ್ಲಾಗ್ ಅಲ್ಲ. ಅದೊಂದು ಪ್ರತಿಭಟನೆಯ ಅಸ್ತ್ರ. ಒಂದು ಪತ್ರಿಕೆ, ಒಂದು ಚಾನೆಲ್ ಮಾಡದ ಕೆಲಸವನ್ನು ಪೆಕ್ರತ್ ಮಾಡುತ್ತಿದ್ದಾನೆ. ವಿದ್ಯುತ್ ಇಲ್ಲದ ರಾತ್ರಿಗಳಲ್ಲಿ ತನ್ನ ಕಾರಿನ ಬ್ಯಾಟರಿಯಿಂದ ಲಾಪ್‌ಟಾಪ್‌ಗೆ ವಿದ್ಯುತ್ ಪೂರೈಸಿಕೊಂಡು ಆತ ಪ್ರಖರ ಬರಹಗಳನ್ನು ಬರೆಯುತ್ತಿದ್ದಾನೆ. ಆತನ ಬ್ಲಾಗ್ ಬರಹಗಳು ಎಷ್ಟೊಂದು ಪರಿಣಾಮಕಾರಿಯಾಗಿವೆಯೆಂದರೆ ಅದು ಅಲ್ಲಿನ ಅಧ್ಯಕ್ಷ ಹಮೀದ್ ಕರ್ಜಾಯಿಗೂ, ಮೂಲಭೂತವಾದಿ ಮುಲ್ಲಾಗಳಿಗೂ ಬಿಸಿ ಮುಟ್ಟಿಸಿದೆ. ಇಷ್ಟೇ ಆಗಿದ್ದರೆ ಅಲ್ಲಿನವರು ಸುಮ್ಮನಿರುತ್ತಿದ್ದರು, ಆದರೆ ಪೆಕ್ರತ್ &lt;a style="color: rgb(255, 0, 0);" href="http://www.afghanpenlog-en.blogspot.com/"&gt;ಅಫ್ಘನ್ ಬ್ಲಾಗ್ ರೈಟರ್ಸ್ ಅಸೋಸಿಯೇಷನ್&lt;/a&gt; ಪ್ರಾರಂಭಿಸಿದ್ದಾನೆ. ದಕ್ಷಿಣ ಕಾಬೂಲ್‌ನಲ್ಲಿ ಒಂದು ಕಚೇರಿ ಸ್ಥಾಪಿಸಿ ಅಲ್ಲಿ ಯುವಕ ಯುವತಿಯರಿಗೆ ಬ್ಲಾಗ್ ಬರಹಗಳನ್ನು ಹೇಗೆ ಬರೆಯಬೇಕೆಂದು ತರಬೇತಿ ನೀಡುತ್ತಿದ್ದಾನೆ. ಪೆಕ್ರತ್‌ನ ಕುರಿತು ಸ್ಲೇಟ್.ಕಾಂನಲ್ಲಿ &lt;a style="color: rgb(255, 0, 0);" href="http://www.slate.com/id/2194806/"&gt;Meet Afghanistan's Most Fearless Blogger &lt;/a&gt;ಅಂತ ಒಂದು ಸುದ್ದಿ ಪ್ರಕಟವಾಗಿತ್ತು.&lt;br /&gt;&lt;br /&gt;ಅಫ್ಘಾನಿಸ್ತಾನವನ್ನೂ, ಪೆಕ್ರತ್‌ನನ್ನು ಇಲ್ಲಿಗೆ ಬಿಡೋಣ. ಒಂದು ಬ್ಲಾಗ್‌ನಿಂದ ಏನೆಲ್ಲಾ ಕೆಲಸ ಮಾಡಬಹುದು ಎನ್ನುವುದಕ್ಕೆ ಇದೊಂದು ಸಣ್ಣ ಉದಾಹರಣೆಯಷ್ಟೇ. ಇದೀಗ ಅಂತರ್ಜಾಲದಲ್ಲಿ ಕನ್ನಡ ತೀವ್ರಗಾಗಿ ಬೆಳೆಯುತ್ತಿರುವುದು, ದಿನವೂ ಮೂರರಿಂದ ನಾಲ್ಕು ಹೊಸ ಕನ್ನಡ ಬ್ಲಾಗುಗಳು ಹುಟ್ಟಿಕೊಳ್ಳುತ್ತಿರುವುದು, ಜನರು ಹೊಸ ಹೊಸ ವಿಷಯಗಳ ಕುರಿತು ಚರ್ಚೆ ನಡೆಸುತ್ತಿರುವುದು, ಪ್ರತಿಕ್ರಿಯಿಸಿಕೊಳ್ಳುತ್ತಿರುವುದು ಎಲ್ಲಾ ಎಷ್ಟು ಒಳ್ಳೆಯ ಬೆಳವಣಿಗೆ ಎಂದೆನಿಸುತ್ತಿದೆ. ಅಂದಹಾಗೆ ಮತ್ತೊಂದು ಸುದ್ದಿಯೂ ಇದೆ ಕೆಳೆದೆರಡು ವರ್ಷಗಳ ಹಿಂದಿನವರೆಗೆ ಒಟ್ಟು ಬಂಧಿತರಾಗಿರುವ ಬ್ಲಾಗಿರರ ಸಂಖ್ಯೆ ಅರವತ್ಮೂರು. ಹೆಚ್ಚಿನ ಸಂಖ್ಯೆಯ ಬ್ಲಾಗಿಗರು ಬಂಧನಕ್ಕೊಳಗಾಗಿರುವುದು ಚೀನಾ, ಈಜಿಪ್ಟ್, ಮತ್ತು ಇರಾನ್‌ನಲ್ಲಿ. ಇವರಲ್ಲಿ ಹೆಚ್ಚಿನವರು ಸರಕಾರದ ಭ್ರಷ್ಟಾಚಾರದ ವಿರುದ್ಧ ಬರೆದವರು. ಸಾರ್ವಜನಿಕ ನೀತಿಗಳ ವೈಫಲ್ಯವನ್ನು ಖಂಡಿಸಿದವರು. ಮಾನವಹಕ್ಕುಗಳ ಉಲ್ಲಂಘನೆಯ ವಿರುದ್ಧ ಅಕ್ಷರ ಸಮರ ನಡೆಸಿದವರು.&lt;br /&gt;&lt;br /&gt;ಬಂಧನಕ್ಕೊಳಗಾಗುವಂತೆ ಬರೆಯುವ ಬ್ಲಾಗಿಗರು ಯಾರೂ ನಮ್ಮ ಕನ್ನಡದಲ್ಲಿ ಇಲ್ಲ ಎನ್ನುವುದೇ ಸದ್ಯದ ಸಮಾಧಾನ. ಇಲ್ಲದಿದ್ದರೆ ಅದಕ್ಕೊಂದು ಕಾನೂನು ರಚಿಸುವುದು ನಮ್ಮ ಸರಕಾರಕ್ಕೆ ದೊಡ್ಡ ತಲೆನೋವಾಗುತ್ತಿತ್ತು. ಬ್ಲಾಗಿನಲ್ಲಿ ಬರೆದುದ್ದಕ್ಕೆ ಇದುವರೆಗೆ ನೀಡಲಾಗಿರುವ ದೊಡ್ಡ ಶಿಕ್ಷೆಯೆಂದರೆ ಎಂಟು ವರ್ಷಗಳ ಜೈಲು ವಾಸ. ಇದನ್ನೆಲ್ಲಾ ಓದಿದ ಮೇಲೆ ನಿಮಗೂ ಸೀರಿಯಸ್ ಆಗಿ ಏನನ್ನಾದರೂ ಬರೆಯಬೇಕು ಎನಿಸಿದರೆ ಖಂಡಿತ ಬರೆಯಿರಿ.&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-5122857213212435151?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/5122857213212435151/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=5122857213212435151' title='21 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/5122857213212435151'/><link rel='self' type='application/atom+xml' href='http://www.blogger.com/feeds/3841477221276814775/posts/default/5122857213212435151'/><link rel='alternate' type='text/html' href='http://jomon-malehani.blogspot.com/2008/07/blog-post.html' title='ಮಳೆ ನಿಂತು ಹೋದ ಮೇಲೆ ಒಂದು ಸೀರಿಯಸ್ ಬರಹ'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><thr:total>21</thr:total></entry><entry><id>tag:blogger.com,1999:blog-3841477221276814775.post-5449361667275731119</id><published>2008-06-23T02:39:00.000-07:00</published><updated>2008-06-23T02:45:29.168-07:00</updated><title type='text'>ಮಳೆ ಮತ್ತು ನಾನು</title><content type='html'>&lt;a onblur="try {parent.deselectBloggerImageGracefully();} catch(e) {}" href="http://bp2.blogger.com/_A5Tc7GvymLQ/SF9wfDCZvTI/AAAAAAAAAIs/JtxBwybf3-I/s1600-h/jomon.JPG"&gt;&lt;img style="margin: 0px auto 10px; display: block; text-align: center; cursor: pointer;" src="http://bp2.blogger.com/_A5Tc7GvymLQ/SF9wfDCZvTI/AAAAAAAAAIs/JtxBwybf3-I/s320/jomon.JPG" alt="" id="BLOGGER_PHOTO_ID_5215010572211961138" border="0" /&gt;&lt;/a&gt;&lt;br /&gt;ಕಳೆದವಾರ ಊರಿಗೆ ಹೋಗಿದ್ದೆ. ಊರಲ್ಲಿ ಸಿಕ್ಕಾಪಟ್ಟೆ ಮಳೆ. ಹೊರಗೆ ಮಳೆ ಸುರಿಯುತ್ತಿದ್ದರೆ ಒಳಗೆ ಕುಳಿತುಕೊಂಡು ಅಮ್ಮ ಹಳೆಯ ಕಥೆಗಳನ್ನು ಹೇಳುತ್ತಿದ್ದರು. ಈ ಎಲ್ಲಾ ಕಥೆಗಳ ಅಲ್ಪಸ್ವಲ್ಪ ಭಾಗಗಳು ನನಗೆ ಗೊತ್ತಿದ್ದರೂ ಅದನ್ನು ಅಮ್ಮನ ಬಾಯಿಯಿಂದ ಕೇಳುವುದೇ ಬೇರೆಯ ತರನಾದ ಅನುಭವ. ಅಮ್ಮ ಮಾತಿಗೆ ಭಾವ ತುಂಬುತ್ತಾಳೆ. ಪಾತ್ರಕ್ಕೆ ಜೀವ ತುಂಬುತ್ತಾಳೆ. ಹಾಗಾಗಿ ಕೆಲವು ಘಟನೆಗಳು ನನಗೆ ಗೊತ್ತಿದ್ದರೂ ನಾನು ಏನೂ ಗೊತ್ತಿಲ್ಲದವನಂತೆ ಹೌದಾ? ಯಾವಾಗ ಆಯಿತು? ಮುಂದೆ? ಎಂದೆಲ್ಲಾ ಮತ್ತೆ ಮತ್ತೆ ಕೇಳುತ್ತಾ  ಒಳಗೊಳಗೇ ಖುಷಿಪಡುತ್ತಿರುತ್ತೇನೆ. ನನ್ನ ತಂಗಿ ಮಾತ್ರ ಅಮ್ಮಾ, ಇದೆಲ್ಲಾ ಅಣ್ಣನಿಗೆ ಗೊತ್ತಿರುವ ಕಥೆಗಳೇ, ನೀನೇ ಎಷ್ಟು ಬಾರಿ ಹೇಳಿದ್ದೀಯಾ ಎನ್ನುತ್ತಾಳೆ. ಅಮ್ಮ ಮಾತ್ರ ಸ್ವಲ್ಪವೂ ಬೇಸರಿಸಿಕೊಳ್ಳದೆ, ತನ್ನ ಬಾಲ್ಯಕಾಲ, ತಾನು ಶಾಲೆಗೆ ಹೋಗಿದ್ದು, ಭಯಂಕರ ಮಳೆಗಾಲದಲ್ಲಿ ಅಪ್ಪನನ್ನು ಮದುವೆಯಾಗಿ ಈ ಊರಿಗೆ ಬಂದದ್ದು, ಆಗಿದ್ದ ಬಡತನ ಎಲ್ಲವನ್ನೂ ಹೇಳಿ ಹಗುರಾಗುತ್ತಾಳೆ.&lt;br /&gt;&lt;br /&gt;ನಾನು ಓದಿದ್ದು ಒಂದು ಪುಟ್ಟ ಸರಕಾರಿ ಶಾಲೆಯಲ್ಲಿ. ಶಾಲೆ ಅನ್ನುವುದಕ್ಕೆ ಅಲ್ಲಿ ಏನೂ ಇರಲಿಲ್ಲ, ಮಣ್ಣಿನ ಇಟ್ಟಿಗೆಯಿಂದ ಕಟ್ಟಿದ ಎರಡು ಕೋಣೆಗಳು. ಮಳೆ ಬಂದಾಗ ಮೇಲಿದ್ದ ಮಂಗಳೂರು ಹಂಚು ಸೋರುತ್ತಿತ್ತು. ನಾವು ಮಣ್ಣಿನ ನೆಲದ ಮೇಲೆ ಹಲಗೆಮಣೆಯ ಮೇಲೆ ಕೂರುತ್ತಿದ್ದೆವು. ಮಳೆ ಜೋರಾದಂತೆ ನೀರು ತರಗತಿ ಕೋಣೆಯೊಳಕ್ಕೆ ಬರುತ್ತಿತ್ತು. ಹೆಚ್ಚೂ ಕಡಿಮೆ ಮಳೆಗಾಲದಲ್ಲಿ ಶಾಲೆಗೆ ರಜೆ. ಒಮ್ಮೊಮ್ಮೆ ಇರುವ ಸರಕಾರಿ ಬಸ್ಸು ರಸ್ತೆ ಪಕ್ಕ ಕೆಟ್ಟು ನಿಂತೋ, ಅಥವಾ ನಾವು ಹೊಳೆ ದಾಟಲು ಬಳಸುತ್ತಿದ್ದ ಮರದ ಶಂಖ ತೇಲಿಹೋಗಿಯೋ ಹೆಚ್ಚೂ ಕಡಿಮೆ ಮಳೆಗಾಲದಲ್ಲಿ ನಾವು ಮನೆಯಲ್ಲಿಯೇ ಉಳಿಯುವಂತಾಗುತ್ತಿತ್ತು. ಇಂತಹ ಮಳೆಗಾಲದ ದಿನಗಳಲ್ಲಿ ಅಡಿಕೆಗೆ ತಟ್ಟಿಯ ಕೆಳೆಗೆ ಬೆಂಕಿ ಹಚ್ಚಿ ಅಪ್ಪನೋ, ಅಮ್ಮನೋ ನನಗೆ ಅವರ ಬಾಲ್ಯದ ಕಥೆಗಳನ್ನು ಹೇಳುತ್ತಿದ್ದರು. ಇಂತಹ ಕಥೆಗಳು ಕೇವಲ ಕಥೆಗಳಾಗಿ ಉಳಿಯದೇ, ಅದರಲ್ಲಿನ ಪಾತ್ರಗಳು ತುಂಬಾ ಜೀವನಾನುಭವನ್ನು ಹೊಂದಿರುತ್ತಿದ್ದರಿಂದ ಅವುಗಳು ಈಗಲೂ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿವೆ.&lt;br /&gt;&lt;br /&gt;ಪ್ರತಿ ಮಳೆಗಾಲ ಬಂದಾಗಲೂ ನನಗೆ ಇಂತಹ ಹಲವು ಕಥೆಗಳು, ಘಟನೆಗಳು ನನೆಪಿಗೆ ಬರುತ್ತದೆ. ನಮ್ಮೂರಿನದೇ ಕೆಲವು ಪಾತ್ರಗಳು ಅವರ ಹಾವಭಾವಗಳು, ನಾನು ಪ್ರಯಾಣಿಸುತ್ತಿದ್ದ ಸರಕಾರಿ ಬಸ್ಸು, ಅದರ ಕಲಾಲ್ ಎಂಬ ಕೆಂಡೆಕ್ಟರ್, ಮಳೆಗಾಲದಲ್ಲಿ ಸೀರೆ ಮೇಲೆತ್ತಿ ಕಷ್ಟ ಪಟ್ಟು ಗದ್ದೆ ಬದುವಿನ ಮೇಲೆ ನಡೆದು ಬರುತ್ತಿದ್ದ ಕಾವೇರಿ ಟೀಚರ್, ಎಷ್ಟು ತೆಳ್ಳನೆಯ ಎಷ್ಟು ಉದ್ದನೆಯ ಅಡಿಕೆ ಮರವಾದರೂ ಅದರ ತುತ್ತತುದಿಗೆ ಹತ್ತಿ ಗೊನೆ ಇಳಿಸುತ್ತಿದ್ದ ಸಣಕಲು ಕೇಶವ ಭಟ್ಟರು, ಒಂದು ರೂಪಾಯಿಗೆ ಇಪ್ಪತೈದು ನಿಂಬೆಹುಳಿ ಪೆಪರ್‌ಮಿಂಟ್ ಎಣಿಸಿ ಕೊಡುತ್ತಿದ್ದ ಕುಲಕರ್ಣಿ ಅಂಗಡಿಯ ಸೀತಜ್ಜಿ, ಒಮ್ಮೊಮ್ಮೆ ಶಾಲೆ ಬಿಟ್ಟು ಮನೆಗೆ ಹೊರಡುವುದು ಲೇಟಾಯಿತೆಂದರೆ, ಹಸಿವಾಗಿದೆಯಾ ಕಂದಾ ಎಂದು ಅಂಗಡಿಯೊಳಗೆ ಕರೆದು ಬೊಂಡಾ ಹಾಗೂ ಚಹಾ ಕೊಟ್ಟು ಪ್ರೀತಿಯಿಂದ ತಲೆಸವರುತ್ತಿದ್ದ ತಡಿಕೆ ಹೊಟೇಲಿನ ಶಾಂತಮ್ಮ, ಇವರೆಲ್ಲರೂ ಈಗಲೂ ನನಗೆ ಏನೋ ಅಪರೂಪದ ಪಾತ್ರಗಳಾಗಿ, ನನೆಸಿಕೊಂಡಾಗೊಮ್ಮೆ, ಮನಸ್ಸಿನ ಒಳಗೊಳಗೇ ಸೇರಿಕೊಂಡು ಬಿಡುತ್ತಾರೆ.&lt;br /&gt;&lt;br /&gt;ಊರಿಗೆ ಹೋದಾಗೊಮ್ಮೆ ಇವರನ್ನೆಲ್ಲಾ ಒಮ್ಮೆ ಭೇಟಿಯಾಗುವುದು, ಏನೋ ಗೊತ್ತಿಲ್ಲದವನಂತೆ ಅವರ ಬಾಯಿಯಿಂದ ಒಂದಿಷ್ಟು ಹಳೆಯ ಕಥೆಗಳನ್ನು ಕೇಳಿಸಿಕೊಳ್ಳುವುದು, ನಾನು ಕಲಿತ ಶಾಲೆಯಂಗಳದಲ್ಲಿ ಕಳ್ಳನಂತೆ ಓಡಾಡುವುದು, ಅಲ್ಲಿ ಇಲ್ಲಿ ಗುರುತು ಇಲ್ಲದವರನ್ನೂ ಗುರುತು ಹೆಚ್ಚಿ ಮಾತನಾಡಿಸಿ, ಕೊನೆಗೆ ನನ್ನ ಗುರುತು ಹೇಳದೆಯೇ ಹೊರಟು ಬರುವುದು ಇತ್ಯಾದಿಗಳನ್ನು ಮಾಡುತ್ತಿರುತ್ತೇನೆ. ಮೊನ್ನೆ ಹೀಗೆ ಮಳೆಸುರಿಯುವ ಹೊತ್ತಲ್ಲಿ ಶಾಲೆಯ ದಾರಿಯಲ್ಲಿ ನಡೆಯುತ್ತಿದ್ದೆ, ಥಟ್ಟನೆ ಎದುರಿಗೆ ಬಂದ ತಾಯಿಯೊಬ್ಬರು `ಏನ್ ತಮ್ಮಾ ನನ್ನ ಮಾತಾಡಿಸದೇ ಹಾಗೆ ಹೊರಟಿದ್ದೀಯಾ, ನಾನು ಯಾರು ಗೊತ್ತಾಯ್ತಾ? ಎಂದು ನನ್ನ ಮುಖವನ್ನು ತಮ್ಮ ಬೆಚ್ಚನೆಯ ಕೈಗಳಿಂದ ಸವರಿದರು. ನನಗಾದರೂ ಗಲಿಬಿಲಿ, ಯಾರಮ್ಮಾ ನೀನು ಎಂದು ಕೇಳಲು ಸಂಕೋಚ. ನನ್ನ ತಂಗಿ ಹುಟ್ಟಿದಾಗ ಆಸ್ಪತ್ರೆಯಲ್ಲಿದ್ದು ನೋಡಿಕೊಂಡವರು ಆಕೆ.  ನನ್ನನ್ನು ಕರೆದುಕೊಂಡು ಹೋಗಿ ಅಲ್ಲೇ ಪಕ್ಕದಲ್ಲಿದ್ದ ಅಂಗಡಿ ಕಟ್ಟೆಯ ಮೇಲೆ ಕೂರಿಸಿ ಒಂದಿಷ್ಟು ಹೊತ್ತು ಮಾತನಾಡಿದರು. ನಂತರ ನನ್ನ ಬಾಲ್ಯಕಾಲದ ಕಿತಾಪತಿಗಳನ್ನು ಆ ಅಂಗಡಿಯವರಿಗೂ ಹೇಳಿ ನಕ್ಕರು. ಅಷ್ಟೊತ್ತಿಗೆ ಆ ಅಂಗಡಿಯವರೂ ನನ್ನ ಗುರುತುಹಿಡಿದು ಇತ್ತೀಚೆಗೆ ಟಿವಿಯಲ್ಲಿ ಬಂದವರು ನೀವೇ ಅಲ್ಲವಾ? ಓಯ್ ಗೊತ್ತಾಯ್ತು ಬಿಡಿ, ನೀವು ಕಲ್ಕೇರಿಯ ಇಂತವರ ಮಗ ಅಲ್ಲವಾ? ನಮಗೆ ಗೊತ್ತುಂಟು ಬಿಡಿ, ಎಂದು ನನ್ನ ಇತಿಹಾಸವೇ ತೆಗೆದ ಮೇಲೆ ಇನ್ನು ನನ್ನ ನಾಟಕ ಏನೋ ನಡೆಯುವುದಿಲ್ಲವೆಂದು ಗೊತ್ತಾಯ್ತು.&lt;br /&gt;&lt;br /&gt;ಇಲ್ಲಿ ಮೈಸೂರಿನಲ್ಲಿ ಹೊರಗೆ ಮಳೆ ಸುರಿಯುತ್ತಿದ್ದರೆ ಒಳಗೆ ಕುಳಿತುಕೊಂಡು ಈ ಕಥೆಗಳನ್ನೆಲ್ಲಾ ನೆನಪು ಮಾಡಿಕೊಳ್ಳುತ್ತಾ ಬೆಚ್ಚಗಾಗುತ್ತಿರುತ್ತೇನೆ. ಸಣ್ಣಿಯಮ್ಮನ ಪ್ರೀತಿಯ ಮಾತು, ಆ ಅಂಗಡಿಯವರು ಮಾಡಿಕೊಟ್ಟ ಬಿಸಿ ಬಿಸಿ  ಚಹಾ, ಈ ಮಳೆಗಾಲಕ್ಕೆ ಇನ್ನೇನು ಬೇಕು. ಬೇಸರವಾದರೆ ಒಮ್ಮೆ ಊರಿಗೆ ಓಡಿ ಹೋಗಿ ಅಮ್ಮನ ಹತ್ತಿರ ಇನ್ನೊಂದೆರಡು ಹಳೆಯ ಕಥೆ ಕೇಳಿಸಿಕೊಂಡರಾಯಿತು.&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-5449361667275731119?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/5449361667275731119/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=5449361667275731119' title='14 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/5449361667275731119'/><link rel='self' type='application/atom+xml' href='http://www.blogger.com/feeds/3841477221276814775/posts/default/5449361667275731119'/><link rel='alternate' type='text/html' href='http://jomon-malehani.blogspot.com/2008/06/blog-post.html' title='ಮಳೆ ಮತ್ತು ನಾನು'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><media:thumbnail xmlns:media='http://search.yahoo.com/mrss/' url='http://bp2.blogger.com/_A5Tc7GvymLQ/SF9wfDCZvTI/AAAAAAAAAIs/JtxBwybf3-I/s72-c/jomon.JPG' height='72' width='72'/><thr:total>14</thr:total></entry><entry><id>tag:blogger.com,1999:blog-3841477221276814775.post-4585374677041194215</id><published>2008-05-26T04:57:00.000-07:00</published><updated>2008-05-26T05:57:19.194-07:00</updated><title type='text'>ಅಲ್ಲಿಗೆ ಬಂದವರು ಇಲ್ಲಿಗೂ ಒಮ್ಮೆ ಬಂದು ಹೋಗಿ</title><content type='html'>&lt;a href="http://bp0.blogger.com/_A5Tc7GvymLQ/SDqnh945q0I/AAAAAAAAAIk/10nxytAMDdQ/s1600-h/DSC01005.JPG"&gt;&lt;img id="BLOGGER_PHOTO_ID_5204656521370774338" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp0.blogger.com/_A5Tc7GvymLQ/SDqnh945q0I/AAAAAAAAAIk/10nxytAMDdQ/s320/DSC01005.JPG" border="0" /&gt;&lt;/a&gt;&lt;br /&gt;&lt;br /&gt;&lt;div&gt;ಒಂದಿಡಿ ರಾತ್ರಿ ವಿಚಾರ ಮಾಡಿದರೂ ಬ್ಲಾಗಿಗೆ ಹೊಸದಾಗಿ ಏನನ್ನು ಬರೆಯುವುದು ಎಂದು ಗೊತ್ತಾಗಲಿಲ್ಲ. ಏನಾದರೂ ಮಾಡಿ ಬ್ಲಾಗ್ ಅಫ್‌ಡೇಟ್ ಮಾಡಬೇಕಲ್ಲಪ್ಪಾ ಎಂದು ಚಿಂತಿದ್ದೇ ಆಯಿತು, ಏನೂ ಹೊಳೆಯಲಿಲ್ಲ. ಪರಿಚಿತರ ಬ್ಲಾಗಿಗೆಲ್ಲ ಭೇಟಿ ಕೊಟ್ಟು ನೋಡಿದೆ, ಅವರೆಲ್ಲಾ ತಿಂಗಳಿಗೊಂದಾದರೂ ಪೋಸ್ಟ್ ಹಾಕುತ್ತಾ ನನಗಿಂತ ಆದಾಗಲೇ ತುಂಬಾ ದೂರ ಹೋಗಿದ್ದರು. ಕೊನೆಯ ಬಸ್ಸಿಗೆ ಉಳಿದವನು ನಾನೊಬ್ಬನೇ. ಏನ್ರೀ ಬ್ಲಾಗಿಗೆ ಹೊಸದಾಗಿ ಏನೂ ಬರೆದಿಲ್ಲವಲ್ರೀ ಎಂದು ಸಹೋದ್ಯೋಗಿಗಳು ಕೇಳಿದರು. ಟೈಮಿಲ್ಲ ಎಂದು ಎಷ್ಟನೆಯ ಬಾರಿ ಸುಳ್ಳು ಹೇಳುವುದು, ಜನವರಿಯಲ್ಲಿ ಅಫ್‌ಡೇಟ್ ಆಗಿದ್ದು ಜೂನ್ ಆದರೂ ಹಾಗೇ ಇದೆಯೆಂದರೆ ನಿನ್ನ ಬ್ಲಾಗ್ ಪಂಚವಾರ್ಷಿಕ ಯೋಜನೆಯದಾ ಎಂದರು. ನಾನು, ತಡೀರಿ ಸಾರ್ ಇನ್ನೇನು ಹೊಸ ಭಾವ, ಹೊಸ ಬೆಡಗಿನೊಂದಿಗೆ ಬರಲಿದೆ ಎಂದು ಸಮರ್ಥನೆಯ ನಗು ಬೀರಿದೆ. &lt;/div&gt;&lt;br /&gt;&lt;br /&gt;&lt;div&gt;&lt;span class=""&gt;ಈ ಬ್ಲಾಗಮಂಡಲದ&lt;/span&gt; ದೊಡ್ಡ ಅಪಾಯವೆಂದರೆ ನಾವೇನಾದರೂ ಹೊಸ ಪೋಸ್ಟ್ ಹಾಕಲು ಎರಡು ಮೂರು ತಿಂಗಳು ತಡಮಾಡಿದರೆ ಉಳಿದ ಬ್ಲಾಗಿಗರು ನಮ್ಮನ್ನು ಗುಂಪಿನಿಂದ ನೋಟೀಸು ಕೂಡ ಕೊಡದೆ ಹೊರಹಾಕಿ ಬಿಡುತ್ತಾರೆ. ಕಳೆದ ಮೂರು ತಿಂಗಳಿಂದ ನನ್ನ ಸ್ಥಿತಿ ಹೆಚ್ಚೂ ಕಮ್ಮಿ ಹೀಗೇ ಇದೆ. ಯಾರೂ ನನ್ನ ಬ್ಲಾಗಿನಂಗಳಕ್ಕೆ ಬರುತ್ತಿಲ್ಲ, ಬರುತ್ತಿಲ್ಲ ಅಂದರೆ ನಾನು ಏನನ್ನೂ ಹೊಸದಾಗಿ ಬರೆದಿಲ್ಲ. ಉಳಿದಿರುವ ದಾರಿ ಒಂದೇ. ಹಳೆಯ ಲೇಖನಕ್ಕೆ ಬಂದ ಕಮೆಂಟುಗಳನ್ನೇ ನಾಲ್ಕೈದು ಬಾರಿ ಓದಿಕೊಳ್ಳುವುದು. ಹಾಗೆ ಓದಿದಾಗ ಸ್ಪಲ್ಪ ಸಮಾಧಾನವೆನಿಸಿತು. ಈ ಜಾಲಿಗರೆಲ್ಲ ಯಾವುದೋ ಒಂದು ಕಾಲದಲ್ಲಿ ಹತ್ತಿರದ ಸಂಬಂಧಿಗಳಾಗಿದ್ದರು ಎನ್ನುವುದು ನೆನಪಾಯಿತು. ಆದರೆ ಈಗ ನಮ್ಮ ಬ್ಲಾಗಿನ ಮೇಲಿನಿಂದಲೇ ಹಾರಿ ಪಕ್ಕದ ಬ್ಲಾಗಿನಲ್ಲಿ ಇಳಿದು ಕಮೆಂಟಿಸುವ ಇವರನ್ನು ಮುಂದೊಂದು ಕೈ ನೋಡಿಕೊಳ್ಳೋಣ ಎಂದು ಸುಮ್ಮನಾಗಿದ್ದೇನೆ. ಊರಿಗೆ ಬಂದವಳು ನೀರಿಗೆ ಬರೆದೆ ಇರುತ್ತಾಳೆಯೇ? ಓದುಗರನ್ನು ಉಳಿಸಿಕೊಳ್ಳಲು ನಾನೂ ಹಲವು ಕಸರತ್ತು ನಡೆಸಿದೆ. ಹೋಮ್‌ಪೇಜ್ ಬದಲಿಸಿದೆ. ಒಂದೆರಡು ಲಿಂಕ್ಸ್‌ಗಳನ್ನು ಹೆಚ್ಚಿಗೆ ಕೊಟ್ಟೆ. ಯಾರೂ ಪ್ರಲೋಭನೆಗೆ ಒಳಗಾಗಲಿಲ್ಲ. ಇವೆಲ್ಲಾ ಮಾಮೂಲಿ ಎಂಬಂತೆ ಕಿಟಕಿಯಲ್ಲಿ ನಕ್ಕರು.&lt;br /&gt;&lt;span class=""&gt;&lt;/span&gt;&lt;/div&gt;&lt;br /&gt;&lt;div&gt;&lt;span class=""&gt;&lt;/span&gt;ನೋಡಿದರೆ ನನಗೆ ಕವಿತೆ ಬರೆಯಲು ಬರುವುದಿಲ್ಲ. ಇಲ್ಲವಾದರೆ ಪುಟ್ಟ ಪುಟ್ಟ ಕವಿತೆಗಳನ್ನಾದರೂ ಬರೆದು ಬಿಟ್ಟ ಸ್ಥಳ ತುಂಬಿಸಬಹುದಿತ್ತು. ಕಥೆ ಬರೆಯೋಣವೆಂದರೆ ಆ ಸಾಹಸ ನೀನು ಮಾಡದಿರುವುದೇ ಒಳಿತು ಎಂದು ಒಬ್ಬರು ಬಾಯಿ ಮುಚ್ಚಿಸಿದರು. ವಿಮರ್ಶೆ, ಟಿಪ್ಪಣಿ ಇತ್ಯಾದಿ ಮಾಡೋಣವೆಂದರೆ ಈಗಾಗಲೇ ಬ್ಲಾಗಿನಲ್ಲಿ ಈ ಕುರಿತು ತೀವ್ರಗತಿಯ ಚರ್ಚೆಗಳು ನಡೆದು ಹಲವು ಸೃಜನಶೀಲ ಬ್ಲಾಗಿಗರು ಇಂತಹ ಅನಗತ್ಯ ಚರ್ಚೆಗಳಿಂದ ಬೇಸೆತ್ತು ಹೋಗಿದ್ದಾರೆ. ಸರಿ ಪ್ರವಾಸ, ಚಾರಣ ಅಂತ ಎಲ್ಲಿಗಾದರೂ ಹೋಗಿ ಬರೋಣವೆಂದರೆ ಅದಕ್ಕೆ ಟೈಮಿಲ್ಲ. ಮತ್ತೆ ಏನು ಬರೆಯೋದು? ಯಾಕೋ ಡಲ್ಲಾಗಿ ಕುಳಿತಿದ್ದ ಮೈಸೂರಿನ ಪೋಸ್ಟಿನ ಮಾಲೀಕರನ್ನು ಕೇಳಿದೆ. ಸಾರ್ ನೀವು ನಿಮ್ಮ ಬ್ಲಾಗಿಗೆ ಹೊಸದಾಗಿ ಏನಾದರೂ ಬರೆದಿದ್ದೀರಾ? ವಾರಕ್ಕೊಮ್ಮೆ ಲೇ ಔಟ್ ಚೇಂಜ್ ಮಾಡ್ತಾ ಇದ್ದೀನಿ ಎಂದರು. ಅರೆ! ಈ ಐಡಿಯಾ ನನಗೆ ಹೊಳದೇ ಇಲ್ಲವಲ್ಲಾ ಎನ್ನುತ್ತಾ, ಅವರ ಬ್ಲಾಗ್ ತೆರೆದು ನೋಡಿದೆ. ಅವರು ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಬರೆದ ಲೇಖನಗಳಿದ್ದವು. &lt;/div&gt;&lt;br /&gt;&lt;br /&gt;&lt;div&gt;&lt;span class=""&gt;ಅಮೀರ್‌ಖಾನ್&lt;/span&gt; ಖಾಹ್‌ರುಕ್ ಎಂಬ ನಾಯಿಯ ಬಗ್ಗೆ ಆತನ ಬ್ಲಾಗಿನಲ್ಲಿ ಬರೆದ ಲೇಖನಕ್ಕೆ ಏಳುಸಾವಿರದ ಐದುನೂರಕ್ಕೂ ಹೆಚ್ಚು ಕಮೆಂಟುಗಳು ಬರುತ್ತವೆ. ಕನ್ನಡದ ಬ್ಲಾಗಿಗರೆಲ್ಲರೂ ಸೇರಿ Hutch ನಾಯಿಯ ಬಗ್ಗೆ ಬರೆದರೂ ಈ ಪಾಟಿ ಪ್ರತಿಕ್ರಿಯೆಗಳು ಬರಲಿಕ್ಕಿಲ್ಲ. ಆದರೂ ಕನ್ನಡದಲ್ಲಿ ಚೆನ್ನಾಗಿ ಬರೆದು ಐವತ್ತು ಅರವತ್ತು ಕಮಂಟು ಗಿಟ್ಟಿಸುವ ಅಫ್‌ಡೇಟ್ ಬ್ಲಾಗಿಗರನ್ನು ನೋಡುವಾಗ ಸ್ವಲ್ಪ ಹೊಟ್ಟೆಕಿಚ್ಚು ಹುಟ್ಟುತ್ತದೆ. ಈ ಕಮೆಂಟು ಮಾಡುವಲ್ಲಿಯೂ ದೊಡ್ಡದೊಂದು ಲಾಭಿ ಇದೆ ಎಂದು ಪ್ರಗತಿಪರ ಬ್ಲಾಗಿಗರೊಬ್ಬರು ಇತ್ತೀಚೆಗೆ ಹೇಳಿದರು. ಅದರ ಸತ್ಯಾಸತ್ಯೆತೆ ಗೊತ್ತಿಲ್ಲ, ಈಗ ಚುನಾವಣೆಯ ಸಮಯವಾದ್ದರಿಂದ ಅನಕ ಪತ್ರಕರ್ತ ಬ್ಲಾಗಿಗರು ಪತ್ರಿಕೆಯ ಕೆಲಸಗಳಲ್ಲೇ ಬ್ಯುಸಿಯಾಗಿದ್ದಾರೆ. ಅಣ್ಣಗಳಿರಾ, ಅಕ್ಕಂದಿರಾ, ನನ್ನ ಬ್ಲಾಗ್ ಅಫ್‌ಡೇಟ್ ಆಗಿದೆ. ಮುಂದಿನ ಪೋಸ್ಟ್ ಬಹು ಬೇಗ ಹಾಕುತ್ತೇನೆ, ಎಲ್ಲಿಗೂ ಹೋಗಬೇಡಿ, ಅಲ್ಲಿಗೆ ಬಂದವರು ಇಲ್ಲಿಗೂ ಒಮ್ಮೆ ಬಂದು ಹೋಗಿ... &lt;/div&gt;&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-4585374677041194215?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/4585374677041194215/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=4585374677041194215' title='22 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/4585374677041194215'/><link rel='self' type='application/atom+xml' href='http://www.blogger.com/feeds/3841477221276814775/posts/default/4585374677041194215'/><link rel='alternate' type='text/html' href='http://jomon-malehani.blogspot.com/2008/05/blog-post_26.html' title='ಅಲ್ಲಿಗೆ ಬಂದವರು ಇಲ್ಲಿಗೂ ಒಮ್ಮೆ ಬಂದು ಹೋಗಿ'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><media:thumbnail xmlns:media='http://search.yahoo.com/mrss/' url='http://bp0.blogger.com/_A5Tc7GvymLQ/SDqnh945q0I/AAAAAAAAAIk/10nxytAMDdQ/s72-c/DSC01005.JPG' height='72' width='72'/><thr:total>22</thr:total></entry><entry><id>tag:blogger.com,1999:blog-3841477221276814775.post-3383292783659758924</id><published>2008-05-20T03:35:00.000-07:00</published><updated>2008-05-20T04:03:42.925-07:00</updated><title type='text'>ರೋಸ್ಮಿನ್ ಎಂಬ ಕಿಲಾಡಿಯ ನಾಲ್ಕು ಚಿತ್ರಗಳು</title><content type='html'>&lt;a href="http://bp0.blogger.com/_A5Tc7GvymLQ/SDKtkjqe6PI/AAAAAAAAAIc/OJtVtgEmCmg/s1600-h/DSC01415.JPG"&gt;&lt;img id="BLOGGER_PHOTO_ID_5202411363126667506" style="FLOAT: right; MARGIN: 0px 0px 10px 10px; CURSOR: hand" alt="" src="http://bp0.blogger.com/_A5Tc7GvymLQ/SDKtkjqe6PI/AAAAAAAAAIc/OJtVtgEmCmg/s320/DSC01415.JPG" border="0" /&gt;&lt;/a&gt;&lt;br /&gt;&lt;br /&gt;&lt;div&gt;&lt;a href="http://bp0.blogger.com/_A5Tc7GvymLQ/SDKs4jqe6OI/AAAAAAAAAIU/XtXNfAQhchI/s1600-h/DSC01413.JPG"&gt;&lt;img id="BLOGGER_PHOTO_ID_5202410607212423394" style="FLOAT: right; MARGIN: 0px 0px 10px 10px; CURSOR: hand" alt="" src="http://bp0.blogger.com/_A5Tc7GvymLQ/SDKs4jqe6OI/AAAAAAAAAIU/XtXNfAQhchI/s320/DSC01413.JPG" border="0" /&gt;&lt;/a&gt;&lt;br /&gt;&lt;br /&gt;&lt;br /&gt;&lt;p align="left"&gt;&lt;a href="http://bp2.blogger.com/_A5Tc7GvymLQ/SDKsIDqe6NI/AAAAAAAAAIM/r_NqMCUX3OY/s1600-h/DSC01414.JPG"&gt;&lt;img id="BLOGGER_PHOTO_ID_5202409773988767954" style="FLOAT: right; MARGIN: 0px 0px 10px 10px; CURSOR: hand" alt="" src="http://bp2.blogger.com/_A5Tc7GvymLQ/SDKsIDqe6NI/AAAAAAAAAIM/r_NqMCUX3OY/s320/DSC01414.JPG" border="0" /&gt;&lt;/a&gt;&lt;/p&gt;&lt;br /&gt;&lt;p align="right"&gt;&lt;a href="http://bp2.blogger.com/_A5Tc7GvymLQ/SDKrhDqe6MI/AAAAAAAAAIE/9PS5TnG6rwQ/s1600-h/DSC01412.JPG"&gt;&lt;img id="BLOGGER_PHOTO_ID_5202409103973869762" style="FLOAT: left; MARGIN: 0px 10px 10px 0px; CURSOR: hand" alt="" src="http://bp2.blogger.com/_A5Tc7GvymLQ/SDKrhDqe6MI/AAAAAAAAAIE/9PS5TnG6rwQ/s320/DSC01412.JPG" border="0" /&gt;&lt;/a&gt;&lt;/p&gt;&lt;br /&gt;&lt;div&gt;ಚಿತ್ರದಲ್ಲಿರುವ ಈ ಕಿಲಾಡಿಯ ಹೆಸರು ರೋಸ್ಮಿನ್. ನನ್ನ ಅಣ್ಣನ ಮಗಳು. ಮೂರು ವರ್ಷ ಮುಗಿಸಿ ನಾಲ್ಕಕ್ಕೆ ಹತ್ತಿರದಲ್ಲಿದ್ದಾಳೆ. ಟಿವಿಯಲ್ಲಿ ಯಾವಾಗಲೂ ಟಾಮ್ ಆಂಡ್ ಜೆರ್ರಿ ಬರುತ್ತಿರಬೇಕು ಎನ್ನುವುದು ಇವಳ ಹಠ. ಮನೆಯಲ್ಲಿ ಬೇರೆ ಯಾವ ಚಾನೆಲ್ ನೋಡಲು ಬಿಡುವುದಿಲ್ಲ. ರಿಮೋಟ್ ಅವಳ ಕೈಯಲ್ಲಿರಬೇಕು. ಈ ಬಾರಿ ಊರಿಗೆ ಹೋದಾಗ ನನ್ನ ಫೋಟೋ ತೆಗಿ ಅಂತ ತನ್ನ ಹುಳುಕು ಹಲ್ಲು ತೋರಿಸಿ ನಕ್ಕಿದ್ದಳು. ಕ್ಯಾಮರ ಕೈಗೆತ್ತಿಕೊಂಡು ಅವಳನ್ನು ಒಂದೆಡೆ ನಿಲ್ಲಿಸಲು ಪ್ರಯತ್ನ ಪಟ್ಟೆ. ಅವಳು ನಿಲ್ಲಲಿಲ್ಲ, ಅಂಗಳದಲ್ಲಿ ಓಡುತ್ತಲೇ ಇದ್ದಳು. ಓಟದ ನಡುವೆ ಕ್ಲಿಕ್ಕಿಸಿದ ಚಿತ್ರಗಳಿವು.&lt;/div&gt;&lt;/div&gt;&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-3383292783659758924?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/3383292783659758924/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=3383292783659758924' title='3 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/3383292783659758924'/><link rel='self' type='application/atom+xml' href='http://www.blogger.com/feeds/3841477221276814775/posts/default/3383292783659758924'/><link rel='alternate' type='text/html' href='http://jomon-malehani.blogspot.com/2008/05/blog-post.html' title='ರೋಸ್ಮಿನ್ ಎಂಬ ಕಿಲಾಡಿಯ ನಾಲ್ಕು ಚಿತ್ರಗಳು'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><media:thumbnail xmlns:media='http://search.yahoo.com/mrss/' url='http://bp0.blogger.com/_A5Tc7GvymLQ/SDKtkjqe6PI/AAAAAAAAAIc/OJtVtgEmCmg/s72-c/DSC01415.JPG' height='72' width='72'/><thr:total>3</thr:total></entry><entry><id>tag:blogger.com,1999:blog-3841477221276814775.post-4147528393317746427</id><published>2008-03-21T05:58:00.000-07:00</published><updated>2008-03-21T06:06:18.950-07:00</updated><title type='text'>ಯುನಿವರ್ಸಿಟಿಯ ಹೋಳಿಯೂ ಲಬೋ ಲಬೋ... ಅಳುವೂ..</title><content type='html'>&lt;a href="http://bp1.blogger.com/_A5Tc7GvymLQ/R-OxQRt7tNI/AAAAAAAAAHo/OJFnnpnPc3k/s1600-h/holi-wallpaper1-b%5B1%5D.jpg"&gt;&lt;img id="BLOGGER_PHOTO_ID_5180178889598285010" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp1.blogger.com/_A5Tc7GvymLQ/R-OxQRt7tNI/AAAAAAAAAHo/OJFnnpnPc3k/s200/holi-wallpaper1-b%5B1%5D.jpg" border="0" /&gt;&lt;/a&gt; ರಾತ್ರಿಯಿಡಿ ಉರಿಯುತ್ತಿದ್ದ ಕೊರಡಿನ ಬೆಂಕಿ ಬೆಳ್ಳಿಗ್ಗೆ ಹೊತ್ತಿಗೆ ಆರಿರುತ್ತಿತ್ತು. ಹಸಿರು ಲಂಟಾನ ಸೊಪ್ಪನ್ನು ಸೊಂಟಕ್ಕೆ ಸುತ್ತಿಕೊಂಡು, ಬೂದಿ ಬಳಿದು ಸಾಂಬಾ ನೃತ್ಯ ಮಾಡಿ ಮಲಗಿರುತ್ತಿದ್ದ ಹಾಸ್ಟೇಲಿನ ಪಡ್ಡೆ ಹುಡುಗರು ಮುಂಜಾನೆಯೇ ಎದ್ದು ಹಾಸ್ಟೇಲಿನ ಜವಾನನಿಗೆ ಮೊದಲು ಬಣ್ಣ ಮೆತ್ತುತ್ತಿದ್ದರು. ಇದ್ದಕ್ಕಿದಂತೆ ಹೀ..ಹೂ...ಕೇ..ಎಂದು ಪ್ರಾರಂಭವಾದ ಕೇಕೆಯಿಂದಲೇ ಹೋಳಿಯಾಟ ಪ್ರಾರಂಭವಾಗಿದೆ ಎಂಬ ಸುಳಿವು ಸಿಕ್ಕಿ, ಹಾಸ್ಟೇಲಿನ ಕೋಣೆಗಳಲ್ಲಿ ಕದವಿಕ್ಕಿಕೊಂಡು ಮಲಗಿರುತ್ತಿದ್ದ ಬಣ್ಣ ವಿರೋಧಿ ಹುಡುಗರು, ಕಿಟಕಿಯನ್ನೂ ಇನ್ನಷ್ಟು ಭದ್ರಪಡಿಸಿ, ಎರಡೆರಡು ಚಾದರ ಹೊದ್ದು ಮಲಗುತ್ತಿದ್ದರು. ಹೊರಗೆ ಬಾರಲೇs.. ಅವರ ರೂಮಿನ ಮುಂದೆ ನಿಂತು ಕಾಮಣ್ಣನ ಮಕ್ಕಳ ಲಬೋ ಲಬೋ ಎಂದು ಹೊಯ್ಕೊಳ್ಳುತ್ತಿದ್ದರೆ ಭೂಮಿ ಆಕಾಶ ಒಂದಾಗುತ್ತಿತ್ತು.&lt;br /&gt;&lt;br /&gt;ಮಲಗಿದ್ದವರನ್ನು ಎಬ್ಬಿಸಿ, ತಲೆಗೆ ತಲಾ ಎರಡೆರಡು ಮೊಟ್ಟೆ ಹೊಡೆದು ಮುಖಕ್ಕೆಲ್ಲಾ ನಯವಾಗಿ ಸವರಿ ಒಂದಿಷ್ಟು ಬಣ್ಣದ ನೀರು ಸುರಿಯುತ್ತಿದ್ದಂತೆ ಹಾಸ್ಟೇಲ್ ಹುಡುಗರ ಹೋಳಿಯಾಟಕ್ಕೆ ರಂಗು ಮೂಡುತ್ತಿತ್ತು. ಹೀಗೆ ಪ್ರಾರಂಭವಾಗುತ್ತಿದ್ದ ಬಣ್ಣದೋಕುಳಿ ಎಂಟು ಗಂಟೆಯ ವೇಳೆಗಾಗಲೇ ಇಡಿ ವಿಶ್ವವಿದ್ಯಾಲಯವನ್ನು ಬಣ್ಣದಲ್ಲಿ ಅದ್ದಿ ನಿಗಿನಿಗಿ ಹೊಳೆಯುವಂತೆ ಮಾಡುತ್ತಿತ್ತು. ನ್ಯೂಜಿ ಪಿ.ಜಿಯಿಂದ ಧನು, ಶ್ಯಾಮ ಬಣ್ಣದೊಂದಿಗೆ ಓಡಿ ಬರುವ ವೇಳಗೆ ನಾನೊಂದು ಹಳೆಯ ದೊಗಳೆ ಶರ್ಟ್ ಹಾಕಿ ಬರ್ರೀ.. ಮಕ್ಕಳಾ... ಎನ್ನುವ ಗೆಟಪ್ಪಿನಲ್ಲಿ ಕಾದಿರುತ್ತಿದ್ದೆ. ನಂತರ ಭೀಮಾ ಹಾಗೂ ನ್ಯೂಪಿಜಿ ಹಾಸ್ಟೇಲ್‌ನವರು ಒಂದುಗೂಡಿ ಡೊಳ್ಳುಬಾರಿಸುತ್ತಾ, ವಾಣಿ ಅಂಗಡಿಯ ಹತ್ತಿರ ಬರುವ ವೇಳಗೆ ಶ್ಯಾಲ್ಮಲಾ ಹಾಗೂ ನಿಜಲಿಂಗಪ್ಪ ಹಾಸ್ಟೆಲಿನ ಹುಡುಗರು ಸೇರಿರುತ್ತಿದ್ದರು. ನಂತರ ಹೊರಡುತ್ತಿತ್ತು ಮೆರವಣಿಗೆ. ಸುಮಾರು ಒಂದು ಸಾವಿರದ ಹತ್ತಿರ ಹತ್ತಿರ ಹುಡುಗರು. ಮೊದಲು ಹೋಗುತ್ತಿದ್ದದ್ದು ಆಯಾ ವಿಭಾಗಗಳ ಉಪನ್ಯಾಸಕರುಗಳ ಮನೆಗೆ, ನಂತರ ಹಾಸ್ಟೇಲಿನ ನಿಲಯ ಪಾಲಕರ ಮನೆಗೆ.&lt;br /&gt;&lt;br /&gt;&lt;br /&gt;ಸಾಮಾನ್ಯವಾಗಿ ನಾಲ್ಕು ಗಳಗಳ ಒಂದು ಚಟ್ಟವನ್ನು ಮಾಡಿ, ಅದಕ್ಕೆ ಮಡಿಕೆಯೊಂದನ್ನು ತೂಗು ಬಿಟ್ಟು, ಸುತ್ತಲೂ ಸೊಪ್ಪು ಕಟ್ಟಿ ಅದ ಮೇಲೆ ಮೇಲೆ ಒಬ್ಬನನ್ನು ಸತ್ತವನಂತೆ ಮಲಗಿಸಿಕೊಂಡು ಹೋಗಿ ಮಾಸ್ತರರ ಮನೆಯಂಗಳದಲ್ಲಿ ಮಲಗಿಸುತ್ತಿದ್ದೆವು. ಸರss ಇಂಟರ್ನಲ್ ಮಾರ್ಕ್ಸ್ ಕೊಡ್ಲಿಲ್ಲ ಅಂತ, ನಿಮ್ಮ ಹೆಸರು ಬರೆದಿಟ್ಟು ಸತ್ತ ಹೋಗ್ಯಾನ ನೋಡ್ರೀ.. ಮಣ್ಣು ಮಾಡೋಕೆ ರೊಕ್ಕಾ ಕೊಡ್ರೀ.. ಎಂದು ಕೋಗಲು ಸುರುಹಚ್ಚಿಕೊಳ್ಳುತ್ತಿದ್ದರು. ಹಿಂದೆ ನಿಂತಿರುತ್ತಿದ್ದ ಸಾವಿರಾರು ಹುಡುಗರು ಲಯಬದ್ದವಾಗಿ ಲಬೋ... ಲಲೋ.... ಹೊಯ್ಕೊಳ್ಳುತ್ತಿದ್ದರು. ಹೆಚ್ಚಿನ ಉಪನ್ಯಾಸರು ರೊಕ್ಕ ಬಿಚ್ಚುತ್ತಿರಲಿಲ್ಲ. ಐದೋ ಹತ್ತೋ ಕೊಟ್ಟು ಸಾಗಹಾಕಲು ಮುಂದೆ ಬರುತ್ತಿದ್ದರು. ಆಗ ಪ್ರಾರಂಭವಾಗುತ್ತಿತ್ತು ಬೈಗುಳ.. ಮಾಸ್ತರ ಒಂದು ವಾರ ಕಿವಿ ತೊಳಕೋಬೇಕು, ಅಂಥಾ ನಮೂನಿ ಇರತ್ತಿದ್ದವು. ನಲವತ್ತು ಸಾವಿರ ಪಗಾರ ತಕೋತಿಯಲ್ಲೋ.. ನಾಚಿಕೆ ಆಗೋದಿಲ್ಲೇನೋ.... ತಾವು ಕಲಿಸಿದ ವಿದ್ಯಾರ್ಥಿಗಳ ಬಾಯಿಯಿಂದಲೇ ತಮ್ಮ ಮರ್ಯಾದೆ ಬೀದಿ ಪಾಲಾಗುವುದರ ಮೊದಲೇ ಇನ್ನೊಂದೆರಡು ನೋಟುಗಳನ್ನು ತೆಗೆದು ಸತ್ತವನ ಚಟ್ಟದ ಮೇಲೆ ಹಾಕುತ್ತಿದ್ದರು. ಅವನು ಇದ್ದಕ್ಕಿದ್ದಂತೆ ಎದ್ದು ಮಾಸ್ತರನ್ನು ಅಪ್ಪಿ ಹಿಡಿದು, ಹ್ಯಾಪಿ ಹೋಳಿ ಸಾರ್ ಎನ್ನುತ್ತಾ ಬಣ್ಣ ಮೆತ್ತುತ್ತಿದ್ದ. ಉಳಿದವರು ಮಾಸ್ತರನ್ನು ವಿಚಾರಿಸಿಕೊಂಡು ಬಿಡುವ ಹೊತ್ತಿಗೆ ಅವರು ನೀರಿನಲ್ಲಿ ಮುಳುಗಿದ ಕೋಳಿಯ ತರ ಆಗಿರುತ್ತಿದ್ದರು. ಮನೆಯೊಳಗಿನ ಕಿಟಿಕಿಯ ಸಂಧಿಯಿಂದ ಮಾಸ್ತರರ ಹೆಂಡತಿ ಹಾಗೂ ಮಕ್ಕಳು ಮನೆಯೊಳಗೆ ಸದಾ ಹುಲಿ ತರ ಇರುತ್ತಿದ್ದ ಮಾಸ್ತರನ್ನು ವಿದ್ಯಾರ್ಥಿಗಳು ಪ್ರೀತಿಸುವ ಪರಿ ನೋಡಿ ನಗುತ್ತಿದ್ದರು.&lt;br /&gt;&lt;br /&gt;&lt;br /&gt;ಆದರೆ ನಮಗೆ ಕಲಿಸುತ್ತಿದ್ದ ಮಾಸ್ತರುಗಳ ಮನೆಗಳಿಗೆ ಹೋಗುವಾಗ ಮಾತ್ರ ನಾವು ಗುಂಪಿನಲ್ಲಿ ಹಿಂದಿರುತ್ತಿದ್ದೆವು. ಎಷ್ಟೇ ಬಣ್ಣ ಹಚ್ಚಿಕೊಂಡಿದ್ದರೂ, ಎಲ್ಲಿ ಗೊತ್ತಾದರೆ ನಾಳೆ ಇಂಟರ್‌ನೆಲ್ ಮಾರ್ಕ್ಸಗೆ ಕುತ್ತು ಎಂದು ಬಣ್ಣ ಹಚ್ಚಲು ಹೋಗುತ್ತಿರಲಿಲ್ಲ. ಆದರೆ ಆ ಕೆಲಸವನ್ನು ಉಳಿದ ಡಿಪಾರ್ಟ್‌ಮೆಂಟಿನ ಹುಡುಗರಿಗೆ ಹೇಳಿ ಮಾಡಿಸುತ್ತಿದ್ದೆವು. ಬಿಡಬೇಡ್ರಲೇ ಈ ಮಾಸ್ತರನ್ನು ಬಣ್ಣದಾಗ ಕೆಡವಿ ಎನ್ನುತ್ತಿದ್ದೆವು. ಅವರ ಮಾಸ್ತರುಗಳಿಗೆ ನಾವು ಬಣ್ಣ ಬಳಿಯುತ್ತಿದ್ದೆವು. ನಂತರ ವಾಣಿ ಅಂಗಡಿಗೆ ಬಂದು ಆಕೆಗೆ ಬಣ್ಣ ಹಚ್ಚುವ ನೆಪದಲ್ಲಿ ಅಂಗಡಿಯ ಹೊರಗಿರುತ್ತಿದ್ದ ಎಳೆನೀರು, ಬಾಳೆಹಣ್ಣನ್ನು ಸ್ವಾಹ ಮಾಡುತ್ತಿದ್ದೆವು.&lt;br /&gt;&lt;br /&gt;&lt;br /&gt;ನಂತರ ಸ್ವಲ್ಪ ಸುಧಾರಿಸಿಕೊಂಡು ವಿಶ್ವವಿದ್ಯಾಲಯ ಸುಂದರಿಯರು ವಾಸಿಸುತ್ತಿದ್ದ ಲೇಡೀಸ್ ಹಾಸ್ಟೇಲ್ ಹತ್ತಿರ ಹೆಜ್ಜೆ ಹಾಕುತ್ತಿದ್ದೆವು. ಅಕ್ಕಮಹಾದೇವಿ, ಕಿತ್ತೂರು ಚೆನ್ನಮ್ಮ, ವರ್ಕಿಂಗ್ ವುಮೆನ್ಸ್ ಹಾಸ್ಟೇಲ್‌ನ ಹುಡುಗಿಯರು ಕೋಣೆಯೊಳಗೇ ಬಣ್ಣ ಆಡುತ್ತಾ ಹೊರಬರಲಾಗಾದೆ ಚಟಪಡಿಸುತ್ತಿದ್ದರು. ಹುಡುಗರನ್ನು ನೋಡಿದ ಕೂಡಲೇ ಕಿಟಕಿಯೊಳಗಿನಿಂದ ನೋಡುತ್ತಾ, ಕೈಬೀಸಿ ಹ್ಯಾಪಿ ಹೋಳಿ ಎಂದು ವಿಶ್ ಮಾಡುತ್ತಿದ್ದರು. ಕೆಲವು ಹುಡುಗರು ಹಾಸ್ಟೇಲ್ ಎದುರಿನ ರಸ್ತೆಯಲ್ಲಿ ಮಲಗಿ, ಅವಳು ಬರದಿದ್ದರೇ ನಾನು ಹೋಗುವುದೇ ಇಲ್ಲ ಎಂದು ಹಠ ಹಿಡಿದ ಭಂಗಿಯಲ್ಲಿ ಮಲಗುತ್ತಿದ್ದರು. ವಿವಿಯಲ್ಲಿ ಸ್ವಲ್ಪ ಫೇಮಸ್ ಇರುತ್ತಿದ್ದ ಹುಡುಗಿಯರ ಹೆಸರನ್ನು ಕೋಗಿ ಹೇಳುತ್ತಾ ನೀನೇ ನನ್ನ ಜೀವಾ, ನೀನೇ ನನ್ನ ಪ್ರಾಣ ಎಂದೆಲ್ಲಾ ವಿರಹಗೀತೆ ಹಾಡಲು ಪ್ರಾರಂಭಿಸುತ್ತಿದ್ದರು. ಬಣ್ಣ ಮೆತ್ತಿಕೊಂಡು ಎಷ್ಟು ವಿಕಾರವಾಗಿ ಕಾಣಿಸಲು ಸಾಧ್ಯವೋ ಹಾಗಿರುವುದು ಹಾಗೂ ಲಬೋ ಲಬೋ ಎಂದು ಒಂದೇ ಸಮನೆ ಹೊಯ್ಕೊಳ್ಳುವುದು ಆಚರಿಸಿಕೊಂಡು ವಿವಿಯಲ್ಲಿ ಬಹಳ ವರ್ಷಗಳಿಂದ ಆಚರಿಸಿಕೊಂಡು ಬಂದ ಸಂಪ್ರದಾಯ. ಯಾರಿಗೂ ಯಾರ ಮುಖವೂ ಗೊತ್ತು ಹತ್ತುತ್ತಿರಲಿಲ್ಲ. ಇದು ಅತಿರೇಖಕಕ್ಕೆ ಹೋಗುವ ಮೊದಲು ಪೊಲೀಸರು ಬರುತ್ತಿದ್ದರು!&lt;br /&gt;&lt;br /&gt;&lt;br /&gt;ಲೇಡೀಸ್ ಹಾಸ್ಟೇಲಿನಿಂದ ಹೊರಟ ಮೆರವಣಿಗೆ ಶ್ರೀನಗರ ಸರ್ಕಲ್‌ನಲ್ಲಿ ಕೊನೆಗೊಳ್ಳುತ್ತಿತ್ತು. ಶ್ರೀನಗರ ಸರ್ಕಲ್‌ನ ಫೇಮಸ್ ಫೊಟೋಗ್ರಾಫರ್ ಹುಡುಗರ ಬೆದರಿಕೆಗೆ ಹೆದರಿ ಸುಮ್ಮನೆ ಪ್ಲಾಶ್ ಮಾಡುತ್ತಿದ್ದ. ಒಳಗೆ ರೀಲ್ ಇರುತ್ತಿರಲಿಲ್ಲ. ನಂತರ ಅಲ್ಲೇ ಅಕ್ಕಪಕ್ಕದ ಓಣಿಗಳಿಗೆ ನುಗ್ಗಿ, ಎದುರಿಗೆ ಬಂದವರಿಗೆ ಬಣ್ಣ ಹಚ್ಚಿ, ಮಡಿಕೆ ಹೊಡೆಯಲು ಹೋಗುತ್ತಿದ್ದೆವು. ಮಡಿಕೆ ಹೊಡೆದು ಮತ್ತೆ ಶ್ರೀನಗರ ಸರ್ಕಲ್‌ಗೆ ಬಂದು ಸಂಗ್ರಹವಾಗಿರುತ್ತಿದ್ದ ದುಡ್ಡಿನಲ್ಲಿ ಕಬ್ಬಿನಹಾಲೋ ಎಳೆನೀರೋ ಕುಡಿಯುತ್ತಿದ್ದೆವು. ವಾಪಾಸ್ಸು ರೂಮು ಸೇರುವ ಹೊತ್ತಿಗೆ ಮೂರುಗಂಟೆ ಆಗುತ್ತಿತ್ತು. ಬಣ್ಣ ಮತ್ತಿರುತ್ತಿದ್ದ ಕೂದಲು ಸುತ್ತಿಗೆ ಏಟಿಗೂ ಬಗ್ಗದಂತೆ ಒಣಗಿ ನಿಂತಿರುತ್ತಿದ್ದವು. ಕಣ್ಣಲ್ಲಿ ಸಿಕ್ಕಾಪಟ್ಟೆ ಉರಿ ಉರಿ.. ಮೈಗೆ ಮತ್ತಿದ ಬಣ್ಣವನ್ನು ತಿಕ್ಕಿ ತೊಳೆಯಲು ಎಲ್ಲಾ ತರಹದ ಶಾಂಪೂ ಪ್ರಯೋಗ ನಡೆಯುತ್ತಿತ್ತು. ನಂತರ ಶ್ಯಾಲ್ಮಲಾ ಹಾಸ್ಟೇಲಿಗೆ ಹೋಗಿ ಪ್ರತೀಕನ ರೂಮಿನಲ್ಲಿ ಫಿಲಂ ನೋಡುತ್ತಿದ್ದೆವು. ಸಂಜೆ ಹೊತ್ತಿಗೆ ಕಣ್ಣಿಗೆ ಮಂಪು ಆವರಿಸಿ ಅಲ್ಲೇ ಅಡ್ಡಾಗುತ್ತಿದ್ದೆವು.&lt;br /&gt;&lt;br /&gt;&lt;br /&gt;ಈವತ್ತು ಮೈಸೂರಿನಲ್ಲಿ ಹೋಳಿಯಂತೆ. ಹೊರಗಿಳಿದು ನೋಡಿದರೆ ಎಲ್ಲಿಯೂ ಬಣ್ಣ ಹಚ್ಚಿದ ಮುಖಗಳೇ ಕಾಣಲಿಲ್ಲ. ಮೈಸೂರಿನಲ್ಲಿ ಹೋಳಿ ಹೇಗಿರುತ್ತದೆ ಎಂದು ಕುತೂಹಲದಿಂದ ಕಾದಿದ್ದ ನನಗೆ ಭಾರಿ ನಿರಾಶೆಯೇ ಆಯಿತು. ದಿನವಿಡೀ ಸಂಕಟಪಟ್ಟೆ. ಧಾರವಾಡದ ಸ್ನೇಹಿತರು ಬಣ್ಣ ಆಡೋಣ ಬಾ ಅಂತ ಕರೆದಿದ್ದರು. ಮೊದಲೇ, ಇಲ್ಲಿ ಹೀಗಂತ ಗೊತ್ತಿದ್ದರೆ ಎರಡು ದಿವಸ ರಜೆ ಹಾಕಿ ಹೋಗಿ ಬರಬಹುದಿತ್ತು ಅಂತ ಚಡಪಡಿಸುತ್ತಿದ್ದೇನೆ.&lt;br /&gt;&lt;br /&gt;&lt;br /&gt;ರಾಜೇಂದ್ರ ಚೆನ್ನಿಯವರು ಕೆಂಡಸಂಪಿಗೆಯಲ್ಲಿ ಬರೆದ ಧಾರವಾಡದ &lt;a href="http://www.kendasampige.com/preview/?p=768"&gt;&lt;span style="color:#ff6666;"&gt;ಹೋಳಿಯ ಬಣ್ಣಗಳ ಹುಚ್ಚು ಹೊಳೆ &lt;/span&gt;&lt;/a&gt;ಓದಿ ಒಂದಿಷ್ಟು ಸಮಾಧಾನಪಟ್ಟೆ...&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-4147528393317746427?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/4147528393317746427/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=4147528393317746427' title='14 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/4147528393317746427'/><link rel='self' type='application/atom+xml' href='http://www.blogger.com/feeds/3841477221276814775/posts/default/4147528393317746427'/><link rel='alternate' type='text/html' href='http://jomon-malehani.blogspot.com/2008/03/blog-post.html' title='ಯುನಿವರ್ಸಿಟಿಯ ಹೋಳಿಯೂ ಲಬೋ ಲಬೋ... ಅಳುವೂ..'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><media:thumbnail xmlns:media='http://search.yahoo.com/mrss/' url='http://bp1.blogger.com/_A5Tc7GvymLQ/R-OxQRt7tNI/AAAAAAAAAHo/OJFnnpnPc3k/s72-c/holi-wallpaper1-b%5B1%5D.jpg' height='72' width='72'/><thr:total>14</thr:total></entry><entry><id>tag:blogger.com,1999:blog-3841477221276814775.post-3617472521105282865</id><published>2008-03-12T05:30:00.000-07:00</published><updated>2008-03-12T05:48:36.715-07:00</updated><title type='text'>ಬಾಲ್ಯದ ನೆನಪುಗಳು - 1, ಅಪ್ಪ, ಫಿಲಿಪ್ ರೇಡಿಯೋ ಮತ್ತು ಎಮ್‌.ಆರ್.ಬೀಡಿ</title><content type='html'>&lt;a href="http://bp1.blogger.com/_A5Tc7GvymLQ/R9fPjxFhkBI/AAAAAAAAAHg/w0I-45ehieI/s1600-h/Dad_Son%5B1%5D.jpg"&gt;&lt;img id="BLOGGER_PHOTO_ID_5176834510064554002" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp1.blogger.com/_A5Tc7GvymLQ/R9fPjxFhkBI/AAAAAAAAAHg/w0I-45ehieI/s200/Dad_Son%5B1%5D.jpg" border="0" /&gt;&lt;/a&gt;&lt;br /&gt;&lt;div&gt;ನನ್ನ ಅಪ್ಪ ಒಬ್ಬ ಸಾಮಾನ್ಯ ರೈತ. ಅಪ್ಪನಿಗೆ ಮೂರು ವರ್ಷ ಇರುವಾಗ ಅಜ್ಜ ತೀರಿಕೊಂಡರು. ಮನೆಯಲ್ಲಿ ಬಡತನವಿತ್ತು. ಆದ್ದರಿಂದ ಚೆನ್ನಾಗಿಯೇ ಓದುತ್ತಿದ್ದ ಅಪ್ಪನ ಓದು ಅರ್ಧಕ್ಕೇ ನಿಂತಿತು. ಮುಂದಿನದು ದುಡಿಮೆಯ ಬದುಕು. ಒಬ್ಬ ಸಾಮಾನ್ಯ ರೈತನ ಲೋಕಜ್ಞಾನ ಎಷ್ಟು ವಿಶಾಲವಾಗಿರುತ್ತದೆ ಎನ್ನುವುದನ್ನು ನಾನು ಅಪ್ಪನಿಂದ ಕಲಿತಿದ್ದೇನೆ. ಆತನ ಹೆಗಲ ಮೇಲೆ ಕುಳಿತು ಅಂಗನವಾಡಿಗೆ ಹೋಗುತ್ತಿದ್ದ ದಿನಗಳಿಂದ ಹಿಡಿದು, ಇಂದಿನವರೆಗೆ ಬದುಕಿನೆಡೆಗೆ ಆತನಿಗಿರುವ ಶ್ರದ್ಧೆಯನ್ನೂ, ಪ್ರಾಮಾಣಿಕತೆಯನ್ನೂ ಪುಟ್ಟ ಅಚ್ಚರಿಯಿಂದಲೇ ಗಮನಿಸುತ್ತಾ ಬಂದಿದ್ದೇನೆ.&lt;br /&gt;&lt;br /&gt;&lt;div&gt;ಅಪ್ಪನನ್ನು ನೆನೆಯುವಾಗ ನನ್ನ ಬಾಲ್ಯವೂ ನೆನಪಾಗುತ್ತದೆ. ಬಾಲ್ಯದಲ್ಲಿ ಒಂದಿಷ್ಟು ಬೆಚ್ಚನೆಯ ಭಾವಗಳಿವೆ. ಹೇಳಿಕೊಳ್ಳುವಂತ ವಿಶೇಷ ಏನಿರದಿದ್ದರೂ, ಇದನ್ನೆಲ್ಲಾ ಸುಮ್ಮನೆ ಒಂದೆಡೆ ಬರೆದಿಡಬೇಕು ಎನಿಸುತ್ತದೆ. ಮೊದಲ ಮಳೆ ಸುರಿಯುವಾಗ ಹನಿಗಳನ್ನು ಬೊಗಸೆಯಲ್ಲಿ ಹಿಡಿಯಲು ಅಂಗಳಕ್ಕೆ ಓಡುವ ತುಂಟ ಮಗುವಿನಂತೆ, ಅದರ ಮುಗ್ದತೆಯಂತೆ ನನ್ನ ಬಾಲ್ಯಕಾಲದ ದಿನಗಳನ್ನು ಇಲ್ಲಿ ಕೆಲವು ಕಂತುಗಳಲ್ಲಿ ಬರೆಯಬೇಕೆಂದು ವಿಚಾರ ಮಾಡಿದ್ದೇನೆ. ಹಾಗೆ ವಿಚಾರ ಮಾಡಿದ ನಂತರ ಬರೆದ ಮೊದಲ ಕಂತು ಇದು. ಮೆಲ್ಲಗೆ ಸುರಿಯುವ ಮಳೆಹನಿ ನಿಮಗೆ ಇಷ್ಟವಾದರೆ ಎರಡು ಸಾಲು ಬರೆಯಿರಿ. &lt;/div&gt;&lt;br /&gt;&lt;div&gt;&lt;strong&gt;ಅಪ್ಪ, ಫಿಲಿಪ್ ರೇಡಿಯೋ ಮತ್ತು ಎಮ್‌.ಆರ್.ಬೀಡಿ&lt;/strong&gt; &lt;/div&gt;&lt;br /&gt;&lt;div&gt;&lt;/div&gt;&lt;div&gt;ಇಂದು ನಮ್ಮ ಮನೆಯ ಹಾಲ್‌ನಲ್ಲಿ ಬಣ್ಣದ ಪ್ಲಾಟ್ ಟಿವಿ ಇದೆ. ಆದರೆ ಇಂದಿಗೆ ಹತ್ತು ವರ್ಷಗಳ ಹಿಂದೆ ಅದಿರಲಿಲ್ಲ. ಅದರ ಬದಲಿಗೆ ಹಳೆಯ ಮನೆಯಲ್ಲಿ ಮಣ್ಣಿನ ಗೋಡೆಗೆ ಮೊಳೆ ಹೊಡೆದು ಒಂದು ಫಿಲಿಫ್ ರೇಡಿಯೋ ತೂಗು ಹಾಕಿದ್ದರು. ಗಾತ್ರದಲ್ಲಿ ಸಿಮೆಂಟ್ ಇಟ್ಟಿಗೆಯಷ್ಟಿದ್ದ ಆ ರೇಡಿಯೋ ಒಂದೇ ಸಮನೆ ಹಾಡುತ್ತಿದ್ದ ನೆನಪು. ಅಮ್ಮ ರೇಡಿಯೋ ಮುಟ್ಟಲು ಹೋಗುತ್ತಿರಲಿಲ್ಲ. ಹೋದರೆ ಇರುವ ಸ್ಟೇಷನ್‌ಗಳೆಲ್ಲಾ ದಿಕ್ಕುತಪ್ಪಿ ಗುಡುಗು ಮಳೆ ಸುರಿಯುತ್ತಿತ್ತು. ಅಪ್ಪನ ಸಿಟ್ಟು ಮಿಂಚಿನಂತೆ ಏರುತ್ತಿತ್ತು. &lt;/div&gt;&lt;br /&gt;&lt;div&gt;ಅಪ್ಪ ರೇಡಿಯೋ ಆರಿಸುತ್ತಿದ್ದದ್ದು ರಾತ್ರಿ 11 ಗಂಟೆಯ ನಂತರ. ಎಂಟು ಗಂಟೆಗೆ ಪ್ರಸಾರವಾಗುತ್ತಿದ್ದ ರೇಡಿಯೋ ನಾಟಕವನ್ನು ಕೇಳಿ ಅಪ್ಪ ಊಟ ಮಾಡುತ್ತಿದ್ದರು. ತೋಟದ ಕೆಲಸ ಮಾಡುವಾಗಲೂ ರೇಡಿಯೋವನ್ನು ಬದುವಿನ ಮೇಲಿರಿಸಿ ಚಿತ್ರಗೀತೆಗಳನ್ನು ಕೇಳುತ್ತಿದ್ದರು. ಆದರೆ ಅಪ್ಪನಿಗೆ ಹಾಡುಗಳಿಗಿಂತ ಇಷ್ಟವಾಗುತ್ತಿದ್ದದ್ದು ವಾರ್ತೆಗಳು. ವಾರ್ತೆಗಳನ್ನು ಕೇಳಿ ತನ್ನದೇ ಜ್ಞಾನದ ಪರಿಧಿಯೊಳಗೆ ಸರಳೀಕರಿಸಿ ನನಗೆ ಹೇಳುತ್ತಿದ್ದರು. ನಾನಾಗ ಮೂರನೆಯೋ ನಾಲ್ಕನೆಯೋ ಕ್ಲಾಸಿಗೆ ಹೋಗುತ್ತಿದ್ದೆ. ಅಪ್ಪ ತೋಟಕ್ಕೆ ಹೊರಟರೆ, ನಾನೂ ಒಂದು ಚಿಕ್ಕ ಕತ್ತಿ ಹಿಡಿದು ಹಿಂದೆ ಹೊರಡುತ್ತಿದ್ದೆ. ನನ್ನ ಮುಖ್ಯ ಕೆಲಸ ತೋಟದಲ್ಲಿ ಬಿದ್ದಿರುವ ಅಡಿಕೆಯ ಸೋಗೆಗಳನ್ನು ಒಂದೆಡೆ ಜೋಡಿಸಿಡುವುದು. ನಂತರ ಹಣ್ಣಾಗಿ ಉದುರಿ ಬಿದ್ದಿರುವ ಅಡಿಕೆಗಳನ್ನು ಹೆಕ್ಕಿ ಬುಟ್ಟಿಗೆ ಹಾಕುವುದು. ನಡುನಡುವೆ ರೇಡಿಯೋಗೆ ಬಿಸಿಲು ತಾಗದಂತೆ ಸ್ಥಳಾಂತರ ಮಾಡುವುದು.&lt;/div&gt;&lt;br /&gt;&lt;div&gt;ರೇಡಿಯೋ ಅಪ್ಪನ ಜೀವನಾಡಿಯಾಗಿತ್ತು. ವಿಶೇಷ ಆದರಕ್ಕೂ ಪಾತ್ರವಾಗಿತ್ತು. ರೇಡಿಯೋಗೆ ಹಾಕುವ ಬ್ಯಾಟರಿಗೆ ಚಾರ್ಜ್ ಖಾಲಿಯಾದರೆ, ಅಪ್ಪ, ಟಾರ್ಚ್‌ಗೆ ಹಾಕಿರುತ್ತಿದ್ದ ಶೆಲ್‌ಗಳನ್ನು ತೆಗೆದು ಹಾಕುತ್ತಿದ್ದರು. ಟಾರ್ಚ್‌ನ ಶೆಲ್ ರೇಡಿಯೋಗೆ, ರೇಡಿಯೋದ ಶೆಲ್ ಟಾರ್ಚ್‌ಗೆ ಮತ್ತೆ ಮತ್ತೆ ಬದಲಾವಣೆಯಾಗುತ್ತಲೇ ಇರುತ್ತಿತ್ತು. ಅಪ್ಪ ರೇಡಿಯೋ ಕೇಳುತ್ತಾ ಮಾಡುತ್ತಿದ್ದ ಮತ್ತೊಂದು ಕೆಲಸವೆಂದರೆ ಬೀಡಿ ಸೇದುವುದು. ಅದು ಎಮ್‌.ಆರ್. ಬೀಡಿ. ಮಂಗಳೂರಿನಿಂದ ಬರುತ್ತಿತ್ತು. ಆಗಿನ ಕಾಲಕ್ಕೆ ಸ್ಟಾಂಡರ್ಡ್ ಎಂದು ಕರೆಸಿಕೊಂಡಿತ್ತು. ಆ ಬ್ರಾಂಡ್ ಬಿಟ್ಟರೆ ಅಪ್ಪ ಬೇರಾವ ಬೀಡಿಯನ್ನೂ ಮುಟ್ಟುತ್ತಿರಲಿಲ್ಲ ಅನಿಸುತ್ತದೆ. ಒಂದು ದಿನಕ್ಕೆ ಎರಡರಿಂದ ಮೂರು ಕಟ್ ಎಮ್‌.ಆರ್ ಬೀಡಿಗಳನ್ನು ಅನಾಮತ್ತಾಗಿ ಎಳೆದು ಬೀಸಾಕುತ್ತಿದ್ದ ಅಪ್ಪ, ಅದರ ಮೊಂಡು ತುಣುಕುಗಳನ್ನು ಅಂಗಳದಲ್ಲಿ ಎಸೆಯುತ್ತಿದ್ದರು. ಕಸ ಗುಡಿಸಲು ಅಮ್ಮ ಬಂದಾಗ ಬೀಡಿ ಹಾಗೂ ಬೆಂಕಿ ಕಡ್ಡಿಯ ನೂರಾರು ತುಂಡುಗಳನ್ನು ನೋಡಿ, ಬೀಡಿ ಸೇದುವ ಊರಿನ ಗಂಡಸರಿಗೆಲ್ಲಾ ಬೈಯುತ್ತಿದ್ದಳು. ಇದಕ್ಕೆ ಕಾರಣವೂ ಇತ್ತು. ನಮ್ಮೂರಿನಲ್ಲಿ ಯಾರ ಬಳಿ ಬೀಡಿ ಖಾಲಿಯಾದರೂ ನಮ್ಮಪ್ಪನ ಹತ್ತಿರ ಇರುತ್ತಿತ್ತು. ಬೀಡಿ ಸಾಲ ಕೇಳಲು ಬಂದವರೆಲ್ಲಾ, ಎರಡೆರಡು ಪುಕ್ಕಟೆ ಬೀಡಿ ಸೇದಿ ಅಂಗಳದಲ್ಲಿ ಬೀಡಿಯ ಬೂದಿಯಿಂದ ರಂಗವಲ್ಲಿ ಹಾಕಿ ಹೋಗುತ್ತಿದ್ದರು. &lt;/div&gt;&lt;br /&gt;&lt;div&gt;ಆಗ ನಾವು ಲೆಮನ್ ಗ್ರಾಸ್ ಎಂಬ ತೈಲದ ಹುಲ್ಲು ಬೆಳೆಯುತ್ತಿದ್ದೆವು. ತಿಂಗಳಿಗೊಮ್ಮೆ ಹುಲ್ಲನ್ನು ಕತ್ತರಿಸಬೇಕಿತ್ತು. ಹುಲ್ಲು ಕತ್ತರಿಸುವ ದಿನಗಳಲ್ಲಿ ಅಪ್ಪ-ಅಮ್ಮನಿಗೆ ಅಹೋರಾತ್ರಿ ಕೆಲಸ. ಅಮ್ಮ ತಲೆಗೊಂದು ಟವಲು ಕಟ್ಟಿಕೊಂಡು ಇತರೆ ಕೆಲಸದ ಹೆಂಗಸರೊಂದಿಗೆ ಸಿಸರ್ಲಾ ಎಂದು ಕರೆಯುತ್ತಿದ್ದ ಆ ಹುಲ್ಲನ್ನು ಕತ್ತರಿಸುತ್ತಿದ್ದರು. ಅಪ್ಪ ಪಕ್ಕದ ಕಾಡಿನಿಂದ ಒಣ ಮರದ ದಿಮ್ಮಿಗಳನ್ನು ಎತ್ತಿ ತಂದು ಕುದಿಯುತ್ತಿರುವ ಬಾಯ್ಲರ್ ಕೆಳಗಿನ ಬೆಂಕಿಗೆ ದೂಡುತ್ತಿದ್ದರು. ಬೆಂಕಿಯ ಕಾವು ಹೆಚ್ಚಿದಂತೆ ಎಣ್ಣೆ ಆವಿಯ ರೂಪದಲ್ಲಿ ಹೊರಬಂದು ತೊಟ್ಟಿಕ್ಕುತ್ತಾ ಪಾತ್ರೆಯೊಳಗೆ ಬೀಳುತ್ತಿತ್ತು. ಬಂಗಾರ ವರ್ಣದ ಎಣ್ಣೆ ನೀರಿನ ಮೇಲೆ ತೇಲುತ್ತಾ, ಊರಿಗೆಲ್ಲಾ ಸುವಾಸನೆ ಹೊರಡಿಸುತ್ತಿತ್ತು. ಈ ರೀತಿ ಹುಲ್ಲು ಬೇಯಿಸುವ ರಾತ್ರಿಗಳಲ್ಲಿ ನಾನೂ ಅಪ್ಪನೊಂದಿಗೆ ಭಟ್ಟಿಮನೆ ಎಂದು ಕರೆಯುತ್ತಿದ್ದ ಈ ಸ್ಥಳಕ್ಕೆ ಹೋಗುತ್ತಿದ್ದೆ. ಕಟ್ಟಿಗೆಯನ್ನು ಬೆಂಕಿಯೊಳಗೆ ದೂಡಲು ಒಂದು ಉದ್ದನೆಯ ಕೂಲನ್ನು ಅಪ್ಪ ಬಳಸುತ್ತಿದ್ದರು. ಅದರ ತುದಿಯಿಂದ ನಿಗಿನಿಗಿಸುತ್ತಿರುವ ಕೆಂಡವನ್ನು ಹೊರಗೆಳೆದು ಬೀಡಿ ಹಚ್ಚಿಕೊಳ್ಳುತ್ತಿದ್ದರು. ಆ ರೀತಿ ಅಪ್ಪ ಬೀಡಿ ಸೇದುವುದನ್ನು ನೋಡುವುದೇ ಒಂದು ಸೊಗಸಾಗಿತ್ತು. ನಾನು ಕಣ್ಣು ಮಿಟುಕಿಸದೆ ನೋಡುತ್ತಾ ಕೂರುತ್ತಿದ್ದೆ. ಈ ಬೀಡಿ ಸೇದುವುದೂ ಒಂದು ಕಲೆಯೆಂದೇ ಆಗ ನಾನು ಭಾವಿಸಿದ್ದೆ. &lt;/div&gt;&lt;br /&gt;&lt;div&gt;ಲೆಮನ್‌ಗ್ರಾಸ್ ಹುಲ್ಲಿನ ಅಂಚು ಗರಗಸದಂತೆ ಮೊನುಚಾಗಿರುತ್ತದೆ. ಭಟ್ಟಿಮನೆಯಲ್ಲಿ ಮಲಗುವ ರಾತ್ರಿಗಳಲ್ಲಿ ಈ ಹುಲ್ಲು ಮೈಗೆ ಸೋಕಿದಾಗ ತುರಿಕೆ ಪ್ರಾರಂಭವಾಗುತ್ತಿತ್ತು. ಭಟ್ಟಿಮನೆಗೆ ಮೇಲ್ಛಾವಣಿ ಇರಲಿಲ್ಲ. ಭಟ್ಟಿಮನೆಯಲ್ಲಿ ಮಲಗಿ ಆಗಸದಲ್ಲಿ ಮಿಂಚುಹುಳದಂತೆ ಮಿಂಚುತ್ತಾ ಹೋಗುವ ಜೆಟ್ ವಿಮಾನಗಳನ್ನು ನೋಡುವುದು ನನಗಿಷ್ಟದ ಕೆಲಸವಾಗಿತ್ತು. ಆ ಸುಖದೊಳಗೆ ತುರಿಕೆ ಎನ್ನುವುದು ಮರೆತು ಹೋಗುತ್ತಿತ್ತು. ಅಪ್ಪ ಮಾತ್ರ ರೇಡಿಯೋ ಕೇಳುತ್ತಾ, ಬೆಂದ ಹುಲ್ಲನ್ನು ಬಾಯ್ಲರ್‌ನಿಂದ ಹೊರಗೆಳೆದು ಹಾಕುತ್ತಿದ್ದ. ನಾನು ರಾತ್ರಿ ಟಾರ್ಚ್ ಬೆಳಗಿಸುತ್ತಾ, ಜೋರಾಗಿ ಹಾಡು ಹೇಳುತ್ತಾ, ಮನೆಗೆ ಹೋಗಿ ಬುತ್ತಿ ತರುವ ಹೊತ್ತಿಗೆ, ಅಪ್ಪ ಹೊಸದಾಗಿ ಹಸಿ ಹುಲ್ಲು ತುಂಬಿ, ಗೆದ್ದಲು ಹುತ್ತದ ಅಂಟು ಮಣ್ಣನ್ನು ಬಾಯ್ಲರ್‌ನ ವೃತ್ತಾಕಾರದ ಮುಚ್ಚಳದ ಸುತ್ತ ಸವರಿ, ಬಿಗಿಯಾಗಿ ಮುಚ್ಚಿರುತ್ತಿದ್ದ. ನಂತರ ಆರು ಗಂಟೆಗಳ ಕಾಲ ಬೆಂಕಿ ನೋಡಿಕೊಳ್ಳುವ ಕೆಲಸ ನನ್ನದು. ದಣಿವರಿಯದ ಕೆಲಸಗಾರನಾಗಿದ್ದ ಅಪ್ಪ, ಯಾವಾಗಾದರೊಮ್ಮೆ ದೇಹಕ್ಕೊಂದಿಷ್ಟು ವಿಶ್ರಾಂತಿ ಪಡೆಯಲು ಹಳೆಯ ಈಚಲು ಮರದ ಚಾಪೆಗೆ ಮೈಯಾನಿಸಿದರೆ ಆತನಿಗೆ ಜೊಂಪು ಹತ್ತುತ್ತಿತ್ತು. ಮಧ್ಯೆ ಅದ್ಯಾವ ಹೊತ್ತಿನಲ್ಲಿ ಎದ್ದು ಹೋಗಿ ಕಟ್ಟಿಗೆಯನ್ನು ಹೊಡೆದು ಹಾಕುತ್ತಿದ್ದನೋ ನನಗೆ ಶಬ್ದವೂ ಕೇಳಿಸದಷ್ಟು ನಿದ್ರೆ. &lt;/div&gt;&lt;br /&gt;&lt;div&gt;ಹೀಗೆ ಒಂದು ದಿನ ಭಟ್ಟಿಮನೆಯ ಕಂಬಕ್ಕೆ ನೇತು ಹಾಕಿದ್ದ ಫಿಲಿಫ್ ರೇಡಿಯೋ ಕಳಗೆ ಬಿದ್ದು ಹಾಡು ನಿಲ್ಲಿಸಿತು. ಅಪ್ಪ ಅದನ್ನು ಬಲು ಸಂಕಟದಿಂದಲೇ ಭಟ್ಕಳದ ರಿಪೇರಿ ಅಂಗಡಿಯೊಂದಕ್ಕೆ ದಾಖಲಿಸಿದರು. ರಿಪೇರಿ ಮಾಡುವವನು ಏನು ಮಾಡಿದನೋ ಏನೋ? ರೇಡಿಯೋ ಮೊದಲಿನಂತೆ ಹಾಡಲೇ ಇಲ್ಲ. ಜಪಾನ್ ಮೇಡ್ ಆಗಿದ್ದ ಅದರಿಂದ ಯಾವುದೇ ಒಂದು ವಸ್ತುವನ್ನು ರಿಪೇರಿ ಮಾಡುವಾತ ಎಗರಿಸಿದ್ದಾನೆ ಎನ್ನುವುದು ಅಪ್ಪನ ವಾದವಾಗಿತ್ತು. ಮನೆಗೆ ಬಂದ ಒಂದು ತಿಂಗಳಲ್ಲೇ ಶಾಶ್ವತವಾಗಿ ರೇಡಿಯೋ ಕಾಯಿಲೆ ಬಿತ್ತು. ಹೊಸದೊಂದು ರೇಡಿಯೋ ತರಲು ಹಣ ಹೊಂದಿಸಲು ಮತ್ತೆ ಅಪ್ಪ ಒಂದು ವರ್ಷ ಕಾಯಬೇಕಾಯಿತು.&lt;br /&gt;ಈಗ ಅಪ್ಪ ಬೀಡಿ ಸೇದುವುದನ್ನು ಬಿಟ್ಟಿದ್ದಾನೆ.. ಮೂವತ್ತು ವರ್ಷದಿಂದ ಸತತವಾಗಿ ಬೀಡಿ ಸೇದುತ್ತಿದ್ದ ವ್ಯಕ್ತಿಯೊಬ್ಬ ಇದಕ್ಕಿದಂತೆ ಸ್ವಯಂ ಪ್ರೇರಣೆಯಿಂದ ಅದನ್ನು ನಿಲ್ಲಿಸಿದ ಕಥೆ ಅದು. ಸೊಗಸಾಗಿದೆ.. ಮುಂದಿನ ಕಂತಿನಲ್ಲಿ ಬರೆಯುತ್ತೇನೆ. &lt;/div&gt;&lt;/div&gt;&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-3617472521105282865?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/3617472521105282865/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=3617472521105282865' title='10 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/3617472521105282865'/><link rel='self' type='application/atom+xml' href='http://www.blogger.com/feeds/3841477221276814775/posts/default/3617472521105282865'/><link rel='alternate' type='text/html' href='http://jomon-malehani.blogspot.com/2008/03/1.html' title='ಬಾಲ್ಯದ ನೆನಪುಗಳು - 1, ಅಪ್ಪ, ಫಿಲಿಪ್ ರೇಡಿಯೋ ಮತ್ತು ಎಮ್‌.ಆರ್.ಬೀಡಿ'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><media:thumbnail xmlns:media='http://search.yahoo.com/mrss/' url='http://bp1.blogger.com/_A5Tc7GvymLQ/R9fPjxFhkBI/AAAAAAAAAHg/w0I-45ehieI/s72-c/Dad_Son%5B1%5D.jpg' height='72' width='72'/><thr:total>10</thr:total></entry><entry><id>tag:blogger.com,1999:blog-3841477221276814775.post-3437481775699861129</id><published>2008-02-25T02:49:00.000-08:00</published><updated>2008-02-25T03:14:58.535-08:00</updated><title type='text'>ನಿಜವಾದ ಚಿನ್ನಗಳು ಮತ್ತು ನಾನು ಪಡೆದ ಚಿನ್ನದ ಪದಕಗಳು</title><content type='html'>&lt;a href="http://bp3.blogger.com/_A5Tc7GvymLQ/R8KidBT_eNI/AAAAAAAAAHE/4BnBHduJr7c/s1600-h/gold+medal.jpg"&gt;&lt;img id="BLOGGER_PHOTO_ID_5170873941626943698" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp3.blogger.com/_A5Tc7GvymLQ/R8KidBT_eNI/AAAAAAAAAHE/4BnBHduJr7c/s200/gold+medal.jpg" border="0" /&gt;&lt;/a&gt;ಯಾಕೋ ಎಲ್ಲವೂ ನೆನಪಾಗುತ್ತಿದೆ......&lt;br /&gt;ಚಪ್ಪಲಿಯೇ ಇಲ್ಲದೆ ಬರಿಗಾಲಿನಲ್ಲಿ ಶಾಲೆಗೆ ನಡೆದು ಹೋಗಿದ್ದು, ಅಂಗಾಲಿಗೆ ಬಿದಿರಿನ ಮುಳ್ಳು ಚುಚ್ಚಿ ಕೀವು ತುಂಬಿಕೊಂಡದ್ದು, ಮಳೆಗಾಲದಲ್ಲಿ ನೆನೆದು ಮನೆಗೆ ಬಂದದ್ದು, ಬೇರೆಯವರ ಕೊಡೆ ಕೆಳಗೆ ನಿಲ್ಲಲು ಹೋಗಿ ಬೈಸಿಕೊಂಡದ್ದು, ಪೆನ್ಸಿಲ್‌ನಲ್ಲಿ ಬರೆಯುತ್ತಾ ಪೆನ್ನಿಗಾಗಿ ಆಸೆ ಪಟ್ಟದ್ದು, ಪೆನ್ನಿನ ಕಡ್ಡಿಯಲ್ಲಿ ಬರೆದು ಕೈ ಬೆರಳುಗಳ ಸಂಧಿಯೆಲ್ಲಾ ನೀಲಿ ಮಸಿ ಅಂಟಿಕೊಂಡದ್ದು, ಹಳೆಯ ವಿದ್ಯಾರ್ಥಿಗಳ ಹಳೆಯ ಪುಸ್ತಕವನ್ನು ಅರ್ಧ ರೇಟಿಗೆ ಕೊಂಡು ಬೇಸಿಗೆಯಲ್ಲಿ ರಜೆಯಲ್ಲಿ ಓದಿಕೊಂಡದ್ದು, ದುಡ್ಡಿದ್ದ ವಿದ್ಯಾರ್ಥಿಗಳು ಐಸ್‌ಕ್ಯಾಂಡಿ ಕೊಂಡು ಚೀಪುವಾಗ ದೂರದಲ್ಲಿ ನಿಂತು ಆಸೆಗಣ್ಣುಗಳಿಂದ ನೋಡಿದ್ದು, ಇರುವ ಒಂದೇ ನೋಟ್ ಬುಕ್‌ನಲ್ಲಿ ಎಲ್ಲ ವಿಷಯವನ್ನೂ ಬರೆದುಕೊಂಡದಕ್ಕೆ ಮೇಷ್ಟ್ರು ಬೆಂಚ್ ಹತ್ತಿ ನಿಲ್ಲಿಸಿದ್ದು, ಟಿಫಿನ್‌ಬಾಕ್ಸ್ ಕೈಯಿಂದ ಜಾರಿ ಬಿದ್ದು ಅನ್ನ ಚೆಲ್ಲಿದಾಗ ಮಧ್ಯಾಹ್ನ ಹಸಿವಿನಿಂದಾಗಿ ಅತ್ತಿದ್ದು, ಮಗ್ಗಿ ಬರಲಿಲ್ಲವೆಂದು ಜಯಾ ಟೀಚರ್ ಪಳಾರನೆ ಕೆನ್ನೆಗೆ ಹೊಡೆದಾಗ ಕಣ್ಣೀರು ಜಿನುಗಿದ್ದು, ಸೀಮೆ ಎಣ್ಣೆ ಬುಡ್ಡಿಯ ಬೆಳಕಲ್ಲಿ ಇಂಗ್ಲೀಷ್ ಪದ್ಯ ಕಂಠಪಾಠ ಮಾಡಿದ್ದು, ಬಸ್ಸಿಗೆ ದುಡ್ಡಿಲ್ಲವೆಂದು ಎಂಟು ಕಿಲೋಮೀಟರ್ ನಡೆದು ರಾತ್ರಿ ಮನೆ ಸೇರಿದ್ದು....&lt;br /&gt;&lt;br /&gt;ಅಪ್ಪ ಅಮ್ಮ ಹಗಲಿರುಳೂ ದುಡಿದದ್ದು.. ನಮ್ಮನ್ನು ಓದಿಸಲು ಚಿಲ್ಲರೆ ಹಣವನ್ನೂ ಕೂಡಿಟ್ಟದ್ದು, ಉಪವಾಸವಿದ್ದರೂ ನಮ್ಮನ್ನು ಶಾಲೆಗೆ ಕಳುಹಿಸಿದ್ದು, ಬೆಳದಿಂಗಳ ರಾತ್ರಿಯಲ್ಲೂ ಕೆಲಸ ಮಾಡಿ ಮನೆ ಕಟ್ಟಿದ್ದು.. ಹೊಸ ಯೂನಿಫಾರ್ಮ್ ಹೊಲಿಸಲು ಹಣ ಕಡ ತಂದದ್ದು.. ಅಮ್ಮನ ಬಂಗಾರ ಬ್ಯಾಂಕಿನಲ್ಲಿಟ್ಟದ್ದು, ಕಂತು ತಪ್ಪಿದಾಗ ಬ್ಯಾಂಕಿನವರು ನೋಟೀಸು ಕಳುಹಿಸಿದ್ದು.. ಮಕ್ಕಳಿಗೆ ಹೊಸ ಬಟ್ಟೆ ಹೊಲಿಸಿ ತಾವು ಹಾಕಿದಷ್ಟೇ ಖುಷಿಯಿಂದ ಅಪ್ಪ ಅಮ್ಮ ಸಂಭ್ರಮಿಸಿದ್ದು.. ಮಕ್ಕಳು ಪರೀಕ್ಷೆಯಲ್ಲಿ ಪಾಸಾದಾಗ ಊರಿಗೆಲ್ಲಾ ಹೇಳಿ ಹಿರಿ ಹಿರಿ ಹಿಗ್ಗಿದ್ದು. ಬಡತನವಿದ್ದರೂ ಅದು ನಮಗೆ ಸೋಕದಂತೆ ಬೆಳೆಸಿದ್ದು... ಅಪ್ಪ ಹೆಗಲ ಮೇಲೆ ಕೂರಿಸಿಕೊಂಡು ತುಂಬಿ ಹರಿಯುವ ನದಿ ದಾಟಿಸಿದ್ದು, ಕರೆಂಟೂ ಇಲ್ಲದ ಕುಗ್ರಾಮವಾದ ನಮ್ಮೂರಲ್ಲಿ ನಾವು ಆಡಿ ಬೆಳೆದದ್ದು...ಬದುಕನ್ನು ಪ್ರೀತಿಸಲು ಕಲಿತಿದ್ದು.....&lt;br /&gt;&lt;br /&gt;ಮುಂದೆ ದೊಡ್ಡವನಾದದ್ದು, ಗೆಳೆಯರು ಜೊತೆಯಾದದ್ದು, ಒಂದೇ ತಟ್ಟೆಯಲ್ಲಿ ಉಂಡು ಮಲಗಿದ್ದು. ಕಷ್ಟ ಸುಖ ಹಂಚಿಕೊಂಡದ್ದು, ಪರಸ್ಪರ ಸಾಲ ಕೊಟ್ಟಿದ್ದು, ತೆಗೆದುಕೊಂಡಿದ್ದು, ಪರೀಕ್ಷೆಯ ಹಿಂದಿನ ದಿನವಷ್ಟೇ ಓದುತ್ತಿದ್ದದ್ದು, ಗುಂಪು ಗುಂಪಾಗಿ ಇಡಿ ವಿಶ್ವವಿದ್ಯಾಲಯವನ್ನೇ ಸುತ್ತಿದ್ದು..ಒಮ್ಮೊಯೂ ಲೈಬ್ರರಿಯೆಡೆಗೆ ಮುಖ ಮಾಡದೆ ಅದರ ಮುಂದಿನಿಂದಲೇ ಹೋಗುತ್ತಿದ್ದದ್ದು.. ಮಾಸ್ ಬಂಕ್ ಮಾಡುತ್ತಿದ್ದದ್ದು.. ಮಾಸ್ತರರ ತಲೆ ತಿಂದದ್ದು.. ಕ್ಲಾಸಿನ ಹಿಂದಿನ ಡೆಸ್ಕಿನಲ್ಲಿಯೇ ಕೂರುತ್ತಿದ್ದದ್ದು.. ಅದ್ಭುತವೆನ್ನುವ ಟೀಮ್ ವರ್ಕ್ ಮಾಡುತ್ತಿದ್ದದ್ದು... ವಿಭಾಗದಲ್ಲೇ ಯಾವ ಬ್ಯಾಚಿನ ವಿದ್ಯಾರ್ಥಿಗಳೂ ಮಾಡದಿದ್ದಂತ ಹೊಸ ಹೊಸ ಯೋಜನೆಗಳಿಗೆ ಕೈ ಹಾಕುತ್ತಿದ್ದದ್ದು.. ಸಂಜೆ ಸಮಾಚಾರ ಪತ್ರಿಕೆ ತಂದದ್ದು, ಡಾಕ್ಯುಮೆಂಟರಿ ಮಾಡಿದ್ದು.. ಕಂಪ್ಯೂಟರ್, ಇಂಟರ್‌ನೆಟ್ ಅಂತ ತಲೆಕೆಡಿಸಿಕೊಂಡದ್ದು...ಉದ್ದಾರ ಆಗೋದಿಲ್ಲ ಎಂದ ಶಿಕ್ಷಕರೇ ಶಭಾಸ್ ಅಂದದ್ದು.&lt;br /&gt;&lt;br /&gt;ಹೀಗೆ ಇವೆಲ್ಲವೂ ಆಗಿ ಬೆಳಗಾಗುವ ಹೊತ್ತಿಗೆ ನಾನು ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಿಂದ ಸ್ನಾತಕೋತ್ತರ ಪದವಿ ಮುಗಿಸಿ ಹೊರಬಿದ್ದಿದ್ದೆ. ನೋಟ್ಸ್ ಬರೆದು, ಮಾಸ್ತರು ಹೇಳಿದ್ದನ್ನು ಕೇಳಿಸಿಕೊಂಡು, ಲೈಬ್ರರಿಗೆ ಹೋಗಿ ಕಂಠ ಪಾಠ ಮಾಡಿ, ನೀಟಾಗಿ ಎಕ್ಸಾಮ್ ಬರೆಯುವ ಬುದ್ಧಿ ನನಗೆ ಮೊದಲಿನಿಂದಲೂ ಬೆಳೆಯಲೇ ಇಲ್ಲ. ಅಸಲಿಗೆ ನಾನು ಎರಡು ವರ್ಷ ವಿವಿಯಲ್ಲಿದ್ದರೂ, ಲೈಬ್ರರಿ ಕಾರ್ಡ್ ಕೂಡ ಮಾಡಿಸಿರಲಿಲ್ಲ. ನನ್ನ ರೂಮಿನಲ್ಲಿ ಒಂದೇ ಒಂದು ಟೆಸ್ಟ್ ಬುಕ್ ಇರುತ್ತಿರಲಿಲ್ಲ. ನೀನು ಯಾವಾಗ ಓದುತ್ತೀಯಾ ಎನ್ನುವವರಿಗೆ ನಾನು ಯಾವಾಗಲೂ ಪ್ರಶ್ನೆಯಾಗಿಯೇ ಉಳಿದಿದ್ದೆ. ಪರೀಕ್ಷೆಯ ಹಿಂದಿನ ದಿನ ಎಲ್ಲ ಗೆಳೆಯರನ್ನು ಕಟ್ಟಿಕೊಂಡು ಎರಡು ಗಂಟೆಗಳು ಡಿಸ್ಕಸ್ ಮಾಡುತ್ತಿದ್ದೆ. ಕರ್ನಾಟಕ ವಿವಿಯ ವಿಶಾಲ ಆವರಣದಲ್ಲಿ ಪತ್ರಿಕೋದ್ಯಮ ವಿಭಾಗದ ಪಕ್ಕದಲ್ಲಿ, ಜೆನೆಟಿಕ್ಸ್ ವಿಭಾಗಕ್ಕೆ ಅಂಟಿಕೊಂಡಂತೆ ಡಾ. ಪಾವಟೆಯವರ ಸಮಾಧಿ ಇದೆ. ಎಲ್ಲರೂ ಸುಡುಗಾಡು ಎಂದು ಕರೆಯುವ ಆ ತಣ್ಣನೆಯ ವಾತಾವರಣದಲ್ಲಿ ನಾವೆಲ್ಲ ಗೆಳೆಯರು ಪರೀಕ್ಷೆ ನಾಳೆ ಇದ್ದರೆ ಇಂದು ಕಂಬೈಂಡ್ ಸ್ಟಡಿಯ ಹೆಸರಲ್ಲಿ ಒಂದುಗೂಡಿ ಲೋಕಾಭಿಮುಖರಾಗಿ ಹರಟೆ ಹೊಡೆಯುತ್ತಿದ್ದೆವು. ಅಲ್ಲಿಗೆ ಒಂದು ಸೆಮಿಸ್ಟರ್‌ನ ನಮ್ಮ ಓದು ನಿರಾತಂಕವಾಗಿ ಮುಗಿದು ಹೋಗುತ್ತಿತ್ತು.&lt;br /&gt;&lt;br /&gt;ಈಗ ಒಂದು ಅಂತರ್ಜಾಲ ನಿಯತಕಾಲಿಕದಲ್ಲಿ ಉಪಸಂಪಾದಕ ಎಂದು ಕರೆಸಿಕೊಳ್ಳುವ ಈ ನಾನೆಂಬ ನಾನು, ಮೊನ್ನೆ ಕವಿವಿಯ ಘಟಿಕೋತ್ಸವಕ್ಕೆ ಹೋಗಿದ್ದೆ. ಅಪ್ಪ ಅಮ್ಮ ಬಂದಿದ್ದರು. ಅಮ್ಮನ ಕಣ್ಣಲ್ಲಿ ಕಣ್ಣೀರು. ಯಾಕಮ್ಮಾ ಅಳುತ್ತೀಯಾ.. ಖುಷಿಯಾಗಿರಬೇಕು ಎಂದೆ. ಮಕ್ಕಳು ಏನಾದರೂ ಸಾಧಿಸಿದರೆ ಅದಕ್ಕಿಂತ ತಂದೆತಾಯಿಗಳಿಗೆ ಇನ್ನೇನು ಬೇಕೋ, ನಾನು ಖುಷಿಯಿಂದ ಅಳುತ್ತಿದ್ದೇನೆ ಎಂದರು. ನನ್ನ ಕಣ್ಣಲ್ಲೂ ಕಣ್ಣೀರು ಹನಿಸಿತ್ತು. ಅಪ್ಪ ಬಂದು ಕೈ ಹಿಡಿದಾಗ ಕೆಲಸ ಮಾಡಿ ಒರಟಾಗಿರುವ ಅವರ ಅಂಗೈಯ ಸ್ಪರ್ಶ ಎಲ್ಲವನ್ನೂ ಹೇಳಿತ್ತು. ನನ್ನ ಗೆಳೆಯರೆಲ್ಲರೂ ತಮ್ಮದೇ ಕಾರ್ಯಕ್ರಮ ಎಂಬಂತೆ ಜೊತೆಗಿದ್ದರು. ಪತ್ರಕರ್ತರು ಸುತ್ತುವರೆದರು. ನಿಮ್ಮ ಸಾಧನೆಗೆ ಯಾರು ಪ್ರೇರಣೆ ಎಂದು ಕೇಳಿದರು. ಎಷ್ಟು ಜನರ ಹೆಸರು ಹೇಳಲಿ?&lt;br /&gt;&lt;br /&gt;ಈ ಬಾರಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅತಿ ಹೆಚ್ಚು ಚಿನ್ನದ ಪದಕಗಳನ್ನು ಗಳಿಸಿದ ವಿದ್ಯಾರ್ಥಿ ನಾನು. ಚಿಕ್ಕದೊಂದು ಸಾಧನೆ. ಇಷ್ಟ ಪಟ್ಟು ಕಲಿತ ವಿಷಯವೊಂದರಲ್ಲಿ ಕಷ್ಟಪಟ್ಟಿದ್ದಕ್ಕೆ ಆರು ಚಿನ್ನದ ಪದಕಗಳು. ಜೊತೆಗೊಂದಿಷ್ಟು ಸಂತಸ. ಛಾಯಾಗ್ರಾಹಕರು ತೆಗೆದ ಗ್ರುಪ್ ಫೋಟೋದಲ್ಲಿ ಮೂವರು ಚಿನ್ನದ ಹುಡುಗಿಯರ ನಡುವೆ ಎದ್ದು ಕಾಣುವ ಚಿನ್ನದ ಹುಡುಗ!&lt;br /&gt;&lt;br /&gt;ಆದರೆ ಅಸಲಿಗೆ ಅಸಲಿಗೆ ಚಿನ್ನದ ಹುಡುಗ ನಾನಲ್ಲ. ನಿಜವಾದ ಚಿನ್ನಗಳು ನನ್ನ ತಂದೆತಾಯಿಗಳು. ಪರಸ್ಪರ ರಕ್ತಸಂಬಂಧ ಇಲ್ಲದಿದ್ದರೂ, ಹಾಗಿರುವವರಿಗಿಂತ ಅನ್ಯೂನವಾಗಿರುವ ನನ್ನ ಗೆಳೆಯರು. ಅಕ್ಷರ ಕಲಿಸಿದ ಶಿಕ್ಷಕರು., ಎಲ್ಲೆಲ್ಲೋ ಹೇಗೇಗೋ ನೆರವಾಗಿರುವ, ನೆರವಿನ ಹಸ್ತಗಳು.. ಎಲ್ಲರ ಹೆಸರು ಬರೆದರೆ ನನ್ನ ಈ ಬ್ಲಾಗ್ ಸಾಕಾಗುವುದಿಲ್ಲ. ಇವರೆಲ್ಲರು ಇಲ್ಲದಿದ್ದರೆ ನಾನು ಚಿನ್ನದ ಪದಕ ಹಾಕಿಸಿಕೊಳ್ಳಲು ಕವಿವಿಯ ಗಾಂಧೀಭವನದ ಮೆಟ್ಟಿಲು ಹತ್ತುತ್ತಿರಲಿಲ್ಲ. ತೆರೆ ಮರೆಯಲ್ಲಿರುವ ನಿಜವಾದ ಚಿನ್ನಗಳಿಗೆ ನಾನು ಪಡೆದ ಚಿನ್ನದ ಪದಕಗಳಿಂದ ಬೆಲೆ ಕಟ್ಟಲು ಬರುವುದಿಲ್ಲ. ಚಿನ್ನಕ್ಕಿಂತಲೂ ಬದುಕು ದೊಡ್ಡದಲ್ಲವೇ? ಬದುಕು ಕಲಿಸುವ ಪಾಠ ಇನ್ನೂ ದೊಡ್ಡದಲ್ಲವೇ?&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-3437481775699861129?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/3437481775699861129/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=3437481775699861129' title='33 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/3437481775699861129'/><link rel='self' type='application/atom+xml' href='http://www.blogger.com/feeds/3841477221276814775/posts/default/3437481775699861129'/><link rel='alternate' type='text/html' href='http://jomon-malehani.blogspot.com/2008/02/blog-post.html' title='ನಿಜವಾದ ಚಿನ್ನಗಳು ಮತ್ತು ನಾನು ಪಡೆದ ಚಿನ್ನದ ಪದಕಗಳು'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><media:thumbnail xmlns:media='http://search.yahoo.com/mrss/' url='http://bp3.blogger.com/_A5Tc7GvymLQ/R8KidBT_eNI/AAAAAAAAAHE/4BnBHduJr7c/s72-c/gold+medal.jpg' height='72' width='72'/><thr:total>33</thr:total></entry><entry><id>tag:blogger.com,1999:blog-3841477221276814775.post-3058249249344899843</id><published>2008-01-25T03:39:00.000-08:00</published><updated>2008-01-25T03:43:13.397-08:00</updated><title type='text'>ತರಕಾರಿ ಮಾರುವ ಇಬ್ಬರು ಅಜ್ಜಿಯರ ಕಥೆ</title><content type='html'>&lt;a href="http://bp2.blogger.com/_A5Tc7GvymLQ/R5nLJQ9y8zI/AAAAAAAAAG8/40EwTvXEusU/s1600-h/TakeMyHand%5B1%5D.jpg"&gt;&lt;img id="BLOGGER_PHOTO_ID_5159378208163033906" style="FLOAT: left; MARGIN: 0px 10px 10px 0px; CURSOR: hand" alt="" src="http://bp2.blogger.com/_A5Tc7GvymLQ/R5nLJQ9y8zI/AAAAAAAAAG8/40EwTvXEusU/s200/TakeMyHand%5B1%5D.jpg" border="0" /&gt;&lt;/a&gt;&lt;br /&gt;&lt;div&gt;ಮೈಸೂರಿನ ಹಿನಕಲ್ ಬಳಿ ಇರುವ ಸಿಂತ್ರಿ ಟೇಲರ್ ಅಂಗಡಿಯ ಎದುರಿಗೆ ತಳ್ಳುಗಾಡಿಯಲ್ಲಿ ತರಕಾರಿ ಮಾರುತ್ತಿರುವ ಈ ಅಜ್ಜಿಗೆ ಹತ್ತಿರ ಹತ್ತಿರ ಎಪ್ಪತ್ತು ವಯಸ್ಸಿರಬಹುದು. ಚರ್ಮ ಸುಕ್ಕುಗಟ್ಟಿ, ಕೆನ್ನೆಗಳು ಗುಳಿಬಿದ್ದು, ಆಳಕ್ಕಿಳಿದಿರುವ ಬೊಚ್ಚು ಬಾಯಿಯಲ್ಲಿ ಟಮೊಟೋ ಮೂರು ರೂಪಾಯಿ ಎನ್ನುತ್ತಾ ಕೊತ್ತಂಬರಿ ಸೊಪ್ಪುಗಳನ್ನು ಓರಣವಾಗಿ ಜೋಡಿಸಿಟ್ಟು, ನೀರು ಚಿಮುಕಿಸುವ ಈಕೆಗೆ ಕಿವಿ ಸ್ವಲ್ಪ ಮಂದವಾಗಿದ್ದರೂ, ಕಣ್ಣು ಮಾತ್ರ ಹದಿನಾರರ ಹರೆಯದಂತೆ ಚುರುಕಾಗಿವೆ. ಕಿವಿಗೆ ಹಾಕಿದ್ದ ಜುಮಕಿಯ ಭಾರಕ್ಕೆ ಆಕೆಯ ಕಿವಿಯ ಎರಡೂ ಕಡೆ ತೂತು ಬಿದ್ದಿರುವುದು ಬಿಟ್ಟರೆ, ಅಜ್ಜಿಯ ದುಂಡನೆಯ ಮುಖದಲ್ಲಿ ಎಳೆ ಬಿಸಿಲಿಗೆ ಬೆವರ ಹನಿಗಳು ಉತ್ಸಾಹದಿಂದಲೇ ಜಿನುಗುತ್ತವೆ. ಸೊಂಟಕ್ಕೆ ಸಿಕ್ಕಿಸಿರುವ ಸಂಚಿಯಿಂದ ಐವತ್ತು ಪೈಸೆ ಒಂದು ರೂಪಾಯಿ ನಾಣ್ಯಗಳನ್ನು ಎಚ್ಚರಿಕೆಯಿಂದ ತೆಗೆದು, ಎರಡೆರಡು ಬಾರಿ ಎಣಿಸಿ, ಪ್ಲಾಸ್ಟಿಕ್ ಕಪ್ಪಿನಲ್ಲಿ ಚಹಾ ಬಗ್ಗಿಸಿ ಕೊಡುವ ಎದುರಿನ ಮಂಜುನಾಥ ಕ್ಯಾಂಟೀನಿನ ಹುಡುಗನ ಕೈಗಿಟ್ಟು, ಸುರ್‌s ಎಂದು ಚಹಾ ಸೇವಿಸಿದರೆ, ಆಕೆಯ ದೈನಂದಿನ ದಿನಚರಿಯ ಸೊಗಸಾದ ಅಧ್ಯಾಯವೊಂದು ಯಾವುದೇ ಒತ್ತಡವಿಲ್ಲದೆ ಪ್ರಾರಂಭಗೊಳ್ಳುತ್ತದೆ. ತಳ್ಳುಗಾಡಿಯ ತುದಿಯೊಂದಕ್ಕೆ ಪ್ಲಾಸ್ಟಿಕ್ ದಾರದಲ್ಲಿ ಕಟ್ಟಿರುವ ಹಸಿರು ಬಣ್ಣದ ನೀರಿನ ಬಾಟಲಿ, ಗಾಡಿಯ ಕೆಳಗೆ ಕಾಂಗರೂ ಹೊಟ್ಟೆಯ ಚೀಲದಂತೆ ಕಾಣುವ ಸೆಣಬಿನ ತಡಿಕೆಯಲ್ಲಿ ತರೇವಾರಿ ಸೊಪ್ಪುಗಳ ನಡುವೆ ಅಲ್ಯುಮಿನಿಯಂ ಟಿಫಿನ್ ಬಾಕ್ಸೊಂದರಲ್ಲಿ ಮಡಗಿರಬಹುದಾದ ಮೂರು ಇಡ್ಲಿ ಆಕೆಯ ಹೊಟ್ಟೆಗೆ ಬೇಕಾದಷ್ಟು ಸಾಕೆನಿಸುತ್ತದೆ.&lt;br /&gt;&lt;/div&gt;&lt;br /&gt;&lt;div&gt;ಹೀಗೆ ನಾನು ದಿನವೂ ನೋಡುತ್ತಿದ್ದ ಈ ಸಾಮಾನ್ಯ ಅಜ್ಜಿ, ಮೂರ್ನಾಲ್ಕು ದಿನಗಳಿಂದ ಕಾಣದೇ ಇದ್ದಾಗ ಏನೋ ಕಳೆದುಕೊಂಡಂತಾಗಿ ರಸ್ತೆಯುದ್ದಕ್ಕೂ ದೃಷ್ಠಿ ಹಾಯಿಸಿ ನಿರಾಶನಾಗಿದ್ದೆ. ಅಜ್ಜಿಯ ತಳ್ಳುಗಾಡಿಯ ಮುಂದಿನಿಂದಲೇ ಫೆವಿಕೋಲ್ ಜಾಹಿರಾತಿನ ಟೆಂಪೋದಂತೆ ಪ್ರಯಾಣಿಕರನ್ನು ತುಂಬಿ ಬರುವ ಮಿನಿಬಸ್‌ ಹತ್ತಿ ಮೈಸೂರು ಸಿಟಿಗೆ ಹೋಗುವ ನೂರಾರು ಪ್ರಯಾಣಿಕರು, ಅದರ ನಡುವೆ ಬೆಳ್ಳಿ ಚುಕ್ಕಿಗಳಂತೆ ಕಾಣಿಸುವ ಅಲ್ಪ ಸ್ವಲ್ಪ ಸೌಂದರ್ಯ ಪ್ರಜ್ಞೆಯಿರುವ ಹುಡುಗಿಯರು, ಮೊಬೈಲ್ ಹೆಡ್‌ಸೆಟ್‌ಗಳನ್ನು ಕಿವಿಗೆ ಸಿಕ್ಕಿಸಿ, ಆರ್‌ಜೆ, ಡಿಜೆಗಳಂತೆ ತಲೆ ಕುಣಿಸುವ ಕಾಲೇಜು ಹುಡುಗರು, ಹೋಗಪ್ಪಾ, ಎಷ್ಟೊತ್ತು ನಿಲ್ಲಿಕ್ಸೊಂಡು ಇರ್ತೀಯಾ, ನಮ್ಮ ದುಡ್ಡು ಕೊಡು, ಬಸ್ಸಿಗೋಯ್ತೀವಿ ಎಂದು ಟೆಂಪೋ ಡ್ರೈವರನ್ನು ಗದರಿಸುವ ಹಳೆ ಮೈಸೂರಿನ ರೈತರು ಇವರೆಲ್ಲರ ಗದ್ದಲ ಎಂದಿನಂತೆ ಇದ್ದರೂ, ಆ ಸ್ಥಳದಲ್ಲಿದ್ದ ವಸ್ತುವೊಂದನ್ನು ಸ್ಥಾನಪಲ್ಲಟ ಮಾಡಿದ್ದಾರೆ ಎನ್ನುವಂತೆ ಅಜ್ಜಿಯ ಅನುಪಸ್ಥಿತಿ ನನ್ನನ್ನು ಕಾಡುತ್ತಿತ್ತು. ಪ್ರಾಮಾಣಿಕವಾಗಿ ಕಾಯಿಪಲ್ಲೆ ಮಾರುತ್ತಾ ಜೀವನ ಸಾಗಿಸುತ್ತಿದ್ದ ಅಜ್ಜಿಗೆ ಯಾರಾದರೂ ಪುಂಡರು, ಪೋಕರಿಗಳು ತೊಂದರೆ ಕೊಟ್ಟು ಸ್ಥಳಾಂತರ ಮಾಡಿದ್ದಾರೆಯೇ, ಅಥವಾ ಆಕೆಯ ಮನೆಯಲ್ಲಿ ಏನಾದರೂ ಅವಗಡ ಸಂಭವಿಸಿದೆಯೇ, ಸ್ವತಃ ಅಜ್ಜಿಯೇ ಕಾಯಿಲೆ ಬಿದ್ದಿರಬಹುದೇ ಎಂದೆಲ್ಲಾ ಯೋಚಿಸುತ್ತಾ, ಹಿನ್‌ಕಲ್ ರಸ್ತೆಯಿಂದ ಬಹುದೂರ ಹಾಗೆಯೇ ನಡೆದುಕೊಂಡು ಹೋಗಿ ಹುಡುಕಿ ಬಂದಿದ್ದೆ. ಅಜ್ಜಿ ಕಾಣಿಸಿರಲಿಲ್ಲ.&lt;br /&gt;&lt;/div&gt;&lt;br /&gt;&lt;div&gt;ಐದು ವರ್ಷಗಳ ಹಿಂದೆ ಹುಬ್ಬಳ್ಳಿಯ ವಿದ್ಯಾನಗರದ ಸಮೀಪ ರೂಮು ಮಾಡಿಕೊಂಡು ಪದವಿ ಓದುತ್ತಿರುವಾಗ ತುರ್ತು ಸಂದರ್ಭವೊಂದರಲ್ಲಿ ಹಣ ನೀಡಿ ಸಹಕರಿಸಿದ ಇದೇ ರೀತಿಯ ಮತ್ತೋರ್ವ ತರಕಾರಿ ಮಾರುವ ಅಜ್ಜಿಯ ನೆನಪಾಗಿ, ಆಕೆಯನ್ನು ಈ ರಾತ್ರಿಯೇ ಹೋಗಿ ನೋಡಿಕೊಂಡು, ಒಂದಿಷ್ಟು ದುಡ್ಡು ಕೊಟ್ಟು ಬರುವ ಎನ್ನುವ ಮನಸ್ಸಾಯಿತು. ಆಗಾಗ್ಗ ತರಕಾರಿ ಕೊಳ್ಳಲು ಆಕೆಯ ಅಂಗಡಿಗೆ ಹೋಗುವುದು ಬಿಟ್ಟರೆ, ನನಗೆ ಅಜ್ಜಿಯ, ಅಜ್ಜಿಗೆ ನನ್ನ ಪರಿಚಯವೇನೂ ಇರಲಿಲ್ಲ. ಅನಾಸ್ತಿಕನಾದ ನಾನು ಆಕೆ ಕೊಡುತ್ತಿದ್ದ ಇಟಗಿ ಭೀಮಾಂಬಿಕೆಯ ಪ್ರಸಾದವನ್ನು ಮಾತ್ರ ತುಂಬಾ ರುಚಿಯಾಗಿದ್ದ ಕಾರಣಕ್ಕೆ ಭಕ್ತಿಯಿಂದಲೇ ಸ್ವೀಕರಿಸುತ್ತಿದ್ದೆ. "ತಗೋ ಅಪ್ಪಿ, ನಾನು ಭಾನುವಾರ ಕಾಯಿಪಲ್ಲೆ ತರಲು ಹೋಗುವಾಗ ಕೊಡು, ಇಲ್ಲಾ, ಮನೆಯಿಂದ ರೊಕ್ಕ ಬಂದ ಮೇಲೆ ಕೊಡುವಿಯಂತೆ" ಎಂದು ಹಿಂದು ಮುಂದು ನೋಡದೆ ತನ್ನ ಉಡಿಯೊಳಗೆ ಮಡಚಿ ಇಟ್ಟಿದ್ದ ನೂರು ರೂಪಾಯಿಯ ಎರಡು ನೋಟುಗಳನ್ನು ಅಂದು ಆಕೆ ತೆಗೆದುಕೊಡದೆ ಇದ್ದಿದ್ದರೆ, ನನ್ನ ರೂಮ್ ಪಾರ್ಟ್‌ನರ್ ಇಂದು ಬಿ.ಇಡಿ ಮುಗಿಸಿ, ಹೈಸ್ಕೂಲ್ ಶಿಕ್ಷಕನಾಗುತ್ತಿರಲಿಲ್ಲವೇನೋ.&lt;br /&gt;&lt;/div&gt;&lt;br /&gt;&lt;div&gt;ಹಿನ್‌ಕಲ್‌ನಲ್ಲಿದ್ದ ಈ ಅಜ್ಜಿಗೂ ಹುಬ್ಬಳ್ಳಿಯ ಆ ಅಜ್ಜಿಗೂ ಅನೇಕ ಮಾನವೀಯ ಸಾಮ್ಯತೆಗಳು ಕಾಣಿಸಿದ್ದರಿಂದ ಇವರಿಬ್ಬರು ನನ್ನ ಸ್ವಂತ ಅಜ್ಜಿಯರೇನೋ ಎನ್ನುವಷ್ಟು ಮನಸ್ಸಿಗೆ ಹತ್ತಿರವಾಗಿದ್ದರು. ಯಾವಾಗದಾರೊಮ್ಮೆ ತರಕಾರಿ ಕೊಳ್ಳುವ ನೆಪದಲ್ಲಿ ಅಜ್ಜಿಯ ಹತ್ತಿರ ಹೋಗಿ ಮಾತನಾಡಿಸೋಣವೆಂದರೆ ಸುತ್ತೆಲ್ಲಾ ತುಂಬಾ ಜನರು ನೆರೆದಿರುತ್ತಿದ್ದರಿಂದ ಏನೋ ಮುಜುಗರವಾದಂತೆ ಭಾಸವಾಗಿ ಅದನ್ನು ಮುಂದಕ್ಕೆ ಹಾಕುತ್ತಾ ಬಂದಿದ್ದೆ. ಆದರೆ ಆಕೆ ಅಪ್ರತ್ಯಕ್ಷಳಾದ ನಾಲ್ಕು ದಿನಗಳಿಂದ ಇನ್ನು ಆಕೆ ಯಾವಾಗ ಬಂದರೂ, ಮೊದಲು ಹೋಗಿ ಮಾತನಾಡಿಸಬೇಕು ಎಂದು ನಿರ್ಧರಿಸಿದ್ದೆ. ಹೀಗೆ ನಿರ್ಧರಿಸಿದ್ದ ಮಾರನೇಯ ದಿನವೇ ತನ್ನ ತಳ್ಳುಗಾಡಿಯೊಂದಿಗೆ ಆಕೆ ಅದೇ ಸ್ಥಳದಲ್ಲಿ ಕಾಣಿಸಿಕೊಂಡಾಗ ಖುಷಿಯಾಗಿದ್ದೆ. ಆದರೆ ಹಿಂದಿನ ಲವಲವಿಕೆ ಆಕೆಯ ಮುಖದಲ್ಲಿರಲಿಲ್ಲ. ಏನೋ ನಡೆದಿದೆ ಎಂದು ಆಕೆಯ ಮನಸ್ಸು ಹೇಳುತ್ತಿರುವಂತೆ ಅನಿಸುತ್ತಿತ್ತು.&lt;br /&gt;&lt;/div&gt;&lt;br /&gt;&lt;div&gt;ಒಂದು ಭಾನುವಾರ ಪುಟ್ಟದೊಂದು ಕೈಚೀಲವನ್ನು ಕೈಯಲ್ಲಿಡಿದು ಆಕೆಯ ಹತ್ತಿರ ಹೋಗಿ ಒಂದಿಷ್ಟು ತರಕಾರಿಗಳನ್ನು ತೂಗಿಸಿಕೊಂಡೆ. ಅಜ್ಜಿ ಅರಾಮಿದ್ದೀಯಾ? ಸಹಜವಾಗಿ ಕೇಳಿದೆ. ತರಕಾರಿ ಖರೀದಿಸಲು ಬಂದ ವ್ಯಕ್ತಿಯೊಬ್ಬ ಈ ರೀತಿ ಕೇಳಿದ್ದು ಆಕೆಗೆ ಆಶ್ಚರ್ಯ ಎನಿಸಿರಬೇಕು. ಹೂಂ, ಎಂದು ನನ್ನ ಮುಖ ನೋಡಿದಳು. ಕಳೆದ ನಾಲ್ಕೈದು ದಿನಗಳಿಂದ ಕಾಣಲಿಲ್ಲ, ಊರಿಗೆ ಹೋಗಿದ್ದೀಯಾ ಅಂದುಕೊಂಡೆ ಅಂದೆ. 'ಇಲ್ಲೇ ಪಿರಿಯಾಪಟ್ಟಣದತ್ತ ನಮ್ಮೂರು ಇರುವುದು, ಇವರಪ್ಪನನ್ನು ಆಸ್ಪತ್ರೆಗೆ ಹಾಕಿದ್ವಿ. ಮೊನ್ನೆ ತೀರಿಕೊಂಡರು. ಯಾವುದೇ ಖಾಯಿಲೆಯಂತೆ ಎಂದು ಅಲ್ಲೇ ಮಣ್ಣಿನಲ್ಲಿ ಆಡುತ್ತಿದ್ದ ಪುಟ್ಟ ಹುಡುಗನನ್ನು ತೋರಿಸಿದರು. ಇವರವ್ವ ಮನೆಗೆ ಬಂದು ಕುಂತವ್ಳೆ, ನಾನಾದರೂ ಏನಂತ ಸಮಾಧಾನ ಮಾಡ್ಲಿ, ಹೊಟ್ಟೆಪಾಡಿಗೆ ಕಾಯಿಪಲ್ಲೆ ಮಾರುತ್ತಿದ್ದೆ. ಇವನಿಗೆ ಶಾಲೆಗೆ ಹಾಕುವ ವಯಸ್ಸಾಯಿತು. ಇದ್ದ ದುಡ್ಡನ್ನೆಲ್ಲಾ ಆಸ್ಪತ್ರೆಗೆ ಹಾಕಿದ್ವಿ. ನಿಮ್ಮ ಹಾಗೆ ನಮ್ಮನೇನಲ್ಲೂ ಯಾರಾದರೂ ಶಾಲೆ ಕಲ್ತಿದ್ದರೆ ನನಗೆ ಈ ವಯಸ್ಸಲ್ಲಿ ತರಕಾರಿ ಮಾರಬೇಕಾದ ಸ್ಥಿತಿ ಬರುತ್ತಿರಲಿಲ್ಲ ಎಂದಳು. ನಾನು ಸುಮ್ಮನೆ ಕೇಳಿಸಿಕೊಳ್ಳುತ್ತಾ ಹೋದೆ. ನೀನು ಎಷ್ಟನೇ ಸ್ಕೋಲಿಗೆ ಹೋಗ್ತಿಯಾ, ಸಿಟಿಯಾಗಿನ ದೊಡ್ಡ ಶಾಲೆಗೆ ಹೋಗ್ತೀಯಾ ಎಂದಳು. ನಾನು ಅಲ್ಲದಿದ್ದರೂ ಹೌದೆಂದು ತಲೆಯಾಡಿಸಿದೆ. ನಂತರ ವಿದ್ಯೆಯ ಕುರಿತು ತುಂಬಾ ಮಾರ್ಮಿಕವಾದ ಗಾದೆಯನ್ನು ತನ್ನದೇ ಶೈಲಿಯಲ್ಲಿ ಹೇಳಿದಳು. ಒಂದು ರೀತಿ ಜಾನಪದ ಹಾಡಿನಂತಿದ್ದ ಆ ಗಾದೆಯನ್ನು ನೆನಪಿನಲ್ಲಿಟ್ಟುಕ್ಕೊಳ್ಳಲು ಎಷ್ಟು ಪ್ರಯತ್ನಿಸಿದರೂ ಮತ್ತೆ ಮತ್ತೆ ಮರೆತು ಹೋಗುತ್ತಿತ್ತು.&lt;br /&gt;&lt;/div&gt;&lt;br /&gt;&lt;div&gt;ಹಿನಕಲ್‌ನ ಅಕ್ಷರ ಬಾರದ ಈ ಅಜ್ಜಿಗೆ ತನ್ನ ಮೊಮ್ಮಗನಿಗಾದರೂ ವಿದ್ಯೆ ಕಲಿಸಿ, ದೊಡ್ಡ ಆಫೀಸರನ್ನಾಗಿ ಮಾಡುವ ಆಸೆ. ಹುಬ್ಬಳ್ಳಿಯ ಆ ಅಜ್ಜಿಗೆ ವಿದ್ಯೆ ಕಲಿತಿರುವ ತನ್ನ ಮಕ್ಕಳೇ ತನ್ನನ್ನು ಮನೆಯಿಂದ ಹೊರದಬ್ಬಿರುವುದರ ವಿರುದ್ಧ ಪ್ರತಿಭಟಿಸಲಾಗದ ಅಸ್ಸಾಯಕತೆ. ಇಬ್ಬರೂ ಇಳಿವಯಸ್ಸಿನಲ್ಲಿ ತರಕಾರಿ ಮಾರಿ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಯಾವುದಾದರೂ ಒಂದು ಪದವಿ ಸಂಪಾದಿಸಿ, ಒಂದಿಷ್ಟು ಹಣಗಳಿಸಲು ತೊಡಗಿದರೆ ಕಲಿತ ವಿದ್ಯೆ ಸಾರ್ಥಕವಾಯಿತು ಎನ್ನುವ ಈ ಶತಮಾನದ ಮನಸ್ಥಿತಿ ನೆನೆದು ಕಸಿವಿಸಿ ಎನಿಸಿತು. ಅಷ್ಟಕ್ಕೂ ನಾವು ಕಲಿತಿರುವ, ಕಲಿಯುತ್ತಿರುವ ವಿದ್ಯೆಯಾದರೂ ಎಂಥದ್ದು? ತರಕಾರಿ ತೂಗಿ ಚೀಲಕ್ಕೆ ಹಾಕಿ, ಇನ್ನೇನಾದರೂ ಬೇಕಾ ಅಂದಳು ಅಜ್ಜಿ. ನಾನು ಬೇಡವೆಂದು ತಲೆಯಾಡಿಸಿದೆ. ರೂಮಿಗೆ ಬಂದು ಬಹಳ ಹೊತ್ತು ಚಿಂತಿಸಿದರೂ ಮೇಲಿನ ಪ್ರಶ್ನೆಗೆ ಉತ್ತರ ದೊರೆಯಲಿಲ್ಲ. &lt;/div&gt;&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-3058249249344899843?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/3058249249344899843/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=3058249249344899843' title='14 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/3058249249344899843'/><link rel='self' type='application/atom+xml' href='http://www.blogger.com/feeds/3841477221276814775/posts/default/3058249249344899843'/><link rel='alternate' type='text/html' href='http://jomon-malehani.blogspot.com/2008/01/blog-post_9266.html' title='ತರಕಾರಿ ಮಾರುವ ಇಬ್ಬರು ಅಜ್ಜಿಯರ ಕಥೆ'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><media:thumbnail xmlns:media='http://search.yahoo.com/mrss/' url='http://bp2.blogger.com/_A5Tc7GvymLQ/R5nLJQ9y8zI/AAAAAAAAAG8/40EwTvXEusU/s72-c/TakeMyHand%5B1%5D.jpg' height='72' width='72'/><thr:total>14</thr:total></entry><entry><id>tag:blogger.com,1999:blog-3841477221276814775.post-8466861041775933927</id><published>2008-01-04T01:33:00.000-08:00</published><updated>2008-01-04T01:43:27.651-08:00</updated><title type='text'>ಹೊಸ ವರ್ಷ ಮತ್ತು ಸಂಪಿಗೆಯ ಕಂಪು</title><content type='html'>&lt;a href="http://bp3.blogger.com/_A5Tc7GvymLQ/R33_bDGcW4I/AAAAAAAAAGg/a4enLawFrhM/s1600-h/logo-9-1.jpg"&gt;&lt;/a&gt; ಕಳೆದ ಡಿಸೆಂಬರ್ 31ರ ಮಧ್ಯರಾತ್ರಿ ಇಡಿ ಮೈಸೂರೆಂಬ ಮೈಸೂರು ಹೊಸವರ್ಷಕ್ಕೆ ಮೈಮನ ತೆರೆದು ಕ್ಷಣಗಣನೆಗೆ ತೊಡಗಿರುವಾಗ, ನಾವಿಬ್ಬರು ಜಯಲಕ್ಷಿಪುರಂನಲ್ಲಿರುವ ಕಚೇರಿಯಲ್ಲಿ ಗಣಕಯಂತ್ರದ ಮುಂದೆ ಕುಳಿತು ಹೂವೊಂದು ಅರಳುವುದನ್ನು ಅಚ್ಚರಿಯಿಂದ ಕಾಯುತ್ತಿದ್ದೆವು. ಪ್ರತಿ ಕ್ಷಣದ ತಲ್ಲಣ, ಸಂಭ್ರಮ, ಕಾತರವನ್ನು ತನ್ನ ಎದೆಯೊಳಗೆ ಬೆಚ್ಚಗೆ ಮಡಗಿ, ಇನ್ನೇನು ಜಗತ್ತಿಗೆ ಬರಲಿರುವ ತನ್ನ ಮಡಿಲ ಕುಡಿಯನ್ನು ಚೊಚ್ಚಲ ಬಸುರಿ ಎದುರುನೋಡುವಂತೆ, ಆಕೆಯ ತಲ್ಲಣದಂತೆ, ಸಂಭ್ರಮದಂತೆ, ನಾವೂ ಅರಳುತ್ತಿರುವ ಹೂವನ್ನು ಈಗಲೋ ಆಗಲೋ ಎಂಬಂತೆ ಸ್ವಾಗತಿಸಲು ಸಿದ್ದರಾಗಿದ್ದೆವು.&lt;br /&gt;&lt;br /&gt;&lt;div align="justify"&gt;ಆ ಪ್ರಸವ ವೇದನೆಯ ಆನಂದವನ್ನು, ನೋವನ್ನು ಒಂದು ವಿಶಿಷ್ಠ ಅನುಭೂತಿಯೊಳಗೆ ಆಸ್ವಾದಿಸುತ್ತಾ, ಆ ಅರಳುವಿಕೆಯ ಸೊಗಸಿನಲ್ಲಿ ಹೊಸವರ್ಷವನ್ನು ಆಚರಿಸುವ ಸಂತಸದಲ್ಲಿದ್ದೆವು. ಹೊರಗೆ ಪಟಾಕಿ ಸಿಡಿಯುವ ಸದ್ದು ಕೇಳಿಸುತ್ತಿತ್ತು. ಕೆಲವು ಪುಂಡ ಹುಡುಗರು ಹೊಸವರ್ಷದಲ್ಲಿ ಜಗತ್ತನ್ನೇ ಬದಲಿಸಿಬಿಡುತ್ತೇವೆ ಎನ್ನುವ ಗತ್ತಲ್ಲಿ ಬೈಕೇರಿ ಬರ್ರ್s ಎಂದು ನಗರ ಪ್ರದಕ್ಷಿಣೆ ಮಾಡುತ್ತಿದ್ದರು. ದೇವರೇ ಇವರಲ್ಲಿ ಎಷ್ಟು ಜನರಿಗೆ ನಾಳೆಯ ಪತ್ರಿಕೆಯಲ್ಲಿ ಮೃತರ ಕಾಲಂ ಅಲಂಕರಿಸುವ ಭಾಗ್ಯವಿದೆಯೋ ಎಂದು ನಿರ್ಭಾವುಕವಾಗಿ ನೆನೆಯುತ್ತಾ, ಕಿಟಕಿಯೊಳಗಿನಿಂದ ಆಗಸದಲ್ಲಿ ಚಿಮ್ಮುವ ಸಿಡಿಮದ್ದಿನ ಚಿತ್ತಾರಗಳನ್ನು ನೋಡುತ್ತಾ, ಲೇಖನಗಳನ್ನು ಜತನದಿಂದ ಆಫ್‌ಲೋಡ್ ಮಾಡುತ್ತಿದ್ದೆ. ಹೊಸವರ್ಷಕ್ಕೆ ಇನ್ನು ಕಲವೇ ಕ್ಷಣಗಳು ಬಾಕಿ ಉಳಿದಿರುವಾಗ&lt;br /&gt;ಕೊನೆಯ ಸುದ್ಧಿಯನ್ನು ಆಫ್‌ಲೋಡ್ ಮಾಡಿ, ಎಲ್ಲವನ್ನೂ ಮತ್ತೊಮ್ಮೆ ಪರಿಶೀಲಿಸಿ, ಒಂದು ಸುಂದರ ಸಂತಸದಲ್ಲಿ ಸಾರ್ ಎಲ್ಲ ಮುಗೀತು, ನೀವೊಮ್ಮೆ ಚೆಕ್ ಮಾಡಿ ಎಂದೆ.&lt;br /&gt;&lt;/div&gt;&lt;br /&gt;&lt;div align="justify"&gt;ನೈಸ್ ಜೋಮನ್. ಚೆನ್ನಾಗಿ ಬಂದಿದೆ. ಓಎಲ್‌ಎನ್ ಅವರಿಗೆ ಒಂದು ಫೋನ್ ಮಾಡಿ ಹೇಳೊಣ. ನಿಮಗೆ ಹೊತ್ತಾಗಿದೆಯಾ? ಇನ್ನೊಂದು ಐದು ನಿಮಿಷ. ನಾನು ನಿಮ್ಮನ್ನು ರೂಮಿಗೆ ಬಿಟ್ಟು ಬರುತ್ತೇನೆ. ಯಾರಿಗಾದರೂ ಸರಿಯಾಗಿ 12 ಗಂಟೆಗೆ ಪೋನ್ ಮಾಡಬೇಕಿದೆಯಾ ಎಂದು ಕೆಣಕಿದರು. ನಾನು ನಕ್ಕೆ. ಮನೆಗೆ ರಾತ್ರಿ 12 ಗಂಟೆಗೆ ಫೋನ್ ಮಾಡಿ, ಮಲಗಿರುವ ಅಪ್ಪ ಅಮ್ಮನನ್ನು ಎಬ್ಬಿಸಿ, ಹ್ಯಾಪಿ ನ್ಯೂ ಇಯರ್ ಅಂದರೆ, ಸಮ್ಮನೆ ಮಲ್ಕೋ ಅಂತಾರೆ ಎಂದು ಮನಸ್ಸಿನಲ್ಲಿ ಅಂದುಕೊಂಡೆ. ಒಂದಿಬ್ಬರು ಗೆಳೆಯರಿಗೆ ಮಸೇಜ್ ಕಳುಹಿಸಿದೆ. ಹೊಸ ವರ್ಷದೆಂದು ಮಸೇಜ್‌ಗಳಿಗೆ ಒಂದು ರೂಪಾಯಿ ಹೆಚ್ಚುವರಿ ಶುಲ್ಕ ವಿಧಿಸಿರುವುದರಿಂದ ದುಡ್ಡು ಕಳೆದುಕೊಂಡು ವಿಶ್ ಮಾಡುವಷ್ಟು ಪ್ರೀತಿಯನ್ನು ಯಾವ ಗೆಳೆಯರೂ ತೋರಿಸಲಿಲ್ಲ. ಇದಕ್ಕಿದಂತೆ, ತುಂಬಾ ಸರಳವಾಗಿ ಅದೋ ನೋಡಿ, ಶಿವರಾಂ ಪೈಲೂರ್ ಕಮೆಂಟ್ ಕಳುಹಿಸಿದ್ದಾರೆ ಎಂದರು. ಆಶ್ಟರ್ಯ! ಇನ್ನೂ ನಮ್ಮ ಹೂವು ಅರಳಿ ಕ್ಷಣಗಳು ಕಳೆದಿಲ್ಲ. ಆದಾಗಲೇ ಮೊದಲ ಪ್ರತಿಕ್ರಿಯೆ ಬಂದಿದೆ. ನಮಗೆ ಹೊಸ ವರ್ಷದ ಸ್ವಾಗತಕ್ಕೆ ಇದಕ್ಕಿಂತ ಬೇರೇನು ಬೇಕು? ಇಬ್ಬರ ಮುಖದಲ್ಲೂ ಸಂಭ್ರಮದ ಪಲ್ಲವ.&lt;br /&gt;&lt;/div&gt;&lt;br /&gt;&lt;div align="justify"&gt;&lt;/div&gt;&lt;br /&gt;&lt;div align="justify"&gt;ಕೆಲಸ ಮುಗಿಸಿ, ರಾತ್ರಿ ರೂಮಿಗೆ ಹೊರಡುವ ಹೊತ್ತಿಗೆ 12ಕ್ಕೆ ಐದೋ ಆರೋ ನಿಮಿಷ ಬಾಕಿಯಿತ್ತು. ಪ್ರತಿ ವರ್ಷ ನಾನು ಆಕಾಶವಾಣಿಯಲ್ಲಿ ನ್ಯೂ ಇಯರ್ ಕಾರ್ಯಕ್ರಮ ನಡೆಸಿಕೊಡುತ್ತಿದ್ದೆ. ಈ ವರ್ಷ ಯಾರಿದ್ದಾರೆ ಎನ್ನುತ್ತಾ, ಗಾಡಿಯೊಳಗಿದ್ದ ಸ್ಟಿರಿಯೋ ಕಿ ಅದುಮಿದರು. ಹೊಸ ವರ್ಷದ ಸ್ವಾಗತಕ್ಕೆ ಯಾವುದೇ ಒಂದು ಹಾಡು ಪ್ರಸಾರವಾಗುತ್ತಿತ್ತು. ನಾನು ಗಾಡಿಯ ಕಿಟಕಿಯನ್ನು ತುಸು ಇಳಿಸಿ, ಶುಭ್ರ ಆಕಾಶದಲ್ಲಿ ಬೆಳಗುವ ನಕ್ಷತ್ರಗಳನ್ನು ದಿಟ್ಟಿಸುತ್ತಿದ್ದೆ. ರೂಮು ಬಂದಾಗ ಗಾಡಿ ಇಳಿದು ನಾನು ಅವರಿಗೆ, ಅವರು ನನಗೆ ನ್ಯೂ ಇಯರ್ ವಿಶ್ ಮಾಡಿಕೊಂಡೆವು. ಬಾಡಿಗೆ ಮನೆಯ ಆಂಟಿ ಗೇಟಿನ ಕಿಲಿಯನ್ನು ಹಾಕಿದ್ದರಿಂದ ಅನಿವಾರ್ಯವಾಗಿ ಗೋಡೆ ಜಿಗಿದು, ಟರೇಸ್ ಮೇಲಿರುವ ನನ್ನ ಕೋಣೆ ಸೇರಿಕೊಂಡೆ. ಹೊರಗೆ ಹೊಸ ವರ್ಷದ ಕೇಕೆಗಳು ಮುಗಿಲು ಮುಟ್ಟುತ್ತಿದ್ದವು. ಕಣ್ಣಳತೆಯ ದೂರದ ವೃತ್ತವೊಂದರಲ್ಲಿ ಒಂದಿಷ್ಟು ಹುಡುಗರು ಹಳೆಯ ಅಲ್ಯುಮಿನಿಯಂ ಪಾತ್ರೆಯೊಂದನ್ನು ಮುಗಿಚಿ ಹಾಕಿ ಡ್ರಮ್ ಬಾರಿಸುತ್ತಿದ್ದರು. ಪಾನಿಪುರಿಯ ಅಂಗಡಿಯ ಪುಟ್ಟ ಹುಡುಗನೊಬ್ಬ ಲಾಂದ್ರಾದ ಬೆಳಕಿನಲ್ಲಿ ಪಾತ್ರೆ ತೊಳೆಯುತ್ತಾ ತನ್ನ ದುಡಿಮೆಯ ಖುಷಿಯಲ್ಲಿ ಹೊಸ ವರ್ಷ ಸ್ವಾಗತಿಸುತ್ತಿದ್ದ. ನ್ಯೂ ಇಯರ್ ಅಲ್ವಾ ಯಾರಿಗಾದರೂ ಫೋನ್ ಮಾಡದೆ ಮಲಗಲು ಮನಸ್ಸಾಗಲಿಲ್ಲ. ಮನೆಯ ನಂಬರ್‌ಗೆ ಡಯಲ್ ಮಾಡಿದೆ. ನಮ್ಮಮ್ಮ ಕಾಯುತ್ತಿದ್ದವರಂತೆ ಫೋನ್ ಎತ್ತಿ ಹ್ಯಾಪಿ ನ್ಯೂ ಇಯರ್ ಎಂದರು. ನಮ್ಮಪ್ಪ ಮಲಗಿದ್ದರೂ, ಪ್ರೀತಿಯಿಂದ ಎದ್ದು ಬಂದು, ನನಗಷ್ಟೇ ಎಂಬಂತೆ ಹೊಸ ವರ್ಷದ ಶುಭ ಕೋರಿದರು. ಹೊಸ ವರ್ಷ ಆಚರಣೆ ಹೀಗೆ ಮುಗಿಯಿತು.&lt;br /&gt;&lt;/div&gt;&lt;br /&gt;&lt;div align="justify"&gt;ಬೆಳಿಗ್ಗೆ ಎದ್ದಾಗ ಮೊಬೈಲ್ ತುಂಬಾ ಮಸೇಜುಗಳು, ಮಿಸ್ ಕಾಲ್‌ಗಳು. ಹೊಸ ವರ್ಷದ ಹೊಸ ಬೆಳಗು, ಕಿಟಕಿಯನ್ನು ತೂರಿ ಒಳಬಂದಿತ್ತು. ರೂಮಿನಲ್ಲಿದ್ದ 2007ರ ಕ್ಯಾಲೆಂಡರ್ ಒಂದೇ ದಿನದಲ್ಲಿ ಹಳತಾಗಿತ್ತು. ಅಂದಹಾಗೆ ಅಂದು ರಾತ್ರಿ ಅರಳಿದ ಹೂವಿನ ಹೆಸರು &lt;a href="http://www.kendasampige.com/preview"&gt;ಕೆಂಡಸಂಪಿಗೆ&lt;/a&gt;. ಅಂತರ್ಜಾಲ ಪತ್ರಿಕೆ. ನನ್ನೊಂದಿಗಿದ್ದವರು ಅಬ್ದುಲ್ ರಶೀದ್. ಸಂಪಾದಕರು. ಮತ್ತೆ ನನ್ನದೇನು&lt;br /&gt;ಕೆಲಸ ಎನ್ನುತ್ತೀರಾ? ಇಷ್ಟು ಓದಿದ ಮೇಲೆ ನಿಮಗದು ಗೊತ್ತಾಗಿರಬಹುದು. ಹಾಂ! ಸಂಪಿಗೆಯ ಕಂಪು ಆಘ್ರಾಣಿಸಲು ಮರೆಯದಿರಿ. &lt;/div&gt;&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-8466861041775933927?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/8466861041775933927/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=8466861041775933927' title='10 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/8466861041775933927'/><link rel='self' type='application/atom+xml' href='http://www.blogger.com/feeds/3841477221276814775/posts/default/8466861041775933927'/><link rel='alternate' type='text/html' href='http://jomon-malehani.blogspot.com/2008/01/blog-post.html' title='ಹೊಸ ವರ್ಷ ಮತ್ತು ಸಂಪಿಗೆಯ ಕಂಪು'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><thr:total>10</thr:total></entry><entry><id>tag:blogger.com,1999:blog-3841477221276814775.post-8452097106529964216</id><published>2007-12-23T23:38:00.000-08:00</published><updated>2007-12-24T00:04:17.335-08:00</updated><title type='text'>ಉಂಬಾಣಿ ಭಟ್ಟರು ಮತ್ತು ಬಾಳೆಗೊನೆ</title><content type='html'>&lt;a href="http://bp0.blogger.com/_A5Tc7GvymLQ/R29mIq7BWtI/AAAAAAAAAGY/q7dCy4f5tLk/s1600-h/banana-lg%5B1%5D.jpg"&gt;&lt;img id="BLOGGER_PHOTO_ID_5147445198254594770" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp0.blogger.com/_A5Tc7GvymLQ/R29mIq7BWtI/AAAAAAAAAGY/q7dCy4f5tLk/s200/banana-lg%5B1%5D.jpg" border="0" /&gt;&lt;/a&gt;"ದೊಡ್ಡ ಹೊಳೆ ಶಂಖ ಮುಣುಗೈತಿ, ಶಾಲೆ ಮಕ್ಕಳಿಗೆ ಒಂದು ವಾರ ರಜೆ ಅಂತೆ. ದುರ್ಗಾಂಭಾ ಬಸ್ಸಿನಾಗೆ ಕಾವೇರಿ ಟೀಚರ್ ಸಿಕ್ಕಿದ್ರು. ಕಲ್ಕೇರಿ, ಚೆನ್ನೇಕಲ್, ಚಂಡೇಮನೆ ಹುಡುಗ್ರು ಮಳೆ ನಿಲ್ಲುವವರೆಗೂ ಶಾಲೆಗೆ ಬರ್ಬೇಡಿ ಅಂತ ಹೆರೋಡಿ ಬೇಬಿ ಅತ್ರ ಹೇಳಿ ಕಳಿಸಿದ್ರಂತೆ". ಕಬ್ಬಳಿಕುಪ್ಪೆ ಹಾಕಿ ಬಾಳೆಗೊನೆ ಕಲ್ಲಿಯನ್ನು ತಲೆ ಮೇಲೆ ಹೊತ್ತುಕೊಂಡು ಬರುತ್ತಿದ್ದ ಉಂಬಾಣಿ ಭಟ್ಟರು ವರದಿ ಒಪ್ಪಿಸುತ್ತಿದ್ದಂತೆ ನಮಗೆಲ್ಲಾ ಮುಗಿಲು ಮುಟ್ಟಿದ ಸಂಭ್ರಮ. &lt;strong&gt;ಇಂದು ಶಾಲೆಗೆ ರಜಾ ಕೋಳಿ ಮಜಾ&lt;/strong&gt; ಎನ್ನುತ್ತಾ ದೊಡ್ಡ ದೊಂದು ಕೇಕೆ ಹಾಕಿ ಕೋಗಿ, ಪಾಟೀಚೀಲ, ಟಿಫಿನ್ ಬಾಕ್ಸ್‌ನೊಂದಿಗೆ ಭಟ್ಟರ ಗದ್ದೆಯ ಬದುವಿನ ಮೇಲೆ ಓಡಿ, ಹೆಗಡೆಯವರ ಅಡಿಕೆ ತೋಟ ದಾಟಿ ಒಂದೇ ಉಸಿರಿಗೆ ಮನೆಯಂಗಳ ತಲುಪಿದ್ದವು.&lt;br /&gt;&lt;br /&gt;&lt;div align="justify"&gt;ನಮ್ಮೂರಿನ ಮಳೆಗಾಲವೇ ಹಾಗೆ. ಒಮ್ಮೆ ಮಳೆ ಪ್ರಾರಂಭವಾದರೆ ಮೂರು ತಿಂಗಳು ಜಲಾವೃತ. ಎರಡು ಮೂರು ಹೊಳೆಗಳನ್ನು ದಾಟಿಕೊಂಡು ನಾವು ಶಾಲೆಗೆ ಹೋಗಬೇಕಾಗಿತ್ತು. ಮಳೆಗಾಲ ತೀವ್ರಗೊಳ್ಳುತ್ತಿದ್ದಂತೆ ಹೊಳಗೆ ಅಡ್ಡಲಾಗಿ ಹಾಕಿದ್ದ ತೂಗು ಸೇತುವೆಗಳು ಪ್ರವಾಹದಲ್ಲಿ ತೇಲಿಕೊಂಡು ಹೋಗುತ್ತಿದ್ದವು. ನದಿಯ ಆಚೆಗಿರುವ ಊರು ಒಂದು ಪುಟ್ಟ ದ್ವೀಪ ಸಮೂಹವಾಗಿ ಮಾರ್ಪಡುತ್ತಿತ್ತು. ಜೋರು ಗಾಳಿ ಮಳೆ ಪ್ರಾರಂಭವಾದರೆ, ಕಾಡಿನಲ್ಲಿ ಮರಳುಗಳು ಬುಡಸೇವತ ಕಿತ್ತು ಬೀಳುತ್ತಿದ್ದವು. ಅಂಗಳದಲ್ಲಿನ ಅಡಿಕೆ ಮರಗಳು ಬಿರುಗಾಳಿಗೆ ಸಿಲುಕಿ ನೆಲಕಚ್ಚುತ್ತಿದ್ದವು. ಇಂತಹ ಮಳೆ ಪ್ರಾರಂಭವಾಯಿತೆಂದರೆ ನಮಗೆ ಶಾಲೆಗೆ ರಜೆ. ಏಕೋಪಾಧ್ಯಾಯ ಶಾಲೆಯ ಕಾವೇರಿ ಟೀಚರ್, ಬಸ್ಸಿನಲ್ಲಿ ಸಿಕ್ಕಿದ ಯಾರ ಬಳಿಯಾದರೂ, ಕಲ್ಕೇರಿ, ಚೆನ್ನೇಕಲ್, ಚಂಡೇಮನೆ ಹುಡುಗರಿಗೆ ಮಳೆ ನಿಲ್ಲುವವರೆಗೂ ಶಾಲೆಗೆ ಬರಬೇಡಿ ಎಂದು ಹೇಳಿ ಕಳುಹಿಸುತ್ತಿದ್ದರು.&lt;br /&gt;&lt;/div&gt;&lt;br /&gt;&lt;div align="justify"&gt;ಇವತ್ತು ಹೀಗೆಯೇ ಆಯಿತು. ಉಂಬಾಣಿ ಭಟ್ಟರ ವರದಿ ಒಪ್ಪಿಸುತ್ತಿದ್ದಂತೆ, ಶಾಲೆಗೆಂದು ಅರ್ಧದಾರಿಯವರೆಗ ತೆರಳಿದ್ದ ನಾವು, ಕೂಗು ಹಾಕುತ್ತಾ ಮನೆಗೆ ಮರಳಿದ್ದೆವು. ನಮ್ಮನ್ನು ನೋಡಿ ತೋಟದ ಕೆಲಸಕ್ಕೆ ಹೊರಟ್ಟಿದ್ದ ಅಪ್ಪನಿಗೆ ತೇಲಿಹೋದ ಶಂಖದ ಮೇಲೆ ಅಸಾಧಾರಣ ಸಿಟ್ಟು ಬಂತು. ಈ ಮಳೆಗಾಲವೆಲ್ಲಾ ಮಕ್ಕಳು ಮನೆಯಲ್ಲೇ ಇರೋದಾಯ್ತು, ಎಂದು ಗೊಣಗುತ್ತಾ, ತೋಟದತ್ತ ಮುಖ ಮಾಡಿದರು. ಎಂಥಾತು ಸೌಟು ಹಿಡಿದು ಹೊರಬಂದ ಅಮ್ಮನಿಗೆ ಮತ್ತೊಮ್ಮೆ ದೊಡ್ಡ ಹೊಳೆ ನೀರಿನಲ್ಲಿ ಶಂಖ ತೇಲಿಹೋದ ಸ್ವಾರಸ್ಯಕರ ಘಟನೆ ವಿವರಿಸಿದೆ. ಹೊಸ ಶಂಖ ಹಾಕುವ ವರಗೆ ನಮಗೆ ರಜೆ ಎನ್ನುವುದನ್ನು ಖುಷಿಯಿಂದ ಹೇಳಿದೆ. ಮನೆಯಲ್ಲಿ ನಮ್ಮನ್ನು ಸಂಭಾಳಿಸುವುದರಲ್ಲೇ ಸಾಕು ಬೇಕಾಗುತ್ತಿದ್ದ ಅಮ್ಮ, ಇನ್ನು ಈ (ವಾ)ನರ ಸೈನ್ಯದಿಂದ ಏನೆಲ್ಲಾ&lt;br /&gt;ಕಾದಿದೆಯೋ ಎನ್ನುತ್ತಾ, ಅಡುಗೆ ಮನೆಗೆ ನುಗ್ಗಿದರು.&lt;br /&gt;&lt;/div&gt;&lt;br /&gt;&lt;div align="justify"&gt;ಆದರೆ ನನ್ನ ತಲೆ ಮಾತ್ರ ಬೇರೆ ವಿಷಯಗಳ ಸುತ್ತ ಗಿರಕಿ ಹೊಡೆಯುತ್ತಿತ್ತು. ಇಷ್ಟೊತ್ತಿಗೆ ಕಳಸವಳ್ಳಿ ಬಸ್ಸು ಹರೋಡಿನ್ನು ದಾಟಿಕೊಂಡು ಹೋಗಿರಬಹುದು, ಬಚ್ಚೋಡಿ, ನಾಗೋಡಿ ಹುಡುಗರು ಶಾಲೆಗೆ ಹೋದರೋ ಏನೋ? ಮಂಜನಿಗೆ ಈವತ್ತು ಪೇರಲೆ ಕಾಯಿ ತರ್ತೀನಂತ ಹೇಳಿದ್ದೆ. ಮಧ್ಯಾನ್ಹ ಊಟಕ್ಕೆ ಬಿಟ್ಟಾಗ, ಗೊಂಡರ ಹುಡುಗ ನಾಗಯ್ಯನ ಕರಕೊಂಡು ದಿನವೂ ಕಾಣಿಸುವ ಕಲ್ಲೇಡಿಗೆ ಕೂಲಿನಿಂದ ಚುಚ್ಚಬೇಕೆಂದಿದ್ದೆ. ಹೆಗಡೆಯವರ ತೋಟದ ಪಕ್ಕದಲ್ಲಿರುವ ಸಂಪಿಗೆ ಮರದಲ್ಲಿ ಸಿಕ್ಕಾಪಟ್ಟೆ ಹಣ್ಣಾಗಿತ್ತು. ಶಾಲೆಗೆ ಹೋಗುವಾಗ ದೊಡ್ಡ ಹೊಳೆಗೆ ಗಾಳ ಕಟ್ಟಬೇಕೆಂದಿದ್ದೆ. ಭಟ್ಟರ ತೋಟದೊಳಗೆ ಮೂಸಂಬಿ ಹಣ್ಣು ಪಕ್ಕದ ಅಡಿಕೆ ಮರದಿಂದ ಹತ್ತಿದರೆ ಕೈಗೆ ಸಿಗುವ ಅಂತರದಲ್ಲೇ ಇತ್ತು. ಛೇ ಶಾಲೆಗೆ ರಜೆ ಸಿಗದಿದ್ದರೆ... ಹೀಗೆ ನೂರಾರು ವಿಚಾರಗಳು ಏಕಕಾಲಕ್ಕೆ ನನ್ನ ತಲೆಯೊಳಗೆ ಹೊಕ್ಕು ರಜೆಯನ್ನು ಹೇಗೆ ಕಳೆಯಬೇಕೆನ್ನುವ ಗೊಂದಲಕ್ಕೆ ಬಿದ್ದಿದ್ದೆ. ಬೇರೆ ಭಟ್ಟೆ ಹಾಕ್ಕೊಂಡು ಬುಟ್ಟಿ ತಕ್ಕೊಂಡು ಕೆಳಗೆ ಬಾ, ಅಡಿಕೆ ಹಣ್ಣಾಗಿ ಒದುರಿ ಬಿದ್ದಿವೆ, ಹೆಕ್ಕಿ ಒಂದು ವಾರ ಆಯ್ತು. ಅಪ್ಪ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಂತೆ ಆದೇಶಿಸಿ ಹೋಗಿದ್ದ. &lt;/div&gt;&lt;br /&gt;&lt;div align="justify"&gt;&lt;br /&gt;ಹಳೆಯದೊಂದು ಚಡ್ಡಿ ಹಾಕಿ, ಅಡಿಕೆ ಬುಟ್ಟಿಯನ್ನು ಕೈಯಲ್ಲಿಡಿದು, ತೋಟದತ್ತ ನಡಕೊಂಡು ಹೊಂಟಿದ್ದೆ. ದೂರದಿಂದ ಉಂಬಾಣಿ ಭಟ್ಟರು ಬರುವುದು ಕಾಣಿಸಿತು. ಈ ಉಂಬಾಣಿ ಭಟ್ಟರು ವಿಚಿತ್ರ ಆಸಾಮಿ. ಅವರ ನಿಜವಾದ ಹೆಸರು ಗಜಾನನ ಗಣಪತಿ ಹೆಗಡೆ. ಅವರಿಗೆ ಉಂಬಾಣಿ ಭಟ್ಟರು ಎಂದು ಹೆಸರಿಟ್ಟಿದ್ದು ನಮ್ಮೂರಿನವರು. &lt;strong&gt;&lt;em&gt;ಎಂಥದು ಮಾರಾಯರ್ರೆ.. ಈ ವಾರ ಬಾಳೆಗೊನೆ ಯಾವುದಾದರೂ ಕಡೀಲಿಕ್ಕೆ ಉಂಟಾ &lt;/em&gt;&lt;/strong&gt;ಎನ್ನುತ್ತಾ, ನಮ್ಮ ತೋಟದ ಬಾಳೆಗೊನೆ ಹಾಗೂ ಅದರ ಕಾಯಿಗಳನ್ನು ನಮಗಿಂತ ಕರಾರುವಕ್ಕಾಗಿ ಹೇಳುವ ವ್ಯವಹಾರ ಚತುರತೆ ಈ ಭಟ್ಟರದು.ಉಂಬಾಣಿ ಭಟ್ಟರು ನಮ್ಮ ಸುತ್ತ ಮುತ್ತ ಊರಿನಿಂದ ಬಾಳೆಗೊನೆಗಳನ್ನು ಚೌಕಾಶಿ ದರದಲ್ಲಿ ಖರೀದಿಸಿ, ವಾರಕ್ಕೊಮ್ಮೆ ಭಟ್ಕಳದ ಸಂತೆಯಲ್ಲಿ ಸಾಬರಿಗೆ ಮಾರುತ್ತಿದ್ದರು. ನಾಲ್ಕೈದು ವರ್ಷ ವ್ಯವಹಾರ ಮಾಡಿದರೂ ಭಟ್ಟರಿಗೆ ಸಾಬರ ವ್ಯವಹಾರ ಬುದ್ದಿ ಕರಗತವಾಗಲಿಲ್ಲ. ಆದ್ದರಿಂದ ಭಟ್ಟರ &lt;strong&gt;Export&lt;/strong&gt; ಬ್ಯುಸನೆಸ್ ಅಷ್ಟೊಂದು ವಿಸ್ತರಿಸಿರಲಿಲ್ಲ. ನೇರವಾಗಿ ತೋಟಕ್ಕೆ ನುಗ್ಗಿ, ಅಲ್ಲಿರುವ ಬಾಳೆಗೊನೆಗಳನ್ನೆಲ್ಲಾ, ಲೆಕ್ಕಹಾಕಿ, ಮುಂದಿನ ವಾರಕ್ಕೆ ಯಾವುದು ಬಲಿಯುತ್ತದೆ, ಎಷ್ಟು ಕಾಯಿ ಆಗಬಹುದು, ಎಂದು ಲೆಕ್ಕಾಚಾರ ಹಾಕಿ ಬೇಕಾದರೆ ನೂರಿನ್ನೂರು ರೂಪಾಯಿ ಮುಂಗಡ&lt;br /&gt;ಕೊಡುವಷ್ಟು ಭಟ್ಟರ ಆರ್ಥಿಕ ಕ್ಷಮತೆ ಬೆಳದಿತ್ತು. &lt;/div&gt;&lt;br /&gt;&lt;div align="justify"&gt;&lt;br /&gt;ಆದರೆ ಭಟ್ಟರು ಮಾಡುವ ಬಾಳೆಕಾಯಿ ಬ್ಯುಸನೆಸ್ ಮಾತ್ರ ಸುತ್ತಮುತ್ತಲಿನ ನಾಲ್ಕು ಹಳ್ಳಿಗಳಲ್ಲಿ ಜನಪ್ರಿಯವಾಗಿತ್ತು. ಸದಾ ಸಂಚಾರಿಯಾಗಿರುವ ಭಟ್ಟರು ಪೇಟೆ ಮತ್ತು ಹಳ್ಳಿಯ ನಡುವಿನ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದದ್ದು ಇದರ ಗುಟ್ಟು. ಮಳೆಗಾಲದಲ್ಲಿ ಹೊಸಿಲು ಬಿಟ್ಟು ಹೊರಗಿಳಿಯದ ಮನೆಗಳಲ್ಲಿ ಸುದ್ದಿ ತಲುಪಿಸು ಏಕೈಕ ಪತ್ರಿಕಾ ಏಜೆಂಟ್ ಆಗಿ ಭಟ್ಟರು&lt;br /&gt;ಕಾರ್ಯನಿರ್ವಹಿಸಿದರು.ಇಂತಹ ಸರ್ವಾಂತರ್ಯಾಮಿ ಭಟ್ಟರಿಗಿದ್ದ ಒಂದು ಕೆಟ್ಟ ಚಟವೆಂದರೆ ಬಾಳೆ ಕಾಯಿಯನ್ನು ಲೆಕ್ಕ ಹಾಕುವಾಗ ತಪ್ಪು ಲೆಕ್ಕ ಒಪ್ಪಿಸುತ್ತಿದ್ದದ್ದು. ಎರಡುನೂರ ಎಪ್ಪತ್ತೆಂಟು ಕಾಯಿ ಇದ್ದರೆ ಭಟ್ಟರು ಎರಡುನೂರಾ ಇಪ್ಪತ್ತು ಅನ್ನುವರು. ನೂರು ಪುಟ್‌ಬಾಳೆ (ಏಲಕ್ಕಿ) ಕಾಯಿಗೆ ಭಟ್ಕಳದಲ್ಲಿ 50-60 ರೂಗಳಿದ್ದರೆ, ಭಟ್ಟರು, ಈ ವಾರ ಕುಂದಾಪುರದಿಂದ ತುಂಬಾ ಕಾಯಿ&lt;br /&gt;ಬಂದಿದೆ, ಪುಟ್‌ಬಾಳೆಗೆ ಯಾವುದೇ ಡಿಮ್ಯಾಂಡ್ ಇಲ್ಲ. 35 ರಿಂದ 40 ಲಾಸ್ಟ್ ಎಂದು ತಮ್ಮ ರೇಟ್ ಫಿಕ್ಸ್ ಮಾಡುತ್ತಿದ್ದರು. ಏನೇ ಮಾಡಿದರೂ ಭಟ್ಟರ ಕಡೆಯಿಂದ ಎರಡು ರೂಪಾಯಿ ಜಾಸ್ತಿ ಬರುತ್ತಿರಲಿಲ್ಲ. &lt;strong&gt;ತಮ್ಮ ಬ್ಯುಸನೆಸ್ ನಂಬಿ ಮುಂಬೈ ಶೇರು ಸೂಚ್ಯಂಕ ನಿಂತಿದೆ&lt;/strong&gt; ಎನ್ನುವಷ್ಟರ ಮಟ್ಟಿಗೆ ಭಟ್ಟರು ನಾಲಿಗೆ ಕೌಶಲ್ಯ ಹೊಂದಿದ್ದರು. ಆದ್ದರಿಂದ ಬಾಳೆಗೊನೆ ಮಾಲೀಕರು, ಸಾಯ್ಲಿ ಬುಡಿ ಅತ್ಲಾಗೆ, ನಾಲ್ಕು ಕಾಯಿ ಕಡಿಮೆ ಲೆಕ್ಕ ಕೊಟ್ಟ ಅಂತ, ಭಟ್ಟ ಎನೂ ಅರಮನೆ ಕಟ್ಟಿಸೋದಿಲ್ಲ ಎಂದು ಸುಮ್ಮನಾಗುತ್ತಿದ್ದರು. ತೋಟದಲ್ಲಿ ಬಾಳೆಗೊನೆ ಕಡಿಯಲು ಹೋದಾಗ ಉದುರಿಬಿದ್ದ ಅಡಿಕೆಗಳು ಭಟ್ಟರ ಕವಳದ ಸಂಚಿ ಸೇರುತ್ತಿದ್ದವು. ಇವೆಲ್ಲವೂ ಅವರ ಮನೆಯಂಗಳದಲ್ಲಿ ಒಟ್ಟುಗೂಡಿ, ಒಂದು ಅಡಿಕೆ ಗಿಡವೂ ಇಲ್ಲದ ಭಟ್ಟರು ವರ್ಷದ ಕೊನೆಯಲ್ಲಿ ಒಂದು ಕ್ವಿಂಟಾಲ್ ಅಡಿಕೆ ಮಾರುತ್ತಿದ್ದದ್ದು ಅವರ ಸಾಮರ್ಥ್ಯಕ್ಕೆ ಸಾಕ್ಷಿ. ಇಂತಹ ಚಾಣಾಕ್ಷ್ಯ ಭಟ್ಟರಿಗೆ ನಮ್ಮೂರಿನ ಯುವಕರು ಕಂಡು ಹಿಡಿದ ಅಡ್ಡ ಹೆಸರೇ &lt;strong&gt;"ಉಂಬಾಣಿ ಭಟ್ಟರು". &lt;/strong&gt;&lt;/div&gt;&lt;div align="justify"&gt;&lt;br /&gt;ನಮ್ಮೂರಿನಲ್ಲಿ ಗಣಪತಿ ಹೆಗಡೆಯವರ ಮನೆ ಎಂದರೆ ಯಾರಿಗೂ ಅರ್ಥ ಆಗಲ್ಲ. ಉಂಬಾಣಿ ಭಟ್ಟರು ಎಂದರೆ ಎಲ್ಲರಿಗೂ ಚಿರಪರಿಚಿತ. ಭಟ್ಟರಿಗೊಬ್ಬ ಮಗ ಇದ್ದಾನೆ. ಅವನ ಹೆಸರು ಮಂಜುನಾಥ ಗಣಪತಿ ಗಜಾನನ ಹೆಗಡೆ. ಅವನನ್ನು ನಾವೆಲ್ಲ &lt;strong&gt;"ಮರಿ ಉಂಬಾಣಿ"&lt;/strong&gt; ಎಂದು ಕರೆಯುತ್ತೇವೆ. ಒಂದು ಶನಿವಾರ ನೀವು ನಮ್ಮೂರಿನ ಕಳಸವಳ್ಳಿ ಬಸ್ ಮೂಲಕ ಹಾದು ಹೋದರಾಯಿತು. ಭಟ್ಟರು ಬಾಳೆಗೊನೆಯೊಂದಿಗೆ ಬಸ್ಸಿನಲ್ಲೇ ಇರ್ತಾರೆ. ಬೇಕಾದರೆ ವ್ಯವಹಾರ ಕೂಡ ಮಾಡಬಹುದು. &lt;/div&gt;&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-8452097106529964216?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/8452097106529964216/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=8452097106529964216' title='9 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/8452097106529964216'/><link rel='self' type='application/atom+xml' href='http://www.blogger.com/feeds/3841477221276814775/posts/default/8452097106529964216'/><link rel='alternate' type='text/html' href='http://jomon-malehani.blogspot.com/2007/12/blog-post_23.html' title='ಉಂಬಾಣಿ ಭಟ್ಟರು ಮತ್ತು ಬಾಳೆಗೊನೆ'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><media:thumbnail xmlns:media='http://search.yahoo.com/mrss/' url='http://bp0.blogger.com/_A5Tc7GvymLQ/R29mIq7BWtI/AAAAAAAAAGY/q7dCy4f5tLk/s72-c/banana-lg%5B1%5D.jpg' height='72' width='72'/><thr:total>9</thr:total></entry><entry><id>tag:blogger.com,1999:blog-3841477221276814775.post-2496319111615406559</id><published>2007-12-17T05:26:00.000-08:00</published><updated>2007-12-18T20:54:47.677-08:00</updated><title type='text'>ಅವರ ದ್ವನಿಯೊಳಗೆ ತೆರೆದುಕೊಳ್ಳುವ ಮತ್ತೊಂದು ಬದುಕು</title><content type='html'>&lt;a href="http://bp1.blogger.com/_A5Tc7GvymLQ/R2Z5bK7BWsI/AAAAAAAAAGQ/G-aidMgy77M/s1600-h/jk.jpg"&gt;&lt;img id="BLOGGER_PHOTO_ID_5144933132012706498" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp1.blogger.com/_A5Tc7GvymLQ/R2Z5bK7BWsI/AAAAAAAAAGQ/G-aidMgy77M/s200/jk.jpg" border="0" /&gt;&lt;/a&gt;&lt;br /&gt;&lt;div align="justify"&gt;ಮೈಸೂರಿನ ರೈಲ್ವೆ ನಿಲ್ದಾಣದಲ್ಲಿ ಟ್ರೈನಿನಿಂದ ಇಳಿದಾಗ ಬೆಳ್ಳಂಬೆಳಗ್ಗೆ ಆರು ಗಂಟೆ. ಚುಮು ಚುಮು ಚಳಿಯಲ್ಲಿ ಹಲ್ಲುಗಳು ಗರಗಸದ ಸದ್ದು ಹೊರಡಿಸುತ್ತಿದ್ದವು. ಟಿಕೆಟ್ ಕೌಂಟರ್ ಪಕ್ಕದಲ್ಲಿರುವ “ಕಾಫಿಡೆ”ಯಲ್ಲಿ ಎಂಟು ರೂಪಾಯಿ ತೆತ್ತು ಕಫಚಿನೊ ಕುಡಿದಿದ್ದಾಯಿತು. ಚಳಿ ಮಾತ್ರ ಕಡಿಮೆಯಾಗಲಿಲ್ಲ. ಇಟಾಲಿಯನ್ ಕಾಫಿಯ ಕಹಿ ಮಾತ್ರ ನಾಲಿಗೆಯ ಮೇಲೆಯೆ ಅಂಟಿಕೊಂಡಿತ್ತು. ಹೊರಗೆ ಬಂದರೆ ಕುಳಿರ್‌ಗಾಳಿ ಗಾಳಿ. ಮಂಜು ಮುಸುಕಿದ ಮುಂಜಾವಿನಲ್ಲಿ ಇಡಿ ಮೈಸೂರು ಬೆಚ್ಚಗಿನ ಸ್ವೆಟರ್ ಹಾಕಿ ಕೂರಬಾರದೇ ಎಂದೆನಿಸಿತು. ವಾಕಿಂಗ್‌ಗೆ ಬಂದ ಬೆಳ್ಳನೆಯ ಹುಡುಗಿಯರು, ಇಳಿವಯಸ್ಸಿನ ಅಜ್ಜಂದಿರು, ಹೀಗೆ ಸುಮ್ಮನೆ ಓಡುವುದು ಬಿಟ್ಟು ಮನೆಯಲ್ಲಿ ಮುದುಡಿ ಮಲಗಬಾರದೇ ಎಂದು ಕರೆದು ಹೇಳಬೇಕೆನಿಸಿತು. ಅಷ್ಟರಲ್ಲಾಗಲೇ ಚಳಿ ನಿಧಾನವಾಗಿ ಮೈಯನ್ನೆಲ್ಲಾ ಆವರಿಸಿ, ಕೂದಲನ್ನು ಆಂಟೆನಾ ಕಡ್ಡಿಗಳಂತೆ ನಿಮಿರಿಸಿದ್ದವು. ಸ್ವಲ್ಪ ಬಿಸಿಲಾದರೂ ಮೂಡಿದ್ದರೆ, ದೂರದ ಆಸೆಯೊಂದು ಮೂಡಿ ಮರೆಯಾಯಿತು.&lt;br /&gt;&lt;br /&gt;&lt;/div&gt;&lt;br /&gt;&lt;div align="justify"&gt;ಅಬ್ಬಾ! ಚೆನೈಯಲ್ಲಿ ಇಷ್ಟೊಂದು ಚಳಿ ದೇವರಾಣೆ ಇಲ್ಲಪ್ಪಾ ಎನ್ನುತ್ತಾ, ಮಣಭಾರದ ಲಗೇಜ್ ಹೊತ್ತುಕೊಂಡು ರೈಲು ನಿಲ್ದಾಣದಿಂದ ಹೊರಗೆ ಬಂದೆ. ರಿಕ್ಷಾದವರು ಮುತ್ತಿಕೊಂಡರು. ಎಲ್ಲಿಗೆ ಸಾರ್? ಕುಟುಂಬದ ಸದಸ್ಯರೇನೋ ಎನ್ನುವಷ್ಟು ಆತ್ಮೀಯತೆ ಪ್ರದರ್ಶಿಸಿದರು. "ಬೇಕಾದರೆ ಅರ್ಥ ತಾಸು ಕಾಯಿ, ಆದರೆ, ಈ ರಿಕ್ಷಾದವರಿಗೆ ಮಾತ್ರ ಬೆಳ್ಳಂಬೆಳಗ್ಗೆ ದುಡ್ಡು ಕೊಡಬೇಡ ಎಂದು ನನ್ನ ಮೆದುಳು ಎಚ್ಚರಿಕೆ ರವಾನಿಸಿತ್ತು. ಅದೂ ಗೊತ್ತಿಲ್ಲದ ಉರಿನಲ್ಲಿ ಅಡ್ರೆಸ್ ಹೇಳಲು ಬಬ್ಬಬ್ಬೇ ಮಾಡುವುದನ್ನು ನೋಡುವಾಗಲೇ ರಿಕ್ಷಾದವನಿಗೆ, ನನ್ನ ಪರಿಸ್ಥಿತಿ ಗೊತ್ತಾಗುತ್ತದೆ. ಮುಂದಿನದು ವಿವರಿಸುವುದು ಬೇಡ. ಹಾಗಾಗಿ ಆ ಪ್ರಯತ್ನಕ್ಕೆ ಕೈಹಾಕಲಿಲ್ಲ. ಸರಿ, ಬಸ್‌ಸ್ಟಾಂಡಿನಲ್ಲಿ ಮುಂಜಾನೆ ನನ್ನಂತೆ ನೆರೆದಿದ್ದ ಸಹಪ್ರಯಾಣಿಕ ಬಳಿ ಹೋಗಿ, ಪ್ರೀಮಿಯರ್ ಸ್ಪುಡಿಯೋ ಕಡೆ ಹೋಗಬೇಕಾದರೆ ಯಾವ ಬಸ್ಸಿಗೆ ಹೋಗಬೇಕೆಂದು ಕೇಳಿದೆ. ಪುಣ್ಯಾತ್ಮರೊಬ್ಬರು ಬಸ್ ನಂಬರ್ ತಿಳಿಸಿ, ಎಲ್ಲಿ ಇಳಿಯಬೇಕೆಂದು ಹೇಳುವಷ್ಟರಲ್ಲಿ ಅವರ ಮಗಳು ಸ್ಕೂಟಿಯೊಂದಿಗೆ ಬಂದಳು. ಹಾಯ್ ಪಪ್ಪ ಎಂದಿದ್ದೇ ತಡ, ಅವರು ನನ್ನತ್ತ ಗಮನ ಕೂಡ ಕೊಡದೆ, ಮಗಳ ಹಿಂದೆ ಕುಳಿತು ಮರೆಯಾದರು. ಅವರಪ್ಪನಿಗಿಂತ ಆ ಹುಡುಗಿ ನೋಡಲು ಚೆನ್ನಾಗಿದ್ದಳು. ನನಗೂ ಕೂಡ ಹೀಗೆ, ಯಾರಾದರೂ, ಅಪರಿಚಿತ ಊರಿನಲ್ಲಿ ಪರಿಚಿತರಾಗಿ ಬಂದು ಡ್ರಾಪ್ ಕೊಡಬಹುದಾ ಎನ್ನುವ ಆಸೆಯೊಂದು ಕ್ಷಣಕಾಲ ಸುಳಿಯಿತು. ಆದರೆ ಅದು ಸಾಧ್ಯವಿಲ್ಲ ಎನ್ನುತ್ತಾ, ಎರಡು ಕಣ್ಣುಗಳನ್ನು ಸಾಧ್ಯವಾದಷ್ಟು ದೂರ ಹರಿಬಿಟ್ಟು, ಬಸ್ಸಿಗಾಗಿ ಕಾಯುತ್ತಾ ನಿಂತೆ. ಹಲವು ಬಸ್‌ಗಳು ಬಂದು ಹೋದವು. ಓಡಿ ಹೋಗಿ ಕಂಡೆಕ್ಟರ್ ಹತ್ತಿರ ವಿಚಾರಿಸುತ್ತಿದ್ದೆ. ಆದರೆ ಪ್ರೀಮಿಯರ್ ಸ್ಪುಡಿಯೋ ಕಡೆಗೆ ಹೋಗುವ ಯಾವುದೇ ಬಸ್ ಬರಲಿಲ್ಲ.&lt;br /&gt;&lt;br /&gt;&lt;br /&gt;ನಮ್ಮ ಸಂಪಾದಕರಿಗೆ ಪೋನಾಯಿಸಿದೆ. ಅವರು ಬೆಳಗಿನ ಜಾವದ ನಿದ್ರೆಯಲ್ಲಿದ್ದರು. ‘ಓಹೋ ಹಾಗ, ನೀವಲ್ಲೇ ಇರಿ, ನಾನು ಗಾಡಿ ತೆಗೆದುಕೊಂಡು ಬರುತ್ತೇನೆ’ ಅಂದರು. ನನ್ನ ಸಮಸ್ಯೆ ಬಗೆಹರಿದರೂ, ಒಳಗೊಳಗೇ ಬಂದ ಮೊದಲ ದಿನವೇ ಅವರಿಗೆ ತೊಂದರೆ ಕೊಡುತ್ತಿದ್ದೇನಲ್ಲಾ, ಮುಂದೆ ಏನು ಕಾದಿದೆಯೋ ಎಂದು ನೆನೆದು ಕಸಿವಿಸಿ ಎನಿಸತೊಡಗಿತು. ಅವರು ಹೇಳಿದ ಸಮಯಕ್ಕೆ ಹಾಜರಾದರು. ನೀವು ಮಲೆನಾಡಿನವರು ಹೀಗೆ ನಡುಗಿದರೆ ಇನ್ನುಳಿದವರ ಪರಿಸ್ಥಿತಿ ಏನು ಎಂದು ನಕ್ಕರು. ಸಾರ್ ಮಲೆನಾಡಿನಲ್ಲಿ ಇಷ್ಟು ಚಳಿ ಇಲ್ಲ, ಇದೊಳ್ಳೆ ಜಮ್ಮು ಕಾಶ್ಮೀರಕ್ಕೆ ಬಂದ ಹಾಗಿದೆ ಎಂದೆ. ಚೆನೈನಲ್ಲಿ 24 ಗಂಟೆಯೂ ಫ್ಯಾನ್ ಹಾಕಿಕೊಂಡು ಮಲಗುತ್ತಿದ್ದ ಕಥೆ ವಿವರಿಸಿದೆ. ಏನೂ ಆಗಲ್ಲ ಎಂದು ಅವರು ಧೈರ್ಯ ಹೇಳಿದರೂ, ಬಂದ ಎರಡು ದಿನದಲ್ಲಿ ಗಂಟಲು ನೋವು, ನೆಗಡಿ, ಶೀತ ಇತ್ಯಾದಿ ಎಲ್ಲಾ ನೆಂಟರೂ ಕಾಣಿಸಿಕೊಂಡರು. “ನಿನ್ನ ದ್ವನಿ ಏಕೆ ಹೀಗಿದೆ, ಒಳ್ಳೆ ವಜ್ರಮನಿ ಮಾತಾಡಿದಂಗೆ ಮಾತಾಡ್ತೀಯಲ್ಲಾ” ಅಂತ ನನ್ನ ಗೆಳೆಯರೊಬ್ಬರು ಕುಶಲ ವಿಚಾರಿಸಿಕೊಂಡರು. ನಮ್ಮಮ್ಮ ಏನಾಗಿದೆಯೋ, ಸ್ವೆಟರ್ ಹಾಕ್ಕೋ, ಸಿಕ್ಕಲ್ಲಿ ನೀರು ಕುಡಿಯಬೇಡ ಎಂದೆಲ್ಲಾ ಮುನ್ನೆಚ್ಚರಿಕೆ ಪಟ್ಟಿ ಒಪ್ಪಿಸಿದರು. ಹೇಗಿದೆ ನನ್ನ ಡಿಜಿಟಲ್ ವಾಯ್ಸ್ ಎನ್ನುತ್ತಾ ನಮ್ಮಪ್ಪನೊಂದಿಗೆ ಸೌಂಡ್ ಎಫೆಕ್ಟ್ ಹಂಚಿಕೊಂಡೆ. ನಂತರ ಎರಡು ದಿವಸದ ನಂತರ ಎಲ್ಲವೂ ನಿಯಂತ್ರಣಕ್ಕೆ ಬಂತು.&lt;br /&gt;&lt;br /&gt;ಮೈಸೂರಿನಲ್ಲಿ ನನ್ನ ಅಭಿರುಚಿಗೆ ತಕ್ಕದಾದ ಕೆಲವೊಂದು ಸಿಕ್ಕಿದಾಗ ಚೆನೈನ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಹೊರಟು ಬಂದಿದ್ದೆ. ಕೋರ್ಸು ಮುಗಿದ ಕೂಡಲೇ ಯಾಹೂ ಕನ್ನಡದಲ್ಲಿ ಉಪಸಂಪಾದಕ ಹುದ್ಧೆ ಸಿಕ್ಕಿದಾಗ ಚೆನೈಗೆ ಲಗೇಜು ಎತ್ತಿಕೊಂಡು ಹೋಗಿದ್ದೆ. ಆರು ತಿಂಗಳ ನಂತರ ಮನೆಗೆ ಮರಳುತ್ತಿದ್ದೆ. ಮನೆಯಲ್ಲಿ ಮಗ ಕರ್ನಾಟಕಕ್ಕೆ ಬರುತ್ತಿದ್ದಾನಲ್ಲಾ ಎನ್ನುವ ಖುಷಿ ಒಂದೆಡೆಯಾದರೆ, ನನಗೂ ಚೆನೈವಾಸದಿಂದ ಮುಕ್ತಿ ದೊರಕಿತ್ತು. ಕಾಲು ಚಾಚಿದರೆ, ಗೋಡೆಗೆ ತಾಕುತ್ತಿದ್ದ, ಗಾಳಿ ಬೆಳಕು ಹರಿಯದ ಮಾನ್ಸ್‌ಷ್‌ನ ಗುಬ್ಬಿ ಗೂಡಿನಂತ ಕೋಣೆಯಲ್ಲಿ ಬದುಕು ಸಾಗಿಸುವುದು ತುಂಬಾ ಕಷ್ಟವಾಗಿತ್ತು. ತಿಂಗಳಿಗೆ ಎರಡು ಸಾವಿರ ಬಾಡಿಗೆ ಪಾವತಿಸಿ, ಸ್ವಚ್ಚತೆಯ ಗಾಳಿ ಗಂಧವೂ ಇರದ ಉರಿನಲ್ಲಿ ಮೂಗು ಮುಚ್ಚಿಕೊಂಡು ನಡೆಯುವುದಕ್ಕಿಂತ ನಮ್ಮೂರಿನಲ್ಲಿ ಕಿರಾಣಿ ಅಂಗಡಿ ಇಷ್ಟುಕೊಳ್ಳುವುದೇ ಎಷ್ಟೋ ಉತ್ತಮವಾಗಿರುತ್ತಿತ್ತು ಎಂದು ಒಮ್ಮೊಮ್ಮೆ ನನ್ನ ತಲೆಗೆ ಅನಿಸುತ್ತಿತ್ತು. ನಮ್ಮೂರಿನ ತೆಂಗಿನಕಾಯಿ ವ್ಯಾಪಾರಿಯೊಬ್ಬ ತನ್ನ ತಿಂಗಳ ಆದಾಯದೊಂದಿಗೆ ನನ್ನ ವೇತನವನ್ನ ತಾಳೆ ಹಾಕಿಕೊಂಡು, ನೀನು ಸಂಪಾದಿಸುವುದು ಇಷ್ಟೇನಾ? ಇದಿಷ್ಟು ಸಂಪಾದಿಸುವುದಕ್ಕೆ ಯಾಕೆ ಚೆನೈಗೆ ಹೋಗಿದ್ದೀಯಾ? ಇಲ್ಲೇ ಹೊಟೇಲು ಪ್ರಾರಂಭಿಸಿದ್ದರೆ ಆಗ್ತಿತ್ತಲ್ಲಾ ಎಂದಾಗ ನನಗೆ ಮೈಯೆಲ್ಲಾ ಉರಿದು ಹೋಗಿತ್ತು. ಆದರೇನು ಮಾಡುವುದು, ನನ್ನ ತಲೆಯಲ್ಲೂ ಆಗೀಗ ಮಿಂಚಿ ಮರೆಯಾಗುವ ಇಂಥ ವಿಚಿತ್ರ ಐಡಿಯಾಗಳ ನಡುವೆ ಮತ್ಯಾಕೆ ಇಷ್ಟು ಓದಬೇಕಿತ್ತು, ಎನ್ನುವ ಪ್ರಶ್ನೆಗೆ ಉತ್ತರಿಸುವುದು ತುಂಬಾ ಕಷ್ಟವಾಗಿತ್ತು. ನಾನು ಅಂದುಕೊಂಡದ್ದು, ಏನೋ ಇದ್ದರೆ, ಇಲ್ಲಿ ನಡೆಯುತ್ತಿರುವುದು ಅದಕ್ಕೆ ತದ್ವಿರುದ್ದವಾಗಿದೆಯ್ಲಾ ಎನ್ನುತ್ತಾ, ಐಸ್‌ಕ್ರೀಮ್‌ನಂತೆ ಕರಗಿ ಹೋಗುವ ಗಾಂಧಿ ತಲೆಯ ನೋಟುಗಳಿಗೆ ಲೆಕ್ಕ ಇಡಲಾಗದೆ, ಆಗಾಗ್ಗ ಜೇಬು ಮುಟ್ಟಿ ನೋಡಿಕೊಳ್ಳುತ್ತಾ, ತಿಂಗಳ ಕೊನೆಯನ್ನು ದೂಡುತ್ತಿದ್ದೆ. ಕೊನೆಗೂ ಕರ್ನಾಟಕ್ಕೆ ಮರಳುತ್ತಿದ್ದೇನಲ್ಲಾ ಎನ್ನುವ ಸಮಾಧಾನ ಸಿಕ್ಕಿದಾಗ ಒಂದಿಷ್ಟು ಖುಷಿ ಪಟ್ಟಿದ್ದೆ.&lt;br /&gt;&lt;br /&gt;ಕಲಿಯುವಾಗ ಇರುವ ಸ್ಥಿತಿಯೇ ಬೇರೆ, ಕಲಿತ ನಂತರ ಉದ್ಯೋಗ ಹುಡುಕುವ ಕಷ್ಟವೇ ಬೇರೆ. ಬೇಗ ಕೆಲಸ ಸಿಕ್ಕಿದರೆ, ಹೇಗಾದರೂ ಪರಿಸ್ಥಿತಿಯನ್ನು ನಿಭಾಯಿಸಬಹುದು. ಆದರೆ, ಕಲಿತು ಕೆಲಸಕ್ಕಾಗಿ ಕಾದು ಕೂರುವುದಿದೆಯಲ್ಲಾ ಅದು ದೊಡ್ಡ ಹಿಂಸೆ. ನನ್ನೊಂದಿಗೆ ಕಲಿತ ಅನೇಕರಿಗೆ ಇನ್ನೂ ಕೆಲಸ ಸಿಕ್ಕಿಲ್ಲ. ಅವರ ಪರಿಸ್ಥಿತಿಯನ್ನು ನೆನೆಯುವಾಗ ಮರುಕ ಹುಟ್ಟುತ್ತದೆ. ಕೆಲವರಿಗೆ ದುಡಿಮೆಯ ಅನಿವಾರ್ಯತೆ ಇಲ್ಲವಾದರೂ, ಮನೆಯಲ್ಲಿ ಖಾಲಿ ಕೂರುವ ಸ್ಥಿತಿಯೇ ಭಯಾನಕವಾದದ್ದು ಎನ್ನುತ್ತಾರೆ. “ನೀವೇನಪ್ಪಾ ಕೆಲಸ ಮಾಡ್ತೀರಿ, ನಮ್ಮ ಪರಿಸ್ಥಿತಿ ನಿಮಗರ್ಥವಾಗೋದಿಲ್ಲ” ಎಂದು ಸಹಪಾಠಿಗಳು ಹೇಳುವಾಗ ನಾನು ಅಸಹಾಯಕನಾಗಿ ಕೇಳಿಸಿಕೊಳ್ಳುತ್ತೇನೆ. ಏನೋ ಸಮಾಧಾನ ಹೇಳಿ, ಹಿಡಿ ಪ್ರೀತಿ, ಅರೆಪಾವು ವಿಶ್ವಾಸ ತುಂಬುವ ಪ್ರಯತ್ನ ಮಾಡುತ್ತೇನೆ. ಅವರ ದ್ವನಿಯೊಳಗೆ ಬದುಕಿನ ಮತ್ತೊಂದು ಮುಖದ ದರ್ಶನವಾಗುತ್ತದೆ.. ನಾನು ಮೈಸೂರಾದರೇನು, ಚೆನೈ ಆದರೇನು ನನ್ನ ಕೈಯಲ್ಲಿ ಕೆಲಸವೊಂದಿದೆಯಲ್ಲಾ ಎಂದು ನಿಟ್ಟುಸಿರು ಬಿಡುತ್ತೇನೆ. &lt;/div&gt;&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-2496319111615406559?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/2496319111615406559/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=2496319111615406559' title='7 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/2496319111615406559'/><link rel='self' type='application/atom+xml' href='http://www.blogger.com/feeds/3841477221276814775/posts/default/2496319111615406559'/><link rel='alternate' type='text/html' href='http://jomon-malehani.blogspot.com/2007/12/blog-post_17.html' title='ಅವರ ದ್ವನಿಯೊಳಗೆ ತೆರೆದುಕೊಳ್ಳುವ ಮತ್ತೊಂದು ಬದುಕು'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><media:thumbnail xmlns:media='http://search.yahoo.com/mrss/' url='http://bp1.blogger.com/_A5Tc7GvymLQ/R2Z5bK7BWsI/AAAAAAAAAGQ/G-aidMgy77M/s72-c/jk.jpg' height='72' width='72'/><thr:total>7</thr:total></entry><entry><id>tag:blogger.com,1999:blog-3841477221276814775.post-6622575807781273331</id><published>2007-12-02T05:42:00.000-08:00</published><updated>2007-12-02T05:57:24.981-08:00</updated><title type='text'>ಕಾಡು ಸೇರಿದ ಸದಾನಂದನ ಹಾಡು ಪಾಡು</title><content type='html'>&lt;a href="http://bp1.blogger.com/_A5Tc7GvymLQ/R1K5ggnfqEI/AAAAAAAAAGI/uH6O7RVRgUs/s1600-R/surya.JPG"&gt;&lt;/a&gt;&lt;br /&gt;&lt;div&gt;&lt;a href="http://bp3.blogger.com/_A5Tc7GvymLQ/R1K41AnfqDI/AAAAAAAAAGA/U1Y4aEzAkj0/s1600-R/sada.JPG"&gt;&lt;img id="BLOGGER_PHOTO_ID_5139373345621387314" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp3.blogger.com/_A5Tc7GvymLQ/R1K41AnfqDI/AAAAAAAAAGA/1wo750urWZ4/s320/sada.JPG" border="0" /&gt;&lt;/a&gt;&lt;br /&gt;&lt;br /&gt;&lt;div align="justify"&gt;ಸಾಗರದಿಂದ ಕೋಗಾರ್ ಘಾಟಿಯ ಅಷ್ಟಾವಕ್ರ ತಿರುವುಗಳನ್ನು ಇಳಿದು ಬರುವಾಗ ಮೈಯಳ್ಳಿ ಎನ್ನುವ ಗುಡ್ಡ ಎದುರಾಗುತ್ತದೆ. ದೂರದಿಂದ ನೋಡಿದರೆ ಬಾಂಡ್ಲಿ ತಲೆಯಂತೆ ನುಣ್ಣಗೆ ಕಾಣುವ ಈ ಗುಡ್ಡ ಸುಮಾರು ಎರಡು ನೂರು ಏಕರೆ ಹುಲ್ಲುಗಾವಲು ಪ್ರದೇಶವನ್ನು ಒಳಗೊಂಡಿದೆ. ಈ ಮೈಯಳ್ಳಿ ಗುಡ್ಡವನ್ನು ಏರಿ 8 ಕಿ.ಮಿ. ಕಾಡಿನ ದಾರಿಯಲ್ಲಿ ನಡೆದರೆ ದಕ್ಷಿಣಕ್ಕೆ ಮತ್ತೊಂದು ಹುಲ್ಲುಗಾವಲು ಪ್ರದೇಶ ಎದುರಾಗುತ್ತದೆ. ಇದನ್ನು "ಸದಾನಂದನ ಗುಡ್ಡ" ಎಂದು ಕರೆಯುತ್ತಾರೆ. ಸದಾನಂದನೇ ಈ ಲೇಖನದ ಪ್ರಮುಖ ವ್ಯಕ್ತಿ. ನಾಗರಿಕ ಜಗತ್ತಿನೊಂದಿಗೆ ಯಾವುದೇ ಸಂಪರ್ಕವಿಲ್ಲದೆ ನಿಭಿಡಾರಣ್ಯದಲ್ಲಿ ಮನೆಮಾಡಿಕೊಂಡು ಸ್ನಿತಪ್ರಜ್ಞನಂತೆ ಬದುಕುತ್ತಿರುವ ಸದಾನಂದನ ಬದುಕು ರೋಚಕ, ವೈವಿಧ್ಯಮಯ.&lt;br /&gt;&lt;/div&gt;&lt;br /&gt;&lt;br /&gt;&lt;div align="justify"&gt;ಹಾಗೆ ನೋಡಿದರೆ ಸದಾನಂದ ದೈಹಿಕವಾಗಿ ಗಟ್ಟಿಮುಟ್ಟಾದ ಆಳೇನೂ ಅಲ್ಲ. ಬಾಲಮಂಗಳ ಕಥೆಯಲ್ಲಿ ಬರುವ ಲಂಬೋದರನಂತೆ ಕಾಣುವ ಈ ಸದಾನಂದ, ತನ್ನ ಗುಂಗುರು ಕೂದಲನ್ನು ನೀಟಾಗಿ ಬಾಚಿಕೊಂಡು ಕ್ಲೀನ್ ಶೇವ್ ಮಾಡಿ, ಜೀನ್ಸ್ ಪ್ಯಾಂಟ್, ಟಿ ಶರ್ಟ್ ಹಾಕಿಕೊಂಡು ಒಮ್ಮೊಮ್ಮೆ ಗುಡ್ಡದ ತುದಿಗೆ ನಿಂತು ತನ್ನಷ್ಟಕ್ಕೆ ಹಾಡುತ್ತಾನೆ. ಬೇಸರವಾದರೆ ದಿನಗಟ್ಟಲೆ ಮೌನಿಯಾಗಿ ಉಳಿದುಬಿಡುತ್ತಾನೆ. "ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜದೊಡೆಯಂತಯ್ಯಾ" ಎನ್ನುವಂತೆ, ಪಶ್ಚಿಮ ಘಟ್ಟದ ನಿಭಿಡಾರಣ್ಯದೊಳಗೆ, ತನ್ನ ಮನೆಯಂಗಳದಲ್ಲೂಂದು ಮಂಚ ಹಾಸಿ,&lt;br /&gt;ಒಂದಿಷ್ಟು ಇಂಗ್ಲೀಷ್ ದಿನಪತ್ರಿಕೆ, ಮ್ಯಾಗ್‌ಜಿನ್‌ಗಳನ್ನು ಹರಡಿಕೊಂಡು ಆಧುನಿಕ ಜಗತ್ತಿನ ವೇಗವನ್ನು ತನ್ನ ಮೊನುಚು ಕಣ್ಣುಗಳಲ್ಲಿ ಧ್ಯಾನಿಸುತ್ತಾ ಕುಳಿತು ಬಿಡುತ್ತಾನೆ.&lt;br /&gt;&lt;/div&gt;&lt;br /&gt;&lt;br /&gt;&lt;div align="justify"&gt;ಇಂತಹ ವಿಚಿತ್ರ ವ್ಯಕ್ತಿತ್ವದ ಸದಾನಂದನ ಕುರಿತು ಗುಡ್ಡದ ಕೆಳಗಿನ ಕೋಗಾರು, ಕ್ಯಾದಿಗೋಡು, ಹೆರೋಡಿ, ಕಲ್ಕೇರಿ, ನಾಗವಳ್ಳಿ ಗ್ರಾಮಸ್ಥರಲ್ಲಿ ಒಂದು ವಿಚಿತ್ರ ಕುತೂಹಲ ಇದೆ. ಕೆಲವರು ಸದಾನಂದನನ್ನು ಮಾನಸಿಕ ಅಸ್ವಸ್ಥ ವ್ಯಕ್ತಿ ಎನ್ನುತ್ತಾರೆ. ಇನ್ನು ಕೆಲವರು ಆತ ತುಂಬಾ ಓದಿರುವುದರಿಂದ ಈ ರೀತಿ ತಲೆ ಕೆಟ್ಟಿದೆ ಎನ್ನುತ್ತಾರೆ. ಆರ್ಥಿಕವಾಗಿ ಉತ್ತಮ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಆತನಿಗೆ ಈ ಕಾಡಿನಲ್ಲಿ ಮನೆ ಮಾಡಿಕೊಂಡಿರುವ ಅಗತ್ಯವಾದರೂ ಏನು ಎನ್ನುವುದು ಅನೇಕರ ಪ್ರಶ್ನೆ. ಇಷ್ಟೇ ಆಗಿದ್ದರೆ ಸದಾನಂದನ ಬಗ್ಗೆ ಕುತೂಹಲ ಇಲ್ಲಿಗೆ ಮುಗಿದು ಹೋಗುತ್ತಿತ್ತು. ಆದರೆ ತನ್ನ ಪೂರ್ವಾಪರ ಹುಡುಕಲು ತವಕಿಸುವ ಎಲ್ಲರಲ್ಲಿಯೂ ಒಂದು ಪ್ರಶ್ನಾರ್ಥಕ ಚಿನ್ಹೆ ಹುಟ್ಟುಹಾಕುತ್ತಾ ಹೋಗುವ ಸದಾನಂದನ ಮತ್ತೊಂದು ಪ್ಲಾಶ್ ಬ್ಯಾಕ್ ನಿಮ್ಮನ್ನು ಮೂಕ ವಿಸ್ಮಿತರನ್ನಾಗಿ ಮಾಡುತ್ತದೆ.&lt;br /&gt;&lt;/div&gt;&lt;br /&gt;&lt;br /&gt;&lt;div align="justify"&gt;ನಮ್ಮ ಕಥಾಪುರುಷ ಸದಾನಂದ, 1975ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದ ಪ್ರತಿಭಾವಂತ ವಿದ್ಯಾರ್ಥಿ. ಓದುತ್ತಿರುವಾಗಲೇ ಪ್ರಕೃತಿ ಮತ್ತು ನಿಭಿಡಾರಣ್ಯಗಳ ಬಗ್ಗೆ ವಿಚಿತ್ರ ಕುತೂಹಲ ಬೆಳೆಸಿಕೊಂಡಿದ್ದ ಈತ, ಓದಿನ ನಂತರ, ದಟ್ಟ ಅರಣ್ಯದ ನಡುವೆ ಮನೆ ಮಾಡಿಕೊಂಡು ನಾಗರಿಕ ಜಗತ್ತಿನ ಯಾವುದೇ ಸಂಪರ್ಕವಿಲ್ಲದೆ ಉಳಿದುಬಿಡಬೇಕೆಂಬ ನಿರ್ಧಾರಕ್ಕೆ ಬಂದಿದ್ದ. ಈ ಹುಚ್ಚಿಗೆ ಬಿದ್ದಿದ್ದರಿಂದಲೇ ಸೌದಿ ಅರೇಬಿಯಾದಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಿ, ಒಂದು ಮುಂಜಾನೆ ಯಾರಿಗೂ ಹೇಳದೇ ಕೇಳದೆ ಭಟ್ಕಳದಲ್ಲಿರುವ ತನ್ನ ಮನೆಗೆ ಮರಳಿ ಬಂದಿದ್ದ. ಸದಾನಂದನ ವಿಚಿತ್ರ ಅರಣ್ಯ ಪ್ರೇಮವನ್ನು ನೋಡಿದ ನೋಡಿ, ಆತನ ತಂದೆ ತಾಯಿ, ಸಹೋದರರು ಬುದ್ಧಿವಾದ ಹೇಳಿದರೂ, ಆತ ಅದನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ. ಲೋಕ ಸೇವಾ ಆಯೋಗದ ಪರೀಕ್ಷೆಯನ್ನು ಬರೆದು, ಇನ್ನೇನು ಬೆರಳ ತುದಿಯಲ್ಲಿ ಲಭಿಸುತ್ತಿದ್ದ ಜಿಲ್ಲಾಧಿಕಾರಿ ಹುದ್ದೆಯನ್ನು ತ್ಯಜಿಸಿ ಬಂದವನಿಗೆ ಮನೆಯವರು ಹೇಳುವುದೇನೂ ಬಾಕಿ ಉಳಿದಿರಲಿಲ್ಲ. "ಸರಿ ನಿನ್ನಿಷ್ಟದಂತೆ ಇದ್ದು ಬಿಡು" ಎಂದು ಕೈಬಿಟ್ಟಿದ್ದರು.&lt;br /&gt;&lt;/div&gt;&lt;br /&gt;&lt;br /&gt;&lt;div align="justify"&gt;ಕುಟುಂಬದ ಸಂಬಂಧವನ್ನು ಕಡಿದುಕೊಂಡು ಭಟ್ಕಳ, ಸಾಗರ, ಹೊನ್ನಾವರ, ಕುಮಟಾ, ಯಲ್ಲಾಪುರ ಮುಂತಾದ ಪ್ರದೇಶಗಳ ಅಂಚಿನಲ್ಲಿರುವ ಅರಣ್ಯ ಪ್ರದೇಶಗಳಲ್ಲಿ ತನ್ನ ವಾಸಸ್ಥಾನವನ್ನು ಅರಸುತ್ತಾ ಐದು ವರ್ಷಗಳ ಕಾಲ ಮತಿಗೆಟ್ಟ ಸನ್ಯಾಸಿಯಂತೆ ಅಲೆದ ಸದಾನಂದ, ಕೊನೆಗೆ ಆಯ್ಕೆ&lt;br /&gt;ಮಾಡಿಕೊಂಡಿದ್ದು, ಮೈಯಳ್ಳಿ ಗುಡ್ಡದ ದಕ್ಷಿಣಕ್ಕಿರುವ ಈ ಅನಾಮಧೇಯ ಗುಡ್ಡವನ್ನು. ಹೆಸರಿಲ್ಲದ ಈ ಗುಡ್ಡವನ್ನು ಇಲ್ಲಿನ ಗ್ರಾಮಸ್ಥರು ಈಗ "ಸದಾನಂದನ ಗುಡ್ಡ" ಎಂದು ಕರೆಯುತ್ತಾರೆ. ಇಂತಹ ವಿಚಿತ್ರ ವ್ಯಕ್ತಿತ್ವದ ಸದಾನಂದನನ್ನು ಮಾತನಾಡಿಸಲು ಯಾರಿಗಾದರೂ ತುಸು ಹೆದರಿಕೆಯೇ. ಆತನ ವೇಷಭೂಷಣ, ಬದುಕಿನ ಬಗ್ಗೆ ಸ್ವಲ್ಪ ವೆಂಗ್ಯಭಾವ ವ್ಯಕ್ತಪಡಿಸಿದರೂ ಸಾಕು, ಉಗ್ರಾವತಾರ ತಾಳಿಬಿಡುತ್ತಾನೆ. ಎದುರಿಗಿರುವ ವ್ಯಕ್ತಿಯ ಜಂಘಾಬಲವೇ ಉಡುಗಿ ಹೋಗುವಂತೆ ಬೈದುಬಿಡುತ್ತಾನೆ. ಹಾಗಾಗಿ ಆತನಿಗೆ ಸಾರ್ವಜನಿಕ ಸಂಪರ್ಕ ತುಂಬಾ ಕಡಿಮೆ. ಸದಾ ಅಂರ್ತಮುಖಿಯಾಗಿರುವ ಆತ, ಸಾಮಾನ್ಯವಾಗಿ ಹೊರಗೆ ಕಾಣಿಸಿಕೊಳ್ಳುವುದಿಲ್ಲ. ನಾಲ್ಕೈದು ತಿಂಗಳಿಗೊಮ್ಮೆ ಗುಡ್ಡ ಇಳಿದು, ಭಟ್ಕಳದಲ್ಲಿರುವ ತನ್ನ ಮನೆಯ ಬಾಡಿಗೆ ವಸೂಲಿ ಮಾಡಿಕೊಂಡು ದಿನಸಿ ಸಮಾನುಗಳನ್ನು ಖರೀದಿಸಿ ತನ್ನ ಅರಣ್ಯವಾಸಕ್ಕೆ ಮರಳುತ್ತಾನೆ.&lt;br /&gt;&lt;/div&gt;&lt;br /&gt;&lt;br /&gt;&lt;div align="justify"&gt;ಸದಾನಂದ ಈ ಗುಡ್ಡದಲ್ಲಿ ತಳವೂರಿ ಇದೀಗ 15 ವರ್ಷಗಳು ಕಳೆದಿವೆ. ನೂರಿನ್ನೂರು ಅಡಿಕೆ ಗಿಡ ಹಾಗೂ, ಪೇರು ಮಾವಿನ ಸಸಿಗಳನ್ನು ಕೃಷಿ ಮಾಡಿದ್ದಾನೆ. ಮನೆಯಂಗಳದಲ್ಲಿ ಪುಟ್ಟದೊಂದು ನಿಂಬೆ ತೋಟವಿದೆ. ನಮ್ಮೂರಿನಿಂದ ಈ ಸದಾನಂದನ ಮನೆ ತಲುಪಲು ಕಾಡಿನ ಒಳದಾರಿಯಲ್ಲಿ ಎಂಟು ಕಿಮಿ ನಡೆದರೆ ಸಾಕು. ಹುಲ್ಲುಗಾವಲು ಪ್ರದೇಶಕ್ಕೆ ಆಗಾಗ್ಗ ಶಿಕಾರಿಗೆಂದು ಗ್ರಾಮಸ್ಥರು ಹೋಗಿ ಬರುವುದರಿಂದ ಕಾಡಿನಲ್ಲಿ ಅಲ್ಲಲ್ಲಿ ದಾರಿಗಳಿವೆ. ಏನೇ ಆಗಲಿ ಈ ಬಾರಿ ಊರಿಗೆ ಹೋದಾಗ ಸದಾನಂದನನ್ನು ಮಾತನಾಡಿಸಿಕೊಂಡು ಬರುವ ನಿರ್ಧಾರ ಕೈಗೊಂಡಿದ್ದೆ. ಒಂದು ಭಾನುವಾರ ಒಂದಿಬ್ಬರು ಸ್ಥಳೀಯ ಸ್ನೇಹಿತರೊಂದಿಗೆ ಗುಡ್ಡ ಹತ್ತಿ ಸದಾನಂದನ ಮನೆಯಂಗಳ ತಲುಪಿದೆವು. ಸದಾನಂದನ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ನಿರೀಕ್ಷಿಸುತ್ತಿದ್ದ ನಮಗೆ ನಿರಾಸೆ ಕಾದಿತ್ತು. ಕಾಡಿನಲ್ಲಿರುವ ನೀರಿನ ಒರತೆಯೊಂದರಿಂದ ಪೈಪಿನ ಮೂಲಕ ನೀರು ಹಾಯಿಸಲು ಆತ ಹೋಗಿದ್ದ.&lt;br /&gt;&lt;/div&gt;&lt;br /&gt;&lt;br /&gt;&lt;div align="justify"&gt;ಸರಿ, ಆತ ಬರುವವರೆಗೆ ಕಾಯುವುದೆಂದು ಕುಳಿತೆವು. ಅಂದಹಾಗೆ ಆತನ ಹೆಂಡತಿಯ ಬಗ್ಗೆ ಹೇಳಲಿಲ್ಲವಲ್ಲಾ? ತನ್ನ ತೋಟದ ಕೆಲಸಕ್ಕಾಗಿ ಕರೆತಂದ ಮೇಘಾನಿ ಗುಡ್ಡದ ಮರಾಠಿ (ಕುಣಬಿ ಸಮುದಾಯದಂತೆ ಇವರದೂ ಒಂದು ಬುಡಕಟ್ಟು ಸಮುದಾಯ) ಹೆಂಗಸೊಬ್ಬಳನ್ನು ಸದಾನಂದ&lt;br /&gt;ಮದುವೆಯಾಗಿದ್ದಾನೆ. ಆತನಿಗೊಂದು ಮಗುವೂ ಇದೆ. ಮನೆಗೆ ಬಂದ ಅಪರಿಚಿತ ಅತಿಥಿಗಳನ್ನು ಬೆರಗುಗಣ್ಣಿನಿಂದಲೇ ಸ್ವಾಗತಿಸಿದ ಆಕೆ, ಚಹಾ, ಬಿಸ್ಕತ್ತುಗಳನ್ನು ತಂದು ಎದುರಿಗಿರಿಸಿದಾಗ ಬೆರಗಾಗುವ ಸರದಿ ನಮ್ಮದು. ಕೈಯಲ್ಲಿರುವ ಮೊಬೈಲನ್ನು ತೆಗೆದು, ಈ ಗುಡ್ಡದಲ್ಲಿ ನೆಟ್‌ವರ್ಕ್&lt;br /&gt;ಬರುತ್ತದೆಯಾ ಎಂದು ಪರಿಶೀಲಿಸುತ್ತಿರುವಾಗ " ಇಲ್ಲಿ ಟಾಟಾ ಇಂಡಿಕಾಮ್ ಮಾತ್ರ ಬರುತ್ತದೆ, ಹಚ್, ಏರ್‌ಟಲ್ ಬರುವುದಿಲ್ಲ. ನಮ್ಮ ಯಜಮಾನರ ಹತ್ತಿರವೂ ಮೊಬೈಲ್ ಇದೆ" ಎನ್ನಬೇಕೇ? ನನಗಂತೂ ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದ ಅನುಭವ. ಶಾಲೆಯ ಮೆಟ್ಟಿಲನ್ನೂ ಹತ್ತಿಲ್ಲದ ಈ ಹೆಂಗಸು, ಇಂತಹ ನಿಭಿಡಾರಣ್ಯದೊಳಗಿದ್ದುಕೊಂಡು ಆಧುನಿಕ ಸಂವಹನದ ಬಗ್ಗೆ ಮಾತನಾಡುತ್ತಿದ್ದಾಳಲ್ಲಾ? ಆ ಕ್ಷಣಕ್ಕೆ ಸದಾನಂದನ ಗುಡ್ಡ ಒಂದು ಪುಟ್ಟ ಜಾಗತಿಕ ಹಳ್ಳಿಯಂತೆ ಕಂಡುಬಂತು.&lt;br /&gt;&lt;/div&gt;&lt;br /&gt;&lt;br /&gt;&lt;div align="justify"&gt;ಸುಮಾರು ಒಂದು ಗಂಟೆಯ ನಂತರ ಸದಾನಂದ ಬಂದರು. ಅಲ್ಲಿಯವರೆಗೆ ನರಿ ಊಳಿಡುವಂತೆ ಒಂದೇ ಸಮನೆ ಕೂಗುತ್ತಿದ್ದ ಆತನ ನಾಯಿ ತನ್ನ ಕರ್ತವ್ಯಕ್ಕೆ ಪುಲ್‌ಸ್ಟಾಪ್ ಹಾಕಿತ್ತು. ಹಣೆಯ ಮೇಲೊಂದು ಕುಂಕುಮ ತಿಲಕ, ಬಿಳಿಯ ಪಂಚೆಯ ಮೇಲೆ ಹಸಿರು ಶರ್ಟ್ ಹಾಕಿದ್ದ ಸದಾನಂದ,&lt;br /&gt;ಜಾಗತೀಕರಣ ಹಾಗೂ ಪ್ರಕೃತಿಯ ನಡುವೆ ಸಿಲುಕಿ ಬಿದ್ದ ಅನಾಥ ಕೂಸಿನಂತೆ ಕಂಡರು. "ಇಂತಹ ನಿಭಿಡಾರಣ್ಯದಲ್ಲಿ ನನಗೆ ನೆಮ್ಮದಿ ಇದೆ. ಆದರೆ ಬದುಕು ದುಸ್ತರ" 15 ವರ್ಷಗಳ ಅರಣ್ಯವಾಸದ ನಂತರ ಇದೀಗ ಪಶ್ಚಾತಾಪ ಅನಿಸುತ್ತಿದೆ ಎಂದು ಕಳೆದುಹೋದ ತಮ್ಮ ಯೌವನವನ್ನು ಸ್ಮರಿಸಿಕೊಂಡರು. ಅವರು ಮಾತನಾಡುತ್ತಾ ಹೋದದ್ದನ್ನು ಮನಸ್ಸು ದಾಖಲಿಸುತ್ತಾ ಹೋಯಿತು. "ಯಾರಾದರೂ ಪಾರ್ಟಿ ಬಂದರೆ ಈ ಜಾಗವನ್ನು ಮಾರಬೇಕೆಂದಿದ್ದೇನೆ. ಇದಕ್ಕೆ ಪಟ್ಟಾ ಇಲ್ಲ. ರೆವನ್ಯೂ ಭೂಮಿ. ಇದನ್ನು ಕೊಳ್ಳಲು ನನ್ನಂತ ಮತ್ತೊಬ್ಬ ಹುಚ್ಚ ಬರಬೇಕು" ಎಂದು ತಾವೆ ಹೇಳಿ ತಾವೆ&lt;br /&gt;ನಕ್ಕರು. ವರ್ಷಗಳ ಬಳಿಕ ತನ್ನ ಮನೆಗೆ ಆಗಮಿಸಿದ ಅತಿಥಿಯೊಬ್ಬರೊಂದಿಗೆ ಮನಸ್ಸು ತೆರೆದಿಟ್ಟ ಸಮಾಧಾನ ಅವರ ಮುಖದಲ್ಲಿ ಸ್ಷಷ್ಟವಾಗಿ ಗೋಚರಿಸುತ್ತಿತ್ತು.&lt;br /&gt;&lt;/div&gt;&lt;br /&gt;&lt;br /&gt;&lt;div align="justify"&gt;ಸದಾನಂದ ಹೇಳಿದ್ದೆಲ್ಲವನ್ನೂ ಈ ಮೇಲೆ ಕಥೆಯಾಗಿ ದಾಖಲಿಸಿದ್ದೇನೆ. ಅಂದಹಾಗೆ ಈ ಸದಾನಂದನ ಸ್ವಂತ ಅಣ್ಣ ನಮ್ಮ ರಾಜ್ಯದ ಪ್ರಭಾವಿ ರಾಜಕಾರಿಣಿಗಳಲ್ಲಿ ಒಬ್ಬರು ಎಂದರೆ ನೀವು ನಂಬುತ್ತೀರಾ? ಹೀಗೆ ಕೆದಕುತ್ತಾ ಹೋದರೆ ಅಚ್ಚರಿಗಳ ನಡುವೆ ಬದುಕುತ್ತಿರುವ ಸದಾನಂದನ ಬಗ್ಗೆ ನೂರಾರು ವೈವಿಧ್ಯಮಯ ವಿಷಯಗಳು ಹೊರಗೆ ಬರುತ್ತವೆ. ಈಗ ಹೇಳಿ ಈತನನ್ನು ಮಾನಸಿಕ ಅಸ್ವಸ್ಥ ಎನ್ನಬೇಕೇ? ಅತಿ ಬುದ್ದಿವಂತ ಎನ್ನಬೇಕೇ? ಈ ವಿಚಾರ ನಿಮಗೆ ಬಿಟ್ಟದ್ದು. ಸದಾನಂದನ ಗುಡ್ಡ ಇಳಿದು ಊರು ಸೇರುವ ಹೊತ್ತಿಗೆ ಗಂಟೆ ರಾತ್ರಿ ಎಂಟಾಗಿತ್ತು. ಇಂಬಳಗಳು(ಜಿಗಣೆ) ಕಾಲಿನ ಸುತ್ತ ಕಚ್ಚಿಕೊಂಡು ರಕ್ತ ಹೀರಿದ್ದವು.&lt;/div&gt;&lt;/div&gt;&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-6622575807781273331?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/6622575807781273331/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=6622575807781273331' title='6 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/6622575807781273331'/><link rel='self' type='application/atom+xml' href='http://www.blogger.com/feeds/3841477221276814775/posts/default/6622575807781273331'/><link rel='alternate' type='text/html' href='http://jomon-malehani.blogspot.com/2007/12/blog-post.html' title='ಕಾಡು ಸೇರಿದ ಸದಾನಂದನ ಹಾಡು ಪಾಡು'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><media:thumbnail xmlns:media='http://search.yahoo.com/mrss/' url='http://bp3.blogger.com/_A5Tc7GvymLQ/R1K41AnfqDI/AAAAAAAAAGA/1wo750urWZ4/s72-c/sada.JPG' height='72' width='72'/><thr:total>6</thr:total></entry><entry><id>tag:blogger.com,1999:blog-3841477221276814775.post-8074642137096065133</id><published>2007-10-25T08:47:00.000-07:00</published><updated>2007-10-29T08:34:46.418-07:00</updated><title type='text'>ಯಾಕೋ ಸಮುದ್ರಕ್ಕೆ ನಾಚಿಕೆಯಾಯಿತು...</title><content type='html'>&lt;a href="http://bp2.blogger.com/_A5Tc7GvymLQ/RyX9jHLjfQI/AAAAAAAAAFw/ZqS14QHibDo/s1600-h/jk1.jpg"&gt;&lt;img id="BLOGGER_PHOTO_ID_5126782530495937794" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp2.blogger.com/_A5Tc7GvymLQ/RyX9jHLjfQI/AAAAAAAAAFw/ZqS14QHibDo/s320/jk1.jpg" border="0" /&gt;&lt;/a&gt;&lt;br /&gt;&lt;div&gt;&lt;a href="http://bp1.blogger.com/_A5Tc7GvymLQ/RyDAZHLjfII/AAAAAAAAAEI/IlFFuPCqwnI/s1600-h/sunset[1].jpg"&gt;&lt;/a&gt;&lt;br /&gt;&lt;br /&gt;&lt;div&gt;ಮರೀನಾ ಬೀಚ್‌ನ ಸಂಜೆಗೆಂಪಿನ ಕಡಲ ಕಿನಾರೆಯಲ್ಲಿ ಕಲರವ ಕೇಳಿಬರುತ್ತಿತ್ತು. ಬಿಸಿಲ ಧಗೆಗೆ ಬಳಲಿದ ನೂರಾರು ಹುಡುಗರು ಉಪ್ಪು ನೀರಿನಲ್ಲಿ ಈಜು ಬಿದ್ದಿದ್ದರು. ಉಕ್ಕಿ ಬರುವ ನೊರೆ ನೊರೆ ಅಲೆಯಲ್ಲಿ ಕಾಲು ಕುಣಿಸುತ್ತಾ ಒಂದಿಷ್ಟು ಪುಟಾಣಿ ಹುಡುಗರು ಸಮುದ್ರದ ವಿಸ್ಮಯ ನೋಡುತ್ತಿದ್ದರು. ಅತ್ತ ಎಮ್‌ಜಿಆರ್ ಸಮಾಧಿ ಬಳಿ ಇರುವ ಮರ್ಕ್ಯುರಿ ದೀಪ ಮೆಲ್ಲನೆ ಉರಿದು ಕತ್ತಲನ್ನು ತನ್ನ ಪ್ರಕಾಶದೊಳಗೆ ಲೀನಗೊಳಿಸುತ್ತಿತ್ತು. ಆಗ ತಾನೆ ಉರಿಯತೊಡಗಿದ ನೂರಾರು ಮಿಣುಕು ದೀಪಗಳು ಕಡಲ ತಡಿಯಲ್ಲಿ ವಿಶೇಷ ಪ್ರಭೆಯನ್ನು ಮೂಡಿಸಿದ್ದವು.&lt;br /&gt;&lt;/div&gt;&lt;br /&gt;&lt;br /&gt;&lt;div&gt;ದೂರದಲ್ಲಿ ನಿಂತು ನೋಡಿದರೆ ಕಡಲ ತಡಿಯಲ್ಲಿ ನೆರದ ಸಾವಿರಾರು ಜನರು ಸಾಲುಗಟ್ಟಿದ ಇರುವೆಗಳಂತೆ ಕಾಣುತ್ತಿದ್ದರು. ಸಂಜೆಗತ್ತಲಿನೊಂದಿಗೆ ಬೆರತ ಸಮುದ್ರದ ನೀರು ಕೂಡ ಕಪ್ಪನೆಯ ಬಣ್ಣಕ್ಕೆ ತಿರುಗಿ, ಆಟ ಮುಗಿದು ವಿಶ್ರಮಿಸಿಕೊಳ್ಳುತ್ತಿರುವ ಕ್ರೀಡಾಂಗಣದಂತೆ ಕಾಣುತ್ತಿತ್ತು. ಅದರ ಮಧ್ಯದಿಂದ ಎದ್ದು ಬರುವ ಪುಟಾಣಿ ಅಲೆಗಳು ತೀರಕ್ಕೆ ಬರುತ್ತಿದ್ದಂತೆ ಹೆಗಲಿಗೆ ಹೆಗಲು ಜೋಡಿಸಿ, ಶರವೇಗ ಪಡೆದು ದಂಡೆಯ ಮೇಲೆ ಮರಳಿಗೆ ಮುತ್ತು ನೀಡಿ ಮರಳುತ್ತಿದ್ದವು. ಅಪ್ಪ ಅಮ್ಮನ ಕಾಲನ್ನು ತಬ್ಬಿ ಹಿಡಿದು ನೀರಿಗಿಳಿದ ಮಕ್ಕಳು ಅಲೆ ಮರಳುವಾಗ ತಮ್ಮ ಪಾದದಡಿಯ ಮರಳು ಜಾರಿ ಹೋಗಿ ಕಚಗುಳಿ ಇಟ್ಟಾಗ ವಿಶೇಷ ಸಂಭ್ರಮಕ್ಕೊಳಗಾಗುತ್ತಿದ್ದರು. ಅತ್ತ ಸಂಜೆಗತ್ತಲಿನಲ್ಲಿ ತನ್ನ ಪ್ರಿಯತಮೆಯ ಮುಖವನ್ನೇ ತದೇಕ ಚಿತ್ತದಿಂದ ನೋಡತ್ತಾ ಕುಳಿತ ಇನಿಯ, ಸಮಯ ಸಾಧಿಸಿ ಅವಳ ಕೆನ್ನೆಯ ಮೇಲೊಂದು ಕಳ್ಳ ಮುತ್ತು ನೀಡಿ ಏನೂ ಅರಿಯದವನಂತೆ ಬಾನಿನೆಡೆಗೆ ಮುಖಮಾಡಿ ಕುಳಿತ್ತಿದ್ದ.&lt;br /&gt;&lt;/div&gt;&lt;br /&gt;&lt;br /&gt;&lt;div&gt;ಉಬ್ಬರ. ಉತ್ಸಾಹ, ಪ್ರೀತಿ, ಪ್ರೇಮ, ಸಂಭ್ರಮ, ಹತಾಶೆ, ನಿಟ್ಟುಸಿರು, ಮೌನ ಹೀಗೆ ನೂರಾರು ಭಾವನೆಗಳ ಮಡಿಲಾಗಿ ಮರೀನಾ ಬೀಚ್ ವಿಶಾಲವಾಗಿ ಮಲಗಿತ್ತು. ದಿನ ಸಾವಿರಾರು ಜನರು ಬರುತ್ತಾರೆ. ಸಾವಿರಾರು ಜನರು ಹೋಗುತ್ತಾರೆ. ಎಷ್ಟೊಂದು ಜನರನ್ನು ನೆನಪಿಟ್ಟುಕೊಳ್ಳುವುದು. ಬೇಲ್ ಪುರಿ ಮಾರುವ ಸೋನಲ್‌ವಾಲನ ಮುರುಕು ಬುಟ್ಟಿ, ಗರಂ ಗರಂ ಚಾಯ ಎನ್ನುತ್ತಾ ಪುಟ್ಟದೊಂದು ಪಾತ್ರೆಯನ್ನು ಕಾಲಿನ ಸಂದುಗಳ ನಡುವೆ ಸಿಕ್ಕಿಸಿ, ಪ್ಲಾಸ್ಟಿಕ್ ಕಪ್‌ನಲ್ಲಿ ಟೀ ಬಗ್ಗಿಸಿ ಕೊಡುವ ಪೆರುಮಾಳ್ ತಂಬಿ, ಟೈಮ್‌ಪಾಸ್ ಕಡಲೆಕಾಯಿ ಮಾರುವ ಪಳನಿ, ಸಮುದ್ರದ ದಡದಲ್ಲಿ ಸೀಮೆಎಣ್ಣೆ ಸ್ಟೌವ್ ಮೇಲೆ ಎಣ್ಣೆ ಕಾಯಿಸಿ ಮೀನು ಹುರಿದು ಕೊಡುವ ವಾಸಂತಿ ಚೇಚಿ, ಸಾವಿರಾರು ಜನರ ಮಧ್ಯದಿಂದಲೇ ಬೂಟ್ ಪಾಲೀಶ್.. ಬೂಟ್ ಪಾಲೀಶ್.. ಎನ್ನುತ್ತಾ, ಬೂಟಿರುವ ಕಾಲುಗಳನ್ನು ಚಕ್ಕನೆ ಗುರುತಿಸಿ, ಕಾಲಿಗೆರಗುವ ಬಾಲಕ ವೇಣು, ಹೀಗೆ ಕಲವೇ ಕೆಲವು ಜನ ಆಪ್ತರ ಹೆಸರುಗಳು ಮಾತ್ರ ಮರೀನಾ ಬೀಚ್‌ನ ಅಡ್ರಸ್ ಪುಸ್ತಕದಲ್ಲಿ ದಾಖಲಾಗಿದೆ.&lt;br /&gt;&lt;/div&gt;&lt;br /&gt;&lt;br /&gt;&lt;div&gt;ಇಂಥ ಕತ್ತಲಲ್ಲಿ ಕೈಯಲ್ಲೊಂದು ಹೃದಯದ ಲೋಲಕ ಹಿಡಿದು ಶ್ರೀನಿಲ್ ಧೃತಿಗೆಟ್ಟವನಂತೆ ಕಾದು ನಿಂತಿದ್ದ. ಅವನ ಎದೆ ಎದೆಯೊಳಗಿನಿಂದ ಹೊರಡುತ್ತಿದ್ದ ನಿಟ್ಟುಸಿರು ಸಮುದ್ರದ ಅಲೆಗಳ ನಿನಾದದ ಮುಂದೆ ಕ್ಷೀಣವಾದ್ದರಿಂದ ಯಾರಿಗೂ ಕೇಳಿಸುತ್ತಿರಲಿಲ್ಲ. ಇಲ್ಲಿಂದ ಸರಿಯಾಗಿ 20 ಕಿ.ಮಿ ದೂರದಲ್ಲಿರುವ ಅಣ್ಣಾನಗರದಲ್ಲಿ ಲೇಡೀಸ್ ಹಾಸ್ಟೇಲ್‌ನಲ್ಲಿ ರೂಮು ಮಾಡಿಕೊಂಡಿರುವ, ಸ್ಟರ್ಲಿಂಗ್ ರೋಡ್‌ನ ಕಂಪನಿಯೊಂದರಲ್ಲಿ ಕೆಲಸ ಮಾಡುವ ನಿತ್ಯಾಳಿಗಾಗಿ ಅವನು ದಾರಿ ಕಾಯುತ್ತಿದ್ದ. ನಿತ್ಯಾಳ ಕುತ್ತಿಗೆಗೆ ಈ ಲೋಲಕ ಕಟ್ಟಬೇಕು, ಅವಳ ಹಣೆಯ ಮೇಲೊಂದು ಮುತ್ತಿಡಬೇಕು. ಅದಕ್ಕಾಗಿ ಶ್ರೀನಿಲ್ ಸಮುದ್ರ ತಟದಲ್ಲಿ ನೆರೆದ ಸಾವಿರಾರು ಜನರಲ್ಲಿ ನಿತ್ಯಾಳ ಕಣ್ಣುಗಳಿಗಾಗಿಯೇ ದೃಷ್ಟಿ ಹರಿಬಿಟ್ಟಿದ್ದ.&lt;br /&gt;&lt;/div&gt;&lt;br /&gt;&lt;br /&gt;&lt;div&gt;ನಿತ್ಯ ಹೇಳಿದ ಸಮಯವನ್ನು ತಪ್ಪಿಸುವುದಿಲ್ಲ, ಎನ್ನುವಾಗಲೇ ಅದೆಲ್ಲಿಂದ ಪ್ರತ್ಯಕ್ಷವಾದಳೋ ಎನ್ನುವಂತೆ ಅವನ ಬೆನ್ನ ಹಿಂದಿನಿಂದ ಬಂದು ತೋಳು ಬಳಸಿದ್ದಳು. ಅವಳ ಕಂಕುಳದಲ್ಲಿ ಸಿಂಪರಿಸಿಕೊಂಡಿದ್ದ ಅತ್ತರಿನ ವಾಸನೆ ಘಮಘಮಿಸಿತ್ತು. ಅವನಿಗದು ಇಷ್ಟ. ಅದಕ್ಕೆಂದೇ ಅವಳದನ್ನು ಬಳಸುತ್ತಾಳೆ. ಕೈಯಲ್ಲಿ ಮುದುಡಿ ಹಿಡಿದ ವಸ್ತುವನ್ನು ಕತ್ತಲಲ್ಲಿ ಗುರುತಿಸಿ ಏನೆಂದು ಹುಬ್ಬು ಹಾರಿಸಿದ್ದಳು. ತಾನೇ ಕೈಹಿಡಿದು, ಅಂಗೈಯಲ್ಲಿ ಬೆವರಿನೊಂದಿಗೆ ಬೆಸೆದುಕೊಂಡಿದ್ದ ಲೋಲಕವನ್ನು ಅಚ್ಚರಿಯಿಂದ ನೋಡಿ, ನನಗಾ? ಎಂದು ಕಣ್ಣಲ್ಲೇ ಕೇಳಿದ್ದಳು. ಶ್ರೀನಿಲ್ ತನಗರಿವಿಲ್ಲದಂತೆ ಸುಮ್ಮನೆ ತಲೆಯಾಡಿಸಿದ್ದ. ಲೋಲಕವನ್ನು ಅವನ ಕೈಗೆ ಕೊಟ್ಟು ತಿರುಗಿ ನಿಂತು ತನ್ನ ಕುತ್ತಿಗೆಗೆ ಕಟ್ಟುವಂತೆ ಬಾಗಿದವಳ ಧೈರ್ಯ ಕ್ಷಣಕಾಲ ಅವನನ್ನು ತಬ್ಬಿಬ್ಬುಗೊಳಿಸಿತ್ತು. ತಾನು ಅಂದುಕೊಂಡಿದ್ದು ಇಷ್ಟು ಬೇಗ ಮುಗಿದುಹೋಗುತ್ತದೆ ಎಂದು ಅವನು ಕನಸಿನಲ್ಲಿಯೂ ಎಣಿಸಿರಲಿಲ್ಲ.&lt;br /&gt;&lt;/div&gt;&lt;br /&gt;&lt;br /&gt;&lt;div&gt;ಲೋಲಕವನ್ನು ಕುತ್ತಿಗೆಗೆ ಕಟ್ಟುತ್ತಿದ್ದಂತೆ ಅವನ ಕಣ್ಣಲ್ಲೇ ದೃಷ್ಟಿ ನೆಟ್ಟು ನೋಡಿದ ನಿತ್ಯಾ, ಥಟ್ಟನೆ ಬಾಗಿ ಅವನ ಹಣೆಗೊಂದು ಮುತ್ತು ನೀಡಿ, ಅಣ್ಣಾಚೌಕದ ಬಸ್‌ಸ್ಟಾಂಡಿನತ್ತ ಓಡಿದ್ದಳು. ಲೇಟಾದರೆ ಹಾಸ್ಟೆಲ್ ವಾರ್ಡ್‌ನ್ ಒಳಗೆ ಸೇರಿಸುವುದಿಲ್ಲ ಎಂದು ಓಟದ ನಡುವೆಯೇ ಹೇಳಿ, ನಾಳೆ ಮೇಲ್ ಮಾಡ್ತೀನಿ ಅಂದಿದ್ದಳು. ಶ್ರೀನಿಲ್‌ಗೆ ನಡೆದಿದ್ದೆಲ್ಲ ಒಂದು ದೃಶ್ಯಕಾವ್ಯದಂತೆ ಎದುರಿಗೆ ಬಂದು ನಿಂತಿತ್ತು. ಅವಳು ಓಡಿ ಹೋದ ಉಸುಕಿನ ತಗ್ಗುಗಳಲ್ಲಿ ಏನನ್ನೊ ಅರಸುವವನಂತೆ ತುಂಬಾ ಹೊತ್ತು ಹಾಗೇ ನಿಂತಿದ್ದ.&lt;br /&gt;&lt;/div&gt;&lt;br /&gt;&lt;br /&gt;&lt;div&gt;ದೂರದಲ್ಲಿ ಲಂಗರು ಹಾಕಿದ ಹಡಗು, ಕಾಮಗಾರಿ ಮುಗಿಯದೆ ಅರ್ಥಕ್ಕೆ ನಿಂತಿದ್ದ ಕಟ್ಟಡ, ತಡವಾಯಿತು ಎಂದು ಮನೆಗೆ ಮರಳಲು ಅವಸರಿಸುತ್ತಿರುವ ಜನರು, ಓಡುತ್ತಿರುವ ಬೇಲ್‌ಪುರಿ ಹುಡುಗ, ಮೀನು ಹುರಿಯುತ್ತಿರುವ ವಾಸಂತಿ ಚೇಚಿ, ಎಲ್ಲವೂ ಅವನಿಗೆ ಸ್ತಬ್ಧಚಿತ್ರಗಳಂತೆ ಭಾಸವಾಯಿತು. ಅತ್ತ ಕಳ್ಳ ಮುತ್ತು ನೀಡಿ, ಬಾನಿನತ್ತ ಮುಖಮಾಡಿದ್ದ ಹುಡುಗ, ತನ್ನ ಹುಡುಗಿಯ ಕೈಹಿಡಿದು ಹೊರಡಲನುವಾಗುತ್ತಿದ್ದ. ಸಂಜೆಗತ್ತಲಿನ ಮುಸುಕಿನ ಮರೆಯಿಂದ ಹೊರಬಂದ ಚಂದ್ರ ನಕ್ಷತ್ರಗಳಿಗೆ ಪಿಸುಗುಟ್ಟುತ್ತಿದ್ದ. ಮರೀನಾ ಬೀಚ್‌ನ ದಾಖಲೆ ಪುಸ್ತಕದಲ್ಲಿ ಎರಡು ಹೊಸ ಜೋಡಿಗಳ ಹೆಸರು ಸೇರ್ಪಡೆಗೊಂಡಿದೆ. ಯಾಕೋ ವಿಶಾಲವಾಗಿ ಹರಡಿ ಮಲಗಿದ್ದ ಸಮದ್ರಕ್ಕೆ ನಾಚಿಕೆಯಾಯಿತು.. ಚಂದ್ರನಿಗೆ ಕಾಣದಂತೆ ತನ್ನ ಅಲೆಗಳ ಮರೆಯಲ್ಲಿ ಮುಖ ಮುಚ್ಚಿಕೊಂಡಿತು.&lt;/div&gt;&lt;/div&gt;&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-8074642137096065133?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/8074642137096065133/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=8074642137096065133' title='7 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/8074642137096065133'/><link rel='self' type='application/atom+xml' href='http://www.blogger.com/feeds/3841477221276814775/posts/default/8074642137096065133'/><link rel='alternate' type='text/html' href='http://jomon-malehani.blogspot.com/2007/10/blog-post_25.html' title='ಯಾಕೋ ಸಮುದ್ರಕ್ಕೆ ನಾಚಿಕೆಯಾಯಿತು...'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><media:thumbnail xmlns:media='http://search.yahoo.com/mrss/' url='http://bp2.blogger.com/_A5Tc7GvymLQ/RyX9jHLjfQI/AAAAAAAAAFw/ZqS14QHibDo/s72-c/jk1.jpg' height='72' width='72'/><thr:total>7</thr:total></entry><entry><id>tag:blogger.com,1999:blog-3841477221276814775.post-1725586182977821704</id><published>2007-10-15T09:08:00.000-07:00</published><updated>2007-12-10T23:03:49.299-08:00</updated><title type='text'>ದೇವರು ಆ ತಾಯಂದಿರಿಗೆ ಶತವರ್ಷಗಳ ಆಯಸ್ಸು ಕೊಡಲಿ</title><content type='html'>&lt;a href="http://bp1.blogger.com/_A5Tc7GvymLQ/RxOTlPakC2I/AAAAAAAAAEA/bSCzsGqPNn4/s1600-h/peda.jpg"&gt;&lt;img id="BLOGGER_PHOTO_ID_5121599469252774754" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp1.blogger.com/_A5Tc7GvymLQ/RxOTlPakC2I/AAAAAAAAAEA/bSCzsGqPNn4/s320/peda.jpg" border="0" /&gt;&lt;/a&gt;&lt;br /&gt;&lt;div align="justify"&gt;ಹುಟ್ಟಿದ್ದು ಮಲೆನಾಡಿನಲ್ಲಾದರೂ, ಓದಿದ್ದು ಮಾತ್ರ ಧಾರವಾಡದಲ್ಲಿ. ಕರಾವಳಿ ಕಡಲ ತಡಿಯ ಮಂಡೆ ಬಿಸಿ ಸಂಸ್ಕೃತಿ ಮತ್ತು ಎಂಥದು ಮಾರಾಯರೆ ನಾಮ ಭೂಷಣವೂ ಮೇಳೈಸಿದ ಮಧ್ಯಂತರ ಊರು ನಮ್ಮದು. ಇಂತಹ ಊರಿನಿಂದ ಪದವಿ ಮತ್ತು ಸ್ನಾತಕೋತ್ತರ ಪದವಿಗಾಗಿ ಧಾರವಾಡಕ್ಕೆ ಆಗಮಿಸಿದಾಗ ಉತ್ತರ ಕರ್ನಾಟಕ ಇಷ್ಟೊಂದು ಆತ್ಮೀಯವಾಗುತ್ತದೆ ಎಂದು ನಾನು ಭಾವಿಸಿರಲಿಲ್ಲ. ನಮ್ಮೂರಿನ ಏಲಕ್ಕಿ ಬಾಳೆಹಣ್ಣಿನ ಸವಿಯಂತೆ ಧಾರವಾಡದ ಠಾಕೂರ್ ಸಿಂಗ್‌ನ ಪೇಡಾವೂ ನಾಲಗೆಯಲ್ಲಿ ಕರಗಿದಾಗ ಧಾರವಾಡದಲ್ಲೇ ಸ್ನಾತಕೋತ್ತರ ಪದವಿ ಪಡೆಯುವ ನಿರ್ಥಾರ ಕೈಗೊಂಡಿದ್ದೆ.&lt;br /&gt;&lt;/div&gt;&lt;br /&gt;&lt;div align="justify"&gt;ಕೇವಲ ಪೇಡಾದ ಸಿಹಿಯಿಂದಲ್ಲ. ಅಲ್ಲಿನ ಜನರ ಸಂಸ್ಕೃತಿ, ಆಚಾರ ವಿಚಾರ, ಜೀವನ ವಿಧಾನದಲ್ಲೂ ವೈವಿಧ್ಯತೆಯ ಸೊಬಗಿದೆ. ಹೊಟ್ಟೇಗೇನ್ ಶಗಣಿ ತಿನ್‌ತ್ತೀಯಾ ಎಂದು ಕೇಳುವ ಮಾತಿನ ಹಿಂದೆ, ಏನಪ್ಪಾ ತಮ್ಮಾ ಹೇಗಿದಿಯಾ? ಎನ್ನುವ ಕುಕ್ಕುಲತೆಯೂ ಇದೆ. ಹತ್ತಿರವಾದಂತೆ ನಾವೂ ಅವರಲ್ಲೂಂದಾಗಿ ಬಿಡುವ, ಅರಿಯದೆ ಹತ್ತಿರವಾಗುವ ಆತ್ಮೀಯತೆಯೂ ಧಾರವಾಡದ ಮಣ್ಣಿನಲ್ಲಿದೆ. &lt;/div&gt;&lt;br /&gt;&lt;div align="justify"&gt;ಧಾರವಾಡ ಮಾತ್ರವಲ್ಲ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಇದೇ ವಾತಾವರಣವಿದೆ. ಖಡಕ್ ರೊಟ್ಟಿ ಖಾರ ಚಟ್ನಿ ತಿಂದು ಉತ್ತರ ಕರ್ನಾಟಕದವರು ತುಂಬಾ ರಫ್ ಆಗಿದ್ದಾರೆ ಎನ್ನುವುದು ಎನ್ನುವುದು ಮಲೆನಾಡಿನ ಬಹುಪಾಲು ಜನರ ಅಭಿಪ್ರಾಯ. ಆದರೆ ಅವರ ನೇರವಂತಿಕೆಯ ಮಾತಿನ ಹಿಂದೆ ಅರಳೆಯಂತಹ ಮನಸ್ಸಿದೆ ಎನ್ನುವುದು ಅನೇಕರಿಗೆ ತಿಳಿದಿಲ್ಲ. ಅತಿಥಿ ಸತ್ಕಾರಕ್ಕೆ ಮಲೆನಾಡು ಹೇಳಿ ಮಾಡಿಸಿದ ಊರಾದರೂ, ಉತ್ತರ ಕರ್ನಾಟಕದವರ ಹೃದಯ ವೈಶಾಲ್ಯತೆಯ ಮುಂದೆ ಅದು ತುಸು ಕಡಿಮೆಯೇ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ಅಭಿಪ್ರಾಯವನ್ನು ನಾನು ಧಾರವಾಡದಲ್ಲಿ ಓದಿದ್ದೇನೆ ಎನ್ನುವ ಒಂದೇ ಒಂದು ಕಾರಣಕ್ಕೆ ನೀಡುತ್ತಿಲ್ಲ. ನೀವು ಯಾವ ಹೊತ್ತಿನಲ್ಲಿ ಯಾರದೇ ಮನೆಗೆ ಹೋಗಿ, ನಿಮ್ಮ ಪರಿಚಯ ಇರಲಿ, ಇಲ್ಲದಿರಲಿ, ಬಾರಪ್ಪಾ ತಮ್ಮಾ, ಕೈಕಾಲ್‌ ಮುಖಾ ತೊಳ್ಕೋ..ಊಟಕ್ಕೆ ನೀಡ್ತಿನಿ ಎನ್ನುವ ಅಲ್ಲಿನ ತಾಯಂದಿರ ಪ್ರೀತಿ ಇದೆಯಲ್ಲಾ ಅದು ಮಲೆನಾಡಿನಲ್ಲಿ ಕಾಣಸಿಗುವುದು ಬಹಳ ಅಪರೂಪ ಎನ್ನುವುದು ನನ್ನ ಅನುಭವಕ್ಕೆ ಬಂದಿರುವ ವಿಷಯ.&lt;br /&gt;&lt;/div&gt;&lt;br /&gt;&lt;div align="justify"&gt;ಮನೆಗೆ ಬಂದವರ ಕುಲ, ಗೋತ್ರ, ನಕ್ಷತ್ರ, ರಾಶಿ ವಿಚಾರಿಸಿ, ಇವನು ನಮ್ಮ ಪೈಕಿಯವನೇ ಎಂದು ಪರೀಕ್ಷಿಸಿ, ಸ್ಥಾನ-ಮಾನ, ಆಸ್ತಿ ಅಂತಸ್ಸು ತೂಗಿ, ಕೂತ್ಕೊಳ್ಳಿ.. ಊಟ ಮಾಡಿಕೊಂಡು ಹೋಗುವಿರಂತೆ, ಕಾಫಿ ಕುಡೀತೀರಾ? ಎಂದು ಕೇಳುವ ಮಲೆನಾಡಿಗೂ, ಧಾರವಾಡದ ಮಾತಿಗೂ ಎಷ್ಟು ವ್ಯತ್ಯಾಸವಿದೆ ನೀವೆ ನೋಡಿ. ಅಂವ, ಇಂವ, ಈಕಿ, ಹೂನ್ರೀ. ಶೈಲಿಯ ಮಾತಿನ ನಡುವೆಯೂ ಧಾರವಾಡದವರ ಜೀವನ ಪ್ರೀತಿ ಮತ್ತು ಅವರು ಮತ್ತೊಬ್ಬರಿಗೆ ತೋರಿಸುವ ಗೌರವ ಇದೆಯಲ್ಲಾ ಅದನ್ನು ಯಾರೇ ಆಗಲಿ ಮೆಚ್ಚಬೇಕು.&lt;br /&gt;&lt;/div&gt;&lt;br /&gt;&lt;div align="justify"&gt;ಬಹಳ ಜನರಿಗೆ ಧಾರವಾಡ ಬಾಷೆಯೆಂದರೆ ಕುಹಕ. ಇತ್ತೀಚೆಗೆ ಸಿನಿಮಾ ಮತ್ತು ಧಾರವಾಹಿಗಳಲ್ಲಿ ಈ ಭಾಷಾ ಪ್ರಯೋಗಕ್ಕೆ ಮುಂದಾಗಿ, ಅದು ಮನೋರಂಜನೆಯೂ ಅಲ್ಲದೆ, ಗಂಭೀರವೂ ಆಗದೆ, ಅಪಹಾಸ್ಯಕ್ಕೀಡಾಗುತ್ತಿರುವ ಪ್ರಸಂಗಳು ನಡೆಯುತ್ತಿವೆ. ಭಾಷೆಯನ್ನು ಪ್ರಯೋಗಿಸುವ ಮೊದಲು, ಅದರ ಹಿಂದಿರುವ ಸಂಸ್ಕೃತಿ, ಆಚಾರ-ವಿಚಾರಗಳನ್ನು ತಿಳಿದುಕೊಂಡಿರಬೇಕು. ಭಾಷೆಯನ್ನು ಅವಮಾನಿಸಿದರೆ ಅದು ನಮ್ಮ ಸಂಸ್ಕೃತಿಯನ್ನು ಅವಮಾನಿಸಿದ ಹಾಗೆ. ಅಂಥವರಿಗೆ ಧಿಕ್ಕಾರವಿರಲಿ.&lt;br /&gt;&lt;/div&gt;&lt;br /&gt;&lt;div align="justify"&gt;ಹುಬ್ಬಳ್ಳಿ-ಧಾರವಾಡದಲ್ಲಿ ಓದಿದ ಐದು ವರ್ಷಗಳು ನನ್ನ ವಿದ್ಯಾರ್ಥಿ ಜೀವನದಲ್ಲಿ ಅವಿಸ್ಮರಣೀಯ ಘಟ್ಟಗಳು. ಶನಿವಾರ ಭಾನುವಾರ ಬಂದಿತೆಂದರೆ, ಸ್ಥಳೀಯ ಗೆಳೆಯರು ತಮ್ಮ ತಮ್ಮ ಮನೆಗಳಿಗೆ ಕರೆದುಕೊಂಡು ಹೋಗುತ್ತಿದ್ದರು. "ನಾಚ್ಕೆ ಪಟ್ಕೋಬೇಡ ತಮ್ಮಾ.. ಊಟ ಮಾಡು.. ಇದು ನಿಮ್ಮ ಮನೆ ಇದ್ದ ಹಾಗೆ... ನಾನು ನಿಮ್ಮವ್ವ ಇದ್ದ ಹಾಗೆ" ಎಂದು ನನ್ನ ಗೆಳೆಯಂದಿರ ತಾಯಂದಿರು ಹೇಳುತ್ತಿದ್ದರೆ, ಹೊಟ್ಟೆ ಮಾತ್ರವಲ್ಲ ಮನಸ್ಸೂ ತುಂಬುತ್ತಿತ್ತು. ಬರುಬರುತ್ತಾ ಅವರ ಮನೆಗಳಿಗೂ ನನ್ನ ನಡುವೆಯೂ ಒಂದು ಭಾವನಾತ್ಮಕ ಸಂಬಂಧ ಟಿಸಿಲೊಡೆಯುತ್ತಿತ್ತು. "ಪಾಪ ಹುಡುಗ ಹಾಸ್ಟೇಲಿನಲ್ಲಿದ್ದಾನೆ, ಮನೆಯ ಊಟ ಸಿಗುವುದಿಲ್ಲ ಎನ್ನುವ&lt;br /&gt;ಕಾಳಜಿಯೊಂದಿಗೆ ಹಬ್ಬ-ಹುಣ್ಣಿಮೆಗಳು ಬಂದಾಗ ಬುತ್ತಿ ಕಟ್ಟಿ ಕೊಟ್ಟು ಕಳುಹಿಸುತ್ತಿದ್ದರು".&lt;br /&gt;&lt;/div&gt;&lt;br /&gt;&lt;div align="justify"&gt;ಆದರೆ ಅವರದೆಲ್ಲಾ ಒಂದೇ ದೂರು. ನನ್ನ ಹೆಸರಿನದು. ಧಾರವಾಡದಲ್ಲಿ ಹೆಸರಿನ ಮುಂದೆ ಅಡ್ರಸ್ ಚಾಲ್ತಿಯಲ್ಲಿದ್ದರೆ, ನಮ್ಮ ಮಲೆನಾಡಿನಲ್ಲಿ ಅದಿಲ್ಲ. ನನ್ನ ಕ್ರಿಶ್ಚಿಯನ್ ಹೆಸರು ಅವರ ಕಿವಿಗೆ ಕರ್ಕಶವಾಗಿ ಕೇಳುತ್ತಿತ್ತು ಎನ್ನುವುದರಲ್ಲಿ ಅವರದೇನೂ ತಪ್ಪಿಲ್ಲ. ನನ್ನ ಗೆಳೆಯ ಚನ್ನು ಮೂಲಿಮನಿಯ ತಾಯಿ ಒಂದು ದಿನ ಅವರ ಮನೆಗೆ ಹೋಗಿದ್ದಾಗ ಹೇಳಿದ್ದರು. "ತಮ್ಮಾ ನೀನು ಏನೇ ಅನ್ನು, ನನಗೆ ಮಾತ್ರ ನಿನ್ನ ಹೆಸರು ಹೇಳಾಕೆ ಬರೋದಿಲ್ಲ' ಎಂದಿದ್ದರು. ಅವರ ಮಾತಿನ ಹಿಂದೆ ಕಲ್ಮಶವಿರಲಿಲ್ಲ. ನಾವೆಲ್ಲರು ಮನಸಾರೆ&lt;br /&gt;ನಕ್ಕಿದ್ದೆವು.&lt;br /&gt;&lt;/div&gt;&lt;br /&gt;&lt;div align="justify"&gt;ಧಾರವಾಡದಲ್ಲಿ ಓದುತ್ತಿರುವ ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಉತ್ತರ ಕರ್ನಾಟಕದ ಹೃದಯ ವೈಶಾಲ್ಯತೆ ಅರ್ಥವಾಗಿರುತ್ತದೆ. ಗೋವಿನ ಹಾಡಿನ ಸಂಸ್ಕೃತಿ ನಾಡು ನಮ್ಮದು ಎನ್ನುತ್ತೀವಲ್ಲಾ ಅದನ್ನು ಅನುಭವಿಸಲು, ಅದರ ಮಾಧುರ್ಯತೆ ತಿಳಿಯಬೇಕಾದರೆ ಧಾರವಾಡಕ್ಕೆ ಬರಬೇಕು. ಧಾರವಾಡದ ಚನ್ನು ಮೂಲಿಮನಿ, ಹುಬ್ಬಳ್ಳಿಯ ನವೀನ್ ನವಲ್‌ಗುಂದ್, ಕೊಪ್ಪಳದ ಶ್ರೀಕಾಂತ್ ಭದ್ರಾಪೂರ, ಕರಡಿಕೊಪ್ಪದ ಬಸವರಾಜ ಗರಗ, ಇವರೆಲ್ಲರ ತಾಯಂದಿರಿಗೆ ದೇವರು ಶತವರ್ಷಗಳ ಆಯಸ್ಸು ಕೊಡಲಿ. ಅವರು ನನ್ನ ಮೇಲೆ ತೋರಿಸಿದ ಪ್ರೀತಿಗೆ, ಅಂತಃಕರಣಕ್ಕೆ ಎಂದಿಗೂ ನಾನು ಚಿರಋಣಿ. ಇದನ್ನೇ ಋಣಾನುಬಂಧ ಎನ್ನುವುದು. ಅದು ಎಲ್ಲರಿಗೂ ಸಿಗುವುದಿಲ್ಲ. &lt;/div&gt;&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-1725586182977821704?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/1725586182977821704/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=1725586182977821704' title='7 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/1725586182977821704'/><link rel='self' type='application/atom+xml' href='http://www.blogger.com/feeds/3841477221276814775/posts/default/1725586182977821704'/><link rel='alternate' type='text/html' href='http://jomon-malehani.blogspot.com/2007/10/blog-post_15.html' title='ದೇವರು ಆ ತಾಯಂದಿರಿಗೆ ಶತವರ್ಷಗಳ ಆಯಸ್ಸು ಕೊಡಲಿ'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><media:thumbnail xmlns:media='http://search.yahoo.com/mrss/' url='http://bp1.blogger.com/_A5Tc7GvymLQ/RxOTlPakC2I/AAAAAAAAAEA/bSCzsGqPNn4/s72-c/peda.jpg' height='72' width='72'/><thr:total>7</thr:total></entry><entry><id>tag:blogger.com,1999:blog-3841477221276814775.post-112793300735007325</id><published>2007-10-09T02:07:00.000-07:00</published><updated>2007-10-09T09:31:07.382-07:00</updated><title type='text'>ನೈಟ್ ಶಿಪ್ಟ್ ಮತ್ತು ಚೆನೈ ಬದುಕು...</title><content type='html'>&lt;a href="http://bp2.blogger.com/_A5Tc7GvymLQ/RwtFafakC1I/AAAAAAAAAD4/KkmBKbYkgTU/s1600-h/jk.jpg"&gt;&lt;img id="BLOGGER_PHOTO_ID_5119261722848529234" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp2.blogger.com/_A5Tc7GvymLQ/RwtFafakC1I/AAAAAAAAAD4/KkmBKbYkgTU/s320/jk.jpg" border="0" /&gt;&lt;/a&gt;&lt;br /&gt;&lt;div align="justify"&gt;ಜೈಮಿನಿ ಬ್ರಿಡ್ಜ್‌ನ ಪ್ಲೈಓವರ್ ಕೆಳಗೆ ನಡೆಯುತ್ತಾ ಯೋಚಿಸುತ್ತಿದ್ದೆ. ಹಸಿವು ಎನ್ನುವುದು ಎಷ್ಟೊಂದು ಕಠೋರ ಅಲ್ವಾ? ಮನುಷ್ಯನನ್ನು ಎಂತಹ ಸ್ಥಿತಿಗೂ ಹಸಿವು ತಂದು ನಿಲ್ಲಿಸುತ್ತದೆ. ಪ್ಲೈಓವರ್‌ನ ಸಂದುಗಳಲ್ಲಿ ಒಪ್ಪತ್ತಿನ ಊಟಕ್ಕೆ ಗತಿಯಿಲ್ಲದೆ, ಎದುರಿಗೆ ಬಂದು ನಿಂತು ಧನ್ಯತೆಯಿಂದ ಕೈಯೊಡ್ಡುವ ಚಿಕ್ಕ ಮಕ್ಕಳನ್ನು ಕಂಡಾಗ, ಕೈ ತನಗರಿವಿಲ್ಲದಂತೆ ಶರ್ಟಿನ ಜೇಬುಗಳನ್ನು ತಡಕುತ್ತಿತ್ತು. ಇತ್ತೀಚೆಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಾಗಿನಿಂದ ಚೆನೈನ ರಾತ್ರಿ ಬದುಕಿನ ಕಠೋರತೆಯ ನಗ್ನ ದರ್ಶನವಾಗಿದೆ. ಹಗಲಿನ ಮಾರ್ಥತೆಯಾಗಲಿ, ಅವಸರದ ಕೊಳ್ಳುಬಾಕತನವಾಗಲಿ ರಾತ್ರಿಯಲ್ಲಿ ಮಾರ್ಧನಿಸುವುದಿಲ್ಲ. ರಾತ್ರಿ ಎಷ್ಟು ನಿಶಬ್ದವೂ ಅಷ್ಟೇ ಕಠೋರ. ನೀರವ ಮೌನದಲ್ಲೂ ಹಸಿವಿನ ಕ್ಷೀಣ ದ್ವನಿ ಅಂತರಂಗವನ್ನು ಕಲುಕುತ್ತದೆ.&lt;br /&gt;&lt;/div&gt;&lt;br /&gt;&lt;div align="justify"&gt;ರಾತ್ರಿ 11 ಗಂಟೆಗೆ ರಾತ್ರಿ ಪಾಳಿಯ ಕೆಲಸವನ್ನು ಮುಗಿಸಿಕೊಂಡು ಹೊರಬಿದ್ದರೆ ಎಲ್ಲ ಬಸ್ಸುಗಳು ಆದಾಗಲೇ ಹೋಗಿರುತ್ತದೆ. share ಆಟೋಗಳು ಸಿಕ್ಕಿದರೆ ಪುಣ್ಯ. ಇಲ್ಲದಿದ್ದರೆ ಒಮ್ಮೊಮ್ಮೆ ನಡೆದುಕೊಂಡೇ ರೂಮು ಸೇರುತ್ತೇನೆ. ಮೊದ ಮೊದಲು ನಡಿಗೆ ಬೇಸರವಾಗಿತ್ತು. ಆದರೆ ಬರುಬರುತ್ತಾ ಅದು ಅನಿವಾರ್ಯವಾಯಿತು. ಮನುಷ್ಯ ಬದುಕಿನ ಸಂಕೀರ್ಣತೆಗಳನ್ನು, ಸೂಕ್ಷ್ಮತೆಗಳನ್ನು ಬಹಳ ಹತ್ತಿರದಿಂದ ಕಾಣುವ ಅವಕಾಶವನ್ನು ನೈಟ್ ಶಿಪ್ಟ್ ಕಲ್ಪಿಸಿದೆ. ಈಗ ರಾತ್ರಿ ಬೇಸರ ಎನಿಸುವುದಿಲ್ಲ. ಪ್ಲೈಓವರ್‌ಗಳ ಅಡಿಯಲ್ಲಿ ಪ್ಲಾಸ್ಟಿಕ್ ತುಣುಕೊಂದರಲ್ಲಿ ಅನ್ನ ಹಂಚಿಕೊಂಡು ತಿನ್ನುವ ತಂದೆ-ತಾಯಿ ಮಕ್ಕಳನ್ನು ನೋಡುವಾಗ ಕಣ್ಣು ಹನಿಗೂಡುತ್ತದೆ. ನನಗೂ ಅವರಿಗೂ ಯಾವುದೇ ಸಂಬಂಧವಿಲ್ಲ. ಆದರೆ ಹಸಿವು! ಅದು ಎಲ್ಲರಿಗೂ ಒಂದೇ ಅಲ್ಲವೇ ಎನ್ನುತ್ತದೆ ಮನಸ್ಸು.&lt;br /&gt;&lt;/div&gt;&lt;br /&gt;&lt;div align="justify"&gt;ಚೆನೈಗೆ ಮೆಟ್ರೋಪಾಲಿಟನ್ ಸಿಟಿ ಎನ್ನುವ ನಾಮಾಂಕಿತವನ್ನು ಯಾವ ಮಾನದಂಡದ ಮೇಲೆ ನೀಡಿದ್ದಾರೆ ಎನ್ನುವುದು ಇದುವರೆಗೆ ನನಗೆ ತಿಳಿದಿಲ್ಲ. ಕಟ್ಟಾ ಕೊಳಕು ನಗರ. ಇಲ್ಲಿನ ಪ್ರಮುಖ ಆಹಾರ ಬಿರಿಯಾಣಿ. ಪ್ರತಿ ಗಲ್ಲಿಗೊಂದರಂತೆ ಮಟನ್ ಶಾಪ್‌ಗಳು ಹಾಗೂ ಬಿರಿಯಾಣಿ ಅಂಗಡಿಗಳು ಸಾಲುಗಟ್ಟಿ ನಿಂತಿವೆ. ರಾತ್ರಿ 11 ಗಂಟೆಯಾಗುತ್ತಿದ್ದಂತೆ ಬಿರಿಯಾಣಿ ಅಂಗಡಿಯ ಮಾಲಿಕ ಕದವಿಕ್ಕಿ, ದಿನದ ಆದಾಯ ಎಣಿಸತೊಡಗುತ್ತಾನೆ. ಇಂತಹ ಸಮಯದಲ್ಲಿ ಅಳಿದುಳಿದ ಎಲುಬಿನ ಚೂರುಗಳಿಗಾಗಿ ಪ್ಲೈಓವರ್ ಕೆಳಗಿನವರು ಬಂದು ನಿಲ್ಲುತ್ತಾರೆ. ಅಮ್ಮಾ.. ಅಣ್ಣಾಚಿ.. ಅದೇ ಧನ್ಯತೆಯ ಭಾವ. &lt;/div&gt;&lt;div align="justify"&gt; &lt;/div&gt;&lt;div align="justify"&gt;ಪ್ಲೈಓವರ್ ಬದುಕನ್ನು ನೋಡಬೇಕಾದರೆ ನೀವು ರಾತ್ರಿ 12 ಗಂಟೆಯ ನಂತರ ರಸ್ತೆಗಿಳಿಯಬೇಕು. ಬಿಕ್ಷುಕರು, ಕುಡುಕರು, ಬದುಕಿನ ನಿರ್ಧಯತೆಗೆ ಗುರಿಯಾದವರು ಎಲ್ಲರೂ ಇಲ್ಲಿ ಸಿಗುತ್ತಾರೆ. ಕಾಲು ಕೊಳೆತು ವೃಣವಾದ 70ರ ಮುದುಕನಿಂದ ಹಿಡಿದು, ತಾಯಿಯ ಎದೆಹಾಲಿಗಾಗಿ ಕಿರುಚುತ್ತಿರುವ ಎಳೆಯ ಮಗುವಿನ ತನಕ ಇಲ್ಲಿ ಎಲ್ಲರಿಗೂ ಹಸಿವಿನ ದಾರಿದ್ರ್ಯತನ.&lt;br /&gt;&lt;/div&gt;&lt;br /&gt;&lt;div align="justify"&gt;ಲಿಬರ್ಟಿ ಬಸ್‌ಸ್ಟಾಪಿನಿಂದ share ರಿಕ್ಷಾ ಸಿಕ್ಕಿದರೆ ಕೆಲವೊಮ್ಮೆ ಮೌಂಟ್ ರೋಡ್ ಸಮೀಪ ದೇವಿ ಥಿಯೇಟರ್ ಬಳಿ ಇಳಿದುಕೊಂಡು ಶಾಟ್ ಕಟ್ ಬಳಸಿ ರೂಮು ಸೇರಬಹುದು. ಇಲ್ಲಿನ ಬದುಕು ಮತ್ತೊಂದು ಕರಾಳ ಅಧ್ಯಾಯ. ಇದು ಮಾರುಕಟ್ಟೆ ಏರಿಯಾ ಆಗಿರುವುದರಿಂದ ಜಗತ್ತಿನ ಎಲ್ಲ ದುರ್ಗಂಧಗಳನ್ನು ಇಲ್ಲಿ ಅಗ್ರಾಣಿಸಬಹುದು. ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಹೆಣ ಜೋಡಿಸಿ ಇಟ್ಟಂತೆ ರಸ್ತೆಯ ಪಕ್ಕದಲ್ಲಿ ಜನರು ಮಲಗಿರುತ್ತಾರೆ. ತಲೆಯ ಮೇಲೆ ಸೂರಿಲ್ಲದವನಿಗೆ ಮಲಗಿದ ಜಾಗವೇ ಹಾಸಿಗೆ, ಆಕಾಶವೇ ಹೊದಿಕೆ ಎನ್ನುವ ಪರಿಸ್ಥಿತಿ. ಅವನ ಹಾಸಿಗೆ ಪಕ್ಕವೇ ಎದ್ದು ನಿಂತು ಕುಡುಕನೊಬ್ಬ ರಾತ್ರಿಯ ಮಂಪರುಗಣ್ಣಿನಲ್ಲಿ ಮೂರ್ತ ವಿಸರ್ಜನೆ  ಮಾಡುತ್ತಾನೆ. ಅನತಿ ದೂರದಲ್ಲಿ ಸಂಸಾರವೊಂದು ಊಟ ಮಾಡುತ್ತಿರುತ್ತದೆ.&lt;br /&gt;&lt;/div&gt;&lt;br /&gt;&lt;div align="justify"&gt;ಇವೆಲ್ಲಾ ನಡೆಯುತ್ತಿರುವುದು ರಾತ್ರಿ 12 ಗಂಟೆ ಸುಮಾರಿಗೆ. ಸಮಾಜದ ಒಂದು ವರ್ಗದ ಜನರು ಆದಾಗಲೇ ಮಲಗಿ ಎರಡು ಸುತ್ತಿನ ನಿದ್ರೆ ಮುಗಿದಿರುತ್ತದೆ. ಆ ವೇಳೆಗೆ ಇವರ ಬದುಕು ಪ್ರಾರಂಭವಾಗಿರುತ್ತದೆ. ಕೆಲವರು ಹಾಡುತ್ತಿರುತ್ತಾರೆ, ಇನ್ನು ಕೆಲವರು ಕುಡಿಯುತ್ತಿರುತ್ತಾರೆ. ಇಲ್ಲಿನ ಬದುಕು ತುಂಬಾ ವಿಚಿತ್ರ ಎನಿಸುತ್ತದೆ. ಅಸಹ್ಯ ಹುಟ್ಟಿಸುತ್ತದೆ. ನಡೆಯುತ್ತಾ ನಡೆಯುತ್ತಾ ಮುಖ್ಯ ರಸ್ತೆಗೆ ಬರುವ ವೇಳೆಗೆ ನಿಟ್ಟುಸಿರು ಬಿಡುತ್ತೇನೆ.&lt;br /&gt;&lt;/div&gt;&lt;br /&gt;&lt;div align="justify"&gt;ಮೊದಮೊದಲು ಬೀದಿ ದೀಪಗಳಿಲ್ಲದ ಕತ್ತಲ ದಾರಿಯಲ್ಲಿ ನಡೆದು ಬರುವಾಗ ಆತಂಕ ಎನಿಸುತ್ತಿತ್ತು. ಈಗ ಅದೆಲ್ಲಾ ಮರೆಯಾಗಿದೆ. ಹಸಿವು, ಬಡತನ, ದಾರಿದ್ರ್ಯ ಎಲ್ಲದರ ಮುಖವೂ ಹತ್ತಿರದಿಂದ ಅನಾವರಣಗೊಂಡಿದೆ. ಚೈನೈನ ಬದುಕಿಗೆ ನಾನು ಸ್ಥಿತಪ್ರಗ್ನನಾಗಿ ಹೊಂದಿಕೊಂಡಿದ್ದೇನೆ. ರಾತ್ರಿ 12:30ಕ್ಕೆ ರೂಮು ಸೇರಿ, ಕದವಿಕ್ಕಿಕೊಂಡು ಗೆಳೆಯರಿಗೆ ಮಿಸ್ ಕಾಲ್ ಕೊಡುತ್ತೇನೆ. ಅವರದೂ ನನ್ನ ಹಾಗೆ ನೈಟ್ ಶಿಪ್ಟ್. ಒಬ್ಬನು ಬೆಂಗಳೂರಿನ Tv9 ಮತ್ತೊಬ್ಬನು ಹೈದ್ರಾಬಾದ್‌ನ Indian Express ನಲ್ಲಿ ಕೆಲಸ ಮಾಡುತ್ತಾನೆ. ಇಬ್ಬರಿಂದಲೂ ಮಿಸ್ ಕಾಲ್ ಬಂದ ನಂತರ ನಿರಾಳವಾಗಿ ನಿದ್ರೆ ಮಾಡಲು ಅಣಿಯಾಗುತ್ತೇನೆ.&lt;br /&gt;&lt;/div&gt;&lt;br /&gt;&lt;div align="justify"&gt;ಬೆಳಿಗ್ಗೆ ಎದ್ದರೆ ರಾತ್ರಿ ನಡೆದುದೆಲ್ಲಾ ಒಂದು ದೃಶ್ಯಕಾವ್ಯದಂತೆ ಎದುರಿಗೆ ಬಂದು ನಿಲ್ಲತ್ತದೆ. ಪ್ಲೈಓವರ್‌ನ ನಿರ್ಭಿಡ ರಸ್ತೆಯಲ್ಲಿ ತನ್ನ ಪ್ರೀಯತಮೆಯನ್ನು ಬೆನ್ನಿಗಂಟಿಸಿಕೊಂಡು ಸುಯ್ಯನೆ ಗಾಳಿಯಲ್ಲಿ ತೇಲಿ ಹೋದ ಪ್ಯಾಶನ್ ಸವಾರನ ಮೇಲೆ ಸಿಟ್ಟು ಬರುತ್ತದೆ. ಮನಸ್ಸು ಮತ್ತೆ ಹಗಲಿನ ಬದುಕಿಗೆ ತೆರೆದುಕೊಳ್ಳುತ್ತದೆ. ನೀವು ಯಾವುದಾದರೂ ದೊಡ್ಡ ನಗರದಲ್ಲಿ ಕೆಲಸದಲ್ಲಿದ್ದರೆ ಒಮ್ಮೆ ಬಿಡುವು ಮಾಡಿಕೊಂಡು ರಾತ್ರಿ ಬದುಕನ್ನು ನೋಡಿ. ಹಗಲು ಮುಚ್ಚಿಟ್ಟಿದ್ದನ್ನು ರಾತ್ರಿ ತೆರದಿಡುತ್ತದೆ. ಎಲ್ಲಾ ನೋಟಗಳಾಚೆಗೂ ಒಂದು ಬದುಕಿದೆ ಅನ್ನುತ್ತಾರಲ್ಲಾ ಹಾಗೆ. ಆ ಅನುಭವದ ಸಾಕ್ಷಾತ್ಕಾರಕ್ಕೆ ಅರಿವು ದೇವರು. &lt;/div&gt;&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-112793300735007325?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/112793300735007325/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=112793300735007325' title='3 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/112793300735007325'/><link rel='self' type='application/atom+xml' href='http://www.blogger.com/feeds/3841477221276814775/posts/default/112793300735007325'/><link rel='alternate' type='text/html' href='http://jomon-malehani.blogspot.com/2007/10/blog-post_09.html' title='ನೈಟ್ ಶಿಪ್ಟ್ ಮತ್ತು ಚೆನೈ ಬದುಕು...'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><media:thumbnail xmlns:media='http://search.yahoo.com/mrss/' url='http://bp2.blogger.com/_A5Tc7GvymLQ/RwtFafakC1I/AAAAAAAAAD4/KkmBKbYkgTU/s72-c/jk.jpg' height='72' width='72'/><thr:total>3</thr:total></entry><entry><id>tag:blogger.com,1999:blog-3841477221276814775.post-3444333273648431486</id><published>2007-10-08T02:03:00.000-07:00</published><updated>2007-12-10T23:05:07.580-08:00</updated><title type='text'>ಅಪ್ಪನಿಗೆ ಸಿಗಬೇಕಿತ್ತು ಗೋಲ್ಡ್ ಮೆಡಲ್...</title><content type='html'>&lt;a href="http://bp3.blogger.com/_A5Tc7GvymLQ/Rwny5PakC0I/AAAAAAAAADw/AfsW5xYtSqY/s1600-h/jk[1][1].jpg"&gt;&lt;img id="BLOGGER_PHOTO_ID_5118889516687690562" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp3.blogger.com/_A5Tc7GvymLQ/Rwny5PakC0I/AAAAAAAAADw/AfsW5xYtSqY/s320/jk%255B1%255D%5B1%5D.jpg" border="0" /&gt;&lt;/a&gt;&lt;br /&gt;&lt;div align="justify"&gt;"ಅಪ್ಪ ನನಗೆ ರಾಂಕ್ ಬಂದಿದೆ" ಎಂದು ನಾನು ಕೂಗಿ ಹೇಳುವಾಗ, ಅಪ್ಪ ಏಣಿಯ ಮೇಲೆ ನಿಂತು ಅಡಿಕೆ ಮರಕ್ಕೆ ಔಷಧಿ ಹೊಡೆಯುತ್ತಿದ್ದರು. 50-60 ಅಡಿ ಎತ್ತರದ ಅಡಿಕೆ ಮರದ ತುದಿಯಿಂದ ಸಂಭ್ರಮದಿಂದಲೇ ಇಳಿದು ಬಂದ ಅಪ್ಪ, ಜಗತ್ತನ್ನು ಗೆದ್ದಷ್ಟು ಸಂತಸದಿಂದ ನನ್ನನ್ನು ನೋಡಿದ್ದರು. ಮುಖದಲ್ಲೆಲ್ಲಾ ಸುರಿದ ಮೈಲುತುತ್ತು, ಕಣ್ಣಿಗೆ ಔಷಧಿ ಬೀಳದಿರಲೆಂದು ತಲೆಗೆ ಸಿಕ್ಕಿಸಿಕೊಂಡಿದ್ದ ಪ್ಲಾಸ್ಟಿಕ್ ಟೋಪಿ, ಸೊಂಟಕ್ಕೆ ಕಟ್ಟಿಕೊಂಡಿದ್ದ ಪಂಜೆ ಬಿಟ್ಟರೆ ಅಪ್ಪನ ದೇಹದಲ್ಲಿ ಬೇರೆ ಬಟ್ಟೆಯೇನೂ ಇರಲಿಲ್ಲ. ಸಂತಸ ತಡೆದುಕೊಳ್ಳಲಾಗದೆ, ನನ್ನನ್ನು ಅಪ್ಪಿಕೊಳ್ಳಲು ಬಾಗಿದವನು, ನನ್ನ ಬಟ್ಟೆಗೆಲ್ಲಾ ಮೈಲುತುತ್ತು ದ್ರಾವಣ ಅಂಟಿಕೊಳ್ಳುತ್ತದೆ ಎಂದು, ಬಿಗಿಯಾಗಿ ಕೈ ಅದುಮಿ, ಕಣ್ಣಲ್ಲೇ ಸಂಭ್ರಮ ತಿಳಿಸಿದ್ದ. ಆಗ ನಾನು ಏಳನೇ ತರಗತಿಯಲ್ಲಿದ್ದೆ. ಪ್ರಥಮ ಪಬ್ಲಿಕ್ ಪರೀಕ್ಷೆಯಲ್ಲಿ ಶಿವಮೊಗ್ಗ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣನಾಗಿದ್ದೆ.&lt;br /&gt;&lt;/div&gt;&lt;br /&gt;&lt;div align="justify"&gt;ಅಪ್ಪನೇ ಹಾಗೆ. ಅದ್ಭುತ ಜೀವನ ಪ್ರೀತಿಯ ಮನುಷ್ಯ. ಅಪ್ಪನ ಅಪ್ಪ ಅಂದರೆ ನನ್ನ ಅಜ್ಜ ಅಪ್ಪನಿಗೆ ಎರಡು ವರ್ಷವಿರುವಾಗ ತೀರಿಕೊಂಡರಂತೆ. ಅಜ್ಜನ ಮುಖವನ್ನು ನೋಡಿದ ಅಸ್ಪಷ್ಟ ನೆನಪು ಮಾತ್ರ ನನ್ನ ಅಪ್ಪನ ಕಲ್ಪನೆಯಲ್ಲಿರಬಹುದು. ಆಗಿನ ಕಾಲದಲ್ಲಿ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಬೆಳಿಗ್ಗೆ ಎದ್ದರೆ ಕಾಯಿಯ ಚೂರೊ, ಹಸಿ ಗೆಣಿಸಿನ ತುಣುಕೊ ತಿಂದು ಹಸಿವು ಇಂಗಿಸಿಕೊಳ್ಳುತ್ತಿದ್ದ ದಿನಗಳವು. ಒಂದು ದಿನ ಹಲಸಿನ ಹಣ್ಣು ಕಿತ್ತುಕೊಂಡು ಬರಲು ಹೋದ ಅಜ್ಜ, ಲಾರಿಯ ಚಕ್ರದೊಳಗೆ ಸಿಲುಕಿ ಧುರ್ಮರಣ ಅಪ್ಪಿದಾಗ ಇಡಿ ಕುಟಂಬ ಬೀದಿಗೆ ಬೀಳುವ ಪರಿಸ್ಥಿತಿ. ಅಜ್ಜ ಸತ್ತ ನಂತರ ಬಂಧುಗಳ ಅವಮಾನದ ಕುಶಲೋಪರಿಯ ನಡುವೆ ಏಳು ಮಕ್ಕಳನ್ನು ಸಾಕಲು ಅಜ್ಜಿ ಪಟ್ಟ ಪಾಡು ಅಪ್ಪ ವಿವರಿಸುವಾಗ ಕಣ್ಣಲ್ಲಿ ನೀರು ಜಿನುಗುತ್ತದೆ.&lt;br /&gt;&lt;/div&gt;&lt;div align="justify"&gt;"ಅಂದು ಶೀಮಂತ ಮಕ್ಕಳು ಮಾತ್ರ ಬಟ್ಟೆ ಹಾಕುತ್ತಿದ್ದರು. ನಾವೆಲ್ಲ ಸೊಂಟದ ಸುತ್ತ ಮಾತ್ರ ಚಿಕ್ಕ ಟವಲು ಸುತ್ತಿಕೊಳ್ಳುತ್ತಿದ್ದೆವು. ಆಗಿನ ಕಾಲವೇ ಆಗಿತ್ತು. ಹೊಟ್ಟೆಗೆ ಇಲ್ಲದಿರುವಾಗ ಬಟ್ಟೆಯ ಬಗ್ಗೆ ಯಾರೂ ವಿಚಾರ ಮಾಡುತ್ತಿರಲಿಲ್ಲ." ಎಂದು ಅಪ್ಪನ ತನ್ನ ಬಾಲ್ಯದ ಬಡತನದ ಕಥೆಗಳನ್ನು ಒಂದೊಂದಾಗಿ ಬಿಡಿಸಿ ಹೇಳುತ್ತಿದ್ದರೆ ನನ್ನ ಕಣ್ಣಿನಲ್ಲಿ ನೀರು ಬರುತ್ತಿತ್ತು. ಅಂತಹ ಸ್ಥಿತಿಯಲ್ಲಿಯೇ ಅವರಿವರ ಮನೆಯ ಕೆಲಸ ಮಾಡಿ 10 ನೇ ತರಗತಿಯವರೆಗೆ ಓದಿದ ನನ್ನ ಅಪ್ಪ, ಅಂತಿಮ ಪರೀಕ್ಷೆಯ ಸಂದರ್ಭದಲ್ಲಿ ಟೈಪಾಯಿಡ್ ಬಂದು ಹಾಸಿಗೆ ಹಿಡಿದಾಗ ಔಷಧಿ ಕೊಡಿಸಲು ದುಡ್ಡಿರಲಿಲ್ಲವಂತೆ. ಇಲ್ಲದಿದ್ದರೇ ತಾನೂ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗಿ ಇಂದು ಹತ್ತಂಕಿ ಸಂಬಳ ಪಡೆಯುವ ಆಫೀಸರ್ ಆಗಿರುತ್ತಿದ್ದೆ ಎನ್ನುತ್ತಾರೆ. ಆ ಮಾತು ಸತ್ಯ ಕೂಡ ಹೌದು.&lt;br /&gt;&lt;/div&gt;&lt;br /&gt;&lt;div align="justify"&gt;ಆಗಿನ ಕಾಲವೇ ಹಾಗಿತ್ತು. ಎಲ್ಲರ ಮನೆಯಲ್ಲಿಯೂ ತುತ್ತು ಅನ್ನಕ್ಕೆ ಹಾಹಾಕಾರ. ನಾನು ಪೆನ್ನು ನೋಡಿದ್ದು 10ನೇ ತರಗತಿಗೆ ಬಂದ ಮೇಲೆ. ಅದೂ ನನ್ನ ಸಹಪಾಠಿಯದನ್ನು ಕದ್ದಿದ್ದು ಎನ್ನುವ ಅಪ್ಪ ತನ್ನ ಶಾಲೆಯ ದಿನಗಳಲ್ಲಿ ಮಧ್ಯಾನದ ಬಿಡುವಿನಲ್ಲಿ ಹೊಟ್ಟೆಗೆ ಊಟವಿಲ್ಲದೆ, ನದಿಯ ದಡದಲ್ಲಿ ಕುಳಿತು, ನಂತರ ಸುಮ್ಮನೆ ಎದ್ದು ಬರುತ್ತಿದ್ದರಂತೆ. ಎಲ್ಲರೂ ಮಧ್ಯಾನ್ಹದ ಬುತ್ತಿ ತಂದಿರುವಾಗ ಇವರು ಯಾರಿಗೂ ಗೊತ್ತಾಗದೆ ಬಡತನವನ್ನು ತನ್ನ ಹೊಟ್ಟೆಯೊಳಗೇ ಹುದುಗಿಸಿಟ್ಟು ಊಟ ಆಯಿತು ಎಂದು ಮುಗಳ್ನಗುತ್ತಿದ್ದರಂತೆ. ಮಳೆಗಾಲದಲ್ಲಿ ಶಾಲೆಗೆ ಹೋಗಲು ಛತ್ರಿ ಇರಲಿಲ್ಲ. ಬೇರೆಯವರ ತೋಟದ ಬಾಳೆಯ ಎಲೆಯೋ/ಕೆಸುವಿನ ಎಲೆಯನ್ನೂ ಸೂಡಿಕೊಂಡು ಹೋಗುತ್ತಿದ್ದೆವು ಎನ್ನುವ ಅಪ್ಪ, ನನ್ನ ಚಿಕ್ಕ ತಂಗಿ ತನಗೆ ಬಣ್ಣದ ಛತ್ರಿಯೇ ಬೇಕು ಇಲ್ಲದಿದ್ದರೆ ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿದಾಗ, ತನ್ನ ಕಥೆ ಹೇಳಿದ್ದ. ಸುರಿಯುವ ಮಳೆಯಲ್ಲಿಯೂ ಆತನ ಕಣ್ಣಿನಿಂದ ಕಣ್ಣೀರು ಜಿನುಗಿದ್ದು ನಮಗೆ ಯಾರಿಗೂ ಕಾಣಿಸಿರಲಿಲ್ಲ.&lt;br /&gt;&lt;/div&gt;&lt;br /&gt;&lt;div align="justify"&gt;ಅಪ್ಪನಿಗೆ ಅರಿವು ಮೂಡಿದ ವಯಸ್ಸಿನಿಂದ ಅಪ್ಪ ದುಡಿಯುತ್ತಲೇ ಇದ್ದಾನೆ. ದೈತ್ಯ ದುಡಿಮೆಗಾರ ಆತ. ಒಂದು ಕ್ಷಣವೂ ಅಪ್ಪ ಸುಮ್ಮನೆ ಕುಳಿತದ್ದನ್ನು ನಾನು ಇದುವರೆಗೆ ನೋಡಿಲ್ಲ. ಅಜ್ಜ ಸತ್ತ ಮೇಲೆ ಕೇರಳದಿಂದ ವಲಸೆ ಬಂದ ನಮ್ಮ ಕುಟುಂಬ ನೆಲೆ ನಿಂತದ್ದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಒಂದು ಕುಗ್ರಾಮದಲ್ಲಿ. ಸುತ್ತೆಲ್ಲಾ ದೈತ್ಯ ಕಾನನ. ಹತ್ತು ಹದಿನೈದು ಮೈಲಿಗೊಂದು ಮನೆ. ಮಳೆಗಾಲ ಪ್ರಾರಂಭವಾದರೆ, ಬರೋಬ್ಬರಿ 4 ತಿಂಗಳು ಜಲಾವೃತ. ಅಂತಹ ಕಾಡಿನ ಮಧ್ಯದಲ್ಲಿ ಎಲ್ಲಿಂದಲೋ ಕಾಡಿ ಬೇಡಿ ತಂದ ನಾಲ್ಕು ಬಾಳೆ ಹಾಗೂ ಅಡಿಕೆ ಸಸಿ ನೆಟ್ಟು ಅಪ್ಪ ಅಮ್ಮನೊಂದಿಗೆ ಸಂಸಾರ ಪ್ರಾರಂಭಿಸಿದ್ದ. ಪಕ್ಕದ ನಾಲ್ಕು ಮಾರು ದೂರದಲ್ಲಿ ದೊಡ್ಡಪ್ಪನ ಮನೆ. ಅಲ್ಲಿಯೂ ಇದೇ ಪರಿಸ್ಥಿತಿ. ನಾನು ಹುಟ್ಟುವ ವೇಳೆಗೆ ಮನೆಯಂಗಳ ನಾಲ್ಕು ಅಡಿಗೆ ಸಸಿಗಳು ಮೊದಲ ಸಿಂಗಾರ ಬಿಟ್ಟಿದ್ದವಂತೆ.&lt;br /&gt;&lt;/div&gt;&lt;br /&gt;&lt;div align="justify"&gt;ನಾವೆಲ್ಲಾ ಶಾಲೆಗೆ ಹೋಗಬೇಕಾದರೆ 4 ಕಿಮಿ ಕಾಡಿನ ದಾರಿಯಲ್ಲಿ ನಡೆದು ಮುಖ್ಯ ರಸ್ತೆಗೆ ಬಂದು ನಂತರ ಕೆಂಪು ಬಸ್ಸಿನಲ್ಲಿ 7 ಕಿಮಿ ಪ್ರಯಾಣಿಸಬೇಕಿತ್ತು. ಮಳೆಗಾಲದಲ್ಲಿ ಅಪ್ಪ ನನ್ನನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡು ಮರದ ಶಂಖ ದಾಟಿಸಿ, ರಸ್ತೆಗೆ ತಲುಪಿಸುತ್ತಿದ್ದರು. ಸಂಜೆಯೂ ಶಾಲೆಯಿಂದ ಮರಳುವಾಗ ಇದು ಪುನರಾವರ್ತನೆ ಆಗುತ್ತಿತ್ತು. ಗಾಳಿ ಮಳೆ ಪ್ರಾರಂಭವಾದರೆ, ಮನೆಯಲ್ಲಿ ಅಮ್ಮ ದೇವರ ಪೋಟೊದ ಮುಂದೆ ಮುಂಬತ್ತಿ ಬೆಳಗಿ, ಮಕ್ಕಳು ಸುರಕ್ಷಿತವಾಗಿ ಮರಳಿ ಬರಲಿ ಎಂದು ಪ್ರಾರ್ಥಿಸುತ್ತಿದ್ದರು. ಅಂತಹ ಭೀಕರ ಮಳೆ. ನಾವೆಲ್ಲ ನಮ್ಮ ಪ್ರಾರ್ಥಮಿಕ ಶಿಕ್ಷಣವನ್ನು ಮುಗಿಸಿಕೊಂಡು ಪ್ರೌಢಶಾಲೆ ಹಾಗೂ ಕಾಲೇಜು ಶಿಕ್ಷಣಕ್ಕಾಗಿ ನಂತರ ಸಾಗರಕ್ಕೆ ಬಂದು ಹಾಸ್ಟೆಲ್ ಸೇರಿದೆವು.&lt;br /&gt;&lt;/div&gt;&lt;br /&gt;&lt;div align="justify"&gt;ನಮ್ಮಅಪ್ಪ ಓದಿದ್ದು 10. ಅಮ್ಮನದು 8 ನೇ ಇಯತ್ತೆ. ಆದರೆ ಅವರಿಬ್ಬರಿಗೆ ನಮ್ಮ ಮಕ್ಕಳು ಎಲ್ಲಿಯವರೆಗೆ ಓದುತ್ತಾರೆಯೇ ಅಲ್ಲಿಯವರೆಗೆ ಓದಲಿ ಎನ್ನುವ ಅದಮ್ಯ ಬಯಕೆ. ಹೊಟ್ಟೆಗೆ ಉಪವಾಸವಿದ್ದರೂ ನಮ್ಮ ಶಿಕ್ಷಣಕ್ಕೇನೂ ಕಡಿಮೆ ಮಾಡಲಿಲ್ಲ. ಪ್ರಾಮಾಣಿಕತೆ ಮತ್ತು ದುಡಿಮೆಯನ್ನೇ ನಂಬಿಕೊಂಡಿದ್ದ ಅವರು ನಮ್ಮ ಪಾಲಿಗೆ ಕೇವಲ ತಂದೆ-ತಾಯಿ ಅಷ್ಟೇ ಆಗಿರಲಿಲ್ಲ. ದೊಡ್ಡದೊಂದು ಜೀವನಾನುಭವಗಳ ವಿಶ್ವವಿದ್ಯಾಲಯ ಆಗಿದ್ದರು. ಹಾಗಾಗಿ ನಾವು ಮೂವರು ಮಕ್ಕಳೂ ಓದಿನಲ್ಲಿ ಎಂದೂ ಹಿಂದೆ ಬೀಳಲಿಲ್ಲ. ನಾನು ಸಾಗರದಲ್ಲಿ ಪಿಯುಸಿ ಮುಗಿಸಿ, ಹುಬ್ಬಳಿಗೆ ಪದವಿಗೆ ಸೇರುವಾಗ ಅಪ್ಪ ಹೇಳಿದ್ದರು. " ಬದುಕು ನೀನು ರೂಪಿಸಿಕೊಂಡಂತೆ. ನಿನ್ನ ಪ್ರಯತ್ನದಲ್ಲಿ, ಪ್ರಾಮಾಣಿಕತೆಯಲ್ಲಿ ಅದರ ಯಶಸ್ಸು ಅಡಗಿದೆಯೇ ಹೊರತು ನಿನ್ನ ಹಣೆಬರಹದಲ್ಲಿ ಅಲ್ಲ." ಅಪ್ಪನ ಮಾತು ಇಂದಿಗೂ ನನಗೆ ಸತ್ಯವೆನಿಸುತ್ತದೆ.&lt;br /&gt;&lt;/div&gt;&lt;br /&gt;&lt;div align="justify"&gt;ಮೊನ್ನೆ ಮೊನ್ನೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ಹೊರಬಿದ್ದಾಗ ನಮ್ಮೂರಿಗೆ ವಿದ್ಯುತ್ ಬಂತು. ಮನೆಯಲ್ಲಿ ಶುಭ್ರವಾಗಿ ಉರಿಯುವ ಟ್ಯೂಬ್ ಲೈಟ್‌ಗಳನ್ನು ನೋಡುವಾಗ ಹಿಂದೆ ಪುಸ್ತಕದ ಮುಂದಿಟ್ಟುಕೊಂಡು ಓದಿದ ಚಿಮ್ಮಣಿ ಬುಡ್ಡಿಯ ನೆನಪು ಬರುತ್ತದೆ. ಇದೀಗ ನಮ್ಮೂರ ದಟ್ಟ ಕಾನನದ ನಡುವೆ ನಾಲೈದು ಹಂಚಿನ ಮನೆಗಳು ಎದ್ದಿವೆ. ಉರಿಗೆ ಟಿವಿ, ಪೋನ್ ಬಂದಿದೆ. ಪರವಾಗಿಲ್ಲ ಎನ್ನುವಷ್ಟರ ಮಟ್ಟಿಗೆ ಬದಲಾವಣೆಯ ಬೆಳಕು ಕಂಡಿದೆ. ಬಡತನ ಕರಗಿ ಸ್ವಾವಲಂಬನೆಯ ಹೊಂಗಿರಣ ಮೂಡಿದೆ.&lt;br /&gt;&lt;/div&gt;&lt;br /&gt;&lt;div align="justify"&gt;ಸ್ನಾತಕೋತ್ತರ ಪದವಿ ಮುಗಿದ ಬೆನ್ನಲ್ಲೆ ನನಗೆ ಚೈನೈನಲ್ಲಿ ಕೆಲಸ ಸಿಕ್ಕಿತು. ಮಲೆನಾಡಿನ ಮೂಲೆಯೊಂದರಲ್ಲಿ ಹುಟ್ಟಿ ಬೆಳದ ನನ್ನನ್ನು ವಿಧಿ ಇನ್ನು ಕೆಲಸ ಮಾಡು ಎಂದು ಚೆನೈಗೆ ಎತ್ತಿ ಎಸೆದಿದೆ. ಚೈನೈನ ವೆಬ್ ದುನಿಯಾ ಕಂಪನಿಯಲ್ಲಿ ಅಂತರ್ಜಾಲ ಪತ್ರಕರ್ತನಾಗಿ ವೃತ್ತಿ. ಯಾಯೂ ಕನ್ನಡ ಜಾಲತಾಣದಲ್ಲಿ ಉಪಸಂಪಾದಕನಾಗಿ ಕೆಲಸ ಮಾಡುತ್ತಿದ್ದೇನೆ. ಇವೆಲ್ಲಾ ನೆನಪುಗಳೊಂದಿಗೆ ಮೊನ್ನೆ ಕಿಲಿಮಣೆ ಕುಟ್ಟುತ್ತಿರುವಾಗ ಧಾರವಾಡದಿಂದ ಪೋನ್ ಬಂತು. ನಿಮ್ಮ ಅಂತಿಮ ಪರೀಕ್ಷೆಯ ಫಲಿತಾಂಶಗಳು ಪ್ರಕಟಗೊಂಡಿವೆ. ನಿನಗೆ ಪ್ರಥಮ ರಾಂಕ್ ಎಂದು ವಿಭಾಗ ಮುಖ್ಯಸ್ಥರು ಪೋನ್ ಮಾಡಿದ್ದರು. ಮತ್ತೊಮ್ಮೆ ಸಂಭ್ರಮ.&lt;br /&gt;&lt;/div&gt;&lt;br /&gt;&lt;div align="justify"&gt;ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 7 ಸ್ವರ್ಣ ಪದಕಗಳು ಲಭಿಸುತ್ತದೆ. ಪ್ರಸಕ್ತ ಸಾಲಿನಲ್ಲಿ ಆ ಭಾಗ್ಯ ನನಗೆ. ಊರಿನಲ್ಲಿದ್ದ ಅಪ್ಪನಿಗೆ ಫೋನಾಯಿಸಿದೆ. ಸಂಭ್ರಮದಿಂದ ಮಾತನಾಡಲು ಅಪ್ಪನ ಗಂಟಲುಬ್ಬಿ ಬಂತು. ಎರಡು ಕ್ಷಣ ಏನೂ ಮಾತನಾಡಲಿಲ್ಲ. ನಂತರ ಹೇಳಿದರು. "ಕಷ್ಟ ಪಟ್ಟಿದ್ದಕ್ಕೆ ಪ್ರಾಮಾಣಿಕತೆಗೆ ಸಿಕ್ಕಿದ ಪ್ರತಿಫಲ ಅದು. ತುಂಬಾ ಜತನದಿಂದ ಅದನ್ನು ಕಾಪಾಡಿಕೊ" ನನಗೆ ತಿಳಿಯದಂತೆ ನನ್ನ ಕಣ್ಣಂಚಿನಿಂದ ಕಣ್ಣೀರು ಜಿನುಗಿತ್ತು. ಮನಸ್ಸು ಅಪ್ಪನ ಬಗ್ಗೆಯೇ ವಿಚಾರ ಮಾಡುತ್ತಿದೆ. ಎಂತಹ ಅದ್ಭುತ ಮನುಷ್ಯ ಆತ. ಅಪ್ಪನಿಗೇನಾದರೂ ನನ್ನಂತೆ ಓದಲು ಅವಕಾಶ ಸಿಕ್ಕಿದ್ದರೆ ಅದರ ಕಥೆಯೇ ಬೇರೆಯಾಗಿರುತ್ತಿತ್ತು.&lt;br /&gt;&lt;/div&gt;&lt;br /&gt;&lt;div align="justify"&gt;ದುಡಿದ ಬೆಂಡಾಗಿರುವ ಅಪ್ಪನ ರಟ್ಟೆಯೊಳಗೆ ಅದ್ಭುತ ಜೀವನ ಶಕ್ತಿಯಿದೆ. ಮೊಗೆಮೊಗೆದು ಕೊಟ್ಟರೂ ಮುಗಿಯದ ಜೀವನ ಪ್ರೀತಿಯಿದೆ. ತುಂಬಾ ಹತ್ತಿರದಿಂದ ನೋಡಿದ ನನಗದು ಅರ್ಥವಾಗುತ್ತಿದೆ. ನನಗೆ ಸಿಕ್ಕಿರುವಂತ Gold Medal ನನ್ನ ಅಪ್ಪನಿಗೆ ಸಿಗಬೇಕಿತ್ತು. ಯಾವ ರೀತಿಯಲ್ಲಿ ನೋಡಿದರೂ, ಚಿನ್ನದ ಪದಕಗಳನ್ನು ಪಡೆಯಲು ಆತ ನನಗಿಂತ ನೂರು ಪಟ್ಟು ಅರ್ಹ ವ್ಯಕ್ತಿ. ತಮ್ಮ ಕನಸುಗಳೆನ್ನೆಲ್ಲಾ ತಮ್ಮ ಮಕ್ಕಳ ಯಶಸ್ಸಿನಲ್ಲಿ ನೋಡುವ ನನ್ನ ನನ್ನ ತಂದೆಯಾಗಿಗಳಿಗೆ ನಾನು ಇದಕ್ಕಿಂತ ಒಂದು ಉತ್ತಮ ಬಹುಮಾನ ಕೊಡಲು ಸಾಧ್ಯವಾಗದಿರಬಹುದೇನೋ... &lt;/div&gt;&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-3444333273648431486?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/3444333273648431486/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=3444333273648431486' title='7 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/3444333273648431486'/><link rel='self' type='application/atom+xml' href='http://www.blogger.com/feeds/3841477221276814775/posts/default/3444333273648431486'/><link rel='alternate' type='text/html' href='http://jomon-malehani.blogspot.com/2007/10/blog-post_08.html' title='ಅಪ್ಪನಿಗೆ ಸಿಗಬೇಕಿತ್ತು ಗೋಲ್ಡ್ ಮೆಡಲ್...'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><media:thumbnail xmlns:media='http://search.yahoo.com/mrss/' url='http://bp3.blogger.com/_A5Tc7GvymLQ/Rwny5PakC0I/AAAAAAAAADw/AfsW5xYtSqY/s72-c/jk%255B1%255D%5B1%5D.jpg' height='72' width='72'/><thr:total>7</thr:total></entry><entry><id>tag:blogger.com,1999:blog-3841477221276814775.post-7160608213787408051</id><published>2007-10-03T09:26:00.000-07:00</published><updated>2007-10-03T09:29:28.018-07:00</updated><title type='text'>ಪುಟ್ಟಿ ಒಂದು ಪುಟ್ಟ ಪತ್ರ ಬರಿ...</title><content type='html'>&lt;a href="http://bp3.blogger.com/_A5Tc7GvymLQ/RwPDSvakCxI/AAAAAAAAADQ/C5XpL3L8yfE/s1600-h/australia-post.preview%5B1%5D[1].jpg"&gt;&lt;img id="BLOGGER_PHOTO_ID_5117148328355957522" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp3.blogger.com/_A5Tc7GvymLQ/RwPDSvakCxI/AAAAAAAAADQ/C5XpL3L8yfE/s320/australia-post.preview%255B1%255D%5B1%5D.jpg" border="0" /&gt;&lt;/a&gt;&lt;br /&gt;&lt;div&gt;ನಾಲ್ಕಾರು ವರ್ಷಗಳ ಹಿಂದಿನ ಮಾತು. ಆಗ ಇಂದಿನಂತೆ ಮೊಬೈಲ್ ರಿಂಗಣಿಸುತ್ತಿರಲಿಲ್ಲ. ಸಂದೇಶ ಕಳುಹಿಸಲು ಮಿಂಚಂಚೆ ಜಾರಿಯಲ್ಲಿರಲಿಲ್ಲ. ಓಡಿ ಹೋಗಿ ಪೋನ್ ಮಾಡೋಣವೆಂದರೆ, ಈಗಿನಂತೆ ಬೀದಿ ಬೀದಿಯಲ್ಲಿ ಕಾಯಿನ್ ಬಾಕ್ಸ್ ಇರಲೇ ಇಲ್ಲ. ಭಾವನೆಗಳ ಅಭಿವ್ಯಕ್ತಿಗೆ ಪತ್ರವೊಂದೇ ಮಾರ್ಗವಾಗಿತ್ತು. ಅಂಚೆಯಣ್ಣ ಸೈಕಲ್ ಏರಿ ಬರುತ್ತಿದ್ದರೆ, ಆತನ ಹಿಂದೆ ಮಕ್ಕಳ ಹಿಂಡೇ ಓಡಿಬರುತ್ತಿತ್ತು. ಯಾರ ಮನೆಗೆ ಪತ್ರ ಬಂದರೂ, ಓಣಿಗೆಲ್ಲಾ ಸಂಭ್ರಮ ಸಡಗರ. ಪುಟ್ಟ ಪತ್ರ. ಅದರ ಮೇಲೆ ನಾಲ್ಕಾಣೆ ಸ್ಟಾಂಪಿನ ಮುದ್ರೆ. ಕಳಗೆ ಶ್ರೀಯುತರಿಗೆ ಎನ್ನುವ ವಿಳಾಸ. ಒಡೆದು ಓದಿದರೆ ಅಕ್ಷರಗಳಲ್ಲಿ ಅನಾವರಣಗೊಂಡಿರುವ ಭಾವನೆಗಳ ಅಂತರಂಗ. ಅಂಗೈಯಗಲದ ಪತ್ರದ ತುಂಬೆಲ್ಲಾ ಸವಿ ಸವಿ ನೆನಪುಗಳು.&lt;br /&gt;&lt;/div&gt;&lt;br /&gt;&lt;div&gt;ಈಗ ಪತ್ರ ಬರುವುದಿಲ್ಲ. ಅಂಚೆಯಣ್ಣನ ದಾರಿ ಕಾಯುವುದಿಲ್ಲ. ಪತ್ರ ಬರೆಯುವ ಮನಸ್ಸು ಕೂಡ ಯಾರಿಗೂ ಇಲ್ಲ. ವೇಗದ ಬದುಕಿನೊಂದಿಗೆ ನಮ್ಮ ಜೀವನ ಕ್ರಮ ಕೂಡ ಬದಲಾಗಿದೆ. ಭಾವನೆಗಳು ಔಪಚಾರಿಕ ಎನ್ನುವಷ್ಟರ ಮಟ್ಟಿಗೆ ಸಂಕುಚಿತಗೊಂಡಿದೆ. ಪತ್ರವೆಂಬ ಎರಡಕ್ಷರದ ಪುಟ್ಟ ಕಾಗದದ ದೋಣಿ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಅಕ್ಷರದಲ್ಲಿ ಅಭಿವ್ಯಕ್ತಗೊಳ್ಳುತ್ತಿದ್ದ ಭಾವನೆಗಳ ಅಂತರಂಗ, ಇಂದು ಉಚಿತ ಮೆಸೇಜುಗಳ ನಿರ್ಭಾವುಕ ಸಂದೇಶಗಳಲ್ಲಿ ಮರೆಯಾಗುತ್ತಿದೆ. ಬರೆಯುವುದಕ್ಕಿಂತ ಕಿಲಿ ಮಣೆ ಕುಟ್ಟುವುದೇ ಹಿತಕರವಾಗಿದೆ. ಯಾಕೆ ಹೀಗೆ, ಒಂದು ಕಾಲಕ್ಕೆ ಭಾವನಾತ್ಮಕ ಸಂವೇದನೆಯ ಮೂಲ ಸೆಲೆಯಾಗಿದ್ದ ಪತ್ರ ಇಂದು ಮೂಲೆಗುಂಪಾಗಿದೆ. ಅತ್ಯಂತ ಆತ್ಮೀಯತೆಯಿಂದ ಕರೆದು, ಕೂರಿಸಿ ಕುಶಲೋಪರಿ ವಿಚಾರಿಸುತ್ತಿದ್ದ ಅಂಚೆಯಣ್ಣನನ್ನು ಕೂಡ, ಕೆಳದರ್ಜೆಯ ಜವಾನನಂತೆ ನೋಡುವ ಪರಿಪಾಠ ಬೆಳೆಯುತ್ತಿದೆ.&lt;br /&gt;&lt;/div&gt;&lt;br /&gt;&lt;div&gt;ಒಂದು ಪತ್ರ ಕಟ್ಟಿಕೊಡುವ ಭಾವನಾ ಪ್ರಪಂಚವನ್ನು ಎರಡು ನಿಮಿಷದ ಫೋನ್ ಕರೆಯಾಗಲಿ, ಸೆಕಂಡ್‌ಗಳಲ್ಲಿ ಕಳುಹಿಸುವ ಮಸೇಜುಗಳಾಗಲಿ ತುಂಬಲು ಸಾಧ್ಯವಿಲ್ಲ. ಆದರೂ, ಪತ್ರ ಇಂದು ನಮ್ಮಿಂದ ದೂರವಾಗುತ್ತಿದೆ. ಗೆಳೆಯರ ಜನ್ಮದಿನಕ್ಕೆಂದೋ, ಮದುಮಗಳ ಶುಭ ಹಾರೈಕೆಗೆಂದೂ, ಅಸ್ಥೆಯಿಂದ ಬರೆಯುತ್ತಿದ್ದ ಪತ್ರಗಳು ಕೂಡ ಈಗ ಹಳೆಯ ಶತಮಾನದ ಫ್ಯಾಶನ್ ಆಗಿದೆ. "ಯಾವನಿಗೆ ಬೇಕು ಅದರ ರಗಳೆ, ಅದನ್ನು ಬರೆಯುತ್ತಾ ಕೂರಬೇಕು. ನಂತರ ಪೋಸ್ಟ್ ಬಾಕ್ಸ್‌ಗೆ ಹಾಕಬೇಕು. ಅದು ತಲುಪಲು ಒಂದು ವಾರ ತೆಗೆದುಕೊಳ್ಳುತ್ತದೆ. ಅದಕ್ಕಿಂತ ಒಂದು ಫೋನ್ ಮಾಡಿದರೆ ಸಾಕಲ್ಲ ಎನ್ನುವ ಮನಸ್ಥಿತಿಯವರೇ ಹೆಚ್ಚು.&lt;br /&gt;&lt;/div&gt;&lt;br /&gt;&lt;div&gt;ಪತ್ರದಲ್ಲಿ ಕಲ್ಮಶವಿರುವುದಿಲ್ಲ. ಪತ್ರದೊಂದಿಗೆ ಪತ್ರ ಬರೆದವನ ಮನಸ್ಸು ಕೂಡ ಎದುರಿಗೆ ಬಂದು ನಿಲ್ಲುತ್ತದೆ. ಸರಿಯೋ ತಪ್ಪೂ, ಇದ್ದುದನ್ನು ಇದ್ದಂತೆ ಹೇಳಿಬಿಡುವ ಹೃದಯ ವೈಶಾಲ್ಯತೆ ಪತ್ರಕ್ಕಿದೆ. ಅಲ್ಲಿ ಅನಾವರಣಗೊಂಡ ಅಕ್ಷರಗಳಲ್ಲಿ ಭಾವನಾತ್ಮಕ ಸೆಲೆ ತುಂಬಿರುತ್ತದೆ. ಆದ್ದರಿಂದಲೇ ಪತ್ರ ಆಪ್ತವಾಗುತ್ತದೆ. ತಿಂಗಳುಗಟ್ಟಲೆ ಜತನದಿಂದ ಕಾಪಾಡಿಕೊಂಡು ಮತ್ತೆ ಮತ್ತೆ ಓದಿ ಸಂತಸ ಪಡುತ್ತೇವೆ. ನಿಮಗೊಂದು ಪತ್ರ ಬಂದಾಗ ನಿಮಗೂ ಕೂಡ ಈ ಅನುಭವ ಆಗಿರಬೇಕು.&lt;br /&gt;&lt;/div&gt;&lt;br /&gt;&lt;div&gt;ಇಂದು ನಮ್ಮ ಮನೆಯಂಗಳಕ್ಕೆ ಅಂಚೆಯಣ್ಣ ಬರುವುದಿಲ್ಲ. ಆತನನ್ನು ಎದುರುಗೊಳ್ಳುವ ಹಂಬಲ, ಹಪಹಪಿಯೂ ನಮ್ಮಲ್ಲಿ ಇಲ್ಲ. ಆದರೂ, ಅಂಚೆಯಣ್ಣನಿಗೆ ಬೇಸರವಿಲ್ಲ. ಆತನ ಕೈಯಲ್ಲಿ ಮೊಬೈಲ್ ಇಲ್ಲ. ಲ್ಯಾಪ್‌ಟಾಪ್ ಇಲ್ಲ. ಹಳೆಯದೊಂದು ಪ್ಯಾರಗಾನ್ ಚಪ್ಪಲಿ ಮೆಟ್ಟಿಕೊಂಡು ಅಟ್ಲಾಸ್ ಸೈಕಲ್ ಹತ್ತಿ, ತನ್ನ ಕಾಯಕವನ್ನು ನಿಷ್ಠೆಯಿಂದ ಪಾಲಿಸುತ್ತಾನೆ. ಪತ್ರ ತಲುಪಿಸಬೇಕಾದವರಿಗೆ ಸರಿಯಾಗಿ ತಲುಪಿಸಿ, ತನ್ನ ಸೇವೆಯ ಸಾರ್ಥಕತೆ ಕಾಣುತ್ತಾನೆ.&lt;br /&gt;&lt;/div&gt;&lt;br /&gt;&lt;div&gt;ಇತ್ತೀಚೆಗೆ ಧಾರವಾಡ ಮುಖ್ಯ ಅಂಚೆ ಕಚೇರಿಗೆ ಭೇಟಿ ನೀಡಿದ್ದೆ. ಅಲ್ಲಿದ್ದ ಗೋಡೆ ಬರಹ ನನ್ನನ್ನು ಆಕರ್ಷಿಸಿತು. ಚೆಂಬೆಳಕಿನ ಕವಿ ಚನ್ನವೀರ ಕವಿ ಅವರು ಅಂಚೆಯಣ್ಣನ ಕುರಿತು ಹೀಗೆ ಬರೆದಿದ್ದರು. "ಪತ್ರ ಬರಲಿ, ಬರದೇ ಇರಲಿ, ಅಂಚೆಯಣ್ಣ ಮಾತ್ರ ದಿನವೂ ಮನೆಗೆ ಬಂದು ಹೋಗುತ್ತಿರಲಿ" ಎಷ್ಟೊಂದು ಆತ್ಮೀಯತೆ ಇದೆ ಸಾಲಿನಲ್ಲಿ. ಅದನ್ನು ಓದಿದ ಮೇಲೆ ಇಷ್ಟೆಲ್ಲಾ ಬರೆಯಬೇಕಾಯಿತು. ಅಂಚೆಯಣ್ಣನ ಶ್ರಮಕ್ಕೆ ನಮ್ಮದೂ ಶುಭ ಹಾರೈಕೆಗಳಿರಲಿ.. &lt;/div&gt;&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-7160608213787408051?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/7160608213787408051/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=7160608213787408051' title='1 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/7160608213787408051'/><link rel='self' type='application/atom+xml' href='http://www.blogger.com/feeds/3841477221276814775/posts/default/7160608213787408051'/><link rel='alternate' type='text/html' href='http://jomon-malehani.blogspot.com/2007/10/blog-post_03.html' title='ಪುಟ್ಟಿ ಒಂದು ಪುಟ್ಟ ಪತ್ರ ಬರಿ...'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><media:thumbnail xmlns:media='http://search.yahoo.com/mrss/' url='http://bp3.blogger.com/_A5Tc7GvymLQ/RwPDSvakCxI/AAAAAAAAADQ/C5XpL3L8yfE/s72-c/australia-post.preview%255B1%255D%5B1%5D.jpg' height='72' width='72'/><thr:total>1</thr:total></entry><entry><id>tag:blogger.com,1999:blog-3841477221276814775.post-5668706769505585406</id><published>2007-10-01T00:34:00.000-07:00</published><updated>2007-10-01T00:39:42.514-07:00</updated><title type='text'>ರಾಷ್ಟ್ರಪಿತನಿಗೆ ನುಡಿ ನಮನ</title><content type='html'>&lt;a href="http://bp3.blogger.com/_A5Tc7GvymLQ/RwCkJfakCwI/AAAAAAAAADI/Dbo79LT16-k/s1600-h/jk.jpg"&gt;&lt;img id="BLOGGER_PHOTO_ID_5116269659651574530" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp3.blogger.com/_A5Tc7GvymLQ/RwCkJfakCwI/AAAAAAAAADI/Dbo79LT16-k/s320/jk.jpg" border="0" /&gt;&lt;/a&gt;&lt;br /&gt;&lt;div&gt;ಗಾಂಧೀಜಿಗೆ,&lt;/div&gt;&lt;br /&gt;&lt;div&gt;ಅವರ ಅಹಿಂಸಾ ನೀತಿಗೆ, &lt;/div&gt;&lt;br /&gt;&lt;div&gt;ವಿಶ್ವ ಸಮುದಾಯಕ್ಕೆ ಅವರು ನೀಡಿದ ಭ್ರಾತೃತ್ವ ಕಲ್ಪನೆಗೆ, &lt;/div&gt;&lt;br /&gt;&lt;div&gt;ಅದ್ಭುತ ಸಂಘಟನಾ ಶಕ್ತಿಗೆ, &lt;/div&gt;&lt;br /&gt;&lt;div&gt;ಎಲ್ಲವನ್ನೂ ಮೀರಿದ ಅವರ ಅಂತಃಶಕ್ತಿಗೆ, ಎಂದಿಗೂ ನುಡಿ ನಮನಗಳು ಸಲ್ಲಲಿ. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;&lt;span style="color:#ff0000;"&gt;ಎಲ್ಲರಿಗೂ ಗಾಂಧಿ ಜಯಂತಿಯ ಶುಭ ಹಾರೈಕೆಗಳು.....&lt;/span&gt; &lt;/div&gt;&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-5668706769505585406?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/5668706769505585406/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=5668706769505585406' title='2 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/5668706769505585406'/><link rel='self' type='application/atom+xml' href='http://www.blogger.com/feeds/3841477221276814775/posts/default/5668706769505585406'/><link rel='alternate' type='text/html' href='http://jomon-malehani.blogspot.com/2007/10/blog-post.html' title='ರಾಷ್ಟ್ರಪಿತನಿಗೆ ನುಡಿ ನಮನ'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><media:thumbnail xmlns:media='http://search.yahoo.com/mrss/' url='http://bp3.blogger.com/_A5Tc7GvymLQ/RwCkJfakCwI/AAAAAAAAADI/Dbo79LT16-k/s72-c/jk.jpg' height='72' width='72'/><thr:total>2</thr:total></entry><entry><id>tag:blogger.com,1999:blog-3841477221276814775.post-1351255139260615723</id><published>2007-07-08T01:40:00.000-07:00</published><updated>2007-09-21T01:55:42.410-07:00</updated><title type='text'>ಅಮರ ಪ್ರೇಮದ ದೃಶ್ಯಕಾವ್ಯ ತಾಜ್ ಮಹಲ್</title><content type='html'>&lt;a href="http://bp1.blogger.com/_A5Tc7GvymLQ/RpCm6h5xwiI/AAAAAAAAABE/-YDl9duvMf8/s1600-h/MAHAL+1.jpg"&gt;&lt;span style="font-size:100%;"&gt;&lt;img id="BLOGGER_PHOTO_ID_5084747503764619810" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp1.blogger.com/_A5Tc7GvymLQ/RpCm6h5xwiI/AAAAAAAAABE/-YDl9duvMf8/s320/MAHAL+1.jpg" border="0" /&gt;&lt;/span&gt;&lt;/a&gt;&lt;span style="font-size:100%;"&gt;&lt;br /&gt;&lt;/span&gt;&lt;div&gt;&lt;div&gt;&lt;br /&gt;&lt;div align="center"&gt;&lt;span style="font-size:100%;"&gt;&lt;/span&gt; &lt;/div&gt;&lt;div align="center"&gt;&lt;span style="font-size:100%;"&gt;&lt;/span&gt;&lt;/div&gt;&lt;div align="left"&gt;&lt;span style="font-size:100%;"&gt;ವಿಶ್ವದ ಏಳು ಅಧ್ಬುತಗಳ ಪಟ್ಟಿಗೆ ತಾಜ್ ಮಹಲ್ ಆಯ್ಕೆಯಾಗಿದೆ. ಶಹಜಾನ ಪ್ರೀತಿಗೆ, ಅದರ ರೀತಿಗೆ, ವಿಶ್ವ ತಲೆಬಾಗಿದೆ. ಅಮರ ಪ್ರೇಮದ ದೃಶ್ಯಕಾವ್ಯ ತಾಜ್ ಮಹಲ್. ಮಂಜು ಸುರಿದ ಮುಂಜಾವಿನಲ್ಲಿ ನೊರೆ ಹಾಲಿನಂತೆ ಕಾಣುವ ತಾಜ್ ಮಹಲ್‌ನ್ನು ಕಣ್ತುಂಬಿಸಿಕೊಳ್ಳುವುದೇ ಒಂದು ಅಪೂರ್ವ ಅನುಭವ. &lt;/span&gt;&lt;/div&gt;&lt;div align="left"&gt;&lt;br /&gt;&lt;span style="font-size:100%;"&gt;ಪ್ರೀತಿಸುವವರ ಎದೆಯಲ್ಲಿ ತಾಜ್ ಮಹಲ್‌ಗೊಂದು ವಿಶಿಷ್ಠ ಸ್ಥಾನವಿದೆ.ಅವರ ಎದೆ ಬಡಿತ ಕೂಡ ಯಮುನಾ ನದಿಯ ನೀರ ಅಲೆಗಳಂತೆ ಮಧುರವಾಗಿರುತ್ತದೆ. ಲಂಗದಾವಣಿಯ ಹುಡುಗಿ ಸಹ ತನ್ನ ಇನಿಯನ ಎದೆ ಮೇಲೆ ತನೆಯಾನಿಸಿ ತಾಜ್ ಮಹಲ್‌ನಷ್ಟು ಕನಸು ಕಾಣುತ್ತಾಳೆ. ಆಸೆ ತುಂಬಿದ ಕಣ್ಣುಗಳಲ್ಲಿ ಪ್ರೀತಿ ಮೊಗೆದು ತನ್ನ ಕನಸಿನ ಮಹಲು ಕಟ್ಟುತ್ತಾಳೆ, ಸಮುದ್ರದ ದಂಡೆಯ ಮೇಲೆ ಮರಳಿನಲ್ಲಿ ಮಹಲು ಕಟ್ಟಿ ಮಮತಾಜ್ ಆಗ ಬಯಸುತ್ತಾಳೆ.&lt;br /&gt;&lt;/span&gt;&lt;/div&gt;&lt;div align="left"&gt;&lt;span style="font-size:100%;"&gt;&lt;/span&gt; &lt;/div&gt;&lt;div align="left"&gt;&lt;span style="font-size:100%;"&gt;ತಾಜ್ ಮಹಲ್ ಇಷ್ಟವಾಗುವುದು ಅದರ ಸೌಂದರ್ಯತೆಗೆ.ಪರಿಶುಧ್ದತೆಗೆ. ಸ್ನಾನ ಮಾಡಿ ಮಲ್ಲಿಗೆ ಮುಡಿದು ನಿಂತ ಅಪ್ಸರೆಯಂತೆ ಅದು ಸ್ಥಿತಪ್ರಗ್ನ. ಅಲಂಕಾರ ಬೇಕಿಲ್ಲ. ಆಡಂಬರ ಬೇಕಿಲ್ಲ. ಸರ್ವಕಾಲಿಕ ಯೌವನೆ. ತಾಜ್ ಮಹಲ್ ಕಂಬಗಳನ್ನು ಮುಟ್ಟಿದ ಕೂಡಲೇ ಮುಟ್ಟಿದ ವ್ಯಕ್ತಿಯ ಕೈಗೂ ಪ್ರೀತಿಯ ಹುಡಿ ಹತ್ತಿಕೊಳ್ಳುತ್ತದೆ ಎನ್ನುತ್ತಾರೆ ಪ್ರೀತಿಸುವ ಹೃದಯಗಳು. ತಾಜ್ ಮಹಲ್‌ನ ಎದುರಿಗೆ ನಿಂತು ತಮ್ಮ ಪ್ರೀತಿಯನ್ನು ಪಿಸುಗುಟ್ಟಿದರೆ ಸಾಕು, ತಾವು ಇಷ್ಟಪಟ್ಟವರು ತಮಗೆ ಸಿಗುತ್ತಾರೆ ಎನ್ನುವುದು ಮತ್ತೊಂದು ನಂಬಿಕೆ. &lt;/span&gt;&lt;/div&gt;&lt;div align="left"&gt;&lt;span style="font-size:100%;"&gt;&lt;/span&gt;&lt;/div&gt;&lt;div align="left"&gt;&lt;span style="font-size:100%;"&gt;&lt;/span&gt;&lt;/div&gt;&lt;div align="left"&gt;&lt;span style="font-size:100%;"&gt;&lt;/span&gt;&lt;/div&gt;&lt;div align="left"&gt;&lt;span style="font-size:100%;"&gt;&lt;/span&gt;&lt;/div&gt;&lt;div align="left"&gt;&lt;span style="font-size:100%;"&gt;&lt;/span&gt;&lt;/div&gt;&lt;div align="left"&gt;&lt;span style="font-size:100%;"&gt;&lt;/span&gt;&lt;/div&gt;&lt;div align="left"&gt;&lt;span style="font-size:100%;"&gt;&lt;/span&gt; &lt;/div&gt;&lt;div align="left"&gt;&lt;span style="font-size:100%;"&gt;ಅಸಂಖ್ಯ ಹೃದಯಗಳ ಪ್ರೀತಿಯನ್ನು ಹೊತ್ತು ನಿಂತಿದೆ ತಾಜ್ ಮಹಲ್. ಶಹಜಾನ್ ಮಮತಾಜಳನ್ನು ಅದೆಷ್ಟು ಪ್ರೀತಿಸಿದನೆಂದರೆ, ಇಂದಿಗೂ ಪ್ರೀತಿಸುವ ಹುಡುಗಿಯರು ಮಮತಾಜಳ ಮೇಲೊಂದು ಮಧುರ ಹೊಟ್ಟೆಕಿಚ್ಚು ಇಟ್ಟುಕೊಂಡಿರುತ್ತಾರೆ. ನನ್ನ ಪ್ರೀಯತಮ ಕೂಡ ಶಹಜಾನನ ತರ ಪ್ರೀತಿಸಿದ್ದರೆ ಎಂದು ಪ್ರತಿ ಕನವರಿಕೆಯಲ್ಲೂ ಅವರ ಮನ ಮಿಡಿಯುತ್ತದೆ. ತಾಜ್‌ಗೆ ಮಾತನಾಡಲು ಬರುವುದಿಲ್ಲ ನಿಜ. ಆದರೆ ಅದಕ್ಕೆ ಪ್ರಣಯ ಭಾಷೆ ಗೊತ್ತಿದೆ. ಪ್ರೀತಿಸುವವರ ಭಾವುಕತೆಗೆ ಸ್ಪಂದಿಸುವ ಶಕ್ತಿ ಅದರ ನಿರ್ಜೀವ ಕಂಬಗಳಲ್ಲೂ ಇದೆ. &lt;/span&gt;&lt;/div&gt;&lt;div align="left"&gt;&lt;span style="font-size:100%;"&gt;&lt;/span&gt;&lt;/div&gt;&lt;div align="left"&gt;&lt;span style="font-size:100%;"&gt;&lt;/span&gt; &lt;/div&gt;&lt;div align="left"&gt;&lt;span style="font-size:100%;"&gt;ತಾಜ್ ಮಹಲ್‌ನ್ನು ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಿ ಎಂದು ಅಂತರ್ಜಾಲ ಮತಯಾಚನೆ ನಡೆದಾಗ, ಬಹುಶ್ಯಃ ಹೆಚ್ಚು ಮತ ಯಾಚಿಸಿದವರು ಪ್ರೇಮಿಗಳೇ ಇರಬಹುದು. ನನ್ನ ಎದೆಯಲ್ಲಿ ನಿನ್ನ ನೆನಪುಗಳ ತಾಜ್ ಮಹಲ್ ಕಟ್ಟಿದ್ದೇನೆ ಎನ್ನುವವರಿಗೆ ಒಂದು ಮಾತು. ನಿಮ್ಮ ತಾಜ್ ಮಹಲ್ ಕೊನೆಗೂ ಆಯ್ಕೆಯಾಗಿದೆ. ನಿಮ್ಮ ಪ್ರೀತಿಗೆ ಜಯವಾಗಲಿ, ಮುಂಜಾನೆಯ ಇಬ್ಬನಿಯ ಹನಿಯಂತೆ ಪರಿಶುಧ್ದವಾಗಿರಲಿ.... &lt;/span&gt;&lt;/div&gt;&lt;/div&gt;&lt;/div&gt;&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-1351255139260615723?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/1351255139260615723/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=1351255139260615723' title='2 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/1351255139260615723'/><link rel='self' type='application/atom+xml' href='http://www.blogger.com/feeds/3841477221276814775/posts/default/1351255139260615723'/><link rel='alternate' type='text/html' href='http://jomon-malehani.blogspot.com/2007/07/blog-post.html' title='ಅಮರ ಪ್ರೇಮದ ದೃಶ್ಯಕಾವ್ಯ ತಾಜ್ ಮಹಲ್'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><media:thumbnail xmlns:media='http://search.yahoo.com/mrss/' url='http://bp1.blogger.com/_A5Tc7GvymLQ/RpCm6h5xwiI/AAAAAAAAABE/-YDl9duvMf8/s72-c/MAHAL+1.jpg' height='72' width='72'/><thr:total>2</thr:total></entry><entry><id>tag:blogger.com,1999:blog-3841477221276814775.post-764787689833416592</id><published>2007-06-23T03:03:00.000-07:00</published><updated>2007-10-15T09:27:22.945-07:00</updated><title type='text'>ಮೊದಲ ಮಳೆಹನಿ...</title><content type='html'>&lt;div align="justify"&gt;&lt;a href="http://bp2.blogger.com/_A5Tc7GvymLQ/Rnzx4AREw-I/AAAAAAAAAAM/dXFwqRw2wd0/s1600-h/rain-drop[1].jpg"&gt;&lt;img id="BLOGGER_PHOTO_ID_5079200424213660642" style="FLOAT: right; MARGIN: 0px 0px 10px 10px; WIDTH: 233px; CURSOR: hand; HEIGHT: 205px" height="240" alt="" src="http://bp2.blogger.com/_A5Tc7GvymLQ/Rnzx4AREw-I/AAAAAAAAAAM/dXFwqRw2wd0/s320/rain-drop%5B1%5D.jpg" width="253" border="0" /&gt;&lt;/a&gt;ಮಳೆ ಪ್ರಾರಂಭವಾಗಿದೆ. ಧರೆಯ ಒಡಲಲ್ಲಿ ಹಸಿರು ಮೂಡಿದೆ. ಸುರಿಯುವ ಮುಗಿಲ ಹನಿ ಕಪ್ಪೆಚಿಪ್ಚಿನೊಳಗೆ ಸೇರಿ ಮುತ್ತಾಗುವ ಸಂಭ್ರಮದಲ್ಲಿದೆ. ಸುರಿಯುವ ಜಟಿ ಜಟಿ ಮಳೆಯಲ್ಲಿ ಒತ್ತರಿಸಿ ಬರುವ ಭಾವನೆಗಳನ್ನು ಬಿಗಿದಪ್ಪಿ ಮಳೆಗೆ ಮುಖವೊಡ್ಡಿದರೆ, ಮನಸ್ಸು ಕೂಡ ತೊಯ್ದು ತೊಪ್ಪೆಯಾಗುತ್ತದೆ. ಮಳೆಯೆಂಬ ಭಾವನೆಯೇ ಅದ್ಭುತ. "ಮಳೆ ಅಂದರೆ ನನಗೆ ತುಂಬಾ ಇಷ್ಟ. ಯಾಕೆಂದರೆ ಮಳೆಯಲ್ಲಿ ಅಳುವುದು, ಕಣ್ಣೀರುಗೆರೆಯುವುದು ಯಾರಿಗೂ ಗೊತ್ತಾಗುವುದಿಲ್ಲ. ತುಂಬಾ ದುಃಖವಾದಾಗ ನಾನು ಮಳೆಯಲ್ಲಿ ಅಳುತ್ತಾ ನಡೆಯುತ್ತೇನೆ ಎನ್ನುತ್ತಾನೆ ಮಹಾನ್ ಹಾಸ್ಯ ನಟ,ಎಲ್ಲರನ್ನು ನಕ್ಕು ನಗಿಸಿದ ಚಾರ್ಲಿ ಚಾಪ್ಲಿನ್.&lt;br /&gt;&lt;/div&gt;&lt;div align="justify"&gt; &lt;/div&gt;&lt;div align="justify"&gt;ಇಂತಹ ಎಷ್ಟೋ ಮಳೆಗಳನ್ನು ನೆಲೆದು ನಾವೆಲ್ಲ ಇಷ್ಟು ದೊಡ್ಡವರಾಗಿದ್ದೇವೆ. ಕೊಚ್ಚೆಯಲ್ಲಿ ಕಾಲಿರಿಸಿ ಶಾಲೆಗೆ ನಡೆದು ಬಂದದ್ದು,ಗದ್ದೆಯ ಏರಿಯಿಂದ ಜಾರಿಬಿದ್ದು ಚಡ್ಡಿಯ ಹಿಂದೆ ಕೆಸರು ಮೆತ್ತಿಕೊಂಡದ್ದು, ಸುರಿಯುವ ಜಡಿಮಳೆಯಲ್ಲಿ ಕಾಗದದ ದೋಣಿ ಹರಿಬಿಟ್ಟು ಟೈಟಾನಿಕ್ ಗಾತ್ರದ ಕನಸು ಕಂಡದ್ದು, ಉದ್ದನೆಯ ಕೊಕ್ಕೆಯಲ್ಲಿ ಗಾಳ ಸಿಕ್ಕಿಸಿ ಮೀನು ಹಿಡಿಯಲು ಕಾದು ಕೂತದ್ದು ಎಷ್ಟು ಮಳೆಗಾಲ ಕಳೆದರೂ ಮರೆಯಲಾಗದ ಸುಂದರ ನೆನಪುಗಳು.&lt;br /&gt;&lt;/div&gt;&lt;div align="justify"&gt;ಮಳೆಗಾಲದ ರಾತ್ರಿಗಳೇ ಅದ್ಬುತ. ಚುಮು ಚುಮು ಚಳಿಯಲ್ಲಿ ಕುತ್ತಿಗೆಯವರೆಗೆ ಬೆಡ್‌ಶೀಟ್ ಎಳೆದುಕೂಂಡು ಮಲಗಿದರೆ, ಬಳಿಗ್ಗೆ ಏಳಲು ಮನಸ್ಸೇ ಆಗುತ್ತಿರಲಿಲ್ಲ. ರಾತ್ರಿ ಕೂಗುವ ವಂಡರ ಕಪ್ಪೆಗಳ ಶಬ್ದದೊಂದಿಗೆ ಅದರ ಗೋಲಿಯಾಕಾರದ ಕಣ್ಣುಗಳೂ ನೆನಪಾಗಿ ತಲೆಯ ತುಂವಾ ಚಾದರಾ ಹೊದ್ದು ಮಲಗಿದ್ದು ಇನ್ನೂ ನೆನಪಿದೆ. ಬೆಳಿಗ್ಗೆ ಎದ್ದರೆ ಮನೆಯಂಗಳದ ತುಂಬ ನೀರು. ಗೋಡೆಯ ಪಕ್ಕದಲ್ಲಿದ್ದ ಬಾಳೆ ಗಿಡ ನೆಲಕ್ಕೆ ಬಾಗಿರುತ್ತದೆ. ಪಕ್ಕ ನಿಂತಿದ್ದ ನುಗ್ಗೆ ಗಿಡದ ಒಂದು ದೊಡ್ಡ ಕೊಂಬೆ ಮುರಿದಿರುತ್ತದೆ. ಮನೆಯ ಹಿತ್ತಲಿನ ಮಾವಿನ ಮರದಿಂದ ಕಾಯಿಗಳು ಉದುರಿ ಅಂಗಳದ ತುಂಬ ಚಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ. ಮನೆಯಂಗಳದ ಮೂಲೆಯಲ್ಲಿ ನಿಂತು ಮಳೆ ನೀರಿನಲ್ಲಿ ಉದ್ದಕ್ಕೆ ಸುಸ್ಸೂ ಮಾಡಿ ಅಪ್ಪನ ಕಣ್ತಪ್ಪಿಸಿ ಮತ್ತೆ ಹೋಗಿ ಮಲಗಿದ್ದು ಈಗ ನಾಚಿಕೆ ಎನಿಸುತ್ತದೆ.&lt;br /&gt;&lt;/div&gt;&lt;div align="justify"&gt; &lt;/div&gt;&lt;div align="justify"&gt;ಮಳೆಗಾಲದಲ್ಲಿ ಅಮ್ಮ ಸಾಕಷ್ಟು ಕಷ್ಟಪಡುತ್ತಿದ್ದಳು. ಮಳೆಯಲ್ಲಿ ನೆನೆದ ಸೌದೆ ಬೆಂಕಿ ಹೊತ್ತಿಕೊಳ್ಳದೆ, ಹಂಚಿನ ಮನೆಯ ತುಂಬ ಹೊಗೆಯಾಗಿ ಆಕೆಯ ಮೂಗಿನಿಂದ ಹಾಗೂ ಕಣ್ಣಿನಿಂದ ನೀರು ಬರುತ್ತಿದ್ದವು. ಕುಡಿಯುವ ನೀರು ತುಂಬಿಡಲು ಹರಸಾಹಸ ಪಡುತ್ತಿದ್ದಳು. ನಾವು ತಾಸಿಗೊಮ್ಮೆ ತೋಯಿಸುತ್ತಿದ್ದ ಭಟ್ಟೆಯನ್ನ ತೊಳೆದು ಒಣಗಿಸುವುದೇ ಆಕೆಯ ಬಹುದೊಡ್ಡ ಕೆಲಸವಾಗಿತ್ತು. ಮಳೆಯೆಂದರೆ ನನ್ನ ಪಾಲಿಗೆ ನವಿರು ಭಾವನೆಗಳ ಸಂಗಮ. ಅದು ಮರಳಿ ಬಯಸುವ ಮಧುರ ಬಾಲ್ಯ. ಅಪ್ಪ, ಅಮ್ಮ ಒಡಹುಟ್ಟಿದವರೆಲ್ಲರೂ ನೆನಪಾಗುತ್ತಾರೆ. ಜಡಿ ಜಡಿ ಮಳೆಯಲ್ಲಿ ಹೊರಟನೆಂದರೆ ಮಳೆಹನಿ ಮಾತನಾಡುತ್ತದೆ. ಕಣ್ಣೀರು ಜಿನುಗುತ್ತದೆ. ಮಳೆ ಎಲ್ಲವನ್ನೂ ಮರೆಸುತ್ತದೆ. ಇದಕ್ಕಾಗಿಯೇ ನನ್ನ ಬ್ಲಾಗ್‌ಗೆ ಮಳೆಹನಿ ಎಂದು ಹೆಸರಿಟ್ಟಿದ್ದೇನೆ. ಸುರಿಯುವ ಜಡಿಮಳೆಗೆ ನೀವು ಬೊಗಸೆ ಪ್ರೀತಿ ತೋರಿಸಬಹುದು. &lt;/div&gt;&lt;div align="justify"&gt;&lt;br /&gt;&lt;/div&gt;&lt;div class="blogger-post-footer"&gt;www.jomon-malehani.blogspot.com&lt;img width='1' height='1' src='https://blogger.googleusercontent.com/tracker/3841477221276814775-764787689833416592?l=jomon-malehani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jomon-malehani.blogspot.com/feeds/764787689833416592/comments/default' title='Post Comments'/><link rel='replies' type='text/html' href='http://www.blogger.com/comment.g?blogID=3841477221276814775&amp;postID=764787689833416592' title='0 Comments'/><link rel='edit' type='application/atom+xml' href='http://www.blogger.com/feeds/3841477221276814775/posts/default/764787689833416592'/><link rel='self' type='application/atom+xml' href='http://www.blogger.com/feeds/3841477221276814775/posts/default/764787689833416592'/><link rel='alternate' type='text/html' href='http://jomon-malehani.blogspot.com/2007/06/blog-post_23.html' title='ಮೊದಲ ಮಳೆಹನಿ...'/><author><name>ಜೋಮನ್</name><uri>http://www.blogger.com/profile/02100095143974254301</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://3.bp.blogspot.com/_A5Tc7GvymLQ/S0ObRA7VtRI/AAAAAAAAAPA/usYj1wZpt6s/S220/jomon1.jpg'/></author><media:thumbnail xmlns:media='http://search.yahoo.com/mrss/' url='http://bp2.blogger.com/_A5Tc7GvymLQ/Rnzx4AREw-I/AAAAAAAAAAM/dXFwqRw2wd0/s72-c/rain-drop%5B1%5D.jpg' height='72' width='72'/><thr:total>0</thr:total></entry></feed>
